ಗುರುವಾರ, ಫೆಬ್ರವರಿ 7, 2019

ಕರ್ನಾಟಕದ ಕೆಲವು ಪ್ರಶ್ನೋತ್ತರಗಳು

1) ದೇವನಹಳ್ಳಿ ಕೋಟೆಯನ್ನು ಕಟ್ಟಿಸಿದವರು ಯಾರು?
             ಮಲ್ಲಬೈರೆಗೌಡ.
2) ಭಾರತದಲ್ಲಿ ಮೊದಲಬಾರಿಗೆ ಕ್ಷಿಪಣಿಯ ಪ್ರಯೋಗ ಯಾರು ಮಾಡಿದರು?
             ಟಿಪ್ಪು ಸುಲ್ತಾನ್.
3) ಭಾರತದ ಇತಿಹಾಸದಲ್ಲಿ ಅಬೇದ್ಯ ಎಂದು ಕರೆಯಲ್ಪಡುವ ಕೋಟೆ ಯಾವುದು?
             ಚಿತ್ರದುರ್ಗ.
4) "ಕರ್ನಾಟಕ ರತ್ನ ರಮಾರಮಣ" ಎಂಬ ಬಿರುದು ಯಾರಿಗೆ ದೊರಕಿತ್ತು?
            ಕೃಷ್ಣದೇವರಾಯ.
5) ತುಂಗಾ ನದಿಗೆ ಇದ್ದ ಇನ್ನೊಂದು ಹೆಸರೇನು?
            ಪಂಪಾನದಿ.
6) "ಸ್ಟೇಟ್ ಬ್ಯಾಂಕ್ ಆಫ್ ಮೈಸೂರು" ಇದರ ಸಂಸ್ಥಾಪಕರು ಯಾರು?
             ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ.
7) ಕೈಗಾರಿಕಾ ಕ್ರಾಂತಿಗೆ ಒತ್ತು ಕೊಟ್ಟ ಮೊದಲ ರಾಜ ಯಾರು?
             ಹೈದರಾಲಿ.
8) ಕರ್ನಾಟಕದ ಮೊದಲ ಸಕ್ಕರೆ ಕಾರ್ಖಾನೆಯನ್ನು ಎಲ್ಲಿ ಸ್ಥಾಪಿಸಲಾಯಿತು?
            ಶ್ರೀರಂಗ ಪಟ್ಟಣದ ಪಾಲಹಳ್ಳಿ.
9) ಕೆಂಪೇಗೌಡರು ಕಟ್ಟಿಸಿದ ಬೆಂಗಳೂರುಕೋಟೆ ಯಾವ ಊರಿನಲ್ಲಿದೆ?
ಕಲಾಸಿಪಾಳ್ಯ.
10) ವಿಧಾನ ಸೌದ"ವನ್ನು ಕಟ್ಟಿಸಿದವರು ಯಾರು?
ಕೆಂಗಲ್ ಹನುಮಂತಯ್ಯ.
11) ಕನ್ನಡಕ್ಕೆ ಒಟ್ಟು ಎಷ್ಟು "ಜ್ಞಾನಪೀಠ" ಪ್ರಶಸ್ತಿ ದೊರೆತಿದೆ?
7
12) ಮೈಸೂರಿನಲ್ಲಿರುವ "ಬೃಂದಾವನ"ದ ವಿನ್ಯಾಸಗಾರ ಯಾರು?
 "ಸರ್. ಮಿರ್ಜಾ ಇಸ್ಮಾಯಿಲ್"
13) ಕರ್ನಾಟಕದಲ್ಲಿ ಸತತವಾಗಿ ಮೂರು ಸಾರಿ ಮುಖ್ಯಮಂತ್ರಿಯಾಗಿ ಯಾರು ಆಯ್ಕೆಯಾಗಿದ್ದರು?
             ರಾಮಕೃಷ್ಣ ಹೆಗ್ಗಡೆ.
14) "ಯುಸುಫಾಬಾದ್" ಎಂದು ಈಗಿನ ಯಾವ ಪ್ರದೇಶವನ್ನು ಕರೆಯುತಿದ್ದರು?
 ದೇವನಹಳ್ಳಿ (ದೇವನದೊಡ್ಡಿ)
15) ಕರ್ನಾಟಕದ ಯಾವ ಸಾಮ್ರಾಜ್ಯ ವೈಭವಕ್ಕೆ ಹೆಸರುವಾಸಿಯಾಗಿತ್ತು?
 ವಿಜಯನಗರ ಸಾಮ್ರಾಜ್ಯ.
16) ಶ್ರೀರಂಗ ಪಟ್ಟಣದ ಶ್ರೀ ರಂಗನಾಥ ಸ್ವಾಮಿಯ ಮೂಲ ದೇಗುಲವನ್ನು ಯಾರು ಕಟ್ಟಿಸಿದರು?
            ತಿರುಮಲಯ್ಯ.
17"ಯದುರಾಯ ರಾಜ ನರಸ ಒಡೆಯರ್" ಕಟ್ಟಿಸಿದ ಕೋಟೆ ಯಾವುದು?
- ಶ್ರೀರಂಗ ಪಟ್ಟಣದ ಕೋಟೆ.
18) ಕರ್ನಾಟಕದಲ್ಲಿ ಸಂಪೂರ್ಣವಾಗಿ ಸಂಸ್ಕೃತ ಭಾಷೆಯನ್ನು ಮಾತನಾಡುವ ಹಳ್ಳಿ ಯಾವುದು?
- ಶಿವಮೊಗ್ಗ ಜಿಲ್ಲೆಯ ಮತ್ತೂರ್.
19) ಕರ್ನಾಟಕದ ಅತಿ ದೊಡ್ಡ ಜಾತ್ರೆ ಯಾವುದು?
- ಶಿರಸಿಯ ಮಾರಿಕಾಂಬ ಜಾತ್ರೆ.
20) ಅಂಗ್ಲ ಭಾಷೆಯ ಸಾಫ್ಟ್ ವೇರ್ ಮತ್ತು ಹಾರ್ಡ್ ವೇರ್ ಪದಗಳಿಗೆ ಕನ್ನಡದ ತಂತ್ರಂಶ ಮತ್ತು ಯಂತ್ರಾಂಶ ಎನ್ನುವ ಪದಗಳನ್ನು ಕೊಟ್ಟವರು ಯಾರು?
- ಹೆಚ್.ಎಸ್.ಕೃಷ್ಣ ಸ್ವಾಮಿ ಅಯ್ಯಂಗಾರ್. (ಹೆಚ್.ಎಸ್.ಕೆ)
21) ರಾಯಚೂರಿನ ಮೊದಲ ಹೆಸರೇನು?
- ಮಾನ್ಯಖೇಟ.
22) ಕನ್ನಡದ ಮೊದಲ ಕೃತಿ ಯಾವುದು?
- ಕವಿರಾಜ ಮಾರ್ಗ
23) ಪಂಪಾಪುರ ಎಂದು ಯಾವ ಪ್ರದೇಶವನ್ನು ಕರೆಯುತ್ತಿದ್ದರು.
ಹಂಪೆ.
24) ಜಗತ್ತಿನ ಎತ್ತರವಾದ ಏಕ ಶಿಲಾ ವಿಗ್ರಹ ಯಾವುದು?
- ಶ್ರಾವಣಬೆಳಗೊಳದ ಗೊಮ್ಮಟೇಶ್ವರ.
25) ಕರ್ನಾಟಕಕ್ಕೆ "ಪರಮವೀರ ಚಕ್ರ" ತಂದುಕೊಟ್ಟ ವೀರ ಕನ್ನಡಿಗ ಯಾರು?
- ಕರ್ನಲ್ ವಸಂತ್.
26)
ಕರ್ನಾಟಕದ ಅತಿದೊಡ್ಡ ದೇವಾಲಯ ಯಾವುದು?
- ನಂಜನಗೂಡಿನ ಶ್ರೀ ಕಂಠೇಶ್ವರ ದೇವಾಲಯ.
27) ಕರ್ನಾಟಕದ ಅತಿ ಎತ್ತರವಾದ ಶಿಖರ ಯಾವುದು?
- ಮುಳ್ಳಯ್ಯನ ಗಿರಿ.
28) ಮೈಸೂರು ಅರಮನೆಯ ಹೆಸರೇನು?
- ಅಂಬಾವಿಲಾಸ ಅರಮನೆ.
29) ಕರ್ನಾಟಕಕ್ಕೇ ಮೊದಲು ಕಾಫಿ ಬೀಜವನ್ನು ತಂದವರು ಯಾರು?
            - ಬಾಬಾ ಬುಡನ್ ಸಾಹೇಬ.
30) "ಕರ್ಣಾಟಕದ ಮ್ಯಾಂಚೆಸ್ಟಾರ್ " ಎಂದು ಯಾವ ಜಿಲ್ಲೆಯನ್ನು ಕರೆಯಲಾಗುತ್ತದೆ?
            - ದಾವಣಗೆರೆ.
31) ಕರ್ನಾಟಕದಲ್ಲಿ ಅತಿಹೆಚ್ಚು ಮಳೆ ಬೀಳುವ ಪ್ರದೇಶ ಯಾವುದು?
            - ಆಗುಂಬೆ.
32) ಕರ್ನಾಟಕದ ಅತಿ ಚಿಕ್ಕ ಜಿಲ್ಲೆ ಯಾವುದು?
ಬೆಂಗಳೂರು ನಗರ ಜಿಲ್ಲೆ.
33) ಕರ್ನಾಟಕದ ಮೊದಲ ಉಪಲಬ್ದ ಶಾಸನ ಯಾವುದು?
            - ಹಲ್ಮಿಡಿ ಶಾಸನ.
34) ಕರ್ನಾಟಕದ ರಾಜ್ಯ ಪಕ್ಷಿ ಯಾವುದು?
            - ನೀಲಕಂಠ ಪಕ್ಷಿ.
35) ಕರ್ನಾಟಕದ ಮೊದಲ ಮುಖ್ಯಮಂತ್ರಿ ಯಾರು?
            - ಕೆ.ಸಿ.ರೆಡ್ಡಿ.
36) ಕರ್ನಾಟಕದ ಮೊದಲ ರಾಜ ಪ್ರಮುಖರು (ರಾಜ್ಯಪಾಲರು) ಯಾರು?
- ಶ್ರೀ ಜಯಚಾಮರಾಜ ಒಡೆಯರು.
37) ಕರ್ನಾಟಕದ ಮೊದಲ ಕವಯತ್ರಿ ಯಾರು?
            - ಅಕ್ಕಮಹಾದೇವಿ.
38) ಕನ್ನಡದ ಮೊದಲ ಉಪಲಬ್ದ ಗದ್ಯಕೃತಿ ಯಾವುದು?
            - ವಡ್ಡರಾದನೆ.
39) ಕರ್ನಾಟಕದ ಮೊದಲ ವಿಶ್ವವಿದ್ಯಾನಿಲಯ ಯಾವುದು?
            - ಮೈಸೂರು ವಿಶ್ವವಿಧ್ಯಾನಿಲಯ.
40) ಕನ್ನಡದ ಮೊದಲ ವ್ಯಾಕರಣ ಗ್ರಂಥ ಯಾವುದು? ಬರೆದವರು ಯಾರು?
            - "ಕೇಶಿರಾಜ ವಿರಚಿತ" "ಶಬ್ದಮಣಿ ದರ್ಪಣಂ"
41) "ಕರ್ನಾಟಕ ಶಾಸ್ತ್ರೀಯಾ ಸಂಗೀತ"ದ ಪಿತಾಮಹ ಯಾರು?
            - ಪುರಂದರ ದಾಸರು.
42) ಕರ್ನಾಟಕದ ಯಾವ ಜಿಲ್ಲೆಯಲ್ಲಿ ಉಷ್ಣ ವಿದ್ಯುತ್ ಸ್ಥಾವರವಿದೆ?
            - ರಾಯಚೂರು ಜಿಲ್ಲೆ.
43) ಕರ್ನಾಟಕದ ರೇಷ್ಮೆ ಜಿಲ್ಲೆ ಯಾವುದು?
            - ರಾಮನಗರ.
44) ಕರ್ನಾಟಕದ ಸಕ್ಕರೆ ಜಿಲ್ಲೆ ಯಾವುದು?
            - ಮಂಡ್ಯ ಜಿಲ್ಲೆ.
45) ಕಾವೇರಿ ನದಿಯು ತನ್ನ ಪಾತ್ರದಲ್ಲಿ ಎಷ್ಟು ಜಲಪಾತಗಳನ್ನು ಸೃಷ್ಟಿಸುತ್ತದೆ? ಅವು ಯಾವುದು?
            - ಮೂರು ಜಲಪಾತಗಳು. (೧) ಚುಂಚನ ಕಟ್ಟೆ ಜಲಪಾತ, (೨) ಶಿವನ ಸಮುದ್ರ (೩) ಹೋಗನೆಕಲ್ ಜಲಪಾತ.
46)
ಕರ್ನಾಟಕ ರಾಜ್ಯದ ಧ್ವಜದಲ್ಲಿರುವ ಬಣ್ಣಗಳ ಸಂಕೇತ ಏನು?-
            ಹಳದಿ: ಶಾಂತಿಯ ಸಂಕೇತ.ಕೆಂಪು: ಕ್ರಾಂತಿಯ ಸಂಕೇತ
47) ರಾಷ್ಟ್ರ ಧ್ವಜವನ್ನು ನೇಯುವ ಏಕಮಾತ್ರ ಸ್ಥಳ ಕರ್ನಾಟಕದಲ್ಲಿದೆ. ಇದು ಯಾವ ಊರು?
            - ಗರಗ,
48) ಕರ್ನಾಟಕದ ಯಾವ ಜಿಲ್ಲೆಗೆ ರೈಲ್ವೆ ಮಾರ್ಗವಿಲ್ಲ?
            - ಕೊಡಗು.
49) ಕರ್ನಾಟಕದ ಅತಿದೊಡ್ಡ ಅಣೆಕಟ್ಟು ಯಾವುದು?
            - ಲಿಂಗನಮಕ್ಕಿ ಅಣೆಕಟ್ಟು.
50) ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟವರು ಯಾರು?
- ಕುವೆಂಪು.

ಬುಧವಾರ, ಜನವರಿ 16, 2019

ಪ್ರಚಲಿತ ಘಟನೆ


1. 'ಆಳ್ವಾಸ್ ವಿರಾಸತ್ - 2015'ರ ಪ್ರಶಸ್ತಿಗೆ ಆಯ್ಕೆಯಾದ ಉಸ್ತಾದ್ ಅಮ್ಜದ್ ಆಲಿಖಾನ್ ಅವರು ಯಾವ ವಾದ್ಯದಲ್ಲಿ ಹೆಸರುವಾಸಿಯಾಗಿದ್ದಾರೆ?
           
ಸರೋದ್
2. ಈ ಸಾಲಿಗಾಗಿ 'ಇಪಿಎಫ್' ಬಡ್ಡಿ ದರವನ್ನು ಶೇಕಡಾ ಎಷ್ಟು ಎಂದು ನಿಗದಿ ಪಡಿಸಲಾಗಿದೆ?
            8.75% ●
3. ಮೆಕ್ಕೆಜೋಳ ಖರೀದಿಯ ಬೆಂಬಲ ಬೆಲೆಯನ್ನು ಸರ್ಕಾರ ಎಷ್ಟು ಎಂದು ನಿಗದಿಪಡಿಸಿದೆ ?
            1100
ರೂ.
4. 2014ನೇ ಸಾಲಿನ ಕೇ೦ದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಕನ್ನಡದ 'ಉತ್ತರಾರ್ಧ' ಪ್ರಬಂಧ ಕೃತಿ ಆಯ್ಕೆಯಾಗಿದೆ. ಅಂದಹಾಗೆ ಇದರ ಲೇಖಕರು ಯಾರು?
            ಡಾ. ಜಿ. ಎಚ್. ನಾಯಕ
5. ಕೇ೦ದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಿಗೆ ದೊರೆಯುವ ನಗದು ಬಹುಮಾನದ ಮೊತ್ತ ಎಷ್ಟು?
            1 ಲಕ್ಷ ರೂ.
6. ಈ ಕೆಳಕಂಡವುಗಳಲ್ಲಿ ಸ್ಪೇನ್ ದೇಶದ ಕರೆನ್ಸಿ ಯಾವುದು?
             
ಯೂರೊ
7. 'ಪ್ರಧಾನಮಂತ್ರಿ ಜನಧನ್ ಯೋಜನೆ'ಯನ್ವಯ ಕೆಳಕಂಡ ಯಾವ ಲಾಭ ದೊರೆಯಲಿದೆ?
             ಓವರ್'ಡ್ರಾಫ್ಟ್ ಸೌಲಭ್ಯ
8. 'FII' ನ ವಿಸ್ತಾರ ರೂಪ ಏನು?
             Foreign Institutional Investment ●
9. 'The mother I Never knew' ಈ ಕೃತಿಯ ಲೇಖಕರು ಯಾರು?
             
ಸುಧಾ ಮೂರ್ತಿ
10. ಗುಂಪಿಗೆ ಹೊಂದದ ದೇಶವನ್ನು ಗುರುತಿಸಿ.
           
ಕೊರಿಯಾ

ಗುರುವಾರ, ಆಗಸ್ಟ್ 30, 2018

ವಿಶ್ವ ಕಂಡ ಶ್ರೇಷ್ಠ ಆರ್ಥಿಕ ಚಿಂತಕ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್.



* ಆಸ್ತಿರಹಿತ ವ್ಯವಸ್ಥೆಯನ್ನು ಅತೀ ಸೂಕ್ಷ್ಮವಾಗಿ ವಿವರಿಸಿದವರು ಡಾ.ಬಿ.ಆರ್.ಅಂಬೇಡ್ಕರ್.
* ಕೋಲಂಬಿಯಾ (ವಿದೇಶಿ ) ವಿಶ್ವವಿದ್ಯಾಲಯಗಳ ಪ್ರವೇಶ ಮಾಡಿದವರು ಡಾ.ಬಿ.ಆರ್.ಅಂಬೇಡ್ಕರ್.
* ಪ್ರಾಂತೀಯ ಹಣಕಾಸು ವ್ಯವಸ್ಥೆಯನ್ನು ವಿಶ್ಲೀಷಿಸಿರುವ ಪ್ರಥಮ ಭಾರತೀಯ ಹಣಕಾಸು  ಅರ್ಥವಿಜ್ಞಾನಿ ನಮ್ಮ ಡಾ.ಬಿ.ಆರ್.ಅಂಬೇಡ್ಕರ್.
*  ಭಾರತದ ರೂಪಾಯಿ ಸಮಸ್ಯೆಯ ನಿವಾರಣೆಯ  ಚಿಂತಕ ಡಾ.ಬಿ.ಆರ್.ಅಂಬೇಡ್ಕರ್.
*  ಫೌಲರ ಸಮಿತಿಯ  ಸೂತ್ರವನ್ನು ತಿರಸ್ಕರಿಸಿ ಅದಕ್ಕೆ ಬದಲಾಗಿ ಅವರದೇ ಆದ ಸೂತ್ರವನ್ನು ಸೂಚಿಸಿದ್ದಾರೆ .ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್.
*  ಶ್ರಮ ಶೋಷಣೆ ಮತ್ತು ತಾರತಮ್ಯ ಕುರಿತು ಜಗತ್ತಿಗೆ ಹೊಸ ಸಿದ್ಧಾಂತ ನೀಡಿದವರು ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್.
ಜಗತ್ತಿನ ಇತಿಹಾಸ ಸಂದರ್ಭದಲ್ಲಿ ಗುಲಾಮಗಿರಿಯ ಪದ್ಧತಿ  ಸಮಗ್ರವಾಗಿ ಅಧ್ಯಯನ ಮಾಡಿದವರು    ಡಾ.ಬಿ.ಆರ್.ಅಂಬೇಡ್ಕರ್.
* ಪಾಶ್ಚಿಮಾತ್ಯ  ಗುಲಾಮ ಪದ್ಧತಿ ಮತ್ತು ಅಸ್ಪ್ರೃಶ್ಯತೆಗಳೆರಡರ ನಡುವೆ ಮೂಲಭೂತವಾದ  ವ್ಯತ್ಯಾಸ ಗುರುತಿಸಿದವರು ಡಾ.ಬಿ.ಆರ್.ಅಂಬೇಡ್ಕರ್.
* ಬ್ರಿಟಿಷ್ ಆಡಳಿತದಲ್ಲಿ ಕಾರ್ಮಿಕ ಮಂತ್ರಿಯಾಗಿ ಏಕ ರೀತಿಯ ಶಾಸನ ರೂಪಿಸಿದವರು ಡಾ.ಬಿ.ಆರ್.ಅಂಬೇಡ್ಕರ್.
*  ಬ್ರಿಟಿಷ್ ವೈಸ್ ರಾಯ್ ಕಾರ್ಮಿಕರ ಕಾರ್ಯ ಕಾರಿ ಮಂಡಳಿ  ಪ್ರತಿನಿಧಿಯಾಗಿ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್.
*   ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸ್ಥಾಪನೆಗೆ ಕಾರಣರಾದವರು ಡಾ.ಬಿ.ಆರ್.ಅಂಬೇಡ್ಕರ್.
*   ನೀರಾವರಿ ಮತ್ತು ವಿದ್ಯುತ್  ಯೋಜನೆಗಳ ರೂವಾರಿ ಡಾ.ಬಿ.ಆರ್.ಅಂಬೇಡ್ಕರ್.
*  ಬಿಹಾರ್ ನ ದಾಮೋದರ ಕಣಿವೆಗೆ ಶಾಶ್ವತ ಯೋಜನೆ ರೂಪಿಸಿದವರು ಡಾ.ಬಿ.ಆರ್.ಅಂಬೇಡ್ಕರ್.
*  ಪ್ರಥಮ ಅಸ್ಪೃಶ್ಯ ತಲೆಮಾರಿನ ಪ್ರಪ್ರಥಮ ವಿದ್ಯಾವಂತರು ಡಾ.ಬಿ.ಆರ್.ಅಂಬೇಡ್ಕರ್.
*  ತುಳಿತಕ್ಕೊಳಪಟ್ಟ ಸಮುದಾಯದಲ್ಲೆ ಪ್ರಥಮವಾಗಿ ಮೆಟ್ರಿಕ್ಯೊಲೇಷನ್ ಪರೀಕ್ಷೆ ಪಾಸಾದವರು ಡಾ.ಬಿ.ಆರ್.ಅಂಬೇಡ್ಕರ್.
*  ಅಸ್ಪೃಶ್ಯ ಸಮುದಾಯದಲ್ಲಿ ಹುಟ್ಟಿ ಮಾನವ ವಿರೋಧಿ ಮನುಸ್ಮೃತಿ ಗ್ರಂಥವನ್ನು ಪ್ರಪ್ರಥಮವಾಗಿ ಬಹಿರಂಗವಾಗಿ ಸುಟ್ಟವರು ಡಾ.ಬಿ.ಆರ್.ಅಂಬೇಡ್ಕರ್.
*  ದಕ್ಷಿಣ ಏಷ್ಯಾ ಖಂಡದಲ್ಲಿ ಸಮಾಜ ವಿಜ್ಞಾನದಲ್ಲಿ ಪಿ.ಎಚ್.ಡಿ. ಪದವಿ ಪಡೆದ ಪ್ರಪ್ರಥಮ ಭಾರತೀಯ ಡಾ.ಬಿ.ಆರ್.ಅಂಬೇಡ್ಕರ್.
*  ದಕ್ಷಿಣ ಏಷ್ಯಾ ಖಂಡದಲ್ಲಿ ಅರ್ಥಶಾಸ್ತ್ರದಲ್ಲಿ  ಡಿ.ಎಸ್ಸಿ. ಪದವಿ ಪಡೆದ ಪ್ರಪ್ರಥಮ ಭಾರತೀಯ  ನೀರಿಗಾಗಿ (ಚೌಡರ್ ಕೆರೆ ) ಯ ಪ್ರಪ್ರಥಮವಾಗಿ ಧ್ವನಿ ಎತ್ತಿದವರು(1927) ಡಾ.ಬಿ.ಆರ್.ಅಂಬೇಡ್ಕರ್.
* 1930-31-32 ರಲ್ಲಿ  ನಡೆದ ದುಂಡು ಮೇಜಿನ ಪರಿಷತ್ತಿನಲ್ಲಿ ಹಾಜರಿದ್ದು ಸದಸ್ಯರ ಪೈಕಿ  ಡಿ.ಎಸ್ಸಿ.ಪದವಿ  ಪಡೆದ ಏಕೈಕ ವ್ಯಕ್ತಿ ಡಾ.ಬಿ.ಆರ್.ಅಂಬೇಡ್ಕರ್.
*  ಭಾರತದಲ್ಲಿ ರಾಜಕೀಯ ಕ್ರಾಂತಿಯ ಪ್ರಥಮ ಹರಿಕಾರ ಡಾ.ಬಿ.ಆರ್.ಅಂಬೇಡ್ಕರ್.
*   ಭಾರತದ ಸಂವಿಧಾನ ರಚನಾ ಸಭೆಯ ಪ್ರಪ್ರಥಮ ಅಧ್ಯಕ್ಷ ಹಾಗೂ ಸಂವಿಧಾನ ಶಿಲ್ಪಿ ಎಂಬ ಖ್ಯಾತಿಗೆ ಹೆಸರಾದವರು ಡಾ.ಬಿ.ಆರ್.ಅಂಬೇಡ್ಕರ್.
*  ಸ್ವತಂತ್ರ ಭಾರತದ ಪ್ರಪ್ರಥಮ ಕಾನೂನು ಮಂತ್ರಿ ಡಾ.ಬಿ.ಆರ್.ಅಂಬೇಡ್ಕರ್.
*  ಮಹಿಳಾ ಸಬಲೀಕರಣಕ್ಕಾಗಿ ಮಹಿಳಾ ಆಸ್ತಿ ವಿಚಾರದಲ್ಲಿ ಸಂಸತ್ ನಲ್ಲಿ ಪ್ರಫ್ರಥಮವಾಗಿ ಧ್ವನಿ ಎತ್ತಿದವರು(1951) ಡಾ.ಬಿ.ಆರ್.ಅಂಬೇಡ್ಕರ್.
*   ಸ್ವತಂತ್ರ ಪೂರ್ವದಲ್ಲಿ ದೇಶದಲ್ಲಿ ಕಾರ್ಮಿಕರನ್ನು ಕುರಿತು ಧ್ವನಿಯೇರಿಸಿದ ಮೊದಲ ವ್ಯಕ್ತಿ (ಕಾರ್ಮಿಕ  ಕ್ರಾಂತಿಯ ಹರಿಕಾರ) (1942-46) ಡಾ.ಬಿ.ಆರ್.ಅಂಬೇಡ್ಕರ್.
*   ಕಾಂಗ್ರೆಸ್ ಮತ್ತು  ಗಾಂಧೀಜಿಯನ್ನು ಎದುರುಹಾಕಿಕೊಂಡ ಪ್ರಥಮ ನಾಗರಿಕ ಹಕ್ಕುಗಳು ಹರಿಕಾರ ಡಾ.ಬಿ.ಆರ್ .ಅಂಬೇಡ್ಕರ್.
*  ಮೂರು ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಯನ ಮಾಡಿದ ಪ್ರಪ್ರಥಮ ಶೋಷಿತ್ ಸಮುದಾಯದ ನಾಯಕ  ಡಾ.ಬಿ.ಆರ್.ಅಂಬೇಡ್ಕರ್.
* 563 ಸಂಸ್ಥಾನಗಳನ್ನು ಭಾರತದ ಒಕ್ಕೂಟಕ್ಕೆ ಸೇರಿಸಬೇಕೆಂದು ಮೊದಲು ಧ್ವನಿ ಎತ್ತಿದವರು (16 ಸೆಪ್ಟೆಂಬರ್  1921) ಡಾ.ಬಿ.ಆರ್.ಅಂಬೇಡ್ಕರ್.
* ಲಂಡನ್ ಮ್ಯೊಸಿಯಂನಲ್ಲಿ ಕಾರ್ಲ್ ಮಾಕ್ಸ್ ಮತ್ತು ಅಂಬೇಡ್ಕರ್ ಅವರ ಭಾವಚಿತ್ರಗಳನ್ನು ಶೇಖರಿಸಿಡಲಾಗಿದೆ.
*  ಭಾರತದ ರಾಷ್ಟ್ರೀಯ ಧ್ವಜದಲ್ಲಿ ಅಶೋಕ ಚಕ್ರವನ್ನು ಮತ್ತು ರಾಷ್ಟ್ರೀಯ ಚಿಹ್ನೆಯಾಗಿ ಸಾರಾನಾಥದಲ್ಲಿ ಅಶೋಕ ಸ್ತಂಭದಲ್ಲಿರುವ ಸಿಂಹವನ್ನು ಪರಿಗಣಿಸಿಸುವಂತೆ ಪ್ರಭಾವ ಬೀರಿದ ವ್ಯಕ್ತಿ ಡಾ.ಬಿ.ಆರ್. ಅಂಬೇಡ್ಕರ್
ಮೊದಲಿಗರುಹಾಗೂಏಕೈಕರು:

* Phd (ಡಾಕ್ಟರೇಟ್) ಪದವಿ ಪಡೆದ ಮೊಟ್ಟ ಮೊದಲ ಭಾರತ ವಿದ್ಯಾರ್ಥಿ ನಮ್ಮ ಅಂಬೇಡ್ಕರ್.

* ಅತಿಹೆಚ್ಚು ವಿದ್ಯಾಭ್ಯಾಸ ಮಾಡಿರುವ ವಿಶ್ವದ ಏಕೈಕ ರಾಷ್ಟ್ರನಾಯಕ ನಮ್ಮ ಅಂಬೇಡ್ಕರ್.

* ಅರ್ಥಶಾಸ್ತ್ರದಲ್ಲಿ Dsc ಪದವಿ ಹಾಗೂ ಕಾನೂನು ಶಾಸ್ತ್ರದಲ್ಲಿ BAR-AT-LAW ಪದವಿ ಪಡೆದ ಮೂದಲಿಗರು ಹಾಗೂ ಏಕೈಕ ಭಾರತೀಯ ನಮ್ಮ ಅಂಬೇಡ್ಕರ್

* ಅರ್ಥಶಾಸ್ತ್ರ ಮತ್ತು ರಾಜಕೀಯ ಶಾಸ್ತ್ರಗಳ ಅಧ್ಯಾಯನಕ್ಕೆ ವಿಶ್ವದಲ್ಲೇ ಪ್ರಖ್ಯಾತವಾಗಿರುವ ಬ್ರಿಟನ್ನಿನ "ಲಂಡನ್ ಸ್ಕೂಲ್  ಆಫ್ ಎಕನಾಮಿಕ್ಸ್ & ಪೊಲಿಟಿಕಲ್ ಸೈನ್ಸ್" ಕಾಲೇಜಿನ ಉಪನ್ಯಾಸ ಕೊಠಡಿಯಲ್ಲಿ ಡಾ.ಅಂಬೇಡ್ಕರ್ ರವರ ಭಾವಚಿತ್ರವನ್ನು ಅಳವಡಿಸಲಾಗಿದೆ. (ಈ ಗೌರವಕ್ಕೆ ಪಾತ್ರರಾಗಿರುವ ಭಾರತದ ಏಕೈಕ ವ್ಯಕ್ತಿ ನಮ್ಮೆಲ್ಲರ ಅಂಬೇಡ್ಕರ್)
ವಿಶ್ವದ ಬೃಹತ್ ಹಾಗೂ ಪ್ರತಿಷ್ಠಿತ ಗ್ರಂಥಾಲಯವಾದ ಲಂಡನ್ನಿನ "ಬ್ರಿಟಿಷ್ ಮ್ಯೂಸಿಯಂ ಲೈಬ್ರರಿ"ಯಲ್ಲಿ ಅತೀ ಹೆಚ್ಚು ಪುಸ್ತಕಗಳನ್ನು ಪಡೆದು ಓದಿರುವ ವಿಶ್ವದ ಏಕೈಕ ವ್ಯಕ್ತಿ ಎಂಬ ಕೀರ್ತಿಗೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರು ಪಾತ್ರರಾಗಿದ್ದಾರೆ. (ಈ ಮಾಹಿತಿಯನ್ನು ಅಲ್ಲಿನ ಗ್ರಂಥಾಲಯದಲ್ಲಿ ದಾಖಲು ಮಾಡಲಾಗಿದೆ)

* ವಿಶ್ವದ ಪ್ರತಿಷ್ಠಿತ ವಿಶ್ವವಿದ್ಯಾನಿಲಯವಾದ ಅಮೇರಿಕದ ಕೊಲಂಬೀಯಾ ವಿಶ್ವವಿದ್ಯಾಲಯದ "ಕಾನೂನ ಮತ್ತು ಸಂವಿಧಾನ" ಅಧ್ಯಯನ ವಿಭಾಗಕ್ಕೆ ಡಾ.ಬಿ.ಆರ್. ಅಂಬೇಡ್ಕರ್ ರವರ ಹೆಸರಿಡಲಾಗಿದೆ.

* 2011ರಲ್ಲಿ ಇಂಗ್ಲೆಂಡಿನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯವು ಜಗತ್ತಿನ 100ಜನ ಪ್ರತಿಭಾವಂತ ಘನ ವಿಧ್ವಾಂಸರ ಪಟ್ಟಿ ಮಾಡಿತ್ತು. ಈ 100ಜನರ ಪಟ್ಟಿಯಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರು ಮೊದಲನೇ ವ್ಯಕ್ತಿಯಾಗಿದ್ದರು.

* ತನ್ನ ಮನೆಯಲ್ಲಿ 50ಸಾವಿರ ವಿದ್ವತ್ಪೂರ್ಣ ಗ್ರಂಥಗಳನ್ನು ಸಂಗ್ರಹಿಸಿ ಅಧ್ಯಯನ ನಡೆಸಿರುವ ಜಗತ್ತಿನ ಏಕೈಕ ವಿದ್ವಾಂಸ ಎಂಬ ಕೀರ್ತಿಗೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರು ಪಾತ್ರರಾಗಿದ್ದಾರೆ.

ಬ್ರಿಟನ್ನಿನ ದೊರೆ ಮತ್ತು ಮಹಾರಾಣಿಯವರ 'ವಿಶೇಷ ಗೌರವಕ್ಕೆ' ಪಾತ್ರರಾದ ಏಕೈಕ ಭಾರತೀಯ ಡಾ. ಬಾಬಾ ಸಾಹೇಬ್ ಅಂಬೇಡ್ಕರ್.

ಬ್ರಿಟನ್ನಿನಲ್ಲಿ ನಡೆದ ದುಂಡು ಮೇಜಿನ ಸಭೆಯಲ್ಲಿ ಭಾಗವಹಿಸಿದ್ದ ಡಾ.ಅಂಬೇಡ್ಕರ್ ರವರ ವಿದ್ವತ್ತು, ವಾಕ್ ಚಾತುರ್ಯ, ಪ್ರತಿಭೆ ಹಾಗೂ ಭಾರತದ ಶೋಷಿತರ ಕುರಿತು ಅವರು ಮಾಡಿದ ಹೃದಯ ಕುಲಕುವಂತಹ ಭಾಷಣಕ್ಕೆ ನಿಬ್ಬೆರೆಗಾದ ಬ್ರಿಟನ್ ದೊರೆ ಮತ್ತು ಮಹಾರಾಣಿಯವರು ಅಂಬೇಡ್ಕರ್ ರವರನ್ನು ಅರಮನೆಗೆ ಆಹ್ವಾನಿಸಿ ಔತಣಕೂಟ ಏರ್ಪಡಿಸಿ ವಿಶೇಷ ಗೌರವ (Honour) ನೀಡಿದರು. ಬ್ರಿಟನ್ನಿನ ದೊರೆ ಮತ್ತು ಮಹಾರಾಣಿಯವರಿಂದ ಈ ರೀತಿ ಗೌರವಕ್ಕೆ ಪಾತ್ರರಾದ ಏಕೈಕ ಭಾರತೀಯ ಬಾಬಾ ಸಾಹೇಬ್ ಅಂಬೇಡ್ಕರ್ ರವರೊಬ್ಬರೆ.

(ಬ್ರಿಟನ್ ಪ್ರಧಾನಿ, ಬ್ರಿಟನ್ ದೇಶದ ರಾಜಕೀಯ ಧುರೀಣರು, ಭಾರತದ ಮಹಾರಾಜರುಗಳು, ಸಾಮಂತರು, ಅಗ್ರ ನಾಯಕರು ಸೇರಿ ದುಂಡುಮೇಜಿನ ಸಭೆಯಲ್ಲಿ ಭಾಗವಹಿಸಿದ 89ಜನ ಸದಸ್ಯರಲ್ಲಿ ಅತೀ ಚಿಕ್ಕವಯಸ್ಸಿನವರೆಂದರೇ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ (ಕೇವಲ 39ವರ್ಷಗಳು), ಅದೇ ರೀತಿ ಆ ಸದಸ್ಯರುಗಳಲ್ಲೇ ಅತೀ ಹೆಚ್ಚಿನ ವಿಧ್ಯಾ ಅರ್ಹತೆ ಹೂಂದಿದವರೂ ಸಹ ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ ರವರೇ ಆಗಿದ್ದರು.)

ಕ್ರೀಡಾಂಗಣಗಳು ಮತ್ತು ಇರುವ ಸ್ಥಳಗಳು


* ಈಡನ್ ಗಾರ್ಡನ್ಸ್ ಕೊಲ್ಕತ್ತಾ
* ಫಿರೋಜ್ ಶಾ ಕೋಟ್ಲಾ ದೆಹಲಿ
* ಗಾಂಧಿ ಕ್ರೀಡಾಂಗಣ ಜಲಂಧರ್
* ಗ್ರೀನ್ ಪಾರ್ಕ್ –  ಕಾನ್ಪುರ್
* ಇಂದಿರಾ ಗಾಂಧಿ ಕ್ರೀಡಾಂಗಣ ವಿಜಯವಾಡಾ
* ರಾಜೀವ್ ಗಾಂಧಿ ಪೋರ್ಟ್ ಸಿಲ್ವರ್ ಜುಬಿಲೀ
ಕ್ರೀಡಾಂಗಣ ವಿಶಾಖಪಟ್ಟಣಂ
* ಜವಾಹರಲಾಲ್ ನೆಹರು ಕ್ರೀಡಾಂಗಣ ನವ ದೆಹಲಿ
* ಲಾಲ್ ಬಹದ್ದೂರ್ ಶಾಸ್ತ್ರಿ ಕ್ರೀಡಾಂಗಣ ಹೈದರಾಬಾದ್
* ಎಂ. ಚಿನ್ನಸ್ವಾಮಿ ಕ್ರೀಡಾಂಗಣ ಬೆಂಗಳೂರು
* *ಎಂ.ಎ ಚಿದಂಬರಂ ಕ್ರೀಡಾಂಗಣ ಚೆನ್ನೈ
* ಮಾಧವರಾವ್ ಸಿಂಧಿಯಾ ಕ್ರಿಕೆಟ್ ಮೈದಾನ ರಾಜ್ಕೋಟ್
* ಮೊಯಿನ್-ಉಲ್-ಹಕ್ ಕ್ರೀಡಾಂಗಣ ಪಾಟ್ನಾ
* ಸರ್ದಾರ್ ವಲ್ಲಭಾಯಿ ಪಟೇಲ್ ಮೋತೆರಾ- ಕ್ರೀಡಾಂಗಣ ಅಹಮದಾಬಾದ್
* ಸವಾಯಿ ಮಾನ್ಸಿಂಗ್ ಕ್ರೀಡಾಂಗಣ ಜೈಪುರ
* ವಿದರ್ಭ ಸಿಎ ಮೈದಾನ ನಾಗಪುರ
* ವಾಂಖೇಡೆ ಕ್ರೀಡಾಂಗಣ ಮುಂಬೈ
* ಬರಾಬಾಟಿ ಕ್ರೀಡಾಂಗಣ ಕಟಕ್
* ಬರ್ಕತುಲ್ಲಾ ಖಾನ್ ಕ್ರೀಡಾಂಗಣ ಜೋಧಪುರ್

ಮಂಗಳವಾರ, ಜೂನ್ 21, 2016

ಪಂಚಾಯತ್ ರಾಜ್ ಅಧಿನಿಯಮ

1. ಪ್ರತಿ 5000 – 7000 ಜನಸಂಖ್ಯೆಗೆ ಒಂದರಂತೆ ಗ್ರಾಮ ಪಂಚಾಯಿತಿಯ ರಚನೆ.
2. ಮಲೆನಾಡು ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ( ಉದಾ. ಬೇಳಗಾಂ , ಚಿಕ್ಕಮಗಳೂರು , ದಕ್ಷಿಣಕನ್ನಡ , ಧಾರವಾಡ , ಹಾಸನ , ಕೊಡಗು , ಶಿವಮೊಗ್ಗ , ಉಡುಪಿ , ಹಾವೇರಿ , ಹಾಗೂ ಉತ್ತರ ಕನ್ನಡ ಜಿಲ್ಲೆಗಳು ) 2500 ಜನಸಂಖ್ಯೆಗೆ ಕಡಿಮೆ ಇಲ್ಲದ ಪ್ರದೇಶವನ್ನು ಒಳಗೊಂಡಂತೆ ಪಂಚಾಯಿತಿ ರಚಿಸಬಹುದಾಗಿದೆ.
3. ಅವಶ್ಯಕವೆಂದು ಕಂಡುಬಂದಲ್ಲಿ , ಗ್ರಾಮದ ಕೇಂದ್ರದಿಂದ ಐದು ಕಿ.ಮೀ. ಸುತ್ತಳತೆಯಲ್ಲಿರುವ ಪ್ರದೇಶವನ್ನು ಸಹ ಪಂಚಾಯಿತಿ ವ್ಯಾಪ್ತಿಯೆಂದು ಪರಿಗಣಿಸಬಹುದು.
4. ಪ್ರತಿ 400 ಜನಸಂಖ್ಯೆಗೆ ಒಬ್ಬರಂತೆ ಗ್ರಾಮ ಪಂಚಾಯಿತಿಗೆ ಸದಸ್ಯರ ಆಯ್ಕೆ ನಡೆಯುತ್ತದೆ.
5. ಪಟ್ಟಣ ಪಂಚಾಯಿತಿ ಅಥವಾ ಕೈಗಾರಿಕಾ ಉಪನಗರ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಇರುವ ಜಾಗಗಳನ್ನು ಹೊರತುಪಡಿಸಿ ಇಡೀ ತಾಲ್ಲೂಕಿನ ಮೇಲೆ ತಾಲ್ಲೂಕು ಪಂಚಾಯಿತಿ ನಿಯಂತ್ರಣ ಹೊಂದಿದೆ.
6. ತಾಲ್ಲೂಕಿನ ಒಟ್ಟು ಜನಸಂಖ್ಯೆಯಲ್ಲಿ 10,000 ಕ್ಕೆ ಒಬ್ಬರಂತೆ ತಾಲ್ಲೂಕು ಪಂಚಾಯಿತಿ ಸದಸ್ಯರ ಆಯ್ಕೆ ನಡೆಯುತ್ತದೆ.
7. ಒಂದು ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ತಾಲ್ಲೂಕುಗಳಲ್ಲಿ ಕನಿಷ್ಠ 11 ಮಂದಿ ಚುನಾಯಿತ ಸದಸ್ಯರಿರಬೇಕು.
8. ಪ್ರತಿ ತಾಲ್ಲೂಕು ಪಂಚಾಯಿತಿ ಕ್ಷೇತ್ರದಲ್ಲಿ ಚುನಾವಣೆಯ ಮೂಲಕ ಸದಸ್ಯರ ಆಯ್ಕೆ ನಡೆಯುತ್ತದೆ. ಮಾತ್ರವಲ್ಲದೆ. ತಾಲ್ಲೂಕನ್ನು ಪ್ರತಿನಿಧಿಸುವ ಲೋಕಸಭಾ , ವಿಧಾನಸಭಾ , ರಾಜ್ಯಸಭಾ , ವಿಧಾನ ಪರಿಷತ್ ಸದಸ್ಯರು ಜೊತೆಗೆ ಒಂದು ವರ್ಷದ ಅವಧಿಗೆ , ಸರದಿ ಪ್ರಕಾರ ತಾಲ್ಲೂಕಿನ 1/5 ಭಾಗದ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರುಗಳು ಸದಸ್ಯರಾಗಿರುತ್ತಾರೆ.
9. ಪಟ್ಟಣ ಪಂಚಾಯಿತಿ ಅಥವಾ ಕೈಗಾರಿಕಾ ಉಪನಗರ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಇರುವ ಜಾಗಗಳನ್ನು ಹೊರತುಪಡಿಸಿ ಇಡೀ ಜಿಲ್ಲೆಯ ಮೇಲೆ ಜಿಲ್ಲಾ ಪಂಚಾಯಿತಿ ನಿಯಂತ್ರಣ ಹೊಂದಿದೆ.
10. 40,000 ಜನಸಂಖ್ಯೆಗೆ ಒಬ್ಬರಂತೆ ಜಿಲ್ಲಾ ಪಂಚಾಯಿತಿ ಸದಸ್ಯರ ಆಯ್ಕೆ ನಡೆಯುತ್ತದೆ.
11. ಉತ್ತರ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ 30,000 ಜನಸಂಖ್ಯೆಗೆ ಹಾಗೂ ಕೊಡಗು ಜಿಲ್ಲೆಗೆ 18,000 ಜನಸಂಖ್ಯೆಗೆ ಒಬ್ಬರಂತೆ ಒಬ್ಬ ಸದಸ್ಯರನ್ನು ಆಯ್ಕೆ ಮಾಡಬೇಕಿದೆ.
12. ಪ್ರತಿ ಜಿಲ್ಲಾ ಪಂಚಾಯಿತಿಗೆ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಚುನಾಯಿತ ಸದಸ್ಯರಲ್ಲದೇ ಜಿಲ್ಲೆಯನ್ನು ಪ್ರತಿನಿಧಿಸುವ ಲೋಕಸಭಾ , ವಿಧಾನಾಸಭಾ , ರಾಜ್ಯಸಭಾ , ವಿಧಾನ ಪರಿಷತ್ತಿನ ಸದಸ್ಯರು ಹಾಗೂ ಜಿಲ್ಲೆಯ ಎಲ್ಲಾ ತಾಲ್ಲೂಕು ಪಂಚಾಯಿತಿಗಳ ಅಧ್ಯಕ್ಷರುಗಳು ಸದಸ್ಯರಾಗಿರುತ್ತಾರೆ.
13. ಮೀಸಲಿಟ್ಟ ಹಾಗೂ ಮೀಸಲಿರಿಸದ ( ಸಮಾನ್ಯ ) ಒಟ್ಟು ಸ್ಥಾನಗಳಲ್ಲಿ 1/3 ಕ್ಕಿಂತ ಕಡಿಮೆಯಿಲ್ಲದ ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಬೇಕು.
14. ಚುನಾಯಿತರಾದ ಸದಸ್ಯರ ಅವಧಿಯು ಗ್ರಾಮ ಪಂಚಾಯಿತಿಯ ಪ್ರಥಮ ಸಭೆ ಅಂದರೆ ಅಧ್ಯಕ್ಷ / ಉಪಾಧ್ಯಕ್ಷರ ಆಯ್ಕೆಗಾಗಿ ಗೊತ್ತುಪಡಿಸಿದ ಸಭೆಯ ದಿನಾಂಕದಿಂದ ಮುಂದಿನ ಐದು ವರ್ಷಗಳವೆರೆಗೆ ಇರುತ್ತದೆ.
15. ಗ್ರಾಮ ಪಂಚಾಯಿತಿಯ ಅನುಮತಿ ಇಲ್ಲದೆ. ಗ್ರಾಮ ಪಂಚಾಯಿತಿಯ ಮೂರಕ್ಕಿಂತ ಹೆಚ್ಚು ಸಾಮಾನ್ಯ ಸಭೆಗಳಿಗೆ ಅನುಕ್ರಮವಾಗಿ ಗೈರುಹಾಜರಾದರೆ ಅವರು ಸದಸ್ಯತ್ವ ಕಳೆದುಕೊಳ್ಳುತ್ತಾರೆ.
16. ಗ್ರಾಮ ಪಂಚಾಯಿತಿ ಸದಸ್ಯರು ತಮ್ಮ ಸಹಿ ಸಹಿತ ಬರಹದಲ್ಲಿ ಬರೆದು ರಾಜೀನಾಮೆಯನ್ನು ಅಧ್ಯಕ್ಷರಿಗೆ ಸಲ್ಲಿಸಬಹುದು. ಹೀಗೆ ಬರೆದ ಬರಹವನ್ನು 15 ದಿನಗಳೊಳಗೆ ಬರಹದ ಮೂಲಕ ಹಿಂತೆಗೆದುಕೊಳ್ಳದಿದ್ದಲ್ಲಿ , ಅವರ ಸ್ಥಾನ ಖಾಲಿಯಾಗುತ್ತದೆ.
17. ಸದಸ್ಯರು ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ಅಸಮರ್ಥರಾದರೆ ಅಥವಾ ಅಪಕೀರ್ತಿಕರ ನಡತೆಯುಳ್ಳವರಾದರೆ , ಅವರಿಗೆ ಅಹವಾಲನ್ನು ಹೇಳಲು ಅವಕಾಶವನ್ನು ಕೊಟ್ಟ ತರುವಾಯ ವಿಚಾರಣೆಯನ್ನು ನಡೆಸಿ ನಂತರ ಸದಸ್ಯತ್ವದಿಂದ ತೆಗೆದುಹಾಕಬಹುದು.
18. ಗ್ರಾಮ ಪಂಚಾಯಿತಿಯು ಅದರ ಅಧಿಕಾರವನ್ನು ಮೀರಿದರೆ ಅಥವಾ ದುರುಪಯೋಗ ಪಡಿಸಿದರೆ ವಿಸರ್ಜನೆ ಮಾಡಬಹುದು.
19. ಗ್ರಾಮ ಪಂಚಾಯಿತಿಗೆ ವಿಧಿಸಿದ ಕರ್ತವ್ಯಗಳನ್ನು ನೆರವೇರಿಸಲು ಅಸಮರ್ಥವಾದರೆ ಅಥವಾ ಮೇಲಿಂದ ಮೇಲೆ ವಿಫಲವಾದರೆ ಅಂತಹ ಗ್ರಾಮ ಪಂಚಾಯಿತಿಯನ್ನು ವಿಸರ್ಜಿಸಬಹುದು.
20. ಪ್ರತಿ ಸಮಿತಿಯಲ್ಲಿ ಸಮಿತಿಯ ಅಧ್ಯಕ್ಷರು ಸೇರಿದಂತೆ 3 – 5 ಸದಸ್ಯರಿರುತ್ತಾರೆ. ಸಮಿತಿಯ ಅವಧಿಯು ಚುನಾವಣೆಯ ದಿನಾಂಕದಿಂದ 30 ತಿಂಗಳು
21. ಗ್ರಾಮ ಪಂಚಾಯಿತಿ ಅಧ್ಯಕ್ಷರು ಉತ್ಪಾದನಾ ಹಾಗೂ ಸೌಕರ್ಯ ಸಮಿತಿಗಳ ಅಧ್ಯಕ್ಷರಾಗಿರುತ್ತಾರೆ. ಉಪಾಧ್ಯಕ್ಷರು ಸಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷನಾಗುತ್ತಾನೆ.
22. ಸಾಮಾಜಿಕ ನ್ಯಾಯ ಸಮಿತಿಯಲ್ಲಿ ಕನಿಷ್ಟ ಪಕ್ಷ ತಲಾ ಒಬ್ಬ ಮಹಿಳಾ ಸದಸ್ಯೆ ಮತ್ತು ಪರಿಶಿಷ್ಟ ಜಾತಿ / ವರ್ಗದ ಸದಸ್ಯರಿಬೇಕು . ಪ್ರತಿ ಸಮಿತಿಯಲ್ಲಿ ಸರ್ಕಾರವು ಅಂಗೀಕರಿಸಿದ ಮಂಡಲಿಗಳು ಸದಸ್ಯರೊಬ್ಬರನ್ನು ಸೇರ್ಪಡೆ ಮಾಡಿಕೊಳ್ಳಲು ಅವಕಾಸವಿದೆ.
23. ಇದೇ ರೀತಿ ತಾಲ್ಲೂಕು ಪಂಚಾಯಿತಿ ಮೂರು ಸ್ಥಾಯಿ ಸಮಿತಿಗಳನ್ನು , ಜಿಲ್ಲಾ ಪಂಚಾಯಿತಿ ಐದು ಸ್ಥಾಯಿ ಸಮಿತಿಗಳನ್ನು ರಚಿಸಬೇಕಿದೆ.
24. ಕರ್ನಾಟಕ ಪಂಚಾಯಿತಿ ರಾಜ್ ಅಧಿನಿಯಮದ ಪ್ರಕರಣ 61 ( ಎ ) ಪ್ರಕಾರ ಗ್ರಾಮ ಪಂಚಾಯಿತಿಯು ನಿರ್ದಿಷ್ಟ ಉದ್ದೇಶಗಳಿಗೆ ಉಪ ಸಮಿತಿಗಳನ್ನು ರಚಿಸಬಹುದು.
25. ಸಾಮಾನ್ಯ ಸಭೆಯು ಕನಿಷ್ಠ ಪ್ರತಿ ತಿಂಗಳಿಗೊಮ್ಮೆ ಸಾಮಾನ್ಯ ಸಭೆಯನ್ನು ನಡೆಸಬೇಕು .
26. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು / ಕಾರ್ಯದರ್ಶಿಯು ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ ಎಲ್ಲಾ ಅಧಿಕಾರಿ / ಕ್ಷೇತ್ರ ಸಿಬ್ಬಂದಿಗಳಿಗೆ ಸಭೆಯ ನೋಟಿಸನ್ನು ನೀಡಬೇಕು .
27. ಗ್ರಾಮ ಪಂಚಾಯಿತಿಗೆ ಸಾಮಾನ್. ಸಭೆಗೆ ಏಳು ಪೂರ್ಣ ದಿನಗಳ ನೋಟೀಸನ್ನು ನೀಡಬೇಕು . ಸಭೆಯ ಸೂಚನಾ ಪತ್ರದ ಪ್ರತಿಯನ್ನು ಗ್ರಾಮ ಪಂಚಾಯಿತಿ ಕಛೇರಿಯ ಸೂಚನಾ ಫಲಕದಲ್ಲಿ ಹಚ್ಚಿರಬೇಕು.
28. ಗ್ರಾಮ ಪಂಚಾಯಿತಿಯ ಒಟ್ಟು ಸದಸ್ಯರ ಅರ್ಧ ಭಾಗ ( ಶೇ.50 ) ಸಭೆಯ ಕೋರಂ ಆಗಿರುತ್ತದೆ.
29. ಗ್ರಾಮ ಪಂಚಾಯಿತಿ ಸಭೆಗೆ ನಿಗದಿಪಡಿಸಿದ ಸಮಯದಲ್ಲಿ ಕೋರಂ ಇಲ್ಲದಿದ್ದರೆ ಸಭೆಯ ಅಧ್ಯಕ್ಷರು 30 ನಿಮಿಷಗಳವರೆಗೆ ಕಾಯಬೇಕು.
30. ಕೋರಂ ಇಲ್ಲದಿದ್ದರೆ ಸಭೆಯ ಅಧ್ಯಕ್ಷರು ಸಭೆಯನ್ನು ಮುಂದಿನ ದಿನಕ್ಕೆ ಅಥವಾ ತರುವಾಯದ ದಿನಕ್ಕೆ ಮುಂದೂಡಬಹುದು , ಹಾಗೆ ನಿಗದಿಪಡಿಸಿದ ಸಭೆಯ ನೋಟೀಸನ್ನು ಗ್ರಾಮ ಪಂಚಾಯಿತಿ ಕಛೇರಿಯ ನೋಟೀಸ್ ಬೋರ್ಡಿನಲ್ಲಿ ಅಂಟಿಸಬೇಕು.
31. ಕೋರಂ ಇಲ್ಲದೇ ಯಾವುದೇ ಸಭೆಯನ್ನು ನಡೆಸಲು ಸಾಧ್ಯವಿಲ್ಲಲ
32. ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರು ವಹಿಸಬೇಕು.
33. ಅಧ್ಯಕ್ಷರು ಗೈರುಹಾಜರಿಯಲ್ಲಿ ಉಪಾಧ್ಯಕ್ಷರು ಅಧ್ಯಕ್ಷತೆ ವಹಿಸಬೇಕು. ಇವರಿಬ್ಬರ ಗೈರುಹಾಜರಿಯಲ್ಲಿ ಸಭೆಯಲ್ಲಿ ಹಾಜರಿರುವ ಸದಸ್ಯರು ತಮ್ಮಲ್ಲೇ ಒಬ್ಬರನ್ನು ಆ ಸಭೆಗೆ ಅಧ್ಯಕ್ಷತೆ ವಹಿಸಲು ಆಯ್ಕೆ ಮಾಡಿಕೊಳ್ಳಬಹುದು.
34. ಸಭೆಯ ನಿರ್ಣಯಗಳನ್ನು ಸಭೆಯಲ್ಲಿ ಹಾಜರಿರುವ ಚಿನಾಯಿತ ಸದಸ್ಯರ ಬಹುಮತದ ಮೂಲಕ ತೀರ್ಮಾನಿಸಬೇಕು.
35. ಸಮಾನ ಮತಗಳು ಬಂದಲ್ಲಿ ಅಧ್ಯಕ್ಷರು ತಮ್ಮ ನಿರ್ಣಯಕ ಮತವನ್ನು ಹೆಚ್ಚುವರಿಯಾಗಿ ಕೊಡಲು ಅವಕಾಶವಿದೆ.
36. ಗ್ರಾಮ ಪಂಚಾಯಿತಿಯ ಯಾವುದೇ ಸದಸ್ಯರು ಹಣಕಾಸಿನ ಹಿತಾಸಕ್ತಿ ಇರುವ ವಿಷಯಕ್ಕೆ ಸಂಬಂಧಿಸಿದ ಚರ್ಚೆಯಲ್ಲಿ ಭಾಗವಹಿಸಬಾರದು ಹಾಗೂ ಮತ ನೀಡಬಾರದು . ಹಾಗೇಯೇ ಅಧ್ಯಕ್ಷತೆ ವಹಿಸುವ ವ್ಯಕ್ತಿಯೂ ಕೂಡ ಹಣಕಾಸಿನ ಹಿತಾಸಕ್ತಿ ಹೊಂದಿದ್ದರೆ. ಅಂತಹ ವಿಷಯದ ಚರ್ಚೆ ಬಂದಾಗ ಸಭೆಯ ಅಧ್ಯಕ್ಷತೆಯನ್ನು ವಹಿಸಬಾರದು.
37. ಗ್ರಾಮ ಪಂಚಾಯಿತಿ ಸಭೆಗಳು ಅಥವಾ ಸ್ಥಾಯಿ ಸಮಿತಿಗಳ ಸಭೆಗಳಿಗೆ ಹಾಜರಾಗುವ ಸದಸ್ಯರಿಗೆ ಭಾಗವಹಿಸುವಿಕೆ ಭತ್ಯೆಯನ್ನು ಸಂದಾಯ ಮಾಡಬೇಕು. ಪ್ರಸ್ತುತ ಸರ್ಕಾರದ ಆದೇಶದಂತೆ ಸದಸ್ಯರು ಹಾಜರಾದ ಪ್ರತಿ ಸಭೆಗೆ ರೂ.100/- ರಂತೆ ಸಂದಾಯ ಮಾಡಬೇಕು.
38. ಅವಶ್ಯವೆಂದು ಭಾವಿಸಿದಾಗ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ವಿಶೇಷ ಸಭೆ ಕರೆಯಬಹುದು.
39. ಗ್ರಾಮ ಪಂಚಾಯಿತಿಯ ಸದಸ್ಯರ ಮೂರನೇ ಒಂದು ಭಾಗ (1/3) ದಷ್ಟು ಸದಸ್ಯರು ಲಿಖಿತ ಕೋರಿಕೆ ಸಲ್ಲಿಸಿದರೂ ವಿಶೇಷ ಸಭೆ ಕರೆಯಲು ಅವಕಾಶವಿದೆ. ಲಿಖಿತ ಕೋರಿಕೆಯು ತಲುಪಿದ 15 ದಿವಸಗಳೊಳಗೆ ವಿಶೇಷ ಸಭೆಯನ್ನು ಕರೆಯಬೇಕು.
40. ವಿಶೇಷ ಸಭೆಯನ್ನು ಕರೆಯಲು ಅಧ್ಯಕ್ಷರು ಒಪ್ಪದಿದ್ದಲ್ಲಿ ಉಪಾಧ್ಯಕ್ಷರು ಕರೆಯಬೇಕು. ಉಪಾಧ್ಯಕ್ಷರು ಸಹ ಒಪ್ಪದಿದ್ದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು / ಕಾರ್ಯದರ್ಶಿಗಳು ಸಭೆಯ ನೋಟೀಸು ಜಾರಿ ಮಾಡುವರು.
41. ವಿಶೇಷ ಸಭೆಗೆ ಮೂರು ಪೂರ್ಣ ದಿವಸಗಳ ನೋಟೀಸನ್ನು ಕಾರ್ಯದರ್ಶಿ ನೀಡಬೇಕಾಗುತ್ತದೆ.
42. ವಿಶೇಷ ಸಭೆಗೆ ಸಾಮಾನ್ಯ ಸಭೆಯಂತೆಯೇ ಶೇ. 50 ರಷ್ಟು ಕೋರಂ ಅವಶ್ಯವಿರುತ್ತದೆ.
43. ತುರ್ತು ಸಭೆಯನ್ನು ಅಧ್ಯಕ್ಷರು 24 ಗಂಟೆಯೊಳಗಾಗಿ ಕರೆಯಬಹುದು.
44. ತುರ್ತು ಸಭೆಯನ್ನು ನೈಸರ್ಗಿಕ ವಿಪತ್ತುಗಳಾದ ಮಳೆ ಹಾನಿ , ಬೆಂಕಿ ಅನಾಹುತ ಮತ್ತಿತರ ಪ್ರಕೃತಿ ವಿಕೋಪಗಳ ತುರ್ತು ನಿರ್ವಹಣೆಗೆ ಸಂಬಂಧಿಸಿದ ತುರ್ತು ಕ್ರಮ ತೆಗೆದುಕೊಳ್ಳಲು ಇಂತಹ ತುರ್ತು ಸಭೆಗಳನ್ನು ಕರೆಯಬಹುದು.
45. ನಡವಳಿ ಪುಸ್ತಕವು ಪಂಚಾಯಿತಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ / ಕಾರ್ಯದರ್ಶಿಗಳ ಸುಪರ್ದಿಯಲ್ಲಿರಬೇಕು.
46. ಸಭಾ ನಡವಳಿಯ ಒಂದು ಪ್ರತಿಯನ್ನು ಸಭೆ ನಡೆದ 10 ದಿನಗಳೊಳಗೆ ಕಾರ್ಯ ನಿರ್ವಾಹಕ ಅಧಿಕಾರಿಗೆ ಕಳುಹಿಸಬೇಕು.
47. ಗ್ರಾಮ ಪಂಚಾಯಿತಿಯ ಎಲ್ಲಾ ಸದಸ್ಯರಿಗೂ ಸಭಾ ನಡವಳಿ ಪ್ರತಿಗಳನ್ನು ಒದಗಿಸಬೇಕು.
48. ನಡವಳಿ ಪುಸ್ತಕವು ಸದಸ್ಯರಿಗೆ ಮತ್ತು ಮತದಾರರಿಗೆ ( ಸಾರ್ವಜನಿಕರಿಗೆ ) ಪರಿಶೀಲನೆಗೆ ಮುಕ್ತವಾಗಿರಬೇಕು.
49. ಯಾವುದೇ ಸದಸ್ಯ ತನ್ನ ಅಭಿಪ್ರಾಯವನ್ನು ನಡವಳಿ ಪುಸ್ತಕದಲ್ಲಿ ನಮೂದಿಸಬೇಕೆಂದು ಒತ್ತಾಪಡಿಸಿದಲ್ಲಿ ನಮೂದಿಸಬೇಕು.
50. ಸ್ಥಲಿಯ ಸರ್ಕಾರವಾಗಿರುವ ಗ್ರಾಮ ಪಂಚಾಯಿತಿಗೆ ಅಧ್ಯಕ್ಷರು ಕಾರ್ಯ ನಿರ್ವಾಹಕ ಮುಖ್ಯಸ್ಥರಾಗಿರುತ್ತಾರೆ.
51. ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅಧಿಕಾರವಧಿ ಅವರ ಚುನಾವಣೆಯ ದಿನಾಂಕದಿಂದ 30 ತಿಂಗಳು ಆಗಿರುತ್ತದೆ. ಅಥವಾ ಸದಸ್ಯತ್ವ ಅವಧಿ ನಿಂತು ಹೋಗುವವರೆಗೆ ಯಾವುದೋ ಮೊದಲು ಆ ಅವಧಿಯಾಗಿರುತ್ತದೆ.
52. ಗ್ರಾಮ ಪಂಚಾಯಿತಿ ಸಭೆಗಳನ್ನು ಕರೆಯುದು ಮತ್ತು ಆ ಸಭೆಗಳ ಅಧ್ಯಕ್ಷತೆಯನ್ನು ವಹಿಸುವುದು ಅಧ್ಯಕ್ಷರ ಅಧಿಕಾರ .
53. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರ, ಕಾರ್ಯದರ್ಶಿ ಮತ್ತು ಇತರ ಗ್ರಾಮ ಪಂಚಾಯಿತಿ ಸಿಬ್ಬಂದಿಗಳ ಕಾರ್ಯ ನಿರ್ವಹಣೆಯ ಮೇಲ್ವಿಚಾರಣೆ ಮತ್ತು ನಿಯಂತ್ರಣ ಮಾಡುವುದು ಅಧ್ಯಕ್ಷರ ಅಧಿಕಾರಿ
54. ಗ್ರಾಮ ಪಂಚಾಯಿತಿ ಅಧಿಕಾರಿ ಅಥವಾ ನೌಕರನ ವಿರುದ್ಧ ಶಿಸ್ತು ಕ್ರಮ ಹೂಡಲು ಉದ್ದೇಶಿಸಿದ್ದರೆ ಅಥವಾ ಕ್ರಿಮಿಲನ್ ಅಪರಾಧದ ಕುರಿತು ತನಿಖೆ ನಡೆಯುತ್ತಿದ್ದರೆ ಅವರನ್ನು ಅಮಾನತ್ತಿನಲ್ಲಿಡುವ ಅಧಿಕಾರ ಅಧ್ಯಕ್ಷರಿಗಿದೆ.
55. ಅಧ್ಯಕ್ಷರು ಗ್ರಾಮ ಪಂಚಾಯಿತಿಯ ಮಂಜೂರಾತಿ ಅಗತ್ಯವಿರುವಂತಹ ಯಾವುದೇ ಕಾಮಗಾರಿಯನ್ನು ತಕ್ಷಣವೇ ಕೈಗೊಳ್ಳುವುದು ಅಗತ್ಯವೆಂದು ಅಭಿಪ್ರಾಯಪಟ್ಟರೆ 24 ಗಂಟೆಗಳ ನೋಟೀಸನ್ನು ಕೊಟ್ಟು ಸಭೆಯನ್ನು ಕರೆಯಬಹುದು.
56. ಅಧ್ಯಕ್ಷರು ರಜೆ ಹೋದಾಗ ಅಥವಾ ಕೆಲಸ ನಿರ್ವಹಿಸಲು ಅಸಮರ್ಥರಾದಾಗ ಅಥವಾ ಅಧ್ಯಕ್ಷರ ಹುದ್ದೆಯು ಖಾಲಿ ಇದ್ದಾಗ ಉಪಾಧ್ಯಕ್ಷರು ಮೇಲಿನ ಎಲ್ಲಾ ಕರ್ತವ್ಯಗಳನ್ನು ನಿರ್ವಹಿಸಬೇಕು.
57. ಗ್ರಾಮ ಪಂಚಾಯಿತಿಯ ಸದಸ್ಯರು ಗ್ರಾಮ ಪಂಚಾಯಿತಿಯ ಸದಸ್ಯರು ಗ್ರಾಮ ಪಂಚಾಯಿತಿಯ ದಾಖಲೆಗಳನ್ನು ಪರಿಶೀಲಿಸುವ ಅಧಿಕಾರ ಹೊಂದಿರುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ವಿವರಣೆಗಳನ್ನು ಪಡೆಯುವ ಹಕ್ಕು ಸದಸ್ಯರಿಗಿದೆ. . ಗ್ರಾಮ ಪಂಚಾಯಿತಿ ಅಧ್ಯಕ್ಷರು / ಉಪಾಧ್ಯಕ್ಷರು ಇದಕ್ಕೆ ಅವಕಾಶ ಮಾಡಿಕೊಡಬೇಕು.
58. ಪಂಚಾಯತ್ ರಾಜ್ ಕಾಯಿದೆಯ ಪ್ರಕಾರ ಅಧ್ಯಕ್ಷರ ಜವಾಬ್ದಾರಿ
· ಗ್ರಾಮ ಪಂಚಾಯಿತಿಯ ಎಲ್ಲಾ ಸಭೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದು.
· ವಾರ್ಡ್ ಸಮತ್ತು ಗ್ರಾಮ ಸಭೆಗಳ ಸಂಘಟನೆಯ ಜವಾಬ್ದಾರಿ ನಿರ್ವಹಿಸುವುದು.
· ತಮ್ಮ ವಾರ್ಡ್ ನ ಜನರ ಸಮಸ್ಯೆಗಳನ್ನು ಅರ್ಥೈಸಿಕೊಂಡು ಲಭ್ಯ ಅನುದಾನದ ಇತಿಮಿತಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳವುದು.
· ಸವಲತ್ತುಗಳನ್ನು, ವೈಯಕ್ತಿಕ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ಒದಗಿಸುವುದು.
· ಸಂಪನ್ಮೂಲ ಕ್ರೋಢೀಕರಣಕ್ಕೆ ಮಹತ್ವ ನೀಡುವುದು.
· ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಸಾರ್ವಜನಿಕರಿಗೆ ಉತ್ತಮವಾದ ಸೇವೆಗಳನ್ನು ನೀಡುವಂತೆ ನೋಡಿಕೊಳ್ಳುವುದು.
· ನಿಯಾಮವಳಿಗಳು ಮತ್ತು ಕಾಯಿದೆಯ ಅಂಶಗಳನ್ನು ಅರ್ಥೈಸಿಕೊಂಡು ಕರ್ತವ್ಯ ನಿರ್ವಹಿಸುವುದು.
59. ಗ್ರಾಮ ಪಂಚಾಯಿತಿ ಚುನಾಯಿತ ಸದಸ್ಯರ ಗೌರವಧನ ಅಧ್ಯಕ್ಷರು – 500 , ಉಪಾಧ್ಯಕ್ಷರು – 300 , ಸದಸ್ಯರು – 300
60. ಗ್ರಾಮ ಪಂಚಾಯಿತಿ ಅಧ್ಯಕ್ಷರು ತಮ್ಮ ಸಹಿ ಇರುವ ರಾಜೀನಾಮೆ ಪತ್ರವನ್ನು ಉಪ ವಿಭಾಗಾಧಿಕಾರಿಗಳಿಗೆ ನೀಡಬೇಕು .
61. ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು ತಮ್ಮ ಸಹಿ ಇರುವ ರಾಜೀನಾಮೆಯನ್ನು ಅಧ್ಯಕ್ಷರಿಗೆ ನೀಡಬೇಕು.
62. ಗ್ರಾಮ ಪಂಚಾಯಿತಿ ಅಧ್ಯಕ್ಷರು / ಉಪಾಧ್ಯಕ್ಷರು 10 ದಿನಗಳೊಳಗೆ ರಾಜೀನಾಮೆ ಪತ್ರವನ್ನು ಹಿಂದೆ ಪಡೆಯದಿದ್ದರೆ , ಅದು ಸ್ವೀಕೃತವಾಗಿದೆಯೆಂದು ಪರಿಗಣಿಸಬೇಕು.
63. ಗ್ರಾಮ ಪಂಚಾಯಿತಿ ಅದ್ಯಕ್ಷರ ಹಾಗೂ ಉಪಾಧ್ಯಕ್ಷರ ಆಯ್ಕೆಯ ಒಂದು ವರ್ಷದವರೆಗೆ ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಬಾರದು.
64. ಗ್ರಾಮ ಪಂಚಾಯಿತಿಯ ಒಟ್ಟು ಸದಸ್ಯರಲ್ಲಿ 1/3 ನೇ ಸದಸ್ಯರು ಅವಿಶ್ವಾಸ ನಿರ್ಣಯಕ್ಕೆ ಸಹಿ ಹಾಕಿ ಉಪ ವಿಭಾಗಾಧಿಕಾರಿಗಳಿಗೆ ಸಲ್ಲಿಸಬೇಕು.
65. ಅವಿಶ್ವಾಸ ಗೊತ್ತುವಳಿ ಇದನ್ನು ಸ್ವೀಕರಿಸಿದ 30 ದಿನದೊಳಗೆ ಉಪ ವಿಭಾಗಾಧಿಕಾರಿಗಳು ಸಭೆಯನ್ನು ಕರೆದು ಗೊತ್ತುವಳಿಯನ್ನು ಮಂಡಿಸಬೇಕು.
66. ಉಪ ವಿಭಾಗಾಧಿಕಾರಿಗಳು ಸಭೆಯನ್ನು ಕರೆದು ಗೊತ್ತುವಳಿಯನ್ನು ಸಭೆಯ ನೋಟೀಸನ್ನು ಕನಿಷ್ಠ 10 ದಿನಗಳಿಗೆ ಮುಂಚಿತವಾಗಿ ಸದಸ್ಯರಿಗೆ ನೀಡಬೇಕು.
67. ಗ್ರಾಮ ಪಂಚಾಯಿತಿಯ ಒಟ್ಟು ಸದಸ್ಯರ 2/3 ರಷ್ಟು ಸದಸ್ಯರು ಪರವಾಗಿ ತೀರ್ಮಾನಿಸಿದ್ದಲ್ಲಿ ಅವಿಶ್ವಾಸ ಗೊತ್ತುವಳಿ ಸ್ವೀಕಾರವಾಗುತ್ತದೆ.
68. ಒಂದು ಬಾರಿ ಅವಿಶ್ವಾಸ ಗೊತ್ತುವಳಿ ವಿಫಲವಾದಲ್ಲಿ ಆ ದಿನಾಂಕದಿಂದ ಒಂದು ವರ್ಶದ ಅವಧಿಯವರೆಗೆ ಮರು ಅವಿಶ್ವಾಸ ಗೊತ್ತುವಳಿಯ ಮಂಡಿಸುವ ಹಾಗಿಲ್ಲ.
69. ಗ್ರಾಮ ಪಂಚಾಯಿತಿ ಅಧ್ಯಕ್ಷ / ಉಪಾಧ್ಯಕ್ಷ / ಸದಸ್ಯರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳು ಸಾಬೀತಾದಲ್ಲಿ ಅವರನ್ನು ಹುದ್ಧೆಯಿಂದ ತೆಗೆದು ಹೊಕಬಹುದು.
70. ಗ್ರಾಮ ಪಂಚಾಯಿತಿ ಅಧ್ಯಕ್ಷ / ಉಪಾಧ್ಯಕ್ಷ / ಸದಸ್ಯರ ದುರ್ವರ್ತನೆ , ಅದಿಕಾರ ದುರುಪಯೋಗ ಮತ್ತು ಭ್ರಷ್ಟಚಾರ ಪ್ರಕರಣಗಳು ಸಾಬೀತಾದಲ್ಲಿ ಹುದ್ದೆಯಿಂದ ತೆಗೆದು ಹಾಕಬಹುದು.
71. ಗ್ರಾಮ ಪಂಚಾಯಿತಿ ಅನುಮತಿ ಇಲ್ಲದೆ ಅಧ್ಯಕ್ಷ / ಉಪಾಧ್ಯಕ್ಷ / ಸದಸ್ಯರ ಪಂಚಾಯಿತಿ ಅನುಮತಿಯಿಲ್ಲದೆ ಮೂರಕ್ಕಿಂತ ಹೆಚ್ಚು ಸಾಮಾನ್ಯ ಸಭೆಗಳಿಗೆ ಗೈರುಹಾಜರಾದರೆ ಸದಸ್ಯತ್ವ ರದ್ದಾಗುತ್ತದೆ .
72. ಗ್ರಾಮ ಪಂಚಾಯಿತಿಯ ಸದಸ್ಯರು ಗ್ರಾಮ ಪಂಚಾಯಿತಿಯ ದಾಖಲೆಗಳನ್ನು ಪರಿಶೀಲಿಸುವ ಅಧಿಕಾರ ಹೊಂದಿರುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ವಿವರಣೆಗಳನ್ನು ಪಡೆಯುವ ಹಕ್ಕು ಸದಸ್ಯರಿಗಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷರು / ಉಪಾಧ್ಯಕ್ಷರು ಇದಕ್ಕೆ ಅವಕಾಶ ಮಾಡಿಕೊಡಬೇಕು.
73. ಗ್ರಾಮ ಪಂಚಾಯಿತಿ ಅಧ್ಯಕ್ಷ / ಉಪಾಧ್ಯಕ್ಷ / ಸದಸ್ಯರು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಪಂಚಾಯಿತಿ ಕಾಮಗಾರಿಗಳಿಗೆ ತಾವಾಗಲೀ ತಮ್ಮ ಏಜೆಂಟರ ಮೂಲಕವಾಗಿ ಕರಾರು ಮಾಡಿಕೊಳ್ಳುವುದು ಅಥವಾ ಸಾಮಾಗ್ರಿ ಸರಬರಾಜು ಮಾಡುವುದು ಸಾಬೀತಾದರೆ ಸದಸ್ಯತ್ವ ರದ್ದಾಗುತ್ತದೆ.
74. ಸದಸ್ಯರಿಂದ ಗ್ರಾಮ ಪಂಚಾಯಿತಿಗೆ ಯಾವುದಾದರೂ ಬಾಕಿ ಉಳಿಸಿಕೊಂಡಿದ್ದಲ್ಲಿ ಅಂತಹವರ ಸದಸ್ಯತ್ವ ರದ್ದಾಗುತ್ತದೆ.
75. ಕರ್ನಾಟಕ ಸರ್ಕಾರವು ದಿನಾಂಕ/31/03/2008 ರ ಆದೇಶದಲ್ಲಿ ರಾಜ್ಯದ ಪ್ರತಿ ಗ್ರಾಮ ಪಂಚಾಯಿತಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಹುದ್ದೆಯನ್ನು ಸೃಷ್ಠಿಸಿದೆ.
76. ಪಂಚಾಯಿತಿ ಅಬಿವೃದ್ಧಿ ಅಧಿಕಾರಿಗಳ ಕರ್ತವ್ಯಗಳು
· ಗ್ರಾಮ ಪಂಚಾಯಿತಿಯ ಆಡಳಿತ , ಹಣಕಾಸು ಮತ್ತು ಕರ್ತವ್ಯಗಳ ನಿರ್ವಹಣೆಯ ಸಮಗ್ರ ಜವಾಬ್ದಾರಿ
· ಗ್ರಾಮ ಪಂಚಾಯಿತಿ ನಿಧಿಯ ಡ್ರಾಯಿಂಗ್ ಮತ್ತು ಡಿಸ್ಬರ್ಸಿಂಗ್ ಅಧಿಕಾರಿ
· ರಾಜ್ಯ ಮತ್ತು ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಕಾಮಗಾರಿಗಳ ಸಮರ್ಪಕ ಮತ್ತು ಸಕಾಲಿಕ ಅನುಷ್ಟಾನದ ಜವಾಬ್ದಾರಿ.
· ಗ್ರಾಮ ಪಂಚಾಯಿತಿ ಸಭೆಯ ನಿರ್ಣಯಗಳ ಜಾರಿಯ ಜವಾಬ್ದಾರಿ .
· ಗ್ರಾಮ ಪಂಚಾಯಿತಿ ನಿರ್ವಹಿಸಬೇಕಾದ ವಹಿಗಳ ನಿರ್ವಹಣಾ ಜವಾಬ್ದಾರಿ .
· ಸರ್ಕಾರ , ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿಗಳಿಗೆ ಮಾಸಿಕ ವರದಿ ಮತ್ತು ಎಂ.ಐ.ಎಸ್. ಸಲ್ಲಿಸುವ ಜವಾಬ್ದಾರಿ.
· ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಕರ ಪರಿಷ್ಕರಣೆ ಮತ್ತು ಕರ ವಸೂಲಾತಿಯ ಸಮಗ್ರ ಜವಾಬ್ದಾರಿ.
· ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅನುಷ್ಟಾನದ ಎಂ.ಐ.ಎಸ್ ಮತ್ತು ಪಂಚತಂತ್ರ ತಂತ್ರಾಶದ ನಿರ್ವಹಣೆ .
· ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಇಲಾಖೆಯೊಂದಿಗೆ ಸಮನ್ವಯ ಸಾಧಿಸುವುದು.
· ಗ್ರಾಮ ಪಂಚಾಯಿತಿಯ ಸಿಬ್ಬಂದಿಗಳ ಮೇಲ್ವಿಚಾರಣೆ.
77. ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಕರ್ತವ್ಯಗಳು
· ಗ್ರಾಮ ಪಂಚಾಯಿತಿ ಆಡಳಿತ , ಹಣಕಾಸು ಮತ್ತು ಕರ್ತವ್ಯಗಳ ನಿರ್ವಹಣೆಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ನೆರವು ನೀಡುವುದು.
· ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ನಿಯಂತ್ರಣದಲ್ಲಿ ಕರ್ತವ್ಯ ನಿರ್ವಹಿಸುವುದು
· ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆ , ಸ್ಥಾಯಿ ಸಮಿತಿಗಳ ಸಭೆ , ಇನ್ನಿತರ ಸಭೆಗಳಿಗೆ ತಿಳುವಳಿಕೆ ಪತ್ರ ಹೊರಡಿಸುವುದು.
· ಮೇಲಿನ ಸಭೆಗಳ ಸುಗಮ ನಿರ್ವಹಣೆ ಮತ್ತು ನಿರ್ಣಯಗಳ ದಾಖಲೀಕರಣ ಮಾಡುವುದು.
· ವಾರ್ಡ್ ಮತ್ತು ಗ್ರಾಮ ಸಭೆಗಳನ್ನು ಸಕಾಲದಲ್ಲಿ ಕರೆಯಲು ತಿಳುವಳಿಕೆ ಪತ್ರ ಹೊರಡಿಸುವುದು.
· ವಾರ್ಡ್ ಮತ್ತು ಗ್ರಾಮ ಸಭೆಗಳ ಸಭಾ ನಡವಳಿಗಳನ್ನು ದಾಖಲಿಸುವುದು.
· ಗ್ರಾಮ ಪಂಚಾಯಿತಿ ಜಮಾಬಂದಿ ಕಾರ್ಯಕ್ರಮ ಸಂಪೂರ್ಣ ಜವಾಬ್ದಾರಿ.
· ಗ್ರಾಮ ಪಂಚಾಯಿತಿಗಳ ಆಡಿಟ್ ವರದಿಗಳಿಗೆ ಅನುಪಾಲನಾ ವರದಿ ಸಿದ್ಧಪಡಿಸುವುದು.
· ಬೀದಿ ದೀಪ , ಕುಡಿಯುವ ನೀರಿನ ನಿರ್ವಹಣೆ
· ಸಾರ್ವಜನಿಕ ದೂರಗಳ ಪರಿಶೀಲನೆ , ಜನಸ್ಪಂದನ ಅರ್ಜಿಗಳ ವಿಲೇವಾರಿ
· ಗ್ರಾಮ ಪಂಚಾಯಿತಿಗಳ ಬಜೆಟ್ ತಯಾರಿಸಿ ಅನುಮೋದನೆಗೆ ಮಂಡಿಸುವುದು.
· ಗ್ರಾಮ ಪಂಚಾಯಿತಿಗಳ ವಿವಿಧ ವಹಿಗಳ ನಿರ್ವಹಣೆ
· ಗ್ರಾಮ ಪಂಚಾಯಿತಿಗ ಸದಸ್ಯರ ತರಬೇತಿ ನಿರ್ವಹಣೆ
· ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸೂಚಿಸುವ ಇತರ ಜವಾಬ್ದಾರಿಗಳ ನಿರ್ವಹಣೆ
78. ಪ್ರಸಕ್ತ ಗ್ರಾಮ ಪಂಚಾಯಿತಿಗಳಲ್ಲಿ ಕರ ವಸೂಲಿಗಾರರು , ವಾಟರ್ ಮೆನ್ , ಸ್ವಚ್ಛತಾ ಕಾರ್ಮಿಕರ ಸ್ಥಳೀಯ ನೇಮಕಾತಿಗೆ ಅವಕಾಶ ಕಲ್ಪಿಸಿದೆ. ಇವರು ಗ್ರಾಮ ಪಂಚಾಯಿತಿ ನೌಕರಾಗಿರುತ್ತಾರೆಯೇ ಹೊರತು ಸರ್ಕಾರಿ ನೌಕರರಲ್ಲ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯ ಅನುಮೋದನೆಯೊಂದಿಗೆ ನೌಕರರನ್ನು ನೇಮಕ ಮಾಡಿ , ಅವರ ವೇತನವನ್ನು ಗ್ರಾಮ ಪಂಚಾಯಿತಿ ನಿಧಿಯಿಂದ ಭರಿಸಬಹುದು.
79. ಗ್ರಾಮ ಪಂಚಾಯಿತಿ ನೇಮಕ ಮಾಡಿಕೊಂಡ ಯಾವುದೇ ನೌಕರರಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ / ಕಾರ್ಯದರ್ಶಿ ದಂಡ ವಿಧಿಸಬಹುದು , ವಾರ್ಷಿಕ ಬಡ್ತಿಯನ್ನು ತಡೆಹಿಡಿಯಬಹುದು.
80. ಪ್ರತಿ ವರ್ಷ ಶೇ.10 ರಷ್ಟು ಮನೆಗಳಿಗೆ ಕಡಿಮೆ ಇಲ್ಲದಂತೆ ಶೌಚಾಲಯಗಳನ್ನು ಒದಗಿಸುವುದು ಅಲ್ಲದೇ ಪುರುಷರು ಮತ್ತು ಮಹಿಳೆಯರಿಗೆ ಸಮುದಾಯ ಶೌಚಗೃಹಗಳನ್ನು ನಿರ್ಮಿಸುವುದು.
81. ಪ್ರಸಕ್ತ ಕುಡಿಯುವ ನೀರಿನ ಯೋಜನೆಗಳ ಅನುಷ್ಟಾನವನ್ನು ರಾಜ್ಯ ಸರ್ಕಾರವು ಜಿಲ್ಲಾ ಪಂಚಾಯಿತಿಗೆ ವಹಿಸಿದೆ.ನಿರ್ವಹಣೆಯ ಜವಾಬ್ದಾರಿಯನ್ನು ಗ್ರಾಮ ಪಂಚಾಯಿತಿಗೆ ನೀಡಲಾಗಿದೆ.
82. ರಾಜ್ಯ ಪಂಚಾಯಿತಿ ಪರಿಷತ್ತಿನ ಅಧ್ಯಕ್ಷರು – ಮುಖ್ಯಮಂತ್ರಿಗಳು
83. ರಾಜ್ಯ ಪಂಚಾಯಿತಿ ಪರಿಷತ್ತಿನ ಉಪಾಧ್ಯಕ್ಷರು – ಗ್ರಾಮೀಣಾಭೀವೃದ್ಧಿ ಮತ್ತು ಪಂಚಾಯಿತಿ ರಾಜ್ ಸಚಿವರು
84. ರಾಜ್ಯ ಪಂಚಾಯಿತಿ ಪರಿಷತ್ತಿಗೆ ಸರ್ಕಾರದಿದಂ ನಾಮ ನಿರ್ದೇಶಿಸಲ್ಪಟ್ಟ ಐವರು ಸಚಿವರು ಮತ್ತು 10 ಜಿಲ್ಲಾ ಪಂಚಾಯಿತಿ ಅಧ್ಯಕ್ಷರುಗಳು ಇದರ ಸದಸ್ಯರಾಗಿದ್ದಾರೆ.
85. ರಾಜ್ಯ ಪಂಚಾಯಿತಿ ಪರಿಷತ್ತು ಸಮಿಯಿ ವರ್ಷಕ್ಕೆ ಎರಡು ಬಾರಿಯಾದರೂ ಸಭೆ ಸೇರಬೇಕು.
86. ಮುಂದಿನ ಆರ್ಥಿಕ ವರ್ಷದ , ಅಂದರೆ ಏಪ್ರಿಲ್ 1ನೇ ತಾರಿಖೀನಿಂದ ಮಾರ್ಚಿ 31ನೇ ತಾರೀಖಿನವರೆಗೆ ಅಯವ್ಯವನ್ನು ಗ್ರಾಮ ಪಂಚಾಯಿತಿ ಸಿದ್ಧಪಡಿಸಬೇಕು .ಆಯವ್ಯ ಮತ್ತು ಲೆಕ್ಕಪತ್ರ ನಿಯಮಗಳು 2006 ನಿಯಮ 11 ಮತ್ತು 12 ರನ್ವಯ ಫೇಬ್ರವರಿ 1 ರಿಂದ ಮಾರ್ಚ್ 10 ರೊಳಗೆ ನಡೆಯುವ ಗ್ರಾಮ ಪಂಚಾಯಿತಿ ಸಭೆಯಲ್ಲಿ ಅನುಮೋದನೆ ಪಡೆಯಬೇಕು.
87. 2005 ರಲ್ಲಿ ಕರ್ನಾಟಕ ಸರ್ಕಾರವು ಪಂಚಾಯಿತಿ ಜಮಾಬಂದಿ ನಿರ್ವಹಣೆ ವ್ಯವಸ್ಥೆಯನ್ನು ಜಾರಿಗೆ ತಂದಿತು.
88. ಪಂಚಾಯತ್ ಜಮಾಬಂದಿ ಎಂದರೆ – ಯೋಜನೆಗಳನ್ನು ಜಾರಿಗೊಳಿಸಬೇಕು, ಅವುಗಳಿಗೆ ಹಣಬೇಕು , ಬಳಸಿದ ಹಣವನ್ನು ಪುಸ್ತಕಗಳಲ್ಲಿ ದಾಖಲೀಕರಿಸಬೇಕು. ನಡೆಸಲಾದ ಕಾಮಗಾರಿಗಳ ಗುಣಮಟ್ಟಕ್ಕೂ ಖರ್ಚು ಮಾಡಿದ ಹಣಕ್ಕೂ ಹೊಂದಾಣಿಕೆಯಾಗಬೇಕು . ಈ ಪ್ರಕ್ರಿಯೆಗಳನ್ನು ವರ್ಷಕ್ಕೊಮ್ಮೆ ಸಾರ್ವಜನಿಕರ ಸಮ್ಮುಖದಲ್ಲಿ ತನಿಖೆ ನಡೆಸಿ ತಪ್ಪು ಒಪ್ಪುಗಳನ್ನು ತಿಳಿಯುವುದೇ ಪಂಚಾಯತ್ ಜಮಾಬಂದಿ.
89. ಗ್ರಾಮ ಪಂಚಾಯಿತಿ ಜಮಾಬಂದಿ ತಂಡವನ್ನು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ( ಇಓ ) ಮಾಡಬೇಕು.
90. ಗ್ರಾಮ ಪಂಚಾಯಿತಿ ಜಮಾಬಂದಿಯು ಪ್ರತಿ ವರ್ಷ ಆಗಸ್ಟ್ 16 ರಿಂದ ಸೆಪ್ಟೇಂಬರ್ 15 ರೊಳಗೆ ನಡೆಯಬೇಕು.
91. ಕಾರ್ಯನಿರ್ವಾಹಕ ಅಧಿಕಾರಿ ಜಮಾಬಂದಿ ನಡೆಯುವ ದಿನವನ್ನು ಗ್ರಾಮ ಪಂಚಾಯಿತಿಗಳಿಗೆ 30 ದಿನ ಮೊದಲು ತಿಳಿಸಿರಬೇಕು.
92. ಗ್ರಾಮ ಪಂಚಾಯಿತಿಯ ಎಲ್ಲಾ ಸದಸ್ಯರು ಹಾಗೂ ನೌಕರರು ಜಮಾಬಂದಿ ನಡೆಯುವಾಗ ಇರಬೇಕು . ಗ್ರಾಮ ಪಂಚಾಯಿತಿಯ ಕಿರಿಯ ಇಂಜಿನಿಯರ್ ಇರುವುದು ಕಡ್ಡಾಯ.
93. ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು ಮುಂತಾದ ಅಧಿಕಾರಿಗಳು ಜಮಾಬಂದಿ ಮಾಡಬೇಕು . ಎಲ್ಲಾ ಗ್ರಾಮಗಳಲ್ಲೂ ಅಲ್ಲ . ಕಡೆಯ ಪಕ್ಷ ತಾಲ್ಲೂಕಿನ 2 ಗ್ರಾಮಗಳಲ್ಲಿ ಮಾಡಬೇಕು.
94. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯಿದೆ ದಿನಾಂಕ/07/09/2005 ರಲ್ಲಿ ಜಾರಿಗೆ ಬಂದಿತು.
95. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಮೊದಲ ಹಂತದಲ್ಲಿ ರಾಜ್ಯದ ಬೀದರ್ , ಗುಲ್ಬರ್ಗ , ರಾಯಚೂರು ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ದಿನಾಂಕ/01/04/2006 ರಿಂದ ಜಾರಿಯಲ್ಲಿ ತರಲಾಯಿತು.
96. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಎರಡನೇ ಹಂತದಲ್ಲಿ ರಾಜ್ಯದ ಬೆಳಗಾವಿ, ಬಳ್ಳಾರಿ , ಚಿಕ್ಕಮಗಳೂರು , ಶಿವಮೊಗ್ಗ , ಹಾಸನ , ಮತ್ತು ಕೊಡಗು ಜಿಲ್ಲೆಗಳಲ್ಲಿ ದಿನಾಂಕ/01/04/2007 ರಿಂದ ವಿಸ್ತರಿಸಲಾಯಿತು.
97. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಸದ್ಯ ರಾಜ್ಯದ ಉಳಿದ ಜಿಲ್ಲೆಗಳಿಗೂ ದಿನಾಂಕ/01/04/2008 ರಿಂದ ಜಾರಿಗೊಳಿಸಲಾಯಿತು.
98. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಪ್ರತಿ ಕುಟುಂಬವು ಒಂದು ಆರ್ಥಿಕ ವರ್ಷದಲ್ಲಿ 100 ಮಾನವ ದಿನಗಳ ಕೆಲಸಕ್ಕಾಗಿ ಅರ್ಜಿ ಸಲ್ಲಿಸುವ ಅಧಿಕಾರ ಪಡೆಯುತ್ತದೆ.
99. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಅಕುಶಲ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ 15 ದಿನಗಳೊಳಗಾಗಿ ಉದ್ಯೋಗ ಒದಗಿಸದಿದ್ದಲ್ಲಿ ಅರ್ಜಿದಾರರು ಆರ್ಥಿಕ ವರ್ಷದ ಮೊದಲ 30 ಗಿನಗಳಿಗೆ ಕೂಲಿಯ ಶೇ.25 ರಷ್ಟು ಮತ್ತು ಉಳಿದ ಅವಧಿಗೆ ಶೇ.50 ರಷ್ಟು ನಿರುದ್ಯೋಗ ಭತ್ಯೆಯನ್ನು ಪಡೆಯಲು ಹಕ್ಕು ಹೊದಿರುತ್ತಾರೆ.
100. ಸಾಧ್ಯವಾದಷ್ಟು ಮಟ್ಟಿಗೆ ಕೆಲಸಗಳನ್ನು ಆ ಗ್ರಾಮದ ವ್ಯಾಪ್ತಿಯಲ್ಲಿ ಒದಗಿಸಬೇಕು. ಕೂಲಿ ಕಾರ್ಮಿಕರು ವಾಸವಿರುವ ಗ್ರಾಮದಿಂದ 5 ಕಿ.ಮೀ. ಗಿಂತ ಹೆಚ್ಚಿನ ದೂರದಲ್ಲಿ ಕೆಲಸವನ್ನು ಒದಗಿಸಿದಾಗ ನಿಗದಿತ ದರದ ಶೇ.10 ರಷ್ಟನ್ನು ಹೆಚ್ಚುವರಿಯಾಗಿ ಪಡೆಯಲು ಈ ಕೂಲಿ ಕಾರ್ಮಿಕರಿಗೆ ಹಕ್ಕಿದೆ.