ಶನಿವಾರ, ಡಿಸೆಂಬರ್ 24, 2011

ಪ್ರಚಲಿತ ಘಟನೆ

1. ನಿಯಮದ ಪ್ರಕಾರ ಅರ್ಜಿದಾರರು ಎಂಎಂಆರ್‌ಡಿಎ ಮೈದಾನಕ್ಕಾಗಿ ಎಂಟು ಲಕ್ಷ ರೂಪಾಯಿಗಳನ್ನು ಠೇವಣಿಯಾಗಿ ಇಡಬೇಕು ಮತ್ತು 11 ಲಕ್ಷ ರೂಪಾಯಿಗಳನ್ನು ಬಾಡಿಗೆಯಾಗಿ ನೀಡಬೇಕು ಎಂದು ತಿಳಿಸಿದರು.
2. ಕರ್ನಾಟಕದಲ್ಲಿ ಮೇಲ್ಮನೆಗೆ ( ವಿಧಾನಪರಿಷತ್ )ನಡೆದ ಒಂದು ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ಮುಖ್ಯಮಂತ್ರಿ ಶ್ರೀ.ಡಿ.ವಿ.ಸದಾನಂದ ಗೌಡ ಇವರಿಗೆ ಭರ್ಜರಿ ಜಯ
3. ಮೇಲ್ಮನೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಶ್ರೀ.ಡಿ.ವಿ.ಸದಾನಂದ ಗೌಡ 123 ಮತಗಳನ್ನ ಗಳಿಸಿದರು.
4. ಮೇಲ್ಮನೆ ಚುನಾವಣೆಯಲ್ಲಿ ಕಾಂಗ್ರೇಸ್ ಅಭ್ಯರ್ಥಿ ಆನಂದ ಗಡ್ಡದೇವರಮಠ 69 ಮತಗಳನ್ನ ಪಡೆದರು
5. ಮೇಲ್ಮನೆ ಚುನಾವಣೆಯಲ್ಲಿ ಅಸಿಂಧುಗೊಂಡ ಮತ 6
6. ಮೇಲ್ಮನೆ ಚುನಾವಣೆಯಲ್ಲಿ ರದ್ದಾದ ಮತ 1
7. ಮೇಲ್ಮನೆ ಚುನಾವಣೆಯಲ್ಲಿ ಚಲಾವಣೆಯಾದ ಮತ ಒಟ್ಟು 198
8. ಮೇಲ್ಮನೆ ಚುನಾವಣೆಯಲ್ಲಿ ಒಟ್ಟು ಮತ 199
9. ಮೇಲ್ಮನೆ ಪ್ರವೇಶಿಸಿ ಗೆದ್ದು ಪರಿಷತ್ ಸದಸ್ಯತ್ವ ಪಡೆದ ರಾಜ್ಯದ ಮೊದಲ ಮುಖ್ಯಮಂತ್ರಿ ಶ್ರೀ.ಡಿ.ವಿ.ಸದಾನಂದ ಗೌಡ
10. ಶ್ರೀ.ಡಿ.ವಿ.ಸದಾನಂದ ಗೌಡ ಅವಧಿ 2014 ಜೂನ್ 30 ರವರೆಗೆ
11. ಅಸಿಂಧುಗೊಂಡ 6 ಮತಗಳು ಮುಖ್ಯಮಂತ್ರಿ ಪರವೇ ಬಿದ್ದಿದೆ.
12. ಮುಖ್ಯಮಂತ್ರಿಗಳಿಗೆ ತೋರಿಸಿದರು ಎಂಬ ಕಾರಣಕ್ಕೆ ಬಿಜೆಪಿಯ ಅಭ್ಯರ್ಥಿ ಕಳಕಪ್ಪ ಬಂಡಿ ಅವರ ಮತವನ್ನು ರದ್ದುಪಡಿಸಲಾಯಿತು.
13. ಕಾಂಗ್ರೇಸ್ 71 ಸದಸ್ಯ ಬಲ ಹೊಂದಿದ್ದು ಆ ಪಕ್ಷಕ್ಕೆ ಬಿದ್ದಿರುವುದು 69 ಮತ ಮಾತ್ರ
14. 26 ಸದಸ್ಯ ಸಂಖ್ಯಾಬಲವನ್ನು ಹೊಂದಿದ್ದ ಜೆಡಿಎಸ್ ಮತದಾನದಿಂದ ದೂರ ಉಳಿದಿತ್ತು.
15. ರಾಜ್ಯದ ಇತಿಹಾಸದಲ್ಲಿ ಇದುವರೆಗೂ ವಿಧಾನಸಭೆಯ ಸದಸ್ಯರೇ ಮುಖ್ಯಮಂತ್ರಿಯಾಗಿದ್ದರು ಆದರೆ ಬಿಜೆಪಿಯಲ್ಲಿ ಅನಿರಿಕ್ಷಿತ ಬೆಳವಣಿಗೆಯಿಂದ ವಿಧಾನಪರಿಷತ್ ಸದಸ್ಯರೊಬ್ಬರು ಮುಖ್ಯಮಂತ್ರಿ ಪದವಿಗೇರಿದರು.
16. ಶಂಕರಪ್ಪ ಅವರಿಂದ ತೆರವಾದ ಸ್ಥಾನಕ್ಕಾಗಿ ಶ್ರೀ.ಡಿ.ವಿ.ಸದಾನಂದ ಗೌಡ ಸ್ಪರ್ದಿಸಿದ್ದರು.
17. ಜನಾಂಗೀಯ ದ್ವೇಷಕ್ಕೆ ತುತ್ತಾಗಿ ಹತ್ಯೆಗೀಡಾಗಿದ್ದ ಭಾರತೀಯ ಯುವಕ ನಿತಿನ್ ಗರ್ಗ್ ಕೊಲೆ ಪ್ರಕರಣದ ಆರೋಪಿಗೆ ವಿಕ್ಟೋರಿಯ ರಾಜ್ಯದ ಸುಪ್ರೀಂ ಕೋರ್ಟ್ 13 ವರ್ಷ ಜೈಲು ಶಿಕ್ಷೆ ವಿಧಿಸಿತು.
18. ಈ ಕೃತ್ಯ ವು ಜನಾಂಗೀಯ ದ್ವೇಷದ ಕೊಲೆ ಎಂಬುದಕ್ಕಿಂತಲೂ ಅತ್ಯಂತ ಹೀನಾ ಅಪರಾಧವಾಗಿದೆ ಎಂದು ತೀರ್ಪು ನೀಡಿದ ನ್ಯಾಯಮೂರ್ತಿ ಪಾಲ್ ಕಾಗ್ಲ್ಯಾನ್ ಅಭಿಪ್ರಾಯಪಟ್ಟಿದ್ದಾರೆ.
19. ಭಗವದ್ಗೀತೆಯು ತೀವ್ರಗಾಮಿ ನಿಲುವುಗಳ ಪ್ರತಿಪಾದನೆಯ ಗ್ರಂಥ ಎಂದು ತಗಾದೆ ತೆಗೆದಿರುವ ಸ್ಥಳೀಯ ಕ್ರಿಶ್ಚಿಯನ್ ಆರ್ಥೋಡಾಕ್ಸ್ ಚರ್ಚ್
20. ಭಗವದ್ಗೀತೆಯು 1788 ರಲ್ಲಿ ಮೊದಲ ಬಾರಿಗೆ ರಷ್ಯಾ ಭಾಷೆಗೆ ತರ್ಜುಮೆಗೊಂಡಿದೆ.
21. ಭಗವದ್ಗೀತೆಯನ್ನು ನಿಷೇಧಿಸುವಂತೆ ಕ್ರಿಶ್ಚಿಯನ್ ಆರ್ಥೋಡಾಕ್ಸ್ ಚರ್ಚ್ ಕೋರ್ಟ್ ಮೊರೆ ಹೋಗಿದ್ದು . ತೊಮ್ಸ್ಕ್ ಜಿಲ್ಲಾ ನ್ಯಾಯಾಲಯವು ಡಿಸೆಂಬರ್ 28 ರಂದು ಈ ಕುರಿತು ತೀರ್ಪು ನೀಡಲಿದೆ.
22. ಕೇಂದ್ರ ಮಟ್ಟದಲ್ಲಿ ಲೋಕಪಾಲ ಮತ್ತು ರಾಜ್ಯಗಳಲ್ಲಿ ಲೋಕಾಯುಕ್ತ ವ್ಯವಸ್ಥೆ ಜಾರಿ. ಇವು ಸ್ವಾಯತ್ತ ಹಾಗೂ ಸ್ವತಂತ್ರ ವ್ಯವಸ್ಥೆಗಳು.
23. ಕೇಂದ್ರ ಮಟ್ಟದಲ್ಲಿ ಲೋಕಪಾಲ ಮತ್ತು ರಾಜ್ಯಗಳಲ್ಲಿ ಲೋಕಾಯುಕ್ತ ಭ್ರಷ್ಟಾಚಾರ ತಡೆ ಕಾಯಿದೆಯಡಿ ಯಾವುದೇ ಅಧಿಕಾರಿ ವಿರುದ್ಧ ದೂರು ದಾಖಲಾದ ಸಂದರ್ಭದಲ್ಲಿ, ಅಂತಹ ಅಧಿಕಾರಿ ವಿರುದ್ಧ ಪ್ರಾಥಮಿಕ ವಿಚಾರಣೆಗೆ ನಿರ್ದೇಶಿಸುವ, ತನಿಖೆಗೆ ಸೂಚಿಸುವ ಹಾಗೂ ಮೇಲ್ವಿಚಾರಣೆ ಮಾಡುವ ಅಧಿಕಾರ ಇವುಗಳಿಗೆ ಇರುತ್ತದೆ.
24. ಕಪಾಲ ವ್ಯವಸ್ಥೆಯಲ್ಲಿ ಒಬ್ಬ ಅಧ್ಯಕ್ಷರು ಹಾಗೂ ಗರಿಷ್ಠ ಎಂಟು ಸದಸ್ಯರು ಇರುತ್ತಾರೆ. ಈ ಪೈಕಿ ನಾಲ್ವರು ನ್ಯಾಯಾಂಗ ಕ್ಷೇತ್ರದಿಂದ ಬಂದವರಾಗಿರುತ್ತಾರೆ.
25. ನಾಲ್ಕು ಸದಸ್ಯ ಸ್ಥಾನಗಳು ಪರಿಶಿಷ್ಟ ಜಾತಿ/ ಪಂಗಡ, ಇತರೆ ಹಿಂದುಳಿದ ವರ್ಗಗಳು (ಒಬಿಸಿ), ಅಲ್ಪಸಂಖ್ಯಾತರು ಮತ್ತು ಮಹಿಳೆಯರಿಗೆ ಮೀಸಲು.
26. ಇದು ಪ್ರಾಥಮಿಕ ವಿಚಾರಣಾ ತಂಡ ಹಾಗೂ ಸ್ವತಂತ್ರ ನ್ಯಾಯಿಕ ವಿಚಾರಣಾ ತಂಡಗಳನ್ನು ಪ್ರತ್ಯೇಕವಾಗಿ ಹೊಂದಿರಲಿದೆ.
27. ಕಾರ್ಯದರ್ಶಿ, ವಿಚಾರಣಾ ನಿರ್ದೇಶಕ, ತನಿಖಾ ನಿರ್ದೇಶಕ ಮತ್ತಿತರ ಅಧಿಕಾರಿಗಳು ಇದರಲ್ಲಿ ಇರುತ್ತಾರೆ.
28. ಪ್ರಧಾನ ಮಂತ್ರಿ, ಲೋಕಸಭೆ ಸ್ಪೀಕರ್, ಲೋಕಸಭೆಯ ಪ್ರತಿಪಕ್ಷ ನಾಯಕ, ಭಾರತದ ಮುಖ್ಯ ನ್ಯಾಯಮೂರ್ತಿ ಅಥವಾ ಮುಖ್ಯ ನ್ಯಾಯಮೂರ್ತಿ ನೇಮಿಸಿದ ಸುಪ್ರೀಂಕೋರ್ಟಿನ ಹಾಲಿ ನ್ಯಾಯಮೂರ್ತಿಯವರನ್ನು ಒಳಗೊಂಡ ಆಯ್ಕೆ ಸಮಿತಿ ಲೋಕಪಾಲರನ್ನು ನೇಮಿಸಲಿದೆ.
29. ರಾಷ್ಟ್ರಪತಿಯವರು ನೇಮಿಸಿದ ಪರಿಣತ ಕಾನೂನು ತಜ್ಞರೊಬ್ಬರು ಆಯ್ಕೆ ಸಮಿತಿಯಲ್ಲಿ ಇರುತ್ತಾರೆ.ನೇಮಕದ ವಿಷಯದಲ್ಲಿ ಆಯ್ಕೆ ಸಮಿತಿಗೆ ಪೂರಕವಗಿ ಶೋಧನಾ ಸಮಿತಿ ಕೆಲಸ ಮಾಡುತ್ತದೆ.
30. ಶೋಧನಾ ಸಮಿತಿಯ ಶೇ 50ರಷ್ಟು ಸದಸ್ಯ ಸ್ಥಾನಗಳು ಪರಿಶಿಷ್ಟ ಜಾತಿ/ ಪಂಗಡ, ಒಬಿಸಿ, ಅಲ್ಪಸಂಖ್ಯಾತರು ಹಾಗೂ ಮಹಿಳೆಯರಿಗೆ ಮೀಸಲು.
31. ಕೆಲವು ವಿಶೇಷ ರಕ್ಷಣೆಗಳೊಂದಿಗೆ ಪ್ರಧಾನಿ ಸ್ಥಾನವನ್ನು ಲೋಕಪಾಲ ವ್ಯಾಪ್ತಿಗೆ ತರಲಾಗಿದೆ. ಪ್ರಧಾನಿ ವಿರುದ್ಧ ವಿದೇಶಾಂಗ ವ್ಯವಹಾರ, ರಾಷ್ಟ್ರಕ್ಕೆ ಸಂಬಂಧಿಸಿದ ಬಾಹ್ಯ ಹಾಗೂ ಆಂತರಿಕ ಭದ್ರತೆ, ಸಾರ್ವಜನಿಕ ಸುವ್ಯವಸ್ಥೆ, ಪರಮಾಣು ಚಟುವಟಿಕೆ ಹಾಗೂ ಬಾಹ್ಯಾಕಾಶ ವಿಷಯಗಳಿಗೆ ಸಂಬಂಧಿಸಿದಂತೆ ಯಾವುದೇ ದೂರು ಬಂದರೆ ಅದರ ಬಗ್ಗೆ ತನಿಖೆ ನಡೆಸಲು ಲೋಕಪಾಲರಿಗೆ ಅಧಿಕಾರ ಇಲ್ಲ..
32. 3/4ರಷ್ಟು ಬಹುಮತವಿರುವ ಪೂರ್ಣಪೀಠ ಮಾತ್ರ ಪ್ರಧಾನಿ ವಿರುದ್ಧ ಪ್ರಾಥಮಿಕ ವಿಚಾರಣೆಗೆ ನಿರ್ಧಾರ ಕೈಗೊಳ್ಳಬಹುದು. ಈ ಸಂಬಂಧದ ನಡಾವಳಿಗಳು ಚಿತ್ರೀಕರಣವಾಗಬೇಕು.
33. ಎ ಮತ್ತು ಬಿ ದರ್ಜೆ ಅಧಿಕಾರಿಗಳ ವಿರುದ್ಧ ದೂರು ಬಂದಾಗ ಲೋಕಪಾಲದ ಸೂಚನೆ ಅನುಸಾರ ಸಿವಿಸಿ ತನಿಖೆ ನಡೆಸುತ್ತದೆ. ನಂತರ ಸಿವಿಸಿ ಸಂಬಂಧಿಸಿದ ತನಿಖಾ ವರದಿಯನ್ನು ಮುಂದಿನ ಕ್ರಮಕ್ಕಾಗಿ ವಾಪಸು ಲೋಕಪಾಲಕ್ಕೆ ಕಳುಹಿಸುತ್ತದೆ.
34. ಸಿ ಮತ್ತು ಡಿ ದರ್ಜೆ ನೌಕರರ ವಿರುದ್ಧ ಮುಂದಿನ ಕ್ರಮ ಕೈಗೊಳ್ಳುವ ಅಧಿಕಾರ ಸಿವಿಸಿಗೇ ಇರುತ್ತದೆ. ಈ ಬಗ್ಗೆ ಸಿವಿಸಿಯಿಂದ ವರದಿ ತರಿಸಿಕೊಳ್ಳುವ ಹಾಗೂ ಪರಿಶೀಲನೆ ನಡೆಸುವ ಅಧಿಕಾರ ಲೋಕಪಾಲರಿಗೆ ಇರುತ್ತದೆ.
35. 10 ಲಕ್ಷ ರೂಪಾಯಿಗಿಂತ ಹೆಚ್ಚು ವಿದೇಶಿ ದೇಣಿಗೆ ಸ್ವೀಕರಿಸುವ ಎಲ್ಲ ಸಂಸ್ಥೆಗಳನ್ನು ವಿದೇಶಿ ದೇಣಿಗೆ ನಿಯಂತ್ರಣ ಕಾಯಿದೆಯಡಿ (ಎಫ್‌ಸಿಆರ್‌ಎ) ಲೋಕಪಾಲರು ತನಿಖೆಗೆ ಒಳಪಡಿಸಬಹುದು.
36. ಲೋಕಪಾಲರು ತನಿಖೆ ಕೈಗೆತ್ತಿಕೊಳ್ಳಬೇಕೆಂದರೆ ದೂರು ದಾಖಲಾಗುವುದು ಕಡ್ಡಾಯ. ಸ್ವಯಂ ಪ್ರೇರಿತವಾಗಿ ಯಾವುದೇ ತನಿಖೆಗೆ ಮುಂದಾಗುವಂತಿಲ್ಲ.
37. ತಾವು ತನಿಖೆ ನಡೆಸಿದ ಹಾಗೂ ತಮ್ಮ ನಿರ್ದೇಶನದ ಮೇರೆಗೆ ತನಿಖೆಗೆ ಒಳಪಟ್ಟ ಯಾವುದೇ ಪ್ರಕರಣದ ವಿಚಾರಣಾ ಪ್ರಕ್ರಿಯೆ ಆರಂಭಿಸಲು ಲೋಕಪಾಲರು ಯಾವ ಪೂರ್ವಾನುಮತಿಯನ್ನೂ ಪಡೆಯಬೇಕಿಲ್ಲ.ನೌಕರನ ವಿಚಾರಣೆ ಬಾಕಿ ಇರುವಾಗಲೇ ಭ್ರಷ್ಟಾಚಾರದಿಂದ ಸಂಪಾದಿಸಿದ ಯಾವುದೇ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು
38. ನಾಗರಿಕ ಸೇವೆಗಳಿಗೆ ಸಂಬಂಧಪಟ್ಟಂತೆ ಸಾರ್ವಜನಿಕ ಸಂಸ್ಥೆಗಳು ಕೈಗೊಳ್ಳುವ ಯಾವುದೇ ನಿರ್ಧಾರದ ಬಗ್ಗೆ ಹಾಗೂ ಭ್ರಷ್ಟಾಚಾರ ಪರಿಹಾರ ವೇದಿಕೆಯಾಗಿ ಲೋಕಪಾಲ ವ್ಯವಸ್ಥೆಯೇ ಅಂತಿಮ ಮೇಲ್ಮನವಿ ಪ್ರಾಧಿಕಾರವಾಗಿರುತ್ತದೆ.
39. ಲೋಕಪಾಲಕ್ಕೆ ಬರುವ ದೂರುಗಳ ತನಿಖೆಯ ಬಗ್ಗೆ ಸಿಬಿಐ ಸೇರಿದಂತೆ ಯಾವುದೇ ತನಿಖಾ ಸಂಸ್ಥೆಗೆ ನಿರ್ದೇಶನ ನೀಡಿ, ಮೇಲ್ವಿಚಾರಣೆ ಮಾಡುವ ಅಧಿಕಾರ ಲೋಕಪಾಲಕ್ಕೆ ಇರುತ್ತದೆ.
40. ಕಾಲಮಿತಿ ನಿಗದಿಯನ್ನೂ ಮಸೂದೆ ಒಳಗೊಂಡಿದೆ. ಪ್ರಾಥಮಿಕ ವಿಚಾರಣೆಗೆ ಮೂರು ತಿಂಗಳ ಅವಧಿ ನಿಗದಿ ಮಾಡಲಾಗಿದ್ದು, ಇದನ್ನು ಇನ್ನೂ ಮೂರು ತಿಂಗಳು ವಿಸ್ತರಿಸಬಹುದು.
41. ತನಿಖೆಗೆ ಆರು ತಿಂಗಳು ಅವಕಾಶವಿದ್ದು, ಇನ್ನೂ ಆರು ತಿಂಗಳ ವಿಸ್ತರಿಸಬಹುದು. ನಂತರ ನ್ಯಾಯಿಕ ವಿಚಾರಣಾ ಪ್ರಕ್ರಿಯೆಗೆ ಒಂದು ವರ್ಷ ನಿಗದಿಯಾಗಿದ್ದು, ಇದನ್ನು ಮತ್ತೊಂದು ವರ್ಷ ವಿಸ್ತರಿಸಲು ಅವಕಾಶವಿದೆ.
42. ನಾಗರಿಕ ಸಮಿತಿ ಕೇಳಿದ್ದು ಪ್ರಧಾನಿ ಸ್ಥಾನವನ್ನು ಬೇಷರತ್ತಾಗಿ ಲೋಕಪಾಲ ವ್ಯಾಪ್ತಿಗೆ ಒಳಪಡಿಸಬೇಕು
43. ನಾಗರಿಕ ಸಮಿತಿ ಕೇಳಿದ್ದು ಸಿಬಿಐ ಲೋಕಪಾಲ ಅಧೀನಕ್ಕೆ ತರಬೇಕು
44. ನಾಗರಿಕ ಸಮಿತಿ ಕೇಳಿದ್ದು ಕೆಳಹಂತದ ಅಧಿಕಾರಷಾಹಿಯನ್ನೂ ಲೋಕಪಾಲ ವ್ಯವಸ್ಥೆಯಡಿ ತನ್ನಿ
45. ನಾಗರಿಕ ಸಮಿತಿ ಕೇಳಿದ್ದು ನಾಗರಿಕ ಸನ್ನದು ನಿಗದಿ ಅಧಿಕಾರ ಲೋಕಪಾಲಕ್ಕೆ ಇರಬೇಕು
46. ನಾಗರಿಕ ಸಮಿತಿ ಕೇಳಿದ್ದು ಲಂಚ ಸಂಬಂಧಿ ದೂರುಗಳನ್ನು ನೇರವಾಗಿ ಲೋಕಪಾಲ ಗಮನಕ್ಕೆ ತರಬೇಕು.
47. ಲೋಕಪಾಲಕ್ಕೆ ತನಿಖೆಯ ಯಾವ ಅಧಿಕಾರವೂ ಇಲ್ಲ.
48. ದೇಶದ ಶೇ 63ರಷ್ಟು ಜನತೆಗೆ ಸಬ್ಸಿಡಿ ದರದಲ್ಲಿ ಧಾನ್ಯ ಪೂರೈಸುವ ಆಹಾರ ಭದ್ರತಾ ಕಾಯ್ದೆಗೆ ಕೇಂದ್ರ ಸಂಪುಟ ಕೊನೆಗೂ ಅಳೆದು ಸುರಿದು ಒಪ್ಪಿಗೆ ಸೂಚಿಸಿದೆ.
49. ಗ್ರಾಮಾಂತರ ಪ್ರದೇಶಗಳ ಶೇ 75ರಷ್ಟು ಮತ್ತು ನಗರ ಪ್ರದೇಶಗಳ ಶೇ 50ರಷ್ಟು ಜನರನ್ನು ಈ ರಿಯಾಯಿತಿ ದರದ ಧಾನ್ಯ ಪೂರೈಕೆಯ ವ್ಯಾಪ್ತಿಗೆ ತರಲಾಗುವುದು ಎಂಬ ಭರವಸೆ ಮೇಲುನೋಟಕ್ಕೆ ಆಕರ್ಷಕವಾಗಿದೆ.
50. ಬಡತನದ ರೇಖೆಯ ಕೆಳಗಿನ ಪ್ರತಿ ಫಲಾನುಭವಿಗೆ (ಕಡು ಬಡವರಿಗೆ) ರೂ 3ರ ದರದಂತೆ 7 ಕಿಲೋ ಅಕ್ಕಿ, ರೂ 2 ರ ದರದಂತೆ ಗೋಧಿ ಮತ್ತು ರೂ 1 ರ ದರದಂತೆ ಇನ್ನಿತರ ಧಾನ್ಯ ಪಡೆಯುವ ಹಕ್ಕನ್ನು ಈ ಕಾಯ್ದೆಯಲ್ಲಿ ನೀಡುವುದು ಸರ್ಕಾರದ ಉದ್ದೇಶ.
51. ಬಡತನ ರೇಖೆಯ ಮೇಲಿರುವ ಪ್ರತಿ ವ್ಯಕ್ತಿಗೆ ತಿಂಗಳಿಗೆ 3 ಕಿಲೋ ಆಹಾರಧಾನ್ಯವನ್ನು ಅವುಗಳ ಬೆಂಬಲ ಬೆಲೆಯ ಶೇ 50ರಷ್ಟಕ್ಕೆ ಸಿಗುವಂತೆ ಮಾಡಲಾಗುವುದೆಂಬುದು ಕಾಯ್ದೆಯಲ್ಲಿನ ಇನ್ನೊಂದು ಅಂಶ.
52. ಗರ್ಭಿಣಿಯರಿಗೆ 6 ತಿಂಗಳವರೆಗೆ ತಲಾ ರೂ 1000 ದಂತೆ ಭತ್ಯೆ, ಕುಟುಂಬದ ಮಹಿಳೆಯರ ಹೆಸರಿನಲ್ಲಿಯೇ ಪಡಿತರ ಚೀಟಿ ಸ್ತ್ರೀ ಸಬಲೀಕರಣದ ಆಶಯ.
53. ಕೇಂದ್ರ ಸರ್ಕಾರದ ಸಂಪೂರ್ಣ ನಿಯಂತ್ರಣದಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಿದ ಈ ಕಾಯ್ದೆ ಆಹಾರ ಹಕ್ಕು ಕಾರ್ಯಕರ್ತರು ಮತ್ತು ಈ ಕ್ಷೇತ್ರದಲ್ಲಿ ದುಡಿಯುತ್ತಿರುವ ಸ್ವಯಂಸೇವಾ ಸಂಸ್ಥೆಗಳ ವಿರೋಧ ಎದುರಿಸುತ್ತಿದೆ.

ಶುಕ್ರವಾರ, ಡಿಸೆಂಬರ್ 23, 2011

ಪ್ರಟಲಿತ ಘಟನೆ

1. ರಾಜ್ಯ ಸರ್ಕಾರದ ವ್ಯಾಪ್ತಿಯ ದೂರಾದರೆ ರಾಜ್ಯ ಸಾರ್ವಜನಿಕ ಕುಂದುಕೊರತೆ ಪರಿಹಾರ ಆಯೋಗಕ್ಕೆ ಮತ್ತು ಕೇಂದ್ರ ಸರ್ಕಾರದ ವ್ಯಾಪ್ತಿಯ ದೂರಾದರೆ ಕೇಂದ್ರ ಸಾರ್ವಜನಿಕ ಕುಂದುಕೊರತೆ ಪರಿಹಾರ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಬೇಕಾಗುತ್ತದೆ.
2. ರಾಜ್ಯ ಮತ್ತು ಕೇಂದ್ರ ಆಯೋಗದಲ್ಲಿ ಮುಖ್ಯ ಆಯುಕ್ತರು ಮತ್ತು ಗರಿಷ್ಠ 10 ಮಂದಿ ಆಯುಕ್ತರು ಇರುತ್ತಾರೆ. ರಾಜ್ಯದಲ್ಲಿ ಆಯುಕ್ತರನ್ನು ರಾಜ್ಯಪಾಲರು ಮತ್ತು ಕೇಂದ್ರದ ಆಯುಕ್ತರನ್ನು ರಾಷ್ಟ್ರಪತಿ ನೇಮಕ ಮಾಡುತ್ತಾರೆ.
3. ಮಾಜಿ ಸಚಿವ ಜಿ.ಜನಾರ್ಧನರೆಡ್ಡಿ ಅವರ ಒಡೆತನದ ಓಬಾಳಪುರಂ ಗಣಿ ಸಂಸ್ಥೆಯ ಅಕ್ರಮ ಗಣಿ ವ್ಯವಹಾರದಿಂದ ಸರ್ಕಾರದ ಬೊಕ್ಕಸಕ್ಕೆ 5,100/- ಕೋಟಿ ರೂ. ನಷ್ಟವಾಗಿದೆಯೆಂದು ಸಿಬಿಐ ಸ್ಥಳೀಯ ನ್ಯಾಯಾಲಯಕ್ಕೆ ತಿಳಿಸಿದೆ.
4. ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯ ಮೂರ್ತಿ ಯಾಗಿ ನ್ಯಾ.ವಿಕ್ರಮ್ ಜಿತ್ ಸೇನ್ ದಿನಾಂಕ/24/12/2011 ರಂದು ಪ್ರಮಾಣ ವಚನ ಸ್ವೀಕಾರಿಸಲಿದ್ದಾರೆ.
5. ಜ್ಞಾನಪೀಠ ಪ್ರಶಸ್ತು ಪುರಸ್ಕೃತ ಕಂಬಾರರಿಗೆ ಕೇಂದ್ರ ನಾಟಕ ಅಕಾಡೆಮಿ ಫೆಲೋಶಿಪ್ ಸಂದಿದೆ.
6. ಆಕ್ಷೇಪಾರ್ಹ ಮಾಹಿತಿಯನ್ನು ಪ್ರಕಟಿಸಿದ್ದಕ್ಕಾಗಿ ಫೇಸ್‌ಬುಕ್, ಗೂಗಲ್, ಯಾಹೂ, ಮೈಕ್ರೋಸಾಫ್ಟ್ ಮತ್ತು ಯುಟ್ಯೂಬ್ ಸೇರಿದಂತೆ 21 ಸಾಮಾಜಿಕ ವೆಬ್ ತಾಣಗಳಿಗೆ ವಿಚಾರಣೆ ಎದುರಿಸಲು ದೆಹಲಿ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.
7. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 292 (ಅಶ್ಲೀಲ ಪುಸ್ತಕಗಳ ಮಾರಾಟ), 293 (ಅಪ್ರಾಪ್ತರಿಗೆ ಅಶ್ಲೀಲ ವಸ್ತುಗಳ ಮಾರಾಟ) ಮತ್ತು 120-ಬಿ (ಅಪರಾಧವೆಸಗಲು ಸಂಚು) ಅಡಿಗಳಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.
8. ಮೆಟ್ರೋಪಾಲಿಟನ್ ಮ್ಯಾಜಿಸ್ಟೇಟ್ ಸುದೇಶ್ ಕುಮಾರ್ ಕೇಸನ್ನು ದಾಖಲಿಸಿಕೊಂಡಿದ್ದು, ಜ.13ರೊಳಗೆ ಸೂಕ್ತ ಕ್ರಮ ತೆಗೆದುಕೊಂಡು ವರದಿ ಸಲ್ಲಿಸುವಂತೆ ಕೇಂದ್ರಕ್ಕೆ ಸೂಚಿಸಿದ್ಧಾರೆ.
9. ಕೋಮು ಸೌಹಾರ್ದತೆಯನ್ನು ಕದಡುವ ಉದ್ದೇಶದಿಂದ ಧರ್ಮ ವಿರೋಧಿ ಮತ್ತು ಸಮಾಜ ವಿರೋಧಿ ಮಾಹಿತಿಯನ್ನು ಪ್ರಕಟಿಸದಂತೆ ನಿಷೇಧ ಹೇರಿ ಈ ಎಲ್ಲ ವೆಬ್ ಸೈಟ್ ಗಳ ವಿರುದ್ಧ ಸಿವಿಲ್ ನ್ಯಾಯಾಲಯ ಆದೇಶ ಹೊರಡಿಸಿದ ಮೂರು ದಿನಗಳಲ್ಲಿ ದಂಡಾಧಿಕಾರಿಗಳು ಸಮನ್ಸ್ ಜಾರಿ ಮಾಡಿದ್ದಾರೆ.
10. ಸಾಮಾಜಿಕ ತಾಣಗಳನ್ನು ಸೆನ್ಸಾರ್ ಮಾಡಬೇಕೆಂದು ಕೇಂದ್ರ ಸಚಿವ ಕಪಿಲ್ ಸಿಬಾಲ್ ಹೇಳಿರುವ ಬೆನ್ನ ಹಿಂದೆಯೇ ನ್ಯಾಯಾಲಯ ಈ ಪ್ರಕರಣ ದಾಖಲಿಸಿಕೊಂಡಿದೆ.
11. ಸಾಮಾಜಿಕ ಜಾಲ ತಾಣ ಫೇಸ್‌ಬುಕ್ ಸಂಸ್ಥೆ ತನ್ನ ಮೌಲ್ಯವನ್ನು ಸುಮಾರು 100 ಬಿಲಿಯನ್ ಡಾಲರ್ ಮೊತ್ತಕ್ಕೆ ಏರಿಸಿಕೊಳ್ಳುವ ನಿರೀಕ್ಷೆ ಹೊಂದಿದೆ.
12. ಜೊತೆಗೆ ಫೇಸ್ ಬುಕ್ ಐಪಿಒ ಗಳನ್ನು ಕೂಡಾ 2012ರಲ್ಲಿ ಹೊರ ಬಿಡುವ ಸಾಧ್ಯತೆ ಇದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಹೇಳುತ್ತದೆ.
13. ಸುಮಾರು 800 ಮಿಲಿಯನ್ ಗೂ ಅಧಿಕ ಸದಸ್ಯರನ್ನು ಹೊಂದಿರುವ ಫೇಸ್ ಬುಕ್ ನ ಮೇಲೆ ಹಣ ಹೂಡಲು ಬ್ಯಾಂಕರ್ ಗಳು ಸಿದ್ಧರಿದ್ದಾರೆ. ಆದರೆ, ಸಿಇಒ ಮಾರ್ಕ್ ಝಕರ್ ಬರ್ಗ್ ಮಾತೇ ಅಂತಿಮ ಎನ್ನುತ್ತಾರೆ ಸಿಎಫ್ ಒ ಡೇವಿಡ್ ಎಬೆರ್ಸ್ಮನ್.
14. ಹಾರ್ವಡ್ ವಿಶ್ವವಿದ್ಯಾಲಯದ ಡಾರ್ಮೆಂಟರಿ ಕೋಣೆಯೊಂದರಲ್ಲಿ ಸುಮಾರು 2004ರ ವೇಳೆಗೆ ಆರಂಭವಾದ ಸಾಮಾಜಿಕ ಜಾಲ ತಾಣ ಇಂದು ವಿಶ್ವದಾದ್ಯಂತ ಅತಿ ಹೆಚ್ಚು ಬಳಸಲ್ಪಡುತ್ತಿರುವ ಆಪ್ತ ವೆಬ್ ತಾಣವಾಗಿದೆ.
15. ಸದ್ಯಕ್ಕೆ ಸುಮಾರು 41 ಬಿಲಿಯನ್ ಡಾಲರ್ ತೂಗುವ ಕಂಪನಿ ಈಗ ಗೂಗಲ್ ಹಾಗೂ ಅಮೆಜಾನ್ ನಂತರದ ಸ್ಥಾನದಲ್ಲಿದೆ.
16. ಭರವಸೆಯ ಅಥ್ಲೀಟ್ ಅಶ್ವಿನಿ ಅಕ್ಕುಂಜಿಗೆ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ (ನಾಡಾ) ಒಂದು ವರ್ಷದ ನಿಷೇಧ ದೃಢಪಟ್ಟಿದೆ.
17. ನ್ಯಾ. ದೀನೇಶ್ ದಯಾಳ್ ನೇತೃತ್ವದ ಶಿಸ್ತು ಸಮಿತಿ ಸಂಶದ ಲಾಭನ್ನು ಕ್ರೀಡಾಳುಗಳತ್ತ ವಾಲಿಸಿದ್ದು, ನಿಷೇಧದ ಅವಧಿ ಕೇವಲ ಒಂದು ವರ್ಷದ್ದಾಗಿರುವುದರಿಂದ ಮುಂದಿನ ಜುಲೈನಲ್ಲಿ ಲಂಡನ್ನಿನಲ್ಲಿ ನಡೆಯುವ ಒಲಂಪಿಕ್ ನಲ್ಲಿ ಭಾರತವನ್ನು ಪ್ರತಿನಿಧಿಸುವ ಆಸೆ ಜೀವಂತವಾಗಿದೆ.
18. ಲೋಕಪಾಲ ಮಸೂದೆಗೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಅದಕ್ಕೆ ಸಮಾನಾಂತರವಾಗಿ ಮಸೂದೆ ಬಗ್ಗೆ ಪ್ರಚಾರಕ್ಕೆ ಅವಕಾಶ ನೀಡುವುದು ಸಾಧ್ಯವಿಲ್ಲ ಎಂದು ಬಾಂಬೆ ಹೈಕೋರ್ಟ್ ಶುಕ್ರವಾರ ಅಣ್ಣಾ ಹಜಾರೆ ತಂಡವನ್ನು ತರಾಟೆಗೆ ತೆಗೆದುಕೊಂಡಿದೆ.
19. ಎಂಎಂಆರ್‌ಡಿಎ ಮೈದಾನಕ್ಕೆ ವಿಧಿಸಲಾಗುತ್ತಿರುವ ಶುಲ್ಕವನ್ನು ಮನ್ನಾ ಮಾಡಬೇಕು ಎಂಬ ಬೇಡಿಕೆಗೂ ಆಕ್ಷೇಪ ವ್ಯಕ್ತಪಡಿಸಿರುವ ಹೈಕೋರ್ಟ್, ಈ ವಿಚಾರದಲ್ಲಿ ಮಧ್ಯೆ ಪ್ರವೇಶಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
20. `ನಿಮ್ಮ ಕೋರಿಕೆಯನ್ನು ಮನ್ನಿಸಿ ಆದೇಶ ಹೊರಡಿಸಿದರೆ ಸಂಸತ್ತಿನ ಕಲಾಪದಲ್ಲಿ ಹಸ್ತಕ್ಷೇಪ ಮಾಡಿದಂತಾಗುತ್ತದೆ ಮತ್ತು ಲೋಕಪಾಲ ಮಸೂದೆಯ ಬಗ್ಗೆ ಸಂಸತ್ತು , ಆರಂಭಿಸಿರುವಾಗ ಆ ವಿಚಾರದಲ್ಲಿಯೇ ಸಮಾನಾಂತರವಾಗಿ ಪ್ರಚಾರಕ್ಕೆ ಅವಕಾಶ ನೀಡಿದಂತಾಗುತ್ತದೆ` ಎಂದು ನ್ಯಾಯಮೂರ್ತಿ ಪಿ. ಬಿ. ಮುಜುಂದಾರ್ ಮತ್ತು ಮೃದುಲಾ ಭಟ್ಕರ್ ಅಭಿಪ್ರಾಯಪಟ್ಟಿದ್ದಾರೆ.
21. ನಿಯಮದ ಪ್ರಕಾರ ಅರ್ಜಿದಾರರು ಎಂಎಂಆರ್‌ಡಿಎ ಮೈದಾನಕ್ಕಾಗಿ ಎಂಟು ಲಕ್ಷ ರೂಪಾಯಿಗಳನ್ನು ಠೇವಣಿಯಾಗಿ ಇಡಬೇಕು ಮತ್ತು 11 ಲಕ್ಷ ರೂಪಾಯಿಗಳನ್ನು ಬಾಡಿಗೆಯಾಗಿ ನೀಡಬೇಕು ಎಂದು ತಿಳಿಸಿದರು.

ಗುರುವಾರ, ಡಿಸೆಂಬರ್ 22, 2011

ನಾಗರಿಕ ಸನ್ನದು ಮಸೂದೆ: ಏನು, ಹೇಗೆ?

1. ಕೇಂದ್ರ ಸರ್ಕಾರ ಮಂಗಳವಾರ ಲೋಕಸಭೆಯಲ್ಲಿ `ನಿಗದಿತ ಕಾಲ ಮಿತಿಯಲ್ಲಿ ಸೇವೆಗಳನ್ನು ಪಡೆಯುವ ನಾಗರಿಕ ಹಕ್ಕು ಮತ್ತು ಕುಂದುಕೊರತೆ ನಿವಾರಣೆ 2001` ಮಸೂದೆ ಮಂಡಿಸಿದೆ.
2. ಕೇಂದ್ರ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಖಾತೆ ಸಚಿವ ವಿ. ನಾರಾಯಣ ಸ್ವಾಮಿ ಲೋಕಸಭೆಯಲ್ಲಿ ಈ ಮಸೂದೆ ಮಂಡಿಸಿದರು.
3. ನಿಗದಿತ ಅವಧಿಯಲ್ಲಿ ನಾಗರಿಕರಿಗೆ ನಿರ್ದಿಷ್ಟ ಕೆಲಸಗಳು ಪೂರ್ತಿಗೊಳ್ಳುವುದಕ್ಕೆ ಅಗತ್ಯ ವ್ಯವಸ್ಥೆ ಮಾಡುವ ಬಗ್ಗೆ ಮಸೂದೆಯಲ್ಲಿ ಅವಕಾಶ ನೀಡಲಾಗಿದೆ.
4. ಕಾಯ್ದೆ ಜಾರಿಯಾದ ಆರು ತಿಂಗಳ ಒಳಗಾಗಿ ಎಲ್ಲಾ ಸರ್ಕಾರಿ ಇಲಾಖೆಗಳು, ಸಂಸ್ಥೆಗಳು, ಸಂವಿಧಾನ ಬದ್ಧವಾಗಿ ರಚನೆಗೊಂಡ ಸಂಸ್ಥೆಗಳು, ಸಂಸತ್ತಿನ ಕಾಯ್ದೆಯ ಮೂಲಕ ಸ್ಥಾಪಿಸಲಾಗಿರುವ ನಿಗಮ, ಮಂಡಲಿ ಅಥವಾ ಕಂಪೆನಿಗಳು, ಸ್ಥಳೀಯಾಡಳಿತ ಸಂಸ್ಥೆಗಳು, ಸರ್ಕಾರದ ಅನುದಾನ ಪಡೆಯುತ್ತಿರುವ ಸಂಸ್ಥೆಗಳು ನಾಗರಿಕ ಸನ್ನದನ್ನು ಜಾಹೀರು ಪಡಿಸುವುದು ಕಡ್ಡಾಯ.
5. ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳು ಒದಗಿಸುವ ಸೇವೆ ಅಥವಾ ನೀಡುವ ಉತ್ಪಾದನೆಗಳ ಸಂಪೂರ್ಣ ವಿವರಗಳು ಹಾಗೂ ಅವುಗಳನ್ನು ನಾಗರಿಕರಿಗೆ ಒದಗಿಸಲು ಗರಿಷ್ಠ ಎಷ್ಟು ಸಮಯ ಹಿಡಿಯುತ್ತದೆ ಎಂಬುದನ್ನು ಸನ್ನದು ಒಳಗೊಂಡಿರಬೇಕು.
6. ನಿಗದಿತ ಕಾಲಾವಧಿಯಲ್ಲಿ ಒಮ್ಮೆ ಸೇವೆ ಒದಗಿಸಲಾಗದಿದ್ದರೆ ಯಾರಿಗೆ ಮೇಲ್ಮನವಿ ಸಲ್ಲಿಸಿ ಕುಂದುಕೊರತೆ ನಿವಾರಿಸಿಕೊಳ್ಳಬೇಕು ಎಂಬುದನ್ನು ಸ್ಪಷ್ಟವಾಗಿ ನಮೂದಿಸುವುದನ್ನು ಮಸೂದೆಯಲ್ಲಿ ಕಡ್ಡಾಯಗೊಳಿಸಲಾಗಿದೆ.
7. ಕಾನೂನು ಜಾರಿಗೆ ಬಂದ ಆರು ತಿಂಗಳ ಒಳಗಾಗಿ ಪಂಚಾಯಿತಿ ಮಟ್ಟದಿಂದ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು ಮತ್ತು ಸಂಸ್ಥೆಗಳಲ್ಲಿ ಕುಂದುಕೊರತೆ ನಿವಾರಣಾ ಘಟಕ ಸ್ಥಾಪಿಸುವುದು ಹಾಗೂ ದೂರು ಬಂದ ಎರಡು ದಿನಗಳಲ್ಲಿ ಸ್ವೀಕೃತಿ ಪ್ರತಿ ಒದಗಿಸುವುದು ಕಡ್ಡಾಯ.
8. ದೂರು ಬಂದ 30 ದಿನಗಳ ಒಳಗೆ ಕುಂದುಕೊರತೆ ನಿವಾರಿಸಿ ತಪ್ಪಿತಸ್ಥ ಅಧಿಕಾರಿ ಯಾರು ಎಂದು ಪತ್ತೆ ಹಚ್ಚುವುದು ಕಡ್ಡಾಯ.
9. ಯಾವುದೇ ಸಿಬ್ಬಂದಿ ಅಥವಾ ಅಧಿಕಾರಿಯಿಂದ ಲೋಪ ಅಥವಾ ನಿರ್ಲಕ್ಷ್ಯ ಉಂಟಾಗಿದ್ದರೆ ಅಂಥವರ ವಿರುದ್ಧ ಇಲಾಖೆ ಕ್ರಮ ಜರುಗಿಸುವಂತೆ ನೋಡಿಕೊಳ್ಳುವುದು ಕುಂದುಕೊರತೆ ನಿವಾರಣಾ ಅಧಿಕಾರಿಯ ಜವಾಬ್ದಾರಿಯಾಗಿರುತ್ತದೆ.
10. ಯಾವುದೇ ಸರ್ಕಾರಿ ನೌಕರ ಉದ್ದೇಶಪೂರ್ವಕವಾಗಿ ತಪ್ಪೆಸಗಿದರೆ ಆ ನೌಕರನ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಪ್ರಕಾರ ಕ್ರಮ ತೆಗೆದುಕೊಳ್ಳುವಂತೆ ಕುಂದುಕೊರತೆ ನಿವಾರಣಾ ಅಧಿಕಾರಿ ಸಂಬಂಧಪಟ್ಟ ಉನ್ನತ ಅಧಿಕಾರಿಗೆ ಶಿಫಾರಸು ಮಾಡಬೇಕು ಎಂದು ಮಸೂದೆಯಲ್ಲಿ ತಿಳಿಸಲಾಗಿದೆ.
11. ತಪ್ಪಿತಸ್ಥ ಅಧಿಕಾರಿ, ಸಿಬ್ಬಂದಿ ವಿರುದ್ಧ ತೆಗೆದುಕೊಂಡಿರುವ ಕ್ರಮಗಳ ವಿವರಗಳನ್ನು ದೂರುದಾರರಿಗೆ ತಿಳಿಸುವುದು ಕುಂದು ಕೊರತೆ ನಿವಾರಣೆ ಅಧಿಕಾರಿಯ ಕರ್ತವ್ಯ.
12. 30 ದಿನಗಳಲ್ಲಿ ದೂರುದಾರರ ಸಮಸ್ಯೆ ಇತ್ಯರ್ಥ ಮಾಡಲಾಗದಿದ್ದರೆ ಅಂತಹ ದೂರುಗಳನ್ನು ಮೇಲ್ಮನವಿ ಪ್ರಾಧಿಕಾರಕ್ಕೆ ಕಳುಹಿಸಬೇಕು ಎಂದು ಮಸೂದೆಯಲ್ಲಿ ಸ್ಪಷ್ಟಪಡಿಸಲಾಗಿದೆ.
13. ಒಮ್ಮೆ ಕುಂದುಕೊರತೆ ನಿವಾರಣಾ ಅಧಿಕಾರಿ ಸಮಸ್ಯೆ ಬಗೆಹರಿಸಲು ತೆಗೆದುಕೊಂಡ ಕ್ರಮ ತೃಪ್ತಿಕರವಾಗಿರದಿದ್ದರೆ ದೂರುದಾರರು ಮೇಲ್ಮನವಿ ಸಲ್ಲಿಸಬಹುದಾಗಿದ್ದು, ಮೇಲ್ಮನವಿ ಪ್ರಾಧಿಕಾರವು 30 ದಿನಗಳ ಒಳಗಾಗಿ ತೀರ್ಮಾನ ಪ್ರಕಟಿಸಬೇಕಾಗುತ್ತದೆ.
14. ರಾಜ್ಯ ಸರ್ಕಾರದ ವ್ಯಾಪ್ತಿಯ ದೂರಾದರೆ ರಾಜ್ಯ ಸಾರ್ವಜನಿಕ ಕುಂದುಕೊರತೆ ಪರಿಹಾರ ಆಯೋಗಕ್ಕೆ ಮತ್ತು ಕೇಂದ್ರ ಸರ್ಕಾರದ ವ್ಯಾಪ್ತಿಯ ದೂರಾದರೆ ಕೇಂದ್ರ ಸಾರ್ವಜನಿಕ ಕುಂದುಕೊರತೆ ಪರಿಹಾರ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಬೇಕಾಗುತ್ತದೆ.
15. ರಾಜ್ಯ ಮತ್ತು ಕೇಂದ್ರ ಆಯೋಗದಲ್ಲಿ ಮುಖ್ಯ ಆಯುಕ್ತರು ಮತ್ತು ಗರಿಷ್ಠ 10 ಮಂದಿ ಆಯುಕ್ತರು ಇರುತ್ತಾರೆ. ರಾಜ್ಯದಲ್ಲಿ ಆಯುಕ್ತರನ್ನು ರಾಜ್ಯಪಾಲರು ಮತ್ತು ಕೇಂದ್ರದ ಆಯುಕ್ತರನ್ನು ರಾಷ್ಟ್ರಪತಿ ನೇಮಕ ಮಾಡುತ್ತಾರೆ.

2 ಜಿ ಹಗರಣ

1. ದೂರಸಂಪರ್ಕ ಖಾತೆಯ ಮಾಜಿ ಸಚಿವ ಸುಖ್‌ರಾಮ್ ಮತ್ತು ಇತರ ಇಬ್ಬರಿಗೆ 1996 ಟೆಲಿಕಾಂ ಹಗರಣಕ್ಕೆ ಸಂಬಂಧಿಸಿದಂತೆ ವಿಧಿಸಲಾಗಿರುವ ಜೈಲು ಶಿಕ್ಷೆಯನ್ನು ದೆಹಲಿ ಹೈಕೋರ್ಟ್ ಬುಧವಾರ ಎತ್ತಿಹಿಡಿದಿದೆ.
2. ವಿಚಾರಣಾ ನ್ಯಾಯಾಲಯವು ವಿಧಿಸಿರುವ ಶಿಕ್ಷೆಯ ವಿರುದ್ಧ ಸುಖ್‌ರಾಮ್ ಮತ್ತಿತರರು ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾ ಮಾಡಿದ ನ್ಯಾಯಮೂರ್ತಿ ಎಸ್. ರವೀಂದ್ರ ಭಟ್ ಮತ್ತು ಜಿ. ಪಿ. ಮಿತ್ತಲ್ ಅವರನ್ನು ಒಳಗೊಂಡ ನ್ಯಾಯಪೀಠವು ಸುಖ್‌ರಾಮ್, ದೂರಸಂಪರ್ಕ ಖಾತೆಯ ಮಾಜಿ ಉಪ ಮಹಾನಿರ್ದೇಶಕ ರುನು ಘೋಷ್ ಮತ್ತು ಹೈದರಾಬಾದ್‌ನ ಅಡ್ವಾನ್ಸ್‌ಡ್ ರೇಡಿಯೊ ಮಾಸ್ಟ್‌ನ ವ್ಯವಸ್ಥಾಪಕ ನಿರ್ದೇಶಕ ಪಿ. ರಾಮರಾವ್ ಅವರಿಗೆ ವಿಧಿಸಿರುವ ಶಿಕ್ಷೆಯನ್ನು ಎತ್ತಿಹಿಡಿದಿದೆ.
3. ಮೂವರೂ ಜನವರಿ ಐದರಂದು 2011 ವಿಚಾರಣಾ ನ್ಯಾಯಾಲಯದಲ್ಲಿ ಶರಣಾಗಿ ಶಿಕ್ಷೆ ಅನುಭವಿಸಬೇಕು ಎಂದು ನ್ಯಾಯಪೀಠ ಆದೇಶಿಸಿದೆ.
4. 1996ರಲ್ಲಿ ಹೈದರಾಬಾದ್‌ನ ಅಡ್ವಾನ್ಸ್‌ಡ್ ರೇಡಿಯೊ ಮಾಸ್ಟ್ ಕಂಪೆನಿಯು ದೂರಸಂಪರ್ಕ ಇಲಾಖೆಗೆ ಅತಿ ಹೆಚ್ಚಿನ ದರದಲ್ಲಿ ಸಲಕರಣೆಗಳನ್ನು ಸರಬರಾಜು ಮಾಡಿರುವ ಹಗರಣ ಇದಾಗಿದ್ದು , ಘೋಷ್ ಮತ್ತು ರಾವ್ ಅವರಿಗೆ ಕ್ರಮವಾಗಿ ಎರಡು ಮತ್ತು ಮೂರು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ.
5. ಸುಖ್‌ರಾಮ್ ವಿರುದ್ಧ ಸಂಚಿನಲ್ಲಿ ಭಾಗಿಯಾಗಿದ್ದ ಆಪಾದನೆಯನ್ನು ರದ್ದುಪಡಿಸಿರುವ ಹೈಕೋರ್ಟ್, ಲಾಭಕ್ಕಾಗಿ ಅಧಿಕಾರ ದುರ್ಬಳಕೆ ಮತ್ತು ಕ್ರಿಮಿನಲ್ ದುರ್ನಡತೆಗಾಗಿ ವಿಧಿಸಲಾಗಿರುವ ಶಿಕ್ಷೆಯನ್ನು ಎತ್ತಿಹಿಡಿದಿದೆ.
6. 1990ರ ದಶಕದ ಮಧ್ಯಭಾಗದಲ್ಲಿ ನಡೆದ ಇನ್ನೊಂದು ಟೆಲಿಕಾಂ ಹಗರಣದಲ್ಲಿ ಸುಖರಾಮ್ ತಪ್ಪಿತಸ್ಥ ಎಂದು ಘೋಷಿಸಿರುವ ವಿಚಾರಣಾ ನ್ಯಾಯಾಲಯವು ಐದು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.
7. 1993ರಿಂದ 1996ರ ವರೆಗೆ ದೂರಸಮಪರ್ಕ ಸಚಿವರಾಗಿದ್ದ ಸುಖ್‌ರಾಮ್ ಅವರು ರುನು ಘೋಷ್ ಜತೆ ಸೇರಿಕೊಂಡು ಹೈದರಾಬಾದ್ ಮೂಲದ ಕಂಪೆನಿಯಿಂದ ಅತಿ ಹೆಚ್ಚಿನ ದರದಲ್ಲಿ ಸಲಕರಣೆಗಳನ್ನು ಖರೀದಿಸಿ ಇಲಾಖೆಗೆ ನಷ್ಟ ಉಂಟು ಮಾಡಿದ್ದರು ಎಂದು ಆಪಾದಿಸಿ ಸಿಬಿಐ ಆರೋಪ ಪಟ್ಟಿ ಸಲ್ಲಿಸಿ ಗರಿಷ್ಠ ಶಿಕ್ಷೆ ವಿಧಿಸುವಂತೆ ಮನವಿ ಮಾಡಿತ್ತು.
8. 1996ರಲ್ಲಿ ಸಿಬಿಐ ಅಧಿಕಾರಿಗಳು ಸುಖ್‌ರಾಮ್ ನಿವಾಸದ ಮೇಲೆ ದಾಳಿ ಮಾಡಿ 3.6 ಕೋಟಿ ರೂಪಾಯಿ ವಶಪಡಿಸಿಕೊಂಡಿತ್ತು.

ಕೇಂದ್ರ ಸಾಹಿತ್ಯ ಅಕಾಡೆಮಿ 2011

1. ಕನ್ನಡದ ಕಥೆಗಾರ-ಕಾದಂಬರಿಕಾರ ಗೋಪಾಲಕೃಷ್ಣ ಪೈ ಮತ್ತು ಅವರ `ಸ್ವಪ್ನ ಸಾರಸ್ವತ` ಕಾದಂಬರಿ ಕೇಂದ್ರ ಸಾಹಿತ್ಯ ಅಕಾಡೆಮಿಯ 2011ನೇ ಸಾಲಿನ ಪ್ರಶಸ್ತಿಗೆ ಪಾತ್ರವಾಗಿದೆ.
2. ಪ್ರಶಸ್ತಿ 1 ಲಕ್ಷ ರೂಪಾಯಿ ನಗದು ಹಾಗೂ ಸ್ಮರಣಿಕೆ ಒಳಗೊಂಡಿದ್ದು, ಫೆ.14ರಂದು ದೆಹಲಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
3. ಸಾವಿನ ನೆರಳಿನಲ್ಲೂ ತಮ್ಮ ಸ್ವಂತಿಕೆ ಉಳಿಸಿಕೊಳ್ಳಲು ಯತ್ನಿಸಿದ ಸಾರಸ್ವತ ಸಮುದಾಯದ ಕಥನವನ್ನು `ಸ್ವಪ್ನ ಸಾರಸ್ವತ` ಬೃಹತ್ ಕಾದಂಬರಿ ಒಳಗೊಂಡಿದೆ.
4. ಚರಿತ್ರೆ ಹಾಗೂ ಕಲ್ಪನೆ ಹದ ಪ್ರಮಾಣದಲ್ಲಿ ಮಿಳಿತವಾದ ಈ ಕೃತಿ ಗೋಪಾಲಕೃಷ್ಣ ಪೈ ಅವರ ಚೊಚ್ಚಿಲ ಕಾದಂಬರಿ. ಮೂರು ಕಥಾ ಸಂಕಲನ, ಒಂದು ಕಿರು ಕಾದಂಬರಿ ಪ್ರಕಟಿಸಿರುವ ಅವರು ಕೆಲವು ಚೀನೀ ಕಥೆಗಳನ್ನು ಕನ್ನಡಕ್ಕೆ ತಂದಿದ್ದಾರೆ.
5. ಚಿತ್ರಕಥಾ ಲೇಖಕರಾಗಿಯೂ ಕೆಲಸ ಮಾಡಿರುವ ಪೈ, `ಕನಸೆಂಬೋ ಕುದುರೆಯನೇರಿ` ಚಿತ್ರದ ಚಿತ್ರಕಥೆ ರಚನೆಗಾಗಿ ಗಿರೀಶ ಕಾಸರವಳ್ಳಿ ಅವರೊಂದಿಗೆ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾರೆ.
6. 2009ರಲ್ಲಿ ಪ್ರಕಟಗೊಂಡ `ಸಪ್ನ ಸಾರಸ್ವತ` ಕಾದಂಬರಿ ಬೆಂಗಳೂರಿನ `ಭಾಗ್ಯಲಕ್ಷ್ಮಿ ಪ್ರಕಾಶನ`ದ ಪ್ರಕಟಣೆ.
7. ಭಾರತದ 23 ಭಾಷೆಗಳಲ್ಲಿ ರಚಿತವಾಗುವ ಶ್ರೇಷ್ಠ ಕೃತಿಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಲಾಗುತ್ತದೆ.
8. ಈ ಬಾರಿ ಪ್ರಶಸ್ತಿ ಪೈಪೋಟಿಯಲ್ಲಿ ಕನ್ನಡದ ಇತರ ಲೇಖಕರಾದ ಕೆ.ವಿ. ನಾರಾಯಣ, ಬರಗೂರು ರಾಮಚಂದ್ರಪ್ಪ, ಎಚ್.ಎಸ್. ಶಿವಪ್ರಕಾಶ್, ಹನೂರು ಕೃಷ್ಣಮೂರ್ತಿ ಮುಂತಾದವರ ಕೃತಿಗಳೂ ಇದ್ದುವೆಂದು ತಿಳಿದುಬಂದಿದೆ.
9. ಕನ್ನಡ ಕೃತಿಗಳಿಗೆ ಸಂಬಂಧಿಸಿದಂತೆ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಸಾಹಿತಿಗಳಾದ ವೀಣಾ ಶಾಂತೇಶ್ವರ, ಡಿ.ಎಸ್.ನಾಗಭೂಷಣ, ಬಂಜಗೆರೆ ಜಯಪ್ರಕಾಶ್ ಇದ್ದರು.
10. `ಪ್ರಜಾವಾಣಿ`ಯ ಅಂಕಣಕಾರ ರಾಮಚಂದ್ರ ಗುಹ ಸೇರಿದಂತೆ 22 ಲೇಖಕರು ಪ್ರಸಕ್ತ ಸಾಲಿನ ಹೆಮ್ಮೆಯ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.
11. ತಮ್ಮ ಕಥನ ಇತಿಹಾಸ `ಇಂಡಿಯಾ ಆಫ್ಟರ್ ಗಾಂಧಿ` ಕೃತಿಗಾಗಿ ಗುಹ ಅವರಿಗೆ ಈ ಪ್ರಶಸ್ತಿ ಸಂದಿದೆ.

ಬುಧವಾರ, ಡಿಸೆಂಬರ್ 21, 2011

KAS Exam , ಕೆ.ಎ.ಎಸ್ ಪರೀಕ್ಷಾ ಪ್ರಶ್ನೋತ್ತರಗಳು

1. 940ಕ್ಕೆ ಬಂದಿದೆ. ಅಂದರೆ ವ್ಯತ್ಯಾಸವು ಸಾವಿರಕ್ಕೆ 60.
2. ಉತ್ತರ ಪ್ರದೇಶ ಅತ್ಯಂತ ಹೆಚ್ಚು ಜನಸಾಂದ್ರತೆಯುಳ್ಳ ರಾಜ್ಯವಾಗಿದ್ದು, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದ ಜನಸಂಖ್ಯೆಗಳನ್ನು ಸೇರಿಸಿದರೆ (31 ಕೋಟಿ),
3. ಜನಗಣತಿಯಲ್ಲಿ ಹೊರಬಿದ್ದ ಅಂಕಿ ಅಂಶಗಳಿಗೆ ಹೋಲಿಸಿದರೆ, 2001ರಲ್ಲಿ ಶೇ. 21.15ರಷ್ಟಿದ್ದ ಜನಸಂಖ್ಯಾ ವೃದ್ಧಿ ದರವು 2011ರ ಜನಗಣತಿ ಪ್ರಕಾರ ಶೇ.17.64ಕ್ಕೆ ಕುಸಿದಿದೆ.
4. ಭಾರತದ ಜನಸಂಖ್ಯೆ 121.02 ಕೋಟಿ. ಪುರುಷರು 62.37 ಕೋಟಿ ಹಾಗೂ ಮಹಿಳೆಯರು 58.65 ಕೋಟಿ.
5. ಒಟ್ಟಾರೆಯಾಗಿ, ಪುರುಷರ ಜನಸಂಖ್ಯೆಯಲ್ಲಿ ಶೇ.17 ಹಾಗೂ ಮಹಿಳೆಯರ ಜನಸಂಖ್ಯೆಯಲ್ಲಿ ಶೇ.18ರಷ್ಟು ವೃದ್ಧಿಯಾಗಿದೆ.
6. 10 ವರ್ಷಗಳಲ್ಲಿ ಭಾರತದಲ್ಲಿ ಹೆಚ್ಚಳವಾದ ಜನಸಂಖ್ಯೆ 18 ಕೋಟಿ. ಅಂದರೆ ಇದು ಬ್ರೆಜಿಲ್‌ನ ಜನಸಂಖ್ಯೆಗೆ ಸಮ.
7. ಜನಸಾಂದ್ರತೆಯು ಕೂಡ ಹೆಚ್ಚಾಗಿದೆ. ಅತೀ ಹೆಚ್ಚು ಜನಸಾಂದ್ರತೆಯಿರುವುದು ದೆಹಲಿಯ ಈಶಾನ್ಯ ಜಿಲ್ಲೆಯಲ್ಲಿ (ಚದರ ಕಿಲೋಮೀಟರಿಗೆ 37,346 ಮಂದಿ), ಅತಿ ಕನಿಷ್ಠ ಜನಸಾಂದ್ರತೆ ಇರುವುದು ಅರುಣಾಚಲ ಪ್ರದೇಶದ ದಿಬಾಂಗ್ ಕಣಿವೆ ಜಿಲ್ಲೆಯಲ್ಲಿ - ಚದರ ಕಿಲೋಮೀಟರಿಗೆ 1 ಮಾತ್ರ!.
8. ಭಾರತದ ಜನಗಣತಿ 2011ನ್ನು 2 ಹಂತ ಗಳಲ್ಲಿ ಕೈಗೊಳ್ಳಲಾಗುವುದು. ಮೊದಲನೆ ಹಂತದಲ್ಲಿ ಮನೆಗಳ ಪಟ್ಟಿ ಮಾಡುವುದು ಮತ್ತು ಮನೆಗಣತಿ. ಎರಡನೆ ಹಂತ ಜನಗಣತಿ.
9. ಕರ್ನಾಟಕ ರಾಜ್ಯದಲ್ಲಿ ಮೊದಲ ಹಂತದ ಜನಗಣತಿ ಕಾರ್ಯವನ್ನು 2010 ಎಪ್ರಿಲ್ 15ರಿಂದ ಜೂನ್ 1ರವರೆಗೆ ನಡೆಸಲಾಗುತ್ತದೆ. 2ನೆ ಹಂತದ ಜನಗಣತಿ ಕೆಲಸ 2011 ಫೆಬ್ರವರಿ ಮಾರ್ಚ್ ತಿಂಗಳಲ್ಲಿ ಜರಗಲಿದೆ.
10. ಕರ್ನಾಟಕ ರಾಜ್ಯದಲ್ಲಿ, ಜನಗಣತಿ ನಿರ್ದೇಶನಾಲಯ ಬೆಂಗಳೂರು ಇವರ ಮಾರ್ಗದರ್ಶನದಲ್ಲಿ ಜನಗಣತಿ ಕಾರ್ಯ ನಡೆಯಲಿದೆ.
11. ಆಯಾಯ ಜಿಲ್ಲೆಯ ಜಿಲ್ಲಾಧಿಕಾರಿಯವರು ಪ್ರಿನ್ಸಿಪಲ್ ಸೆನ್ಸಸ್ ಆಫೀಸರ್ಸ್‌ ಆಗಿ ಕರ್ತವ್ಯ ನಿರ್ವಹಿಸುತ್ತಾರೆ. ಅಲ್ಲದೆ ರಾಜ್ಯದ ಮಹಾನಗರ ಪಾಲಿಕೆ ವ್ಯಾಪ್ತಿಗಳಲ್ಲಿ ಆಯಾಯ ನಗರ ಪಾಲಿಕೆಯ ಕಮೀಶನರ್‌ಗಳು ಪ್ರಿನ್ಸಿಪಲ್ ಸೆನ್ಸಸ್ ಆಫೀಸರ್ ಆಗಿ ಕರ್ತವ್ಯ ನಿರ್ವಹಿಸುತ್ತಾರೆ.
12. ಮನೆ ಮನೆ ಭೇಟಿ ನೀಡಿ ಮನೆ ಪಟ್ಟಿ ತಯಾರಿಸಲು ಸುಮಾರು 600 ರಿಂದ 700 ಜನಸಂಖ್ಯೆ ವ್ಯಾಪ್ತಿಗೆ ಒಬ್ಬರು ಗಣತಿದಾರರಂತೆ, 6 ಗಣತಿದಾರರಿಗೆ ಒಬ್ಬರು ಮೇಲ್ವಿಚಾರಕರಂತೆ ನೇಮಕ ಮಾಡಲಾಗಿದೆ.
13. ಪ್ರಸಕ್ತ ಭಾರಿಯ ಹಂಪಿ ಕನ್ನಡ ವಿವಿಯ ಪ್ರತಿಷ್ಠಿತ ನಾಡೋಜ ಗೌರವ ಪದವಿ ಎಸ್.ಎಲ್.ಬೈರಪ್ಪ ಸೇರಿದಂತೆ ಒಟ್ಟು ಆರು ಜನರಿಗೆ ದೊರಿತಿದೆ.
14. ತುಂಗಭದ್ರಾ ಜಲಾಶಯ ನಿರ್ಮಿಸಲು ಆಗಿನ ಹೈದರಾಬಾದ್ ಸರ್ಕಾರ 1950 ರಲ್ಲಿ ಭೂಸ್ವಾಧೀನ ನಡೆಸಿತು.
15. ತುಂಗಭದ್ರಾ ಜಲಾಶಯ ನಿರ್ಮಿಸಲು ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಸುಮಾರು 17 ಗ್ರಾಮಗಳು ಮುಳುಗಡೆಯಾದವು.
16. ಈ ಪೈಕಿ ರಾಂಪುರ ತಾಲ್ಲೂಕಿನ ಒಂದು ಗ್ರಾಮದ 17 ಕುಟುಂಗಳನ್ನು ಅಗಳಕೇರಾ ಗ್ರಾಮಕ್ಕೆ ಸ್ಥಳಾಂತರಿಸಲಾಗಿತ್ತು. ಪುನರ್ವಸತಿಗಾಗಿ ಹುಲಿಗಿಯ ಕುಬೇರಗೌಡರಿಂದ 48 ಎಕರೆ ಭೂಸ್ವಾಧೀನಪಡಿಸಿಕೊಂಡು 6,969 ರೂ ಪರಿಹಾರ ವಿತರಿಸಲಾಗಿತ್ತು.
17. ಈ ಸಂದರ್ಭದಲ್ಲಿ 5 ಎಕರೆಗಿಂತ ಹೆಚ್ಚು ಜಮೀನು ಪಡೆದ ಕುಟುಂಬದಿಂದ ಹೆಚ್ಚುವರಿಯಾಗಿ ಎಕರೆಗೆ 50 ರೂನಂತೆ ಸರ್ಕಾರ ವಸೂಲಿ ಮಾಡಿತ್ತು. 5 ಎಕರೆಗಿಂತ ಕಡಿಮೆ ಜಮೀನು ಪಡೆದ ಸಂತ್ರಸ್ತರಿಗೆ ಉಚಿತವಾಗಿ ವಿತರಿಸಲಾಗಿತ್ತು.
18. ಸಂತ್ರಸ್ತರಿಗೆ ಸರ್ಕಾರ ನೀಡಿದ ಜಮೀನಿನ ಮಾಲಿಕತ್ವ ಎತ್ತಿಹಿಡಿದಿರುವ ಇಲ್ಲಿನ ಒಂದನೇ ತ್ವವರಿತ ನ್ಯಾಯಾಲಯ , ಕೆಳ ನ್ಯಾಯಾಲಯ ನೀಡಿದ ಆದೇಶ ತಳ್ಳಿ ಹಾಕುವ ಮೂಲಕ 61 ವರ್ಷಗಳ ಸಂತ್ರಸ್ತರ ಹೋರಾಟಕ್ಕೆ ನ್ಯಾಯ ಒದಗಿಸಿದೆ.
19. ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ವರ ನಿವಾಸದ ಮತ್ತು ಕಛೇರಿಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ 2.6 ಕೆ.ಜಿ. ಚಿನ್ನ , 17 ಲಕ್ಷ ರೂ. ನಗದು ವಶವಡಿಸಿಕೊಂಡಿದ್ದಾರೆ.
20. ರಷ್ಯಾದ ಸೈಬೀರಿಯಾದ ನ್ಯಾಯಾಲಯವೊಂದು ಹಿಂದೂಗಳ ಪವಿತ್ರ ಗ್ರಂಥ ಭಗವದ್ಗೀತೆಯನ್ನು ನಿಷೇಧಿಸಲು ಹೊರಟಿದೆ.
21. ಮಾಸ್ಕೊ – ಇಸ್ಕಾನ್ ಭಗವದ್ಗೀತೆ ನಿಷೇಧ ಕುರಿತ ತೀರ್ಪನ್ನು ಅಮಾನತಿಲ್ಲಿ ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ಡಿಸೆಂಬರ್ 28 ಮುಂದೂಡಿದೆ.
22. ನರ್ಸ್ ಭಂವರಿ ದೇವಿ ಪಹರಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಮಹಿಪಾಲ್ ಮದೆರ್ನಾ ಅವರ ಪತ್ನಿ ಲೀಲಾ , ಶಾಸಕ ಮಲ್ಕನ್ ಸಿಂಗ್ ವರ ಇಬ್ಬರು ಪುತ್ರರನ್ನು ಸಿಬಿಐ ಸೋಮವಾರ ವಿಚಾರಣೆಗೊಳಪಡಿಸಿದೆ.
23. ಉತ್ತ ಕೋರಿಯಾ ಪರಮೊಚ್ಚ ನಾಯಕ ಎರಡನೇ ಕಿಮ್ ಜಾಂಗ್ ಇಲ್ ದಿನಾಂಕ/17/12/2011 ರಂದು ಹೃದಯಾಘಾತದಿಂದ ನಿಧನರಾದರು.
24. ಸ್ವಾತಂತ್ರ್ಯ ನಂತರವೂ ಗೋವಾ ಪ್ರದೇಶವು ಪೋರ್ಚುಗೀಸರ ಅಧೀನದಲ್ಲಿತ್ತು ಇದನ್ನು ವಶಪಡಿಸಲು ಭಾರತ ಸರ್ಕಾರ ಆಪರೇಷನ್ ವಿಜಯ್ ಹೆಸರಿನಲ್ಲಿ ಯುದ್ಧ ಸಾರಿತು. 1961 ಡಿಸೆಂಬರ್ 19 ರಂದು ಗೋವ ಭಾರತದ ವಶವಾಯಿತು.
25. ಪೋರ್ಚುಗೀಸರು ಭಾರತದ ಪಶ್ಚಿಮ ಕರಾವಳಿಗೆ ಕಾಲಿಟ್ಟಿದ್ದು 1510 ರಲ್ಲಿ .
26. ಸುಧಾರಣಾವಾಧಿ ಲೂಯಿಸ್ ದಿ ಮನೇಜಸ್ ಬ್ರಾಗಾಂಕಾ ಅವರು ಹೊರತರುತ್ತಿದ್ದ ಒ ಹೆರಾಲ್ಡೋ ಪತ್ರಿಕೆ ಪೋರ್ಚುಗೀಸರ ದುರಾಡಳಿತ ವಿರುದ್ಧದ ಹೋರಾಟಕ್ಕೆ ಬೆನ್ನೆಲುಬಾಗಿತ್ತು.
27. ಇದನ್ನು ಹತ್ತಿಕ್ಕಲು ಪೋರ್ಚುಗೀಸ್ ಸರ್ಕಾರವು ಗೋವಾದಲ್ಲಿ ಪ್ರೆಸ್ ಸೆನ್ಸಾರ್ ಶಿಪ್ ಜಾರಿಗೊಳಿಸಿತು.
28. ಗೋವಾ ವಿಮೋಚನಾ ಚಳವಳಿಗೆ ರಾಜಕೀಯ ಬಲ ನೀಡಲು ಟ್ರಿಸ್ಟಾವೋ ಡಿಬ್ರೆಗಾಂಜಾ ಕುನ್ಹಾ ವರು 1928 ರಲ್ಲಿ ಗೋವಾ ನ್ಯಾ,ನಲ್ ಕಾಂಗ್ರೇಸ್ ಸ್ಥಾಪಿಸಿದರು.
29. 1930 ರ ವೇಳೆಗೆ ಪೋರ್ಚುಗೀಸ್ ಸರ್ಕಾರವು ಆಕ್ಟೋ ಕಲೋನಿಯಲ್ ಕಾಯಿದೆ ಜಾರಿಗೊಳಿಸಿ ರಾಜಕೀಯ ಪಕ್ಷಗಳ ರ್ಯಾಲಿ ಹಾಗೂ ಸಭೆಗಳಿಗೆ ನಿಷೇಧ ಹೇರಿತು.
30. ಗೋವಾ ವಿಮೋಚನಾ ಚಳವಳಿಯ ಪಿತಾ ಎಂದು ಟ್ರಿಸ್ಟಾವೋ ಡಿಬ್ರೆಗಾಂಜಾ ಕುನ್ಹಾ ರನ್ನ ಕರೆದರು.
31. 1961 ಡಿಸೆಂಬರ್ 18 ಮತ್ತು 19 ರಂದು ಸತತ 33 ಗಂಟೆಗಳ ಸೇನೆ ದಾಳಿ ನಡೆಸುವ ಮೂಲಕ ಗೋವಾ ಮತ್ತು ಸುತ್ತಮುತ್ತಲಿನ ದ್ವೀಪಗಳು ವಿಮೋಚನೆಗೊಳಿಸಲಾಯಿತು.
32. ಪೋರ್ಚುಗೀಸರು ಭಾರತಕ್ಕೆ ಅಧಿಕೃತವಾಗಿ ಭಾರತಕ್ಕೆ ಶರಣಾಗಿದ್ದು 1974 ರಲ್ಲಿ ಗೋವಾ ವಿಮೋಚನೆಯನ್ನು ಒಪ್ಪಿಕೊಂಡಿತು.
33. ಗೋವಾ 1987 ರಲ್ಲಿ ಪ್ರತ್ಯೇಕ ರಾಜ್ಯವಾಗಿ ಗೋವಾ ಅಸ್ತಿತ್ವಕ್ಕೆ ಬಂತು.
34. ಪ್ರಸ್ತುತ ದಮನ್ ಮತ್ತು ದಿಯೂ , ದಾದ್ರಾ ಮತ್ತು ನಗರ್ ಹವೇಲಿ ದ್ವೀಪಗಳು ಕೇಂದ್ರಾಡಳಿತ ಪ್ರದೇಶವಾಗಿದೆ.
35. ಭಾರತದಲ್ಲಿ information technology ಕ್ಷೇತ್ರದಲ್ಲಿ 2012ನೇ ಸಾಲಿನಲ್ಲಿ ಸುಮಾರು 2.5 ಲಕ್ಷ ಮಂದಿಗೆ ಉದ್ಯೋಗ ಕಲ್ಪಿಸಲಾಗುವುದು ಎಂದು ಐಟಿ ದಿಗ್ಗಜ ಇನ್ಫೋಸಿಸ್ ಕಂಪನಿಯ ಸಹ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್.
36. 34 ವರ್ಷಗಳ ಬಳಿಕ ರಣಜಿ ಪಂದ್ಯದ ಆತಿಥ್ಯ ವಹಿಸಲು ಶಿವಮೊಗ್ಗ ಸಜ್ಜಾಗಿದೆ.
37. 1995 ರಲ್ಲಿ ಕರ್ನಾಟಕ ಮತ್ತು ತಮಿಳುನಾಡು ನಡುವೆ ಪಂದ್ಯ ನಡೆದಿತ್ತು.
38. ಆಸ್ಟ್ರೇಲಿಯ ಪ್ರವಾಸಕ್ಕೆ ತೆರಳಿದ ಭಾರತ ತಂಡದಲ್ಲಿ ಕುಮಟಾ ಮೂಲಕ 27 ವರ್ಷದ ಯುವಕನೂ ಸೇರಿದ್ದಾನೆ.
39. ಸಚಿನ್ ತೆಂಡೂಲ್ಕರ್ ಹಾಗೂ ರಾಹುಲ್ ದ್ರಾವಿಡ್ ಅವರ ಅಚ್ಚುಮೆಚ್ಚಿನ ಈ ಯುವಕನ ಹೆಸರು ರಾಘವೇಂದ್ರ. ವಿಶೇಷವೆಂದರೆ ಈ ವರೆಗೆ ಪ್ರಥಮ ದರ್ಜೆ ಪಂದ್ಯವನ್ನು ಆಡದ ರಾಘವೇಂದ್ರ ಈ ಇಬ್ಬರು ಮಹಾನ್ ಆಟಗಾರರಿಗೆ ನೆಟ್ ಪ್ರಾಕ್ಟೀಸ್ ನಲ್ಲಿ ನೆರವು ನೀಡುತ್ತಿದ್ದಾನೆ.
40. ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿಯ ಉದ್ಯೋಗಿಯಾಗಿರುವ ರಾಘವೇಂದ್ರ ಮೆಷಿನ್ ಗಿಂತಲೂ ಹೆಚ್ಚು ಪರಿಣಾಮಕಾರಿಯಾಗಿ ಸ್ವಿಂಗ್ ಮಾಡಿ ಬಾಲ್ ಎಸೆಯುವ ಕಲೆ ಹೊಂದಿದ್ದಾನೆ.
41. ಆಸೀಸ್ ವೇಗಿ ಪಾಟಿಸನ್ ಸ್ವಿಂಗ್ ಎದುರಿಸಲು ಸಜ್ಜಾಗುತ್ತಿರುವ ಸಚಿನ್ ಹಾಗೂ ದ್ರಾವಿಡ್ ಗೆ ಸದ್ಯಕ್ಕೆ ರಾಘವೇಂದ್ರನೇ ಉತ್ತಮ ಸಹಾಯಕರು .
42. ದೇಶದ ಅತ್ಯುನ್ನತ ನಾಗರೀಕ ಸನ್ಮಾನ ಇದ್ದ ಅಡ್ಡಿಯನ್ನು ಕೇಂದ್ರ ಸರ್ಕಾರ ಸರಿಪಡಿಸಿದೆ. ಪ್ರಶಸ್ತಿಯಲ್ಲಿ ಕ್ರೀಡಾ ವಿಭಾಗವನ್ನು ಸೇರ್ಪಡೆಗೊಳಿಸುವುದಕ್ಕೆ ಕೇಂದ್ರದ ಗೃಹಸಚಿವ ಪಿ.ಚಿದಂಬರಂ ಸಮ್ಮತಿ ಸೂಚಿಸಿ ಕಳಿಸಿದ ಪತ್ರಕ್ಕೆ ಪ್ರಧಾನಿ ಮನಮೋಹನ್ ಸಿಂಗ್ ಕೂಡಾ ಅಂಕಿತ ಹಾಕಿದ್ದಾರೆ.
43. ಹೀಗಾಗಿ ಮುಂದಿನ ದಿನಗಳಲ್ಲಿ ಹೀಗಾಗಿ ಕಲೆ, ವಿಜ್ಞಾನ, ಸಾಹಿತ್ಯ ಮತ್ತು ಸಾರ್ವಜನಿಕ ಸೇವೆಯಲ್ಲಿ ಅತ್ಯುನ್ನತ ಸಾಧನೆ ಮೆರೆದವರ ಸರಿ ಸಮನಾಗಿ ಕ್ರೀಡಾಪಟುಗಳು ನಿಲ್ಲಬಹುದಾಗಿದೆ. ಸಚಿನ್ ತೆಂಡೂಲ್ಕರ್ ಹಾಗೂ ಶ್ರೇಷ್ಠ ಹಾಕಿಪಟು ಧ್ಯಾನ್ ಚಂದ್ ಇಬ್ಬರೂ ಭಾರತ ರತ್ನ ಪಡೆಯಬಹುದಾಗಿದೆ.
44. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಜೀವನ ಚರಿತ್ರೆಯ ಮೊದಲ ಕಾಪಿ ದಾಖಲೆ ಮೊತ್ತಕ್ಕೆ ಹರಾಜಾಗಿರು ಸುದ್ದಿ ಬಂದಿದೆ.ಸುಮಾರು 37 ಕೆಜಿ ತೂಕದ, 852 ಪುಟಗಳ ಈ ಬೃಹತ್ ಪುಸ್ತಕಕ್ಕೆ ಸುಮಾರು 1.72 ಕೋಟಿ ರು ಮೊತ್ತದ ಬೆಲೆ ಹರಾಜಿನಲ್ಲಿ ಕೂಗಲಾಗಿದೆ.
45. ಸಚಿನ್ ಅವರ ರಕ್ತದ ಸಹಿಯುಳ್ಳ ವಿಶೇಷ ಕಾಪಿಗಳು ಕೂಡಾ ಲಭ್ಯವಿದ್ದು ಪ್ರತಿ ಪುಸ್ತಕಕ್ಕೆ 75,000 ಡಾಲರ್ ದುಡ್ಡು ತೆರಬೇಕಾಗುತ್ತದೆ.
46. ಜೀವನ ಚರಿತ್ರೆ ಪುಸ್ತಕದಲ್ಲಿ ಸಚಿನ್ ಅವರ ಅಪರೂಪದ 1,500 ಚಿತ್ರಗಳು ಇದ್ದು ಪುಸ್ತಕದ ಅಂಚಿಗೆ ಚಿನ್ನದ ಲೇಪನ ಇರುತ್ತದೆ ಎಂದು ಪ್ರಕಾಶಕರು ಹೇಳಿದ್ದಾರೆ.
47. ಅತ್ಯಂತ ಸಜ್ಜನ, ಸಂಭಾವಿತ ನ್ಯಾಯಮೂರ್ತಿ ಎಂದೇ ಹೆಸರಾಗಿದ್ದ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾ. ವಿ.ಜಿ. ಸಭಾಹಿತ್ (56) ಅವರು ಕರ್ತವ್ಯ ನಿರ್ವಹಿಸುತ್ತಿರುವಾಗಲೇ ತೀವ್ರ ಹೃದಯಾಘಾತಕ್ಕೊಳಗಾಗಿ ಆಸ್ಪತ್ರೆಗೆ ಸಾಗಿಸುವ ಹಾದಿಯಲ್ಲಿ ನಿಧನರಾದರು.
48. ಕೋರ್ಟ್ ಕೋಣೆ 3ರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನ್ಯಾ. ಸಭಾಹಿತ್ ಅವರು ಕಚೇರಿಯಲ್ಲಿ ಹೃದಯ ಸ್ತಂಭನಕ್ಕೊಳಗಾಗಿದ್ದಾರೆ.
49. ಅವರನ್ನು ಫಾರ್ಟಿಸ್ ಆಸ್ಪತ್ರೆಗೆ ಸಾಗಿಸುತ್ತಿರುವಾಗ ಅಸುನೀಗಿದರು.
50. ನವೆಂಬರ್ 26ರಂದು 56ನೇ ವರ್ಷಕ್ಕೆ ಕಾಲಿಟ್ಟಿದ್ದ ನ್ಯಾ. ಸಭಾಹಿತ್ ಅವರು 1979ರಲ್ಲಿ ವಕೀಲ ವೃತ್ತಿ ಸೇರಿ ಕರ್ನಾಟಕ ಹೈಕೋರ್ಟಿನಲ್ಲಿಯೇ ಪ್ರಾಕ್ಟೀಸ್ ಮಾಡಿದ್ದರು.
51. ಅವರ ತಂದೆ ನ್ಯಾ. ಜಿ.ಎಸ್ ಸಭಾಹಿತ್ ಕೂಡ ಕರ್ನಾಟಕ ಹೈಕೋರ್ಟಿನಲ್ಲಿ ನ್ಯಾಯಮೂರ್ತಿಗಳಾಗಿದ್ದರು.
52. 1988ರಲ್ಲಿ ನ್ಯಾಯಾಂಗ ಸೇವೆಯನ್ನು ಸೇರಿದ ಅವರನ್ನು, 2000ರಲ್ಲಿ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ನೇಮಕ ಮಾಡಲಾಗಿತ್ತು. 2001 ಜುಲೈನಲ್ಲಿ ಖಾಯಂ ನ್ಯಾಯಾಮೂರ್ತಿಗಳಾಗಿ ನೇಮಕಗೊಂಡ ಅವರು 2017ರಲ್ಲಿ ನಿವೃತ್ತರಾಗುವವರಿದ್ದರು.
53. ಕಳೆದ ವರ್ಷ 11 ಭಿನ್ನಮತೀಯ ಶಾಸಕರು ದಂಗೆಯೆದ್ದಿದ್ದಾಗ ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠ ವಿಭಿನ್ನ ತೀರ್ಪನ್ನು ನೀಡಿತ್ತು. ಆಗ ಆ ಪ್ರಕರಣವನ್ನು ನ್ಯಾ. ವಿ.ಜಿ. ಸಭಾಹಿತ್ ಅವರಿಗೆ ವರ್ಗಾಯಿಸಲಾಗಿತ್ತು. ಅ.29ರಂದು ನೀಡಿದ ತೀರ್ಪಿನಲ್ಲಿ ಶಾಸಕರನ್ನು ಅನರ್ಹಗೊಳಿಸಿ ಸ್ಪೀಕರ್ ಹೊರಡಿಸಿದ್ದ ಆದೇಶವನ್ನು ನ್ಯಾ.ಸಭಾಹಿತ್ ಎತ್ತಿಹಿಡಿದಿದ್ದರು.
54. ನ್ಯಾಯಮೂರ್ತಿ ವಿಜಿ ಸಭಾಹಿತ್ ಅವರು ಬಿಜೆಪಿ ಸ್ಪೀಕರ್ ಬೋಪಯ್ಯ ಅವರು 11 ಮಂದಿ ಶಾಸಕರನ್ನು ಅನರ್ಹಗೊಳಿಸಿದ ಕ್ರಮ ಸರಿ ಎಂದು ತೀರ್ಪು ನೀಡಿದ್ದಾರೆ.
55. ಕನ್ನಡಪ್ರಭ ದಿನಪತ್ರಿಕೆ ಮತ್ತು ಸುವರ್ಣ ನ್ಯೂಸ್ ಚಾನಲ್ ಸಂಪಾದಕ ವಿಶ್ವೇಶ್ವರ ಭಟ್ ಅವರ ಖಾಸಗಿ ಅಂತರ್ ಜಾಲ ತಾಣ http://vbhat.in/ ಮತ್ತೆ ಶುರುವಾಗಿದೆ.
56. ಅಧ್ಯಕ್ಷರು ಅಥವಾ ಮುಖ್ಯಸ್ಥರೂ ಸೇರಿದಂತೆ ಲೋಕಪಾಲದಲ್ಲಿ ಒಂಬತ್ತು ಸದಸ್ಯರಿರುತ್ತಾರೆ.
57. ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಅಥವಾ ಹಾಲಿ ನ್ಯಾಯಮೂರ್ತಿ ಸಂಸ್ಥೆ ಮುಖ್ಯಸ್ಥರಾಗಿರುತ್ತಾರೆ.
58. ಲೋಕಸಭೆ ಸ್ಪೀಕರ್, ಪ್ರಧಾನಿ, ಲೋಕಸಭೆ ವಿರೋಧ ಪಕ್ಷದ ನಾಯಕರು ಹಾಗೂ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರನ್ನೊಳಗೊಂಡ ನಾಲ್ವರ ಸಮಿತಿ ಅಧ್ಯಕ್ಷರನ್ನು ನೇಮಕ ಮಾಡಲಿದೆ.
59. ಅಧ್ಯಕ್ಷರು ಮತ್ತು ಸದಸ್ಯರ ಅವಧಿ ಐದು ವರ್ಷ. `ವಾಗ್ದಂಡನೆ ನಿರ್ಣಯ` (ಇಂಪೀಚ್‌ಮೆಂಟ್) ಮೂಲಕ ಲೋಕಪಾಲರನ್ನು ಅಧಿಕಾರದಿಂದ ಪದಚ್ಯುತಿಗೊಳಿಸಬಹುದಾಗಿದೆ.
60. `ವಾಗ್ದಂಡನೆ ನಿರ್ಣಯ` ಕ್ಕೆ ಇದಕ್ಕೆ 100 ಸಂಸದರ ಸಹಿ ಒಳಗೊಂಡ ದೂರು ಅಗತ್ಯ.
61. ಲೋಕಪಾಲದಲ್ಲಿ ಹಾಗೂ ಶೋಧನಾ ಸಮಿತಿಯಲ್ಲಿ ಶೇ. 50ರಷ್ಟು ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗ, ಅಲ್ಪ ಸಂಖ್ಯಾತರು ಮತ್ತು ಮಹಿಳೆಯರಿಗೆ ಅವಕಾಶ ಕಲ್ಪಿಸಲಾಗುತ್ತಿದೆ.
62. ಲೋಕಪಾಲ ಪೀಠದಲ್ಲಿ ಅರ್ಧದಷ್ಟು ಕಾನೂನು ಅಥವಾ ನ್ಯಾಯಾಂಗ ಹಿನ್ನೆಲೆಯಿಂದ ಬಂದವರು ಸದಸ್ಯರಾಗಿರುತ್ತಾರೆ.
63. ಲೋಕಪಾಲಕ್ಕೆ ಸ್ವಯಂ ಪ್ರೇರಿತವಾಗಿ ತೀರ್ಮಾನ ಕೈಗೊಳ್ಳುವ ಅಧಿಕಾರ ಇರುವುದಿಲ್ಲ. ದೂರುಗಳ ಆಧಾರದ ಮೇಲೆ ನಿರ್ಧಾರ ಮಾಡಬೇಕು.
64. ಲೋಕಪಾಲದ ವಿಚಾರಣಾ ವಿಭಾಗವು ನಿರ್ದೇಶಕರು ಪ್ರಾಥಮಿಕ ವಿಚಾರಣೆ ಅವರನ್ನೊ ಗೊಂಡಿರುತ್ತದೆ.
65. ಲೋಕಪಾಲರು ದೂರು ಕುರಿತು ಪ್ರಾಥಮಿಕ ತನಿಖೆ ನಡೆಸುವಂತೆ ಸಿಬಿಐಗೂ ಕೇಳಬಹುದು. ಪ್ರಾಥಮಿಕ ತನಿಖೆ ಮೂರು ತಿಂಗಳಲ್ಲಿ ಪೂರ್ಣಗೊಳ್ಳಬೇಕು.
66. ಕಾಲಾವಕಾಶ ಅಗತ್ಯವಾದರೆ ಲಿಖಿತ ಮನವಿ ಸಲ್ಲಿಸಬೇಕು. ಆರು ತಿಂಗಳವರೆಗೆ ಸಮಯ ವಿಸ್ತರಿಸಲು ಕಾಯ್ದೆಯಲ್ಲಿ ಅವಕಾಶವಿದೆ.
67. ದೇಶದ ಅತ್ಯುನ್ನತ ತನಿಖಾ ಸಂಸ್ಥೆ `ಸಿಬಿಐ` ಅನ್ನು ಲೋಕಪಾಲ ವ್ಯಾಪ್ತಿಯಿಂದ ಹೊರಗಿಡಲಾಗಿದೆ.
68. ಸಿಬಿಐ ಆಡಳಿತಾತ್ಮಕ ಅಧಿಕಾರವನ್ನು ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ) ಯಲ್ಲೇ ಉಳಿಸಲಾಗಿದೆ.
69. ಲೋಕಪಾಲ ಶಿಫಾರಸು ಮಾಡಿದ ಭ್ರಷ್ಟಾಚಾರ ಪ್ರಕರಣಗಳ ತನಿಖೆ ಮಾತ್ರ ಈ ಸಂಸ್ಥೆ ಅಧೀನದಲ್ಲೇ ನಡೆಸಲು ಮಸೂದೆ ಅವಕಾಶ ಕಲ್ಪಿಸಿದೆ.
70. ಸಿಬಿಐ ನಿರ್ದೇಶಕರನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ, ಪ್ರಧಾನಿ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕರನ್ನು ಒಳಗೊಂಡ ಸಮಿತಿ ನೇಮಕ ಮಾಡಲಿದೆ.
71. ಎಸ್‌ಪಿ ಹಾಗೂ ಅವರ ಮೇಲಿನ ಅಧಿಕಾರಿಗಳನ್ನು ಸಿವಿಸಿ, ಗೃಹ ಕಾರ್ಯದರ್ಶಿ, ಆಡಳಿತ ಮತ್ತು ಸಿಬ್ಬಂದಿ ಇಲಾಖೆ ಕಾರ್ಯದರ್ಶಿ ಒಳಗೊಂಡ ಸಮಿತಿ ನೇಮಿಸಲಿದೆ.
72. ಅಂತರರಾಷ್ಟ್ರೀಯ ವ್ಯವಹಾರ, ಪರಮಾಣು ಶಕ್ತಿ, ಬಾಹ್ಯಾಕಾಶ, ಆಂತರಿಕ ಮತ್ತು ಬಾಹ್ಯ ಭದ್ರತೆ ಮೊದಲಾದ ಮಹತ್ವದ ವಿಷಯಗಳನ್ನು ಮಸೂದೆ ವ್ಯಾಪ್ತಿಯಿಂದ ಹೊರಗಿಡಲಾಗಿದೆ.
73. ಪ್ರಧಾನಿ ವಿರುದ್ಧದ ದೂರುಗಳ ತನಿಖೆ ಕುರಿತು ಲೋಕಪಾಲ ಪೂರ್ಣಪೀಠ ತೀರ್ಮಾನಿಸಬೇಕು. ಇದಕ್ಕೆ ಕನಿಷ್ಠ 2/3 ರಷ್ಟು ಸದಸ್ಯರ ಒಪ್ಪಿಗೆ ಇರಬೇಕು.
74. ಪ್ರಧಾನಿ ವಿಚಾರಣೆ ಸಾರ್ವಜನಿಕವಾಗಿ ನಡೆಯಬಾರದು. ಕೋಣೆಯೊಂದರಲ್ಲಿ ಗೌಪ್ಯವಾಗಿ ನಡೆಯಬೇಕು. ದೂರು ತಿರಸ್ಕೃತವಾದರೆ ದಾಖಲೆ ಬಹಿರಂಗ ಮಾಡಬಾರದು ಎಂದು ಮಸೂದೆ ವ್ಯಾಖ್ಯಾನಿಸಿದೆ.
75. ಲೋಕಪಾಲದಿಂದ ಶಿಫಾರಸು ಮಾಡಲಾದ ಪ್ರಕರಣಗಳ ತನಿಖಾ ವರದಿಯನ್ನು ಈ ಸಂಸ್ಥೆಗೇ ಸಲ್ಲಿಸಬೇಕು.
76. ಕನಿಷ್ಠ ಮೂವರು ಸದಸ್ಯರು ವರದಿಯನ್ನು ಪರಿಶೀಲಿಸಿ ದೋಷಾರೋಪ ಪಟ್ಟಿ ಸಲ್ಲಿಸಬೇಕೇ? ಪ್ರಕರಣ ಕೈಬಿಡಬೇಕೇ ಅಥವಾ ಇಲಾಖೆ ವಿಚಾರಣೆಗೆ ಆದೇಶಿಸಬೇಕೇ ಎಂಬ ತೀರ್ಮಾನ ಮಾಡಬಹುದು.
77. ಮೊಕದ್ದಮೆ ದಾಖಲಿಸಲು ಸರ್ಕಾರದ ಮುಖ್ಯಸ್ಥರ ಅಥವಾ ಇಲಾಖಾ ಮುಖ್ಯಸ್ಥರ ಮಂಜೂರಾತಿ ಅಗತ್ಯವಿಲ್ಲ.
78. ದೋಷಾರೋಪ ಪಟ್ಟಿ ಸಲ್ಲಿಕೆಯಾದರೆ ಲೋಕಪಾಲದ `ಪ್ರಾಸಿಕ್ಯೂಷನ್` ವಿಭಾಗ ವಿಶೇಷ ನ್ಯಾಯಾಲಯದಲ್ಲಿ ವಿಚಾರಣಾ ಪ್ರಕ್ರಿಯೆ ಆರಂಭಿಸಬಹುದು.
79. ಕರ್ನಾಟಕ, ಜಾರ್ಖಂಡ್ ಹಾಗೂ ಒಡಿಶಾ ಸೇರಿದಂತೆ ದೇಶದಾದ್ಯಂತ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಲು ಕಬ್ಬಿಣ ಹಾಗೂ ಮ್ಯಾಂಗನೀಸ್ ಅದಿರು ರಫ್ತು ನಿಷೇಧಿಸುವಂತೆ ನ್ಯಾಯಮೂರ್ತಿ ಷಾ ಸಮಿತಿ ನೀಡಿದ ಸಲಹೆಯನ್ನು ಗಣಿ ಸಚಿವಾಲಯ ಮಂಗಳವಾರ ತಿರಸ್ಕರಿಸಿದೆ.
80. ಅಕ್ರಮ ಗಣಿಗಾರಿಕೆಗೆ ಲಗಾಮು ಹಾಕುವ ಉದ್ದೇಶದಿಂದ ನ್ಯಾ.ಎಂ.ಬಿ.ಷಾ ತನಿಖಾ ಸಮಿತಿಯು ಕೋಟ್ಯಂತರ ರೂಪಾಯಿ ವಹಿವಾಟಿನ ಕಬ್ಬಿಣ ಹಾಗೂ ಮ್ಯಾಂಗನೀಸ್ ಅದಿರು ರಫ್ತನ್ನು ನಿಷೇಧಿಸಬೇಕೆಂದು ಪ್ರತಿಪಾದಿಸಿತ್ತು.
81. ಸುಖೋಯ್ ಯುದ್ಧ ನೌಕೆಯಲ್ಲಿ ಸಂಚರಿಸಿ ಮತ್ತು ನೌಕಾ ವಿಹಾರ ನಡೆಸುವ ಮೂಲಕ ಇತಿಹಾಸ ನಿರ್ಮಿಸಿದರು. ಈ ವಿಮಾನದಲ್ಲಿ ಸಂಚರಿಸಿದ ಮೊದಲ ಮಹಿಳಾ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
82. 77 ವರ್ಷದ ಪ್ರತಿಭಾ, 81 ನೌಕಾಪಡೆ ಹಡಗುಗಳು ಮತ್ತು 44 ವಾಯು ನೌಕೆಗಳಿಂದ ಗೌರವ ವಂದನೆ ಸ್ವೀಕರಿಸಿದರು.
83. ರಾಷ್ಟ್ರಪತಿಗಳ ವೈಯಕ್ತಿಕ ಸಮುದ್ರ ವಾಯುವಿಹಾರ ನೌಕೆ ಐಎನ್‌ಎಸ್ ಸುಭದ್ರಾದಲ್ಲಿ ನೌಕಾಪಡೆಯ ಪರಿವೀಕ್ಷಣೆ ಮಾಡಿದ ಮೊದಲ ರಾಷ್ಟ್ರಪತಿ.
84. ನೌಕಾಪಡೆಗೆ ವಿಕ್ರಮಾದಿತ್ಯ ವಾಯುನೌಕೆ ಸೇರ್ಪಡೆಯಿಂದ ಹೊಸ ಮೈಲಿಗಲ್ಲು ಸ್ಥಾಪಿಸಿದಂತಾಗಿದೆ.
85. ಪ್ರಸ್ತುತ ಭಾರತದ ಸೇನೆ 65,758 ಬಂದೂಕಗಳನ್ನು ಹೊಂದಿದೆ.
86. ಭಾರತದ ಸೇನೆಗೆ ಹೊಸದಾಗಿ 20 ಲಕ್ಷ ಬಂದೂಕಗಳ ಗತ್ಯವಿದೆ.
87. ಪ್ರಸ್ತುತ ಇನ್ಸಾನ್ ಬಂದೂಕಗಳ ಬದಲಾಗಿ 10 ಕೆ.ಜಿ. ಹೆಚ್ಚಿನ ತೂಕ ಹೊಂದಿರುವ ಹೊಸ ರೈಫಲ್ ಗಳನ್ನು ಪೂರೈಸಲು ಸೇನಾಧಿಕಾರಿಗಳು ಚಿಂತನೆ ನಡೆಸಿದ್ದಾರೆ.
88. ದಿಲ್ಲಿಯಲ್ಲಿ ದರ್ಬಾರು ನಡೆಸುತ್ತಿದ್ದ ಗೋರಾಗಳು ( ಬಿಳಿಯರು ) ತೊಲಗಿದರು , ಕಾಲಾಗಳು ( ಕರಿಯರು ) ಬಂದರು . ಆದರೆ ಸ್ವಾತಂತ್ರ್ಯ ಬಂದು 6 ದಶಕ ಸಂದರೂ ಭ್ರಷ್ಟಚಾರ ನಿಂತಿಲ್ಲ ಎಂದು ವಿಷಾಧಿಸಿದ್ದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ.
89. ನೊಬೆಲ್ ಪ್ರಶಸ್ತು ಪುರಸ್ಕೃತ ಸಾಹಿತಿ ರವೀಂದ್ರನಾಥ ಟ್ಯಾಗೋರ್ ಬರೆದದ್ದು 1911 ರಲ್ಲಿ
90. ಜನ ಗಣ ಮನ ಕವಿತೆಯುವ ಮೊದಲು ಪ್ರಕಟಗೊಂಡಿದ್ದು ಟ್ಯಾಗೋರ್ ಅವರು ಸಂಪಾದಕರಾಗಿದ್ದ ಬ್ರಹ್ಮ ಸಮಾಜ ಪತ್ರಿಕೆ , ತತ್ವ ಭೋಧ ಪತ್ರಿಕೆ .
91. ಜನ ಗಣ ಮನವನ್ನು ರಾಗಬದ್ದವಾಗಿ ಮೊದಲು ಹಾಡಿದ್ದು 1911 ರ ಡಿಸೆಂಬರ್ 27 ರಂದು ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ನ ಕೋಲ್ಕೋತಾ ಧಿವೇಶನದಲ್ಲಿ.
92. ಟ್ಯಾಗೋರ್ ರವರು ಜನ ಗಣ ಮನ ಗೀತೆಯನ್ನು ಬರೆದದ್ದು ಸಂಸ್ಕೃತ ಮಿಶ್ರಿತ ಬೆಂಗಾಲಿ ಬಾಷೆಯಲ್ಲಿ .
93. ಜನ ಗಣ ಮನವು ಭಾರತದ ವೈವಿಧ್ಯತೆಯನ್ನು ವರ್ಣಿಸುವ ಗೀತೆಯು ಸುದೀರ್ಘವಾದ 5 ನುಡಿಗಳನ್ನು ಹೊಂದಿತ್ತು. ನಂತರದ ದಿನಗಳಲ್ಲಿ ಚುಟುಕುಗೊಳಿಸುವ ಉದ್ದೇಶದಿಂದ ಕೆಲವು ನುಡಿಗಳನ್ನು ಕೈ ಬಿಡಲಾಯಿತು.
94. ಇಂದು ನಾವು ಹಾಡುತ್ತಿರುವುದು 52 ಸೆಕೆಂಡುಗಳ ರಾಷ್ಟ್ರಗೀತೆಯು ಚುಟುಕು ರೂಪದ್ದಾಗಿದೆ.
95. ಟ್ಯಾಗೋರ್ ರು 1919 ರಲ್ಲಿ ಐರಿಷ್ ಕವಿ ಜೇಮ್ಸ್ ಎಚ್. ಕ್ಯೂಸಿನ್ಸ್ ಅವರ ಆಹ್ವಾನದ ಮೇರೆಗೆ ಆಂದ್ರ ಪ್ರದೇಶದ ಮದನಪಲ್ಲಿಯಲ್ಲಿರುವ ಬೆಸೆಂಟ್ ಥಿಯೋಸಾಫಿಕಲ್ ಕಾಲೇಜಿನಲ್ಲಿ ಜನ ಗಣ ಮನ ಗೀತೆಯನ್ನು ರಾಗಬದ್ಧವಾಗಿ ಹಾಡಿದರು.
96. ನಂತರದ ದಿನಗಳಲ್ಲಿ ಮದನಪಲ್ಲಿಯ ಪರಿಸರದಲ್ಲಿಲ ಈ ಗೀತೆಯನ್ನು ಇಂಗ್ಲೀಷ್ ಗೆ ಅನುವಾದಿಸಿದರು . ಅದಕ್ಕೆ ದಿ ಮಾರ್ನಿಂಗ್ ಸಾಂಗ್ ಆಫ್ ಇಂಡಿಯಾ ಎಂದು ಶಿರ್ಷಿಕೆ ನೀಡಿದರು.
97. ಸ್ವಾತಂತ್ರ್ಯ ನಂತರ ದೇಶದ ರಾಷ್ಟ್ರಗೀತೆಯನ್ನಾಗಿ ಬಂಕಿಮ್ ಚಂದ್ರ ಚಟರ್ಜಿ ಅವರ ವಂದೇ ಮಾತರಂ ಗೀತೆಯನ್ನು ಆಯ್ಕೆ ಮಾಡಬೇಕೆ ಅಥವಾ ಜನ ಗಣ ಮನ ಗೀತೆಯನ್ನೇ ಎಂಬ ಬಗ್ಗೆ ನಾಯಕರು ಹಲವು ಸುತ್ತಿನ ಚರ್ಚೆ ನಡೆಸಿದರು.
98. 1950 ರ ಜನವರಿ 24 ರಂದು ನಡೆದ ಶಾಸನ ಸಭೆಯಲ್ಲಿ ಜನ ಗಣ ಮನ ಗೀತೆಯನ್ನು ರಾಷ್ಟ್ರಗೀತೆಯಾಗಿ ಅಧಿಕೃತವಾಗಿ ಘೋಷಿಸಲಾಯಿತು.
99. ಪ್ರಸಕ್ತ ಫುಟ್ಬಾಲ್ ವರ್ಷದಲ್ಲಿ ಉತ್ತಮ ಸಾಧನೆ ತೋರಿದ ಭಾರತ ಫುಟ್ಬಾಲ್ ತಂಡದ ಸ್ಟ್ರೈಕರ್ ಸುನೀಲ್ ಛೆಟ್ರಿ ಅವರಿಗೆ ಅಖಿಲ ಭಾರತ ಫುಟ್ಬಾಲ್ ಫೇಡರೇಷನ್ ( ಎಐಎಫ್.ಎಫ್ ) ವಾರ್ಷಿಕ ಪ್ರಶಸ್ತಿ ಪ್ರಕಟಿಸಿದೆ.
100. ಸುನೀಲ್ ಛೆಟ್ರಿ 17 ಅಂತರರಾಷ್ಟ್ರೀಯ ಪಂದ್ಯಗಳಿಂದ 13 ಗೋಲುಗಳನ್ನು ಗಳಿಸಿದ್ದಾರೆ.
101. 2011 ರ ವರ್ಷದಲ್ಲಿ ಭಾರತದ ಫುಟ್ಬಾಲ್ ಆಟಗಾರನೊಬ್ಬ ದಾಖಲಿಸಿದ ಗರಿಷ್ಠ ಗೋಲು ದಾಗಿದೆ.
102. 2011 ರಲ್ಲಿ 20 ಕ್ಲಬ್ ಪಂದ್ಯಗಳನ್ನಾಡಿದ ಛೆಟ್ರಿ 11 ಗೋಲುಗಳನ್ನು ಗಳಿಸಿದ್ದಾರೆ.
103. 2011 ರ ಅರ್ಜುನ್ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿರುವ ಛೆಟ್ರಿ ಇತ್ತಿಚೆಗೆ ಮುಕ್ತಾಯಗೊಂಡ ಸ್ಯಾಫ್ ಫುಟ್ಬಾಲ್ ಚಾಂಪಿಯನ್ ಷಿಪ್ ನಲ್ಲೂ ಶ್ರೇಷ್ಠ ಆಟಗಾರನೆಂಬ ಪ್ರಶಸ್ತಿ ಪಡೆದಿದ್ದಾರೆ.
104. ಇನ್ಪೋಸಿಸ್ ಬಿಪಿಒ , ಆಸ್ಟ್ರೇಲಿಯಾ ಮೂಲದ ಫೋರ್ಟ್ ಲ್ಯಾಂಡ್ ಗ್ರೂಪ್ ಕಂಪನಿ ಯನ್ನು ಖರೀದಿಸಿದೆ.
105. 1999 ರಲ್ಲಿ ಪೋರ್ಟ್ ಲ್ಯಾಂಡ್ ಗ್ರೂಪ್ ಸ್ಥಾಪನೆಯಾಗಿತ್ತು. ಇದರ ಮುಖ್ಯ ಕಛೇರಿ ಸಿಡ್ನಿಯಲ್ಲಿದೆ. ಮೆಲ್ಲೋರ್ನ್ , ಬ್ರಿಸ್ಬೇನ್ ಪರ್ತ್ ನಲ್ಲಿ ಕಛೇರಿಯನ್ನು ಹೊಂದಿದೆ.
106. ಫೋರ್ಡ್ ಇಂಡಿಯಾ ತನ್ನ ಎಸ್ ಯುವಿ ವಾಹನವನ್ನು ಜನಪ್ರಿಯಗೊಳಿಸಲು ದಿ ಗ್ರೇಟ್ ಫೋರ್ಡ್ ಎಂಡೋವೇರ್ ಡ್ರೈವ್ ಅಭಿಯಾನವನ್ನು ಬೆಂಗಳೂರಿನಲ್ಲಿ ಕೈಗೊಂಡಿದೆ.
107. ಐಎನ್.ಜಿ ವೈಶ್ಯ ಬ್ಯಾಂಕ್ ಇಂಧನ ದಕ್ಷತೆಗಾಗಿ ರಾಜ್ಯ ಸರ್ಕಾರದ ಪ್ರಶಸ್ತಿಗಳಿಸಿದೆ.
108. ಮುಲ್ಲಪೆರಿಯಾರ್ ಅಣೆಕಟ್ಟು ಕುರಿತು ಚಿತ್ರಿಸಲಾಗಿರುವ ಡ್ಯಾಮ್ 999 ಚಿತ್ರದ ಮೂರು ಹಾಡುಗಳು ಅತ್ಯುತ್ತಮ ಸೃಜನಶೀಲ ಗೀತೆಗಳ ವರ್ಗದಡಿ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗೆ ಸ್ಪರ್ದಿಸಿದೆ.
109. 1911 ರ್ಲಲಿ ಸೆಂಟ್ರಲ್ ಬ್ಯಾಂಕ್ ಆಪ್ ಇಂಡಿಯಾ ಸ್ಥಾಪನೆ .
110. ಏಯೇಜ್ ಟು ಇಂಡಿಯಾ ಕೃತಿಯ ಕರ್ತೃ – ನಿಕೇಟಿನ್
111. ಅಂತರರಾಷ್ಟ್ರೀಯ ವ್ಯಾಪರವನ್ನು ನೋಡಿಕೊಳ್ಳುವ ನಾಯಿ ಎಂದು WTO ಸಂಸ್ಥೆಗೆ ಕರೆಯುತ್ತಾರೆ

ಶುಕ್ರವಾರ, ಡಿಸೆಂಬರ್ 16, 2011

ಪಿ.ಡಿ.ಓ. ಕೆ.ಎ.ಸ್ ಪರೀಕ್ಷೆಗೆ 2011 ರ ಪ್ರಚಲಿತ ಘಟನೆಗಳು

1. 11 ನೇ ಹಣಕಾಸು ಆಯೋಗ 2000 – 01 ರಿಂದ 2004 – 05 ರವರೆಗೆ
2. 11 ನೇ ಹಣಕಾಸು ಆಯೋಗವು ಗ್ರಾಮ ಪಂಚಾಯಿತಿ , ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಗಳಿಗೆ ತಲಾ ಶೇ.70:20:10 ರ ಅನುಪಾತದಲ್ಲಿ ಅನುದಾನವನ್ನು ಬಿಡುಗಡೆ ಮಾಡಲಾಗಿತ್ತು.
3. 11 ನೇ ಹಣಕಾಸು ಆಯೋಗವು ರಾಷ್ಟ್ರೀಯ ಅಂಕಿ ಶಗಳ ಪ್ರಕಾರ ಪಂಚಾಯಿತಿ ರಾಜ್ ಸಂಸ್ಥೆಗಳಿಗೆ ನಿಗದಿಪಡಿಸಿದ ಒಟ್ಟು ಮೊತ್ತ ರೂ.8000 ಕೋಟಿ .
4. 11 ನೇ ಹಣಕಾಸು ಆಯೋಗವು ಬಿಡುಗಡೆ ಮಾಡಿದ ಅನುದಾದಲ್ಲಿ ಪಂಚಾಯಿತಿ ರಾಜ್ ಸಂಸ್ಥೆಗಳು ಬಳಸಿಕೊಂಡಿರುವ ಮೊತ್ತ ರೂ.6601.85 ಕೋಟಿ
5. 12 ನೇ ಹಣಕಾಸು ಆಯೋಗದ ಅವಧಿ 2005 ರಿಂದ 2009 ರವರೆಗೆ
6. 12 ನೇ ಹಣಕಾಸು ಆಯೋಗದ ಅವಧಿಯಲ್ಲಿ ಕರ್ನಾಟಕ ಪಂಚಾಯಿತಿ ರಾಜ್ ಸಂಸ್ಥೆಗಳಿಗೆ 71040 ಲಕ್ಷ ರೂ.ಗಳನ್ನು ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ ಬಿಡುಗಡೆ ಮಾಡಲಾಗಿದೆ.
7. 13 ನೇ ಹಣಕಾಸು ಆಯೋಗದ ಅವಧಿ 2010 – 11 ರಿಂದ 2014 – 15 ರವರೆಗೆ
8. 13 ನೇ ಹಣಕಾಸು ಆಯೋಗವು 5 ವರ್ಷಗಳ ಅವಧಿಗೆ ಸ್ಥಳೀಯ ಸಂಸ್ಥೆಗಳಿಗೆ ಒಟ್ಟು 87519/- ಕೋಟಿ ರೂಗಳ ಅನುದಾನವನ್ನು ಶಿಫಾರಸ್ಸು ಮಾಡಿದೆ.
9. ಪಾಕಿಸ್ತಾನ ಕ್ರಿಕೆಟ್ ಮತ್ತೊಮ್ಮೆ ತಲೆತಗ್ಗಿಸಬೇಕಾಗಿದೆ. ಸ್ಪಾಟ್ ಫಿಕ್ಸಿಂಗ್ ಆಪಾದನೆ ಹೊತ್ತಿದ್ದ ಟೆಸ್ಟ್ ತಂಡದ ಮಾಜಿ ನಾಯಕ ಸಲ್ಮಾನ್ ಭಟ್ ಹಾಗೂ ಮಧ್ಯಮ ವೇಗದ ಬೌಲರ್ ಮೊಹಮದ್ ಆಸಿಫ್ ತಪ್ಪಿತಸ್ಥರು ಎಂಬುದು ಸಾಬೀತಾಗಿದೆ.
10. ಕರ್ನಾಟಕ ಹೈಕೋರ್ಟ್ ನ ಹಿರಿಯ ನ್ಯಾಯಮೂರ್ತಿ ಮಂಜುಳಾ ಚೆಲ್ಲೂರ್ ಕೇರಳ ಹೈಕೋರ್ಟ್ ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಗೊಂಡಿದ್ದಾರೆ. ( 01/11/2011 )
11. ಪ್ರಪಂಚದ ಜನಸಂಖ್ಯೆ 1804 ರಲ್ಲಿ 1 ಶತಕೋಟಿ ಇತ್ತು
12. ಪ್ರಪಂಚದ ಜನಸಂಖ್ಯೆ 1927 ರಲ್ಲಿ 2 ಶತಕೋಟಿ .
13. ಪ್ರಪಂಚದ ಜನಸಂಖ್ಯೆ 1959 ರಲ್ಲಿ 3 ಶತಕೋಟಿ
14. ಪ್ರಪಂಚದ ಜನಸಂಖ್ಯೆ 1974 ರಲ್ಲಿ 4 ಶತಕೋಟಿ
15. ಪ್ರಪಂಚದ ಜನಸಂಖ್ಯೆ 1987 ರಲ್ಲಿ 5 ಶತಕೋಟಿ
16. ಪ್ರಪಂಚದ ಜನಸಂಖ್ಯೆ 1999 ರಲ್ಲಿ 6 ಶತಕೋಟಿ
17. ಪ್ರಪಂಚದ ಜನಸಂಖ್ಯೆ 2011 ರಲ್ಲಿ 7 ಶತಕೋಟಿ ( ದಿನಾಂಕ/01/11/2011)
18. ಜಗತ್ತಿನ 700 ನೇ ಕೋಟು ಮಗುವಾಗಿ ಹೆಣ್ಣು ಮಗು ಜನಿಸಿದೆ.
19. ಜಗತ್ತಿನ 500 ನೇ ಕೋಟಿಯ ಮಗು ಕ್ರೋಷಿಯಾದ ಮಾಟೆಜ್ ಗಾಸ್ಟರ್
20. ಜಗತ್ತಿನ 600 ನೇ ಕೋಟಿಯ ಮಗು ಅದ್ನಾನ್ ನೆವಿಕ್ .
21. ಪ್ರಪಂಚದಲ್ಲಿ ಪ್ರತಿ ಸೆಕೆಂಡ್ ಗೆ 2 ಮಗುವಿನ ಜನನವಾಗುತ್ತದೆ.
22. ಪ್ರತಿ ನಿಮಿಷಕ್ಕೆ 51 ಶಿಶುಗಳು ಜನಿಸುತ್ತದೆ. ಅದರಲ್ಲಿ 11 ಶಿಶುಗಳು ಉತ್ತರ ಪ್ರದೇಶ ಒಂದರಲ್ಲೆ ಹುಟ್ಟುತ್ತಿವೆ.
23. ಭಾರತದಲ್ಲಿ ಸಾವಿರ ಬಾಲಕರಿಗೆ 893 ಮಂದಿ ಬಾಲಕಿಯರಿದ್ದಾರೆ.
24. 2025 ರ ವೇಳೆಗೆ ಭಾರತದ ಜನಸಂಖ್ಯೆ ಸುಮಾರು 150 ಕೋಟಿ ತಲುಪಲಿದ್ದು , ಚೀನಾವನ್ನು ಹಿಂದಿಕ್ಕುವ ನಿರೀಕ್ಷೆಯಿದೆ.
25. ಜಾಗತಿಕವಾಗಿ 15 ಲಕ್ಷ ಮಕ್ಕಳು ಪಾಲಕರಿಲ್ಲದೆ ಜೀವನ ಕಳೆಯುತ್ತಿದ್ದಾರೆ.
26. ಜಗತ್ತಿನಾದ್ಯಂತ 9.25 ಲಕ್ಷ ಜನರು ಹಸಿವೆಯಿಂದ ಒದ್ದಾಡುತ್ತಿದ್ದಾರೆ.
27. ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಸಲ್ಮಾನ್ ಭಟ್ ಗೆ 30 ತಿಂಗಳು , ಬುಕ್ಕಿ ಮಜೀದ್ ಗೆ 32 ತಿಂಗಳು, ಆಸಿಫ್ ಗೆ 12 ತಿಂಗಳು ಹಾಗೂ ಅಮೀರ್ ಗೆ 6 ತಿಂಗಳು ಶಿಕ್ಷೆಯನ್ನ ಲಂಡನ್ ನ ಸ್ಥಳಿಯ ನ್ಯಾಯಾಲಯ ಶಿಕ್ಷೆ ವಿಧಿಸಿತು.
28. ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಸಲ್ಮಾನ್ ಭಟ್ ಗೆ 30.937 , ಆಸಿಫ್ ಗೆ 8120 ಹಾಗೂ ಅಮೀರ್ ಗೆ 9,389 ಫೌಂಡ್ ಹಣವನ್ನ ನ್ಯಾಯಾಲಯದ ವೆಚ್ಚ ಭರಿಸಬೇಕೆಂದು ಆದೇಶಿಸಿದೆ.
29. ಸ್ಪಾಟ್ ಫಿಕ್ಸಿಂಗ್ ಹಗರಣದ ಕುಟುಕು ಕಾರ್ಯಾಚರಣೆ ಮಾಡಿದ ನ್ಯೂಸ್ ಆಫ್ ವರ್ಲ್ಡ್ ನೀಡಿದ್ದ 77,500 ಫೌಂಡ್ ಹಣದಲ್ಲಿ ಅಮೀರ್ ಗೆ 2,500 , ಸಲ್ಮಾನ್ ಭಟ್ ಗೆ 10,000 ಹಾಗೂ ಆಸಿಫ್ ಗೆ 65,000 ಫೌಂಡ್ ನೀಡಿದ್ದಾಗಿ ಮಜೀದ್ ಒಪ್ಪಿಕೊಂಡಿದ್ದಾನೆ,
30. ಭಾರತದ ನಕಾಶೆಯಲ್ಲಿ ಆಗಿರುವ ಬೃಹತ್ ಪ್ರಮಾದವನ್ನು ಗಮನಕ್ಕೆ ತಂದ ಪತ್ರಕರ್ತರೊಬ್ಬರನ್ನು ಷಟ್ ಅಪ್ ಎಂದು ಚೀನಾದ ರಾಯಭಾರಿ ಜಂಗ್ ಯಾನ್ ಗದರಿಸಿದವರು.
31. ಸಚಿನ್ ತೆಂಡೂಲ್ಕರ್ 182 ಪಂದ್ಯಗಳಿಂದ 15048 ರನ್ ನ್ನ 56.19 ಸರಾಸರಿಯಲ್ಲಿ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೆ ಯಾರು ಮಾಡ ದಾಖಲೆಯನ್ನ ನಿರ್ಮಿಸಿದ್ದಾರೆ.
32. ಸಚಿನ್ ತೆಂಡೂಲ್ಕರ್ ನಂತರದ ಸ್ಥಾನವನ್ನ ಭಾರತದವರೇ ಆದ ರಾಹುಲ್ ದ್ರಾವಿಡ್ 158 ಪಂದ್ಯಗಳಿಂದ 12,859 ರನ್ ಗಳಿಸಿದ್ದಾರೆ.
33. 2009 ಜೂನ್ 25 ರಂದು ಅನಿರೀಕ್ಷಿತವಾಗಿ ಮೃತಪಟ್ಟ ಸುಪ್ರಸಿದ್ಧ ಪಾಪ್ ಗಾಯಕ ಮೈಕಲ್ ಜಾಕ್ಸನ್ ಅವರನ್ನು ಅವರ ಖಾಸಗಿ ವೈದ್ಯ ಕಾನ್ರಾಡ್ ಮುರ್ರೇ ಅವರೇ ಹತ್ಯೆ ಮಾಡಿರುವುದಾಗಿ ಸ್ಥಳೀಯ ನ್ಯಾಯಾಲಯ ತೀರ್ಪು ನೀಡಿದೆ.
34. ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್ ಅವರು ವಿವಾದಾತ್ಮಕ ರಿಯಾಲಿಟಿ ಶೋ ಬಿಗ್ ಬಾಸ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
35. ಮಾಲ್ಡಿವ್ಸ್ ನ ಅಡ್ಡು ದ್ವೀಪದಲ್ಲಿ 17 ನೇ ಸಾರ್ಕ್ ಶೃಂಗ ಸಭೆ ನಡೆಯಲಿದೆ.
36. ಖ್ಯಾತ ಕ್ರೀಡಾ ಬರಹಗಾರ , ಇಂಗ್ಲೆಂಡ್ ನ ಕೌಂಟಿ ತಂಡದ ಸಾಮರ್ಸೆಟ್ ನ ಮಾಜಿ ನಾಯಕ ಪೀಟರ್ ರೋಬಕ್ ನ್ಯೂಲೆಂಡ್ಸ್ ಹೋಟೇಲ್ ನ ಆರನೇ ಅಂತಸ್ತಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
37. ಗುಜರಾತ್‌ನ ವಿವಾದಿತ ಇಶ್ರತ್ ಜಹಾನ್ ಪೊಲೀಸ್ ಎನ್‌ಕೌಂಟರ್ ಪ್ರಕರಣವನ್ನು `ನಕಲಿ~ ಎಂದು ಹೇಳಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ತನ್ನ ವರದಿಯಲ್ಲಿ ತಿಳಿಸಿದೆ.
38. ಪ್ರಕರಣದ ತನಿಖೆಗೆ ಹೈಕೋರ್ಟ್ ನೇಮಕ ಮಾಡಿದ್ದ ಆರ್.ಆರ್.ವರ್ಮ ನೇತೃತ್ವದ ಮೂವರು ಸದಸ್ಯರ ವಿಶೇಷ ತನಿಖಾ ತಂಡ ಇದೇ 18ರಂದು ಹೈಕೋರ್ಟ್‌ಗೆ ಅಂತಿಮ ವರದಿ ಸಲ್ಲಿಸಿದೆ. ಪೊಲೀಸ್ ದಾಖಲೆಗಳ ಪ್ರಕಾರ ಎನ್‌ಕೌಂಟರ್ ನಡೆದಿದೆ ಎನ್ನಲಾದ 2004, ಜೂನ್ 15ಕ್ಕಿಂತ ಮೊದಲೇ ಈ ನಾಲ್ವರನ್ನೂ ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಅದು ಸ್ಪಷ್ಟಪಡಿಸಿದೆ.
39. ಆದಾಯ ಮೂಲಕ್ಕಿಂತ ಸುಮಾರು 66ಕೋಟಿ ಮೌಲ್ಯದ ಅಕ್ರಮ ಆಸ್ತಿ ಸಂಪಾದನೆ ಆರೋಪ ಎದುರಿಸುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಎದುರಿಸುತ್ತಿದ್ದಾರೆ.
40. 20 ಕೋಟಿ ಜನಸಂಖ್ಯೆ ಹೊಂದಿರುವ ಉತ್ತರಪ್ರದೇಶ ಭಾರತದ ಅತಿ ಹೆಚ್ಚು ಜನಸಂಖ್ಯೆಯುಳ್ಳ ಹಾಗೂ 75 ಜಿಲ್ಲೆಗಳನ್ನು ಹೊಂದಿರುವ ದೊಡ್ಡ ರಾಜ್ಯ.
41. ಉತ್ತರ ಪ್ರದೇಶದಲ್ಲಿ 75 ಜಿಲ್ಲೆ 300 ತಾಲ್ಲೂಕುಗಳು ಇದೆ. 80 ಸಂಸದರು ಹಗೂ 403 ರಾಜ್ಯ ಶಾಸನ ಸಭೆ ಹೊಂದಿದೆ.
42. ಎನ್.ಸಿ.ಎಪ್ – 2005 ಕಲಿಕೆಯ ಮಟ್ಟದಲ್ಲಿ ರಾಜ್ಯದಿಂದ ರಾಜ್ಯಕ್ಕೆ ಹೆಚ್ಚಿನ ವ್ಯತ್ಯಾಸ ಇರಬಾರದು ಎಂಬ ಉದ್ದೇಶದಿಂದ ಕೇಂದ್ರದ ಅಧೀನದ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಂಸ್ಥೆ ರಾಷ್ಟ್ರೀಯ ಪಠ್ಯ ಕ್ರಮ ಮಾರ್ಗಸೂಚಿ ಪ್ರಕಟಿಸಿದೆ.
43. ರಾಷ್ಟ್ರೀಯ ಪಠ್ಯಕ್ರಮ ಮಾರ್ಗಸೂಚಿ ಅನ್ವಯ ಮುಂದಿನ ಶೈಕ್ಷಣಿಕ ವರ್ಷದಲ್ಲಿ ( 2011 – 13 ) 5 ಹಾಗೂ 8 ನೇ ತರಗತಿಯ ಪಠ್ಯಪುಸ್ತಕ ಬದಲಾವಣೆ ಮಾಡಲು ರಾಜ್ಯ ಸರ್ಕಾರದ ಸಿದ್ಧತೆ ಮಾಡಿಕೊಂಡಿದೆ.
44. ಗೋಕಾಕ್ ಜಲಪಾತದಲ್ಲಿ ಜಲವಿದ್ಯುತ್ 1887 ರ ಅಕ್ಟೋಬರ್ 5 ರಂದು ಇದು ಏಷ್ಯಾ ಖಂಡದಲ್ಲಿಯೇ ಪ್ರಥಮ ಜಲವಿದ್ಯುತ್ ತಯಾರಿಕಾ ಸ್ಥಾವರ .
45. ಮೆಮೊಗೇಟ್` ವಿವಾದಕ್ಕೆ ಕಾರಣವಾದ ಪತ್ರ ಬಯಲಾಗಲು ಮನ್ಸೂರ್ ಇಜಾಜ್ ಕಾರಣ ಎನ್ನಲಾಗಿದೆ.
46. ಅಮೆರಿಕದಲ್ಲಿ ರಾಯಭಾರಿ ಆಗಿದ್ದ ಹುಸೇನ್ ಹಖಾನಿ ಮತ್ತು ಪಾಕ್ ಮೂಲದ ಅಮೆರಿಕ ಉದ್ಯಮಿ ಮನ್ಸೂರ್ ಇಜಾಜ್ ಅವರನ್ನೂ ಪ್ರತಿವಾದಿಗಳನ್ನಾಗಿ ಹೆಸರಿಸಲಾಗಿದೆ
47. ಪಾಕಿಸ್ತಾನದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿದಿ`ಮೆಮೊಗೇಟ್`ವಿವಾದ ಅಮೆರಿಕದ ರಾಯಭಾರಿಯಾಗಿದ್ದ ಹುಸೇನ್ ಹಖಾನಿ ಅವರ ಸ್ಥಾನಕ್ಕೆ ಕುತ್ತು ತಂದದ್ದು, ಮಾಜಿ ಸಚಿವೆ ಶೆರ್ರಿ ರೆಹಮಾನ್ ಅವರನ್ನು ಆ ಸ್ಥಾನಕ್ಕೆ ನೇಮಿಸಲಾಗಿದೆ.
48. ಅಲ್ ಖೈದಾ ಪಾತಕಿ ಒಸಾಮ ಬಿನ್ ಲಾಡೆನ್ ಮೇ 2ರಂದು ಹತನಾದ ನಂತರ ರಾಷ್ಟ್ರದಲ್ಲಿ ಸಂಭಾವ್ಯ ಕ್ಷಿಪ್ರ ಸೇನಾ ಕ್ರಾಂತಿ ತಡೆಯಲು ಪಾಕಿಸ್ತಾನವು ಅಮೆರಿಕದ ನೆರವು ಕೋರಿ ಬರೆದ ಪತ್ರ ಈ ವಿವಾದ ಎಬ್ಬಿಸಿತ್ತು.ಪಾಕಿಸ್ತಾನದ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಪರವಾಗಿ ಹುಸೇನ್ ಹಖಾನಿ ಈ ಪತ್ರವನ್ನು ಬರೆದಿದ್ದರು ಎಂದು ಆರೋಪಿಸಲಾಗಿತ್ತು.
49. ಶ್ವೇತ ಭವನ ಹಖಾನಿ ಅವರನ್ನು `ವಿಶೇಷ ಆಪ್ತ ಜೊತೆಗಾರ` ಎಂದು ಬಣ್ಣಿಸಿದ್ದು, ಹಖಾನಿ ಅವರ ರಾಜೀನಾಮೆಯನ್ನು `ಪಾಕ್‌ನ ಆಂತರಿಕ ವಿಚಾರ` ಎಂದು ಹೇಳಿದೆ.
50. 2ಜಿ ತರಂಗಾಂತರ ಹಂಚಿಕೆ ಹಗರಣದ ಆಪಾದಿತರಾದ ಐವರು ಕಾರ್ಪೊರೇಟ್ ಪ್ರಮುಖರಿಗೆ ಸುಪ್ರೀಂಕೋರ್ಟ್ ಬುಧವಾರ ಜಾಮೀನು ನೀಡಿದೆ.
51. ಯುನಿಟೆಕ್‌ನ ಸಂಜಯ್ ಚಂದ್ರ, ಸ್ವಾನ್ ಟೆಲಿಕಾಂನ ನಿರ್ದೇಶಕ ವಿನೋದ್ ಗೋಯಂಕಾ, ರಿಲಯನ್ಸ್ ಅನಿಲ್ ಧೀರೂಭಾಯಿ ಅಂಬಾನಿ ಸಮೂಹದ ಕಾರ್ಯನಿರ್ವಾಹಕರಾದ ಹರಿ ನಾಯರ್, ಗೌತಮ್ ದೋಶಿ ಮತ್ತು ಸುರೇಂದ್ರ ಪಿಪಾರಾ ಅವರ ಬಿಡುಗಡೆಗೆ ನ್ಯಾಯಮೂರ್ತಿ ಜಿ.ಎಸ್.ಸಿಂಘ್ವಿ ಮತ್ತು ಎಚ್.ಎಲ್.ದತ್ತು ಅವರನ್ನು ಒಳಗೊಂಡ ನ್ಯಾಯಪೀಠ ಆದೇಶಿಸಿದೆ.
52. ವಿಶ್ವಸಂಸ್ಥೆಯ ಜಂಟಿ ಮೇಲುಸ್ತುವಾರಿ ಘಟಕದ (ಜೆಐಯು) ಏಷ್ಯಾ-ಪೆಸಿಫಿಕ್ ವಲಯದ ಸದಸ್ಯತ್ವಕ್ಕೆ ನಡೆದ ನೇರ ಚುನಾವಣೆಯಲ್ಲಿ ಭಾರತವು ಚೀನಾ ವಿರುದ್ಧ ಮಹತ್ವದ ಜಯ ಸಾಧಿಸಿದೆ.
53. ಟೆಸ್ಟ್ ನಲ್ಲಿನ ಉತ್ತಮ ಪ್ರದರ್ಶನಕ್ಕಾಗಿ (1ನೇ ಅಕ್ಟೋಬರ್ 2010ರಿಂದ 30ನೇ ಸೆಪ್ಟೆಂಬರ್ 2011ರ ಅವಧಿ) ರಾಹುಲ್ ದ್ರಾವಿಡ್ ಅವರನ್ನು ಪಾಲಿ ಉಮ್ರಿಗರ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
54. ಜಿನೀವಾದಲ್ಲಿರುವ ವಿಶ್ವಸಂಸ್ಥೆ ಕಚೇರಿಗಳಿಗೆ ಭಾರತದ ಕಾಯಂ ಪ್ರತಿನಿಧಿಯಾಗಿರುವ ಎ.ಗೋಪಿನಾಥನ್, ನವದೆಹಲಿಯಲ್ಲಿ ಚೀನಾದ ರಾಯಭಾರಿಯಾಗಿರುವ ಝಾಂಗ್ ಯಾನ್ ಅವರನ್ನು ಸೋಲಿಸಿ ಈ ಪ್ರತಿಷ್ಠಿತ ಘಟಕಕ್ಕೆ ಆಯ್ಕೆಯಾಗಿದ್ದಾರೆ.
55. 35 ವರ್ಷಗಳ ಬಳಿಕ ವಿಶ್ವಸಂಸ್ಥೆಯ ಪ್ರಬಲ ಬಾಹ್ಯ ಸಂಸ್ಥೆಯೊಂದರಲ್ಲಿ ಭಾರತ ಸ್ಥಾನ ಪಡೆದಿದೆ. ಒಟ್ಟು 183 ಮತಗಳಲ್ಲಿ ಗೋಪಿನಾಥ್ ಪರ 106 ಮತಗಳು ಚಲಾವಣೆಗೊಂಡರೆ ಯಾನ್ ಪರ 77 ಮತಗಳು ಬಿದ್ದವು.
56. ಈ ಮುನ್ನ 1968ರಿಂದ 77ರ ವರೆಗೆ ಭಾರತವು ಈ ಘಟಕದಲ್ಲಿ ಕಾರ್ಯನಿರ್ವಹಿಸಿತ್ತು.
57. ಜೆಐಯು ಆಡಳಿತ ಅವಧಿಯು ಐದು ವರ್ಷಗಳಾಗಿದ್ದು, 2013ರ ಜನವರಿ 1ರಿಂದ ಜಾರಿಗೆ ಬರುತ್ತದೆ.
58. ಜೆಐಯು ವಿಶ್ವಸಂಸ್ಥೆಯ ಸ್ವಾಯತ್ತ ಬಾಹ್ಯ ಮೇಲ್ವಿಚಾರಣಾ ಸಂಸ್ಥೆಯಾಗಿದ್ದು, ವಿವಿಧ ಯೋಜನೆಗಳ ಮೌಲ್ಯಮಾಪನ, ಪರಿಶೀಲನೆ ಮತ್ತು ತನಿಖೆ ನಡೆಸುವ ಅಧಿಕಾರ ಹೊಂದಿದೆ. 11 ಪರೀಕ್ಷಕರು ಈ ಘಟಕದಲ್ಲಿ ಇರುತ್ತಾರೆ.
59. ವಿಶ್ವಸಂಸ್ಥೆಯಲ್ಲಿ ಚೀನಾದೊಂದಿಗೆ ನಡೆದ ನೇರ ಚುನಾವಣೆಯಲ್ಲಿ ಭಾರತ ಗೆಲುವು ಪಡೆದದ್ದು ಇದೇ ಮೊದಲಾಗಿರುವುದು ಮತ್ತೊಂದು ವಿಶೇಷ.
60. ಜೆಐಯುಗೆ ಆಯ್ಕೆಯಾದ ದೇಶಗಳ ಅಧಿಕಾರ ಅವಧಿ ಐದು ವರ್ಷಗಳಾದರೂ, ಸಾಮಾನ್ಯವಾಗಿ ಮತ್ತೆ ಐದು ವರ್ಷಗಳ ಕಾಲಕ್ಕೆ ಅದನ್ನು ಮುಂದುವರಿಸುವ ಸಂಪ್ರದಾಯವಿದೆ. ಚೀನಾವು 2002ರಿಂದ ಅಧಿಕಾರದಲ್ಲಿದ್ದು ಅದರ ಅವಧಿ 2012 ಡಿಸೆಂಬರ್‌ಗೆ ಕೊನೆಗೊಳ್ಳುತ್ತದೆ.
61. ಇತ್ತೀಚೆಗಷ್ಟೆ ಯಾನ್ ವಿವಾದದಲ್ಲಿ ಸಿಲುಕಿಕೊಂಡಿದ್ದರು. ಚೀನಾ ಸರ್ಕಾರಿ ಸ್ವಾಮ್ಯದ ಸಂಸ್ಥೆಯೊಂದು ಹಂಚಿರುವ ಭೂಪಟದಲ್ಲಿ ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಅರುಣಾಚಲ ಪ್ರದೇಶವನ್ನು ಭಾರತದ ಭೌಗೋಳಿಕಾ ವ್ಯಾಪ್ತಿಯಲ್ಲಿ ತೋರಿಸದೇ ಇರುವುದರ ಬಗ್ಗೆ ಕೇಳಿದ ಪ್ರಶ್ನೆಗೆ, ಝಾಂಗ್ ಯಾನ್ ಪತ್ರಕರ್ತರೊಬ್ಬರಿಗೆ `ಬಾಯ್ಮುಚ್ಚು` ಎಂದು ಬೆದರಿಸಿದ್ದರು.
62. ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಗೋಪಿನಾಥನ್, 2002ರ ಜನವರಿಯಿಂದ 2005ರ ಸೆಪ್ಟೆಂಬರ್‌ವರೆಗೆ ನ್ಯೂಯಾರ್ಕ್‌ನಲ್ಲಿ ಭಾರತದ ಸಹಾಯಕ ಕಾಯಂ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಿದ್ದರು. ಆಗಸ್ಟ್ 1997- ಡಿಸೆಂಬರ್ 2001ರ ಅವಧಿಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿಯಾಗಿಯೂ ಅವರು ಕಾರ್ಯ ನಿರ್ವಹಿಸ್ದ್ದಿದರು.
63. ರತನ್ ಟಾಟಾ ಉತ್ತರಾಧಿಕಾರಿ ಯಾರು ಎನ್ನುವ ಪ್ರಶ್ನೆಗೆ ಕೊನೆಗೂ ಉತ್ತರ ದೊರಕಿದೆ. 80 ಶತಕೋಟಿ ಡಾಲರ್ ಮೌಲ್ಯದ ಟಾಟಾ ಸಮೂಹಕ್ಕೆ ನೂತನ ಉಪಾಧ್ಯಕ್ಷರಾಗಿ 43 ವರ್ಷದ ಸೈರಸ್ ಪಿ. ಮಿಸ್ತ್ರಿ ಅವರನ್ನು ಟಾಟಾ ನಿರ್ದೇಶಕ ಮಂಡಳಿ ಸರ್ವಾನುಮತದಿಂದ ನೇಮಕ ಮಾಡಿದೆ.
64. ಶಪೂರ್ಜಿ ಪಲ್ಲೊಂಜಿ ಸಮೂಹದ ವ್ಯವಸ್ಥಾಪಕ ನಿರ್ದೇಶಕರಾಗಿರುವ ಸೈರಸ್ ಅವರನ್ನು ಟಾಟಾ ಸನ್ಸ್ ನಿರ್ದೇಶಕ ಮಂಡಳಿಯ ನೂತನ ಉತ್ತರಾಧಿಕಾರಿ ಎಂದು ಬುಧವಾರ ಅಧಿಕೃತವಾಗಿ ಘೋಷಿಸಿದೆ. ಶಪೂರ್ಜಿ ಪಲ್ಲೊಂಜಿ ಸಂಸ್ಥೆ ಟಾಟಾ ಸನ್ಸ್‌ನಲ್ಲಿ ಶೇ 18ರಷ್ಟು ಪಾಲು ಹೊಂದಿದೆ.
65. ಸೈರಸ್, ರತನ್ ಟಾಟಾ ಅವರೊಂದಿಗೆ ಮುಂದಿನ ಒಂದು ವರ್ಷಗಳ ಕಾಲ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ. 2012ರ ಡಿಸೆಂಬರ್ ತಿಂಗಳಲ್ಲಿ ಟಾಟಾ ನಿವೃತ್ತರಾಗುತ್ತಿದ್ದಂತೆ, ಇವರು ಉತ್ತರಾಧಿಕಾರಿ ಹುದ್ದೆ ಅಲಂಕರಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
66. ತನ್ನ ವಶದಲ್ಲಿರುವ ಪ್ಯಾಲೆಸ್ಟೈನ್ ಪ್ರದೇಶದಲ್ಲಿ ಸಂಗ್ರಹಿಸಿರುವ ತೆರಿಗೆ ಹಣವನ್ನು ಪ್ಯಾಲೆಸ್ಟೈನ್ ಆಡಳಿತಕ್ಕೆ ಒಪ್ಪಿಸುವಂತೆ ಇಸ್ರೇಲ್‌ಗೆ ಸಲಹೆ ನೀಡಿರುವ ವಿಶ್ವಸಂಸ್ಥೆ, ಆಕ್ರಮಿತ ಪ್ಯಾಲೆಸ್ಟೈನ್‌ನಲ್ಲಿ ವಸಾಹತೀಕರಣ ಚಟುವಟಿಕೆ ನಿಲ್ಲಿಸುವಂತೆಯೂ ಸೂಚಿಸಿದೆ.
67. ಪ್ಯಾಲೆಸ್ಟೈನ್ ಆಡಳಿತದ ಪರ ಇಸ್ರೇಲ್ ತೆರಿಗೆ ಸಂಗ್ರಹಿಸುತ್ತಿದ್ದು, ಇದು ನ್ಯಾಯಬದ್ಧವಾಗಿ ಪ್ಯಾಲೆಸ್ಟೈನ್ ಆಡಳಿತಕ್ಕೆ ಸಲ್ಲಬೇಕಿದೆ ಎಂದು ವಿಶ್ವಸಂಸ್ಥೆ ಮಹಾಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಹು ಅವರನ್ನು ಕೋರಿದ್ದಾರೆ.
68. ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಅವರ ಕೆನ್ನೆಗೆ ಬಾರಿಸಿದ ಘಟನೆ ಭ್ರಷ್ಟಾಚಾರ ಮತ್ತು ದಿನೇ ದಿನೇ ಏರುತ್ತಿರುವ ಬೆಲೆ ಏರಿಕೆಯಿಂದ ಕೋಪಗೊಂಡು ತಾನು ಈ ಕೃತ್ಯ ಎಸಗಿದ್ದಾಗಿ ಹಲ್ಲೆ ನಡೆಸಿದ ಹರ್ವಿಂದರ್ ಸಿಂಗ್ ಹೇಳಿದ್ದಾನೆ.
69. `ಕರ್ನಾಟಕದ ಗಡಿ ಭಾಗದಲ್ಲಿರುವ ಮರಾಠಿಗರು ಹುಟ್ಟಿದ್ದೇ ವ್ಯವಸ್ಥೆಯನ್ನು ಹಾಳು ಮಾಡಲು ಮತ್ತು ಅವರಿಗೆ ಮರಾಠಿ ಮಾಧ್ಯಮದಲ್ಲಿ ಶಿಕ್ಷಣ ಬೇಕಾದರೆ ಮಹಾರಾಷ್ಟ್ರಕ್ಕೆ ಹೋಗಲಿ` ಎಂಬ ಕಂಬಾರರ ಹೇಳಿಕೆ.
70. ಅಪರಿಚಿತ ಭಕ್ತರೊಬ್ಬರು ತಿರುಪತಿ ತಿಮ್ಮಪ್ಪನ ಹುಂಡಿಗೆ 168 ವಜ್ರದ ಹರಳುಗಳನ್ನು ಅರ್ಪಿಸಿದ್ದಾರೆ ಎಂದು ತಿರುಮಲ ತಿರುಪತಿ ದೇವಸ್ಥಾನ ಸಮಿತಿಯ (ಟಿಟಿಡಿ) ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
71. ವಜ್ರಗಳ ಬೆಲೆಯ ಮೌಲ್ಯಮಾಪನಕ್ಕಾಗಿ ಅವುಗಳನ್ನು ತಿರುಪತಿಯಲ್ಲಿರುವ ಟಿಟಿಡಿ ಖಜಾನೆಯ ಆಭರಣ ವಿಭಾಗಕ್ಕೆ ಕಳುಹಿಸಲಾಗಿದೆ. ಅವುಗಳ ಬೆಲೆ ಸುಮಾರು 1.5 ಕೋಟಿ ರೂಪಾಯಿ ಇರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
72. ರಾಹುಲ್ ಈ ಹಂತವನ್ನು ಮುಟ್ಟುವ ಹಾದಿಯಲ್ಲಿ 36 ಶತಕ ಹಾಗೂ 62 ಅರ್ಧ ಶತಕ ಗಳಿಸಿದ್ದಾರೆ. ಅವರ ಬ್ಯಾಟ್‌ನಿಂದ ಇಲ್ಲಿಯವರೆಗೆ 53.31ರ ಸರಾಸರಿಯಲ್ಲಿ 13,061 ರನ್‌ಗಳು ಹರಿದು ಬಂದಿವೆ.
73. ಆಸ್ಟ್ರೇಲಿಯಾ ವಿರುದ್ಧವೇ ಹೆಚ್ಚು ರನ್ (1972) ಗಳಿಸಿದ್ದು. ವಿಂಡೀಸ್ ಎದುರು ಟೆಸ್ಟ್‌ನಲ್ಲಿ ಗಳಿಸಿದ ಒಟ್ಟು ರನ್ 1945.
74. ವರ್ಷದುದ್ದಕ್ಕೂ `ವಾಲ್` ಆಗಿ ನಿಂತು ಭಾರತ ತಂಡವನ್ನು ಕಾಪಾಡಿದ ದ್ರಾವಿಡ್‌ಗೆ 2011ರಲ್ಲಿ ಟೆಸ್ಟ್ ಕ್ರಿಕೆಟ್‌ನ ಸಾವಿರ ರನ್‌ಗಳ ಶ್ರೇಯ.
75. ಈ ವರ್ಷ ಆಡಿದ 11ಟೆಸ್ಟ್‌ಗಳ 20 ಇನಿಂಗ್ಸ್‌ಗಳಲ್ಲಿ ಒಟ್ಟು 1034 ರನ್ ಗಳಿಸಿದ್ದಾರೆ.( ದ್ರಾವಿಡ್ ).
76. ಈಜಿಪ್ತ್ ಕಮಲ್ ಗಂಜೌರಿ ನೂತನ ಪ್ರಧಾನಿಯನ್ನಾಗಿ ಆಯ್ಕೆ ಮಾಡಲಾಗಿದೆ.
77. ಬಾಲಿವುಡ್ ತಾರೆ ಕರೀನಾ ಕಪೂರ್ ಅವರು ಏಷ್ಯಾದ ಅತಿ ಸೆಕ್ಸಿ ಚೆಲುವೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
78. ಪದಚ್ಯುತ ಕೋಲ್ಕೋತಾ ಹೈಕೋರ್ಟ್ ನ್ಯಾ.ಸೌಮಿತ್ರ ಸೇನ್ ವಿರುದ್ಧದ ಮಹಾಭಿಯೋಗ ಪ್ರಕ್ರಿಯೆಯನ್ನು ಅಸಂವಿಧಾನಿಕ ಎಂದು ಘೋಷಿ,ಲು ಸುಪ್ರೀಂಕೋರ್ಟ್ ನಿರಾಕರಿಸಿದೆ.
79. 2011ರಲ್ಲಿ ಈ ಅನುಪಾತವು 1000: 940ಕ್ಕೆ ಬಂದಿದೆ. ಅಂದರೆ ವ್ಯತ್ಯಾಸವು ಸಾವಿರಕ್ಕೆ 60.
80. ಉತ್ತರ ಪ್ರದೇಶ ಅತ್ಯಂತ ಹೆಚ್ಚು ಜನಸಾಂದ್ರತೆಯುಳ್ಳ ರಾಜ್ಯವಾಗಿದ್ದು, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದ ಜನಸಂಖ್ಯೆಗಳನ್ನು ಸೇರಿಸಿದರೆ (31 ಕೋಟಿ),
81. ಜನಗಣತಿಯಲ್ಲಿ ಹೊರಬಿದ್ದ ಅಂಕಿ ಅಂಶಗಳಿಗೆ ಹೋಲಿಸಿದರೆ, 2001ರಲ್ಲಿ ಶೇ. 21.15ರಷ್ಟಿದ್ದ ಜನಸಂಖ್ಯಾ ವೃದ್ಧಿ ದರವು 2011ರ ಜನಗಣತಿ ಪ್ರಕಾರ ಶೇ.17.64ಕ್ಕೆ ಕುಸಿದಿದೆ.
82. ಭಾರತದ ಜನಸಂಖ್ಯೆ 121.02 ಕೋಟಿ. ಪುರುಷರು 62.37 ಕೋಟಿ ಹಾಗೂ ಮಹಿಳೆಯರು 58.65 ಕೋಟಿ.
83. ಒಟ್ಟಾರೆಯಾಗಿ, ಪುರುಷರ ಜನಸಂಖ್ಯೆಯಲ್ಲಿ ಶೇ.17 ಹಾಗೂ ಮಹಿಳೆಯರ ಜನಸಂಖ್ಯೆಯಲ್ಲಿ ಶೇ.18ರಷ್ಟು ವೃದ್ಧಿಯಾಗಿದೆ.
84. 10 ವರ್ಷಗಳಲ್ಲಿ ಭಾರತದಲ್ಲಿ ಹೆಚ್ಚಳವಾದ ಜನಸಂಖ್ಯೆ 18 ಕೋಟಿ. ಅಂದರೆ ಇದು ಬ್ರೆಜಿಲ್‌ನ ಜನಸಂಖ್ಯೆಗೆ ಸಮ.
85. ಜನಸಾಂದ್ರತೆಯು ಕೂಡ ಹೆಚ್ಚಾಗಿದೆ. ಅತೀ ಹೆಚ್ಚು ಜನಸಾಂದ್ರತೆಯಿರುವುದು ದೆಹಲಿಯ ಈಶಾನ್ಯ ಜಿಲ್ಲೆಯಲ್ಲಿ (ಚದರ ಕಿಲೋಮೀಟರಿಗೆ 37,346 ಮಂದಿ), ಅತಿ ಕನಿಷ್ಠ ಜನಸಾಂದ್ರತೆ ಇರುವುದು ಅರುಣಾಚಲ ಪ್ರದೇಶದ ದಿಬಾಂಗ್ ಕಣಿವೆ ಜಿಲ್ಲೆಯಲ್ಲಿ - ಚದರ ಕಿಲೋಮೀಟರಿಗೆ 1 ಮಾತ್ರ!.
86. ಭಾರತದ ಜನಗಣತಿ 2011ನ್ನು 2 ಹಂತ ಗಳಲ್ಲಿ ಕೈಗೊಳ್ಳಲಾಗುವುದು. ಮೊದಲನೆ ಹಂತದಲ್ಲಿ ಮನೆಗಳ ಪಟ್ಟಿ ಮಾಡುವುದು ಮತ್ತು ಮನೆಗಣತಿ. ಎರಡನೆ ಹಂತ ಜನಗಣತಿ.
87. ಕರ್ನಾಟಕ ರಾಜ್ಯದಲ್ಲಿ ಮೊದಲ ಹಂತದ ಜನಗಣತಿ ಕಾರ್ಯವನ್ನು 2010 ಎಪ್ರಿಲ್ 15ರಿಂದ ಜೂನ್ 1ರವರೆಗೆ ನಡೆಸಲಾಗುತ್ತದೆ. 2ನೆ ಹಂತದ ಜನಗಣತಿ ಕೆಲಸ 2011 ಫೆಬ್ರವರಿ ಮಾರ್ಚ್ ತಿಂಗಳಲ್ಲಿ ಜರಗಲಿದೆ.
88. ಕರ್ನಾಟಕ ರಾಜ್ಯದಲ್ಲಿ, ಜನಗಣತಿ ನಿರ್ದೇಶನಾಲಯ ಬೆಂಗಳೂರು ಇವರ ಮಾರ್ಗದರ್ಶನದಲ್ಲಿ ಜನಗಣತಿ ಕಾರ್ಯ ನಡೆಯಲಿದೆ.
89. ಆಯಾಯ ಜಿಲ್ಲೆಯ ಜಿಲ್ಲಾಧಿಕಾರಿಯವರು ಪ್ರಿನ್ಸಿಪಲ್ ಸೆನ್ಸಸ್ ಆಫೀಸರ್ಸ್‌ ಆಗಿ ಕರ್ತವ್ಯ ನಿರ್ವಹಿಸುತ್ತಾರೆ. ಅಲ್ಲದೆ ರಾಜ್ಯದ ಮಹಾನಗರ ಪಾಲಿಕೆ ವ್ಯಾಪ್ತಿಗಳಲ್ಲಿ ಆಯಾಯ ನಗರ ಪಾಲಿಕೆಯ ಕಮೀಶನರ್‌ಗಳು ಪ್ರಿನ್ಸಿಪಲ್ ಸೆನ್ಸಸ್ ಆಫೀಸರ್ ಆಗಿ ಕರ್ತವ್ಯ ನಿರ್ವಹಿಸುತ್ತಾರೆ.
90. ಮನೆ ಮನೆ ಭೇಟಿ ನೀಡಿ ಮನೆ ಪಟ್ಟಿ ತಯಾರಿಸಲು ಸುಮಾರು 600 ರಿಂದ 700 ಜನಸಂಖ್ಯೆ ವ್ಯಾಪ್ತಿಗೆ ಒಬ್ಬರು ಗಣತಿದಾರರಂತೆ, 6 ಗಣತಿದಾರರಿಗೆ ಒಬ್ಬರು ಮೇಲ್ವಿಚಾರಕರಂತೆ ನೇಮಕ ಮಾಡಲಾಗಿದೆ.
91. ಲಿಬಿಯಾದ ಮಧ್ಯಂತರ ಸರಕಾರದ ಸೇನೆ ಅಕ್ಟೋಬರ್‌ 20ರಂದು ಮುಅಮ್ಮರ್‌ ಗಡಾಫಿ, ಮೋಟಾಸಿಂ ಗಡಾಫಿ ಅವರನ್ನು ಜೀವಂತವಾಗಿ ಸೆರೆ ಹಿಡಿದು ಹತ್ಯೆ ಮಾಡಿತ್ತು.

ಶನಿವಾರ, ಅಕ್ಟೋಬರ್ 22, 2011

ಭಾರತದ ಸಂವಿಧಾನ

1. 1857 ರಲ್ಲಿ ಸಿಪಾಯಿ ದಂಗೆ ನಡೆಯಿತು.
2. 1857 ರಲ್ಲಿ ಬ್ರಿಟಿಷ್ ಸರ್ಕಾರದ ನೇರ ಆಡಳಿತ .
3. 1861 ರಲ್ಲಿ ಇಂಡಿಯನ್ ಕೌನ್ಸಿಲ್ ಆಕ್ಟ್ ಕಾಯಿದೆ ಜಾರಿ .
4. 1885 ರಲ್ಲಿ ಕಾಂಗ್ರೆಸ್ ಸ್ಥಾಪನೆ .
5. 1906 ರಲ್ಲಿ ಮುಸ್ಲಿಂ ಲೀಗ್ ಸ್ಥಾಪನೆ .
6. 1909 ರಲ್ಲಿ ಇಂಡಿಯನ್ ಕೌನ್ಸಿಲ್ ಆಕ್ಟ್ ಜಾರಿ
7. 1915 ರಲ್ಲಿ ಭಾರತ ಸರ್ಕಾರ ಕಾಯಿದೆ ಜಾರಿ .
8. 1930 ರಲ್ಲಿ ಸೈಮನ್ ಆಯೋಗ ಭಾರತಕ್ಕೆ .
9. 1935 ರಲ್ಲಿ ಭಾರತ ಸರ್ಕಾರದ ಕಾಯಿದೆ ಜಾರಿ
10. 1942 ರಲ್ಲಿ ಕ್ರಿಪ್ಸ್ ಆಯೋಗ ಭಾರತಕ್ಕೆ
11. 1946 ರಲ್ಲಿ ಕ್ಯಾಬಿನೆಟ್ ಮಿಷನ್
12. 1946 ಜುಲೈ ಸಂವಿಧಾನ ಸಭೆಗೆ ಚುನಾವಣಿ
13. 1946 ಡಿಸೆಂಬರ್ 9 ಸಂವಿಧಾನ ಸಭೆಯ ಪ್ರಥಮ ಸಭೆ .
14. 1946 ಡಿಸೆಂಬರ್ 11 ಡಾ.ಬಾಬು ರಾಜೇಂದ್ರ ಪ್ರಸಾದ್ ಸಂವಿಧಾನ ಸಭೆಯ ಖಾಯಂ ಅಧ್ಯಕ್ಷರಾಗಿ ಆಯ್ಕೆ .
15. 1947 ಆಗಸ್ಟ್ 29 ಕರಡು ಸಮಿತಿ ( ಡ್ರಾಫ್ಟ್ ಕಮಿಟಿ ) ರಚನೆ.
16. 1948 ರಲ್ಲಿ ಕರಡು ಸಂವಿಧಾನ ಸಿದ್ಧ
17. 1949 ನವೆಂಬರ್ 26 ಸಂವಿಧಾನದ ಅಂಗೀಕಾರ
18. 1950 ಜನವರಿ 26 ಸಂವಿಧಾನ ಜಾರಿ .
19. ಮೂಲಭೂತ ಹಕ್ಕು , ಸ್ವತಂತ್ರ ನ್ಯಾಯಾಂಗ ಹಾಗೂ ನ್ಯಾಯಾಂಗೀಯ ಪರಿವಿಕ್ಷಣೆ ಇವುಗಳನ್ನು ಅಮೆರಿಕಾದ ಸಂವಿಧಾನದಿಂದ ಎತ್ತಿಕೊಳ್ಳಲಾಗಿದೆ.
20. ಕೇಂದ್ರ ಹಾಗೂ ರಾಜ್ಯಗಳ ವಿಷಯ ಪಟ್ಟಿಯನ್ನು ಹೊರತುಪಡಿಸಿ ಉಳಿದ ಅಧಿಕಾರ ಹಾಗೂ ವಿಷಯಗಳನ್ನೆಲ್ಲ ಕೇಂದ್ರ ಸರ್ಕಾರಕ್ಕೆ ಕೊಡುವ ನಿರ್ಧಾರವನ್ನು ಕೆನಾಡ ಸಂವಿಧಾನದಿಂದ ಎತ್ತಿಕೊಳ್ಳಲಾಯಿತು.
21. ರಾಜ್ಯ ನೀತಿ ನಿರ್ದೇಶಕ ತತ್ವ ಹಾಗೂ ರಾಜ್ಯಸಭೆಗೆ ಸದಸ್ಯರುಗಳನ್ನ ನೇಮಕ ಮಾಡುವ ಪದ್ಧತಿಯನ್ನು ಐರಿಷ್ ಸಂವಿಧಾನದಿಂದ ಪಡೆಯಲಾಗಿದೆ.
22. ರಾಜ್ಯಸಭೆಯ ಸದಸ್ಯರುಗಳ ಚುನಾವಣಾ ವಿಧಾನ ಹಾಗೂ ಪದ್ಧತಿ ಹಾಗೂ ಭಾರತೀಯ ಸಂವಿಧಾನವನ್ನು ತಿದ್ದುಪಡಿ ಮಾಡಲು ಹಾಗೂ ಭಾರತೀಯ ಸಂವಿಧಾನ ತಿದ್ದುಪಡಿ ಮಾಡಲು ಅನುಸರಿಸುವ ವಿಧಾನಗಳು ಮುಖ್ಯವಾಗಿ ದಕ್ಷಿಣ ಆಫ್ರಿಕಾದ ಸಂವಿಧಾನದಿಂದ ಪಡೆಯಿಲಾಗಿದೆ.
23. ದೇಶದ ತುರ್ತು ಪರಿಸ್ಥಿತಿಯ ಸಮಯದಲ್ಲಿ ದೇಶದ ಸಮಸ್ತ ನಾಗರಿಕರಿಗೆ ಸಂವಿಧಾನವು ಕೊಡಮಾಡಿದ ಮೂಲಭೂತ ಹಕ್ಕು ರಾಷ್ಟ್ರಪತಿ ಹಿಂತೆಗೆದುಕೊಳ್ಳುವ ಪದ್ಧತಿಯನ್ನು ಜರ್ಮನಿಯ ಸಂವಿಧಾನದಿಂದ ಎತ್ತಿಕೊಳ್ಳಲಾಗಿದೆ.
24. ಭಾರತದ ಸಂವಿಧಾನವು ನಮ್ಯ ಮತ್ತು ಅನಮ್ಯತೆಗಳ ಲಕ್ಷಣವನ್ನೊಳಗೊಂಡಿದೆ.
25. ನಮ್ಯ ಎಂದರೆ ಸಂವಿಧಾನವನ್ನ ಸರಳ ವಿಧಾನಗಳ ಮೂಲಕ ತಿದ್ದುಪಡಿ ಮಾಡಲು ಸಾಧ್ಯವಿರುವುದನ್ನ ನಮ್ಯ ಎಂದು ಕರೆಯುವರು
26. ಅನಮ್ಯ ಎಂದರೆ ಸಂವಿಧಾನದಲ್ಲಿನ ಕೆಲವು ಭಾಗಗಳನ್ನ ತಿದ್ದುಪಡಿ ಮಾಡಲು ಸರಳ ವಿಧಾನದಲ್ಲಿ ಆಗದಿರುವುದಾಗಿದೆ.
27. ಭಾರತದ ಸಂವಿಧಾನದಲ್ಲಿ 3 ನೇ ಭಾಗದಲ್ಲಿ ಮೂಲಭೂತ ಹಕ್ಕುಗಳ ಬಗ್ಗೆ ವಿವರಣೆಯಿದೆ.
28. ಸಂವಿಧಾನದ 12 ರಿಂದ 35 ನೇ ವಿಧಿಗಳವರೆಗೆ ಮೂಲಭೂತ ಹಕ್ಕುಗಳ ಬಗ್ಗೆ ವಿವರಣೆ ನೀಡಲಾಗಿದೆ.
29. ಸಂವಿಧಾನದ 14 ರಿಂದ 18 ನೇ ವಿಧಿಯವರೆಗೆ ಸಮಾನತೆಯ ಹಕ್ಕು ಇದರ ಬಗ್ಗೆ ವಿವರಣೆಯಿದೆ.
30. ಸಂವಿಧಾನದ 14 ಮತ್ತು 15 ನೇ ವಿಧಿ ಕಾನೂನಿನ ಮುಂದೆ ಸಮಾನತೆ ಮತ್ತು ಕಾನೂನಿ ಸಮಾನ ರಕ್ಷಣೆ ಬಗ್ಗೆ ವಿವರಣೆಯಿದೆ.
31. ಸಂವಿಧಾನದ 16 ನೇ ವಿಧಿ ಸಾರ್ವಜನಿ ಸೇವೆಗಳಲ್ಲಿ ಸಮಾನ ಅವಕಾಶ ಇದರ ಬಗ್ಗೆ ವಿವರಣೆಯಿದೆ.
32. ಸಂವಿಧಾನದ 17 ನೇ ವಿಧಿ ಅಸ್ಪೃಶ್ಯತೆಯ ನಿಷೇದದ ಬಗ್ಗೆ ವಿವರಣೆಯಿದೆ.
33. 18 ನೇ ವಿಧಿಯಲ್ಲಿ ಮಿಲಿಟರಿ ಹಾಗೂ ಶೈಕ್ಷಣಿಕ ಬಿರುದುಗಳನ್ನು ಹೊರತುಪಡಿಸಿ ಉಳಿದೆಲ್ಲ ಬಿರುದುಗಳನ್ನು ನಿಷೇಧಿಸಲಾಗಿದೆ ಎಂಬ ಬಗ್ಗೆ
34. ಸಂವಿಧಾನದ 19 ರಿಂದ 22 ನೇ ವಿಧಿಯು ಸ್ವಾತಂತ್ರ್ಯದ ಹಕ್ಕಿನ ಬಗ್ಗೆ ವಿವರಣೆ ನೀಡುತ್ತದೆ.
35. ಸಂವಿಧಆನದ 23 ಮತ್ತು 24 ನೇ ವಿಧಿಯು ಶೋಷಣೆಯ ವಿರುದ್ಧದ ಹಕ್ಕಿನ ಬಗ್ಗೆ ವಿವರಣೆ ನೀಡುತ್ತದೆ.
36. ಸಂವಿಧಾನನದ 23 ನೇ ವಿಧಿಯು ಹೆಣ್ಣುಮಕ್ಕಳನ್ನು ಕೊಂಡುಕೊಳ್ಳುವುದು , ಮಾರುವುದು ಮತ್ತು ಅನೈತಿಕ ವ್ಯವಹಾರಗಳಿಗೆ ತೊಡಗಿಸುವುದು ಹಾಗೇಯೆ ವೇಶ್ಯಾವಾಟಿಕೆಯನ್ನು ನಿಷೇಧದ ಬಗ್ಗೆ ವಿವರಣೆಯಿದೆ.
37. ಸಂವಿಧಾನದ 24 ನೇ ವಿಧಿಯ ಪ್ರಕಾರ 14 ವರ್ಷದೊಳಗಿನ ಮಕ್ಕಳನ್ನು ಜೀತ ಅಥವಾ ಇತರೇ ಅಪಾಯಕಾರಿ ಕೆಲಸಗಳಿಗೆ ತೆಗೆದುಕೊಳ್ಳುವುದನ್ನು ನಿಷೇಧಿಸಿದೆ.
38. ಸಂವಿಧಾನದ 25 ರಿಂದ 28 ನೇ ವಿಧಿಯು ಧಆರ್ಮಿಕ ಸ್ವಾತಂತ್ಯದ ಬಗ್ಗೆ ವಿವರಣೆಯನ್ನು ನೀಡುತ್ತದೆ.
39. ಸಂವಿಧಾನದ 25 ನೇ ವಿಧಿಯು ಯಾವುದೇ ಧರ್ಮವನ್ನು ಸ್ವೀಕರಿಸುವ , ಆಚರಿಸುವ ಮತ್ತು ಪ್ರಚಾರ ಮಾಡುವ ಹಕ್ಕಿನ ಬಗ್ಗೆ ವಿವರಣೆಯಿದೆ
40. ಸಂವಿಧಾನದ 26 ನೇ ವಿಧಿಯು ಧಾರ್ಮಿಕ ಸಂಘ ಸಂಸ್ಥೆಗಳನ್ನು ಸ್ಥಾಪಿಸಿಕೊಳ್ಳುವ ಮತ್ತು ಇಂತಹ ಸಂಘ ಸಂಸ್ಥೆಗಳು ತಮ್ಮದೇ ಆದ ಮೂಲಗಳನ್ನು ಹೊಂದಿ ಆಡಳಿತ ನಡೆಸಲು ಅವಕಾಶವಿದೆ ಎಂಬ ಬಗ್ಗೆ ವಿವರಣೆಯಿದೆ.
41. ಸಂವಿಧಾನದ 27 ನೇ ವಿಧಿ ಯಾವುದೇ ಒಂದು ನಿರ್ದಿಷ್ಟ ಧರ್ಮವನ್ನು ಪ್ರಚಾರ ಮಾಡಲು ತೆರಿಗೆ ನೀಡುವಿಕೆಯಿಂದ ಸ್ವಾತಂತ್ರ್ಯ ಎಂಬ ಬಗ್ಗೆ .
42. ಸಂವಿಧಾನದ 29 ರಿಂದ 30 ನೇ ವಿಧಿ ವರೆಗೆ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕುಗಳ ಬಗ್ಗೆ ವಿವರಣೆಯಿದೆ.
43. ಸಂವಿಧಾನದ 29 ನೇ ವಿಧಿಯ ಪ್ರಕಾರ ಭಾರತದ ಯಾವುದೇ ಮೂಲೆಯಲ್ಲಿ ವಾಸಿಸುವ ಪ್ರಜೆಗಳು ತಮ್ಮದೇ ಭಾಷೆ , ಲಿಪಿ, ಸಂಸ್ಕೃತಿಯನ್ನು ಹೊಂದಿ , ಅವುಗಳನ್ನು ಅಭಿವೃದ್ಧಇ ಪಡಿಸಿಕೊಳ್ಳುವ ಹಾಗೂ ರಕ್ಷಿಸುವ ಹಕ್ಕು ಹೊಂದಿರುತ್ತಾರೆ.
44. ಸಂವಿಧಾನದ 29 ವಿಧಿಯ ಪ್ರಕಾರ ಕೇಂದ್ರ ಅಥವಾ ರಾಜ್ಯ ಸರ್ಕಾರಗಳ ಧನ ಸಹಾಯದಿಂದ ನಡೆಸುತ್ತಿರುವ ವಿಧ್ಯಾಸಂಸ್ಥೆಗಳಲ್ಲಿ ಜಾತಿ , ಮತ , ಧರ್ಮ , ಭಾಷೆಯ ಆಧಾರದ ಮೇಲೆ ತಾರತಮ್ಯ ಮಾಡುವುದನ್ನು ಪ್ರವೇಶ ನಿರಾಕರಿಸುವುದನ್ನು ಖಂಡಿಸುತ್ತದೆ.
45. ಸಂವಿಧಾನದ 30 ನೇ ವಿಧಿಯ ಪ್ರಕಾರ ಅಲ್ಪಸಂಖ್ಯಾತರು ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸುವ ಮತ್ತು ನಿರ್ವಹಿಸುವ ಹಕ್ಕು ಹೊಂದಿರುತ್ತಾರೆ.
46. ಸಂವಿಧಾನದ 32 ರಿಂದ 35 ವಿಧಿಯವರೆಗೆ ಸಂವಿಧಾನಾತ್ಮಕ ಪರಿಹಾರಗಳ ಹಕ್ಕಿನ ಬಗ್ಗೆ ವಿವರಣೆಯಿದೆ.
47. ಮೂಲ ಸಂವಿಧಾನದಲ್ಲಿ ಮೊದಲು 7 ಮೂಲಭೂತ ಹಕ್ಕುಗಳಿದ್ದವು ಏಳನೇಯದೇ “ ಆಸ್ತಿಯ ಹಕ್ಕಾ”ಗಿತ್ತು ಆದರೆ 1977 ರ 44 ನೇ ತಿದ್ದುಪಡಿ ಮೂಲಕ ಆ ಹಕ್ಕನ್ನು ಮಾತ್ರ ಉಳಿಸಿಕೊಳ್ಳಲಾಯಿತು.
48. ಭಾರತ ಸಂವಿಧಾನದ 42 ನೇ ತಿದ್ದುಪಡಿಯ ಪರಿಣಾಮವಾಗಿ ಸಂವಿಧಾನದ 51 ಎ ವಿಧಿಯಲ್ಲಿ 10 ಮೂಲ ಭೂತ ಕರ್ತವ್ಯಗಳಿವೆ .
49. ಸಂವಿಧಾನದ 4 ನೇ ಭಾಗದ 36 ರಿಂದ 51 ನೇ ವಿಧಿಗಳಲ್ಲಿಲ ರಾಜ್ಯ ನಿರ್ದೇಶಕ ತತ್ವಗಳ ಬಗ್ಗೆ ವಿವರಿಸಲಾಗಿದೆ.
50. ಭಾರತ ಸಂವಿಧಾನದ 58 ವಿಧಿ ರಾಷ್ಟ್ರಪತಿಯಾಗಲು ಇರಬೇಕಾದ ಅರ್ಹತೆಗಳನ್ನು ವಿವರಿಸಿದೆ.
51. ಭಾರತ ಸಂವಿಧಾನದ 54 ನೇ ವಿಧಿ ರಾಷ್ಟ್ರಪತಿಯವರ ಚುನಾವಣೆ ಬಗ್ಗೆ ವಿವರುಸುತ್ತದೆ.
52. ಭಾರತದ ರಾಷ್ಟ್ರಪತಿಯನ್ನು ಸಂಸತ್ತಿನ ಎರಡು ಸದನಗಳ ಚುನಾಯಿತ ಸದಸ್ಯರು ಹಾಗೂ ರಾಜ್ಯ ವಿಧಾನಸಭೆಗಳ ಚುನಾಯಿತ ಸದಸ್ಯರು ರಾಷ್ಟ್ರಪತಿಯನ್ನು ಚುನಾಯಿಸುತ್ತಾರೆ.
53. ಭಾರತದ ರಾಷ್ಟ್ರಪತಿಯವರಿಂದ ನೇಮಕಗೊಳ್ಳುವವರು – ಪ್ರಧಾನಮಂತ್ರಿ , ಹಾಗೂ ಆತನ ಸೂಚನೆ ಮೇರೆಗೆ ಸಚಿವ ಸಂಪುಟ , ಸುಪ್ರೀ ಹಾಗೂ ಹೈಕೋರ್ಟ್ ನ ನ್ಯಾಯಾದೀಶರು , ರಾಜ್ಯಪಾಲರು , ಭಾರತದ ಆಟಾರ್ನಿ ಮತ್ತು ಕಂಟ್ರೋಲರ್ ಆಡಿಟರ್ ಜನರಲ್ , ಹಣಕಾಸು ಹಾಗೂ ಲೋಕ ಸೇವಾ ಆಯೋಗ , ಅಂತರ್ ರಾಜ್ಯ ಮಂಡಳಿ , ಪರಿಶಿಷ್ಟ ಜಾತಿ ಆಯೋಗ ಮತ್ತು ವರ್ಗಗಳ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರು , ಚುನಾವಣಾ ಆಯೋಗದ ಕಮಿಷನರ್ , ರಕ್ಷಣಾ ಪಡೆಗಳ ಮಹಾ ದಂಡನಾಯಕರು ಮತ್ತು ರಾಯಭಾರಿಗಳು ಇವರನ್ನು ವಜಾ ಮಾಡುವ ಅಧಿಕಾರಿವು ಇವರಿಗಿದೆ.
54. ಭಾರತ ಸಂವಿಧಾನದ 60 ನೇ ವಿಧಿ ಪ್ರಕಾರ ರಾಷ್ಟ್ರಪತಿಗೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರು ಅಥವಾ ಅವರ ಗೈರು ಹಾಜರಿಯಲ್ಲಿ ಹಿರಿಯ ನ್ಯಾಯಾಧೀಶರು ಪ್ರಮಾಣ ವಚನ ಭೋಧಿಸುತ್ತಾರೆ.
55. ಭಾರತ ಸಂವಿಧಾನದ 56 ನೇ ವಿಧಿಯು ರಾಷ್ಟ್ರಪತಿಯವರ ಅಧಿಕಾರವದಿಯ ಬಗ್ಗೆ 5 ವರ್ಷಗಳ ಬಗ್ಗೆ ವಿವರಿಸುತ್ತದೆ.
56. ಭಾರತ ಸಂವಿಧಾನದ 53, 74, 75, 77 ನೇ ವಿಧಿಯು ರಾಷ್ಟ್ರಪತಿಯವರ ಕಾರ್ಯಾಂಗೀಯ ಅಧಿಕಾರವನ್ನು ತಿಳಿಸುತ್ತದೆ.
57. ಭಾರತ ಸಂವಿಧಾನದ 85 ನೇ ವಿಧಿಯ ಪ್ರಕಾರ ಸಂಸತ್ತಿನ ಉಭಯ ಸದನಗಳನ್ನ ಉದ್ದೇಶಿಸಿ ಭಾಷಣ ಮಾಡುವ ಹಾಗೂ 12 ಸದಸ್ಯರನ್ನು ರಾಜ್ಯಸಭೆಗೆ ನೇಮಕ ಮಾಡುವ ಹಾಗೂ ಇಬ್ಬರು ಆಂಗ್ಲೋ ಇಂಡಿಯನ್ನರನ್ನು ಲೋಕಸಭೆಗೆ ನಾಮಕರಣ ಮಾಡುವ ಅಧಿಕಾರ ಹಾಗೂ ಸಂಸತ್ತು ಅಧಿವೇಶನ ಸೇರದಿರುವಾಗ ಸುಗ್ರೀವಾಜ್ಞೆ ಹೊರಡಿಸುವ ಹಾಗೂ ಪಾರ್ಲಿಮೆಂಟಿನ ಅನುಮೋದಿಸಿದ ಮಸೂದೆಗಳಿಗೆ ಸಹಿ ಹಾಕುವ , ಲೋಕಸಭೆಯನ್ನ ವಿಸರ್ಜಿಸುವ ಹಾಗೂ ಹೊಸದಾಗಿ ಚುನಾವಣೆಗೆ ಆದೇಶ ನೀಡುವ ಅಧಿಕಾರ ರಾಷ್ಟ್ರಪತಿಗಿದೆ.
58. ಭಾರತ ಸಂವಿಧಾನದ 72 ನೇ ವಿಧಿ ಪ್ರಕಾರ ನ್ಯಾಯಿಕ ಅಧಿಕಾರಗಳು ಅಂದರೆ ಶಿಕ್ಷೆಗೊಳಗಾದ ಪರಾಧಿಗಳಿಗೆ ಶಿಕ್ಷೆಯನ್ನು ಕಡಿಮೆ ಮಾಡುವ , ಮರಣದಂಡನೆ ಬದಲಾಗಿ ಬೇರೆ ಶಿಕ್ಷೆ ವಿಧಿಸುವ ಅಥವಾ ಸಂಪೂರ್ಣ ಕ್ಷಮಾಧಾನ ನೀಡುವ ಅಧಿಕಾರವಿದೆ ರಾಷ್ಟ್ರಪತಿಗಿದೆ.
59. ಭಾರತ ಸಂವಿಧಾನದ 352 ನೇ ವಿಧಿ ಪ್ರಕಾರ ರಾಷ್ಟ್ರಪತಿಯವರು ರಾಷ್ಟ್ರದಲ್ಲಿ ತುರ್ತುಪರಿಸ್ಥಿತಿ ವಿಧಿಸಬಹುದು
60. ಭಾರತ ಸಂವಿಧಾನದ 356 ನೇ ವಿಧಿ ಪ್ರಕಾರ ರಾಷ್ಟ್ರಪತಿಯವರು ರಾಜ್ಯ ತುರ್ತು ಅಥವಾ ಆಂತರಿಕ ತುರ್ತು ಪರಿಸ್ಥಿತಿಯನ್ನ ಹೇರಬಹುದು
61. ಭಾರತ ಸಂವಿಧಾನದ 360 ನೇ ವಿಧಿ ಪ್ರಕಾರ ಆರ್ಥಿಕ ತುರ್ತು ಪರಿಸ್ಥಿತಿಯನ್ನ ರಾಷ್ಟ್ರಪತಿಗಳು ಹೇರಬಹುದು .
62. ಭಾರತದಲ್ಲಿ 1947 ರಲ್ಲಿ ಭ್ರಷ್ಟಚಾರ ನಿಯಂತ್ರಣ ಕಾಯ್ದೆ ಜಾರಿಗೆ ಬಂತು ( Prevention of Corruption Act ).
63. 1964 ಭಾರತದಲ್ಲಿ ಕೇಂದ್ರಿಯ ಜಾಗೃತ ದಳ ( Central Vigilance Commission - CVC ) ಜಾರಿಗೆ ಬಂತು .
64. ಭಾರತದಲ್ಲಿ 1963 ರಲ್ಲಿ ಸಿ ಬಿ ಐ ( Central Bureau of Investigation ) ಸ್ಥಾಪಿಸಲಾಯಿತು.

ಪಂಚಾಯತ್ ರಾಜ್ ಅಧಿನಿಯಮ

1. ಪ್ರತಿ 5000 – 7000 ಜನಸಂಖ್ಯೆಗೆ ಒಂದರಂತೆ ಗ್ರಾಮ ಪಂಚಾಯಿತಿಯ ರಚನೆ.
2. ಮಲೆನಾಡು ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ( ಉದಾ. ಬೇಳಗಾಂ , ಚಿಕ್ಕಮಗಳೂರು , ದಕ್ಷಿಣಕನ್ನಡ , ಧಾರವಾಡ , ಹಾಸನ , ಕೊಡಗು , ಶಿವಮೊಗ್ಗ , ಉಡುಪಿ , ಹಾವೇರಿ , ಹಾಗೂ ಉತ್ತರ ಕನ್ನಡ ಜಿಲ್ಲೆಗಳು ) 2500 ಜನಸಂಖ್ಯೆಗೆ ಕಡಿಮೆ ಇಲ್ಲದ ಪ್ರದೇಶವನ್ನು ಒಳಗೊಂಡಂತೆ ಪಂಚಾಯಿತಿ ರಚಿಸಬಹುದಾಗಿದೆ.
3. ಅವಶ್ಯಕವೆಂದು ಕಂಡುಬಂದಲ್ಲಿ , ಗ್ರಾಮದ ಕೇಂದ್ರದಿಂದ ಐದು ಕಿ.ಮೀ. ಸುತ್ತಳತೆಯಲ್ಲಿರುವ ಪ್ರದೇಶವನ್ನು ಸಹ ಪಂಚಾಯಿತಿ ವ್ಯಾಪ್ತಿಯೆಂದು ಪರಿಗಣಿಸಬಹುದು.
4. ಪ್ರತಿ 400 ಜನಸಂಖ್ಯೆಗೆ ಒಬ್ಬರಂತೆ ಗ್ರಾಮ ಪಂಚಾಯಿತಿಗೆ ಸದಸ್ಯರ ಆಯ್ಕೆ ನಡೆಯುತ್ತದೆ.
5. ಪಟ್ಟಣ ಪಂಚಾಯಿತಿ ಅಥವಾ ಕೈಗಾರಿಕಾ ಉಪನಗರ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಇರುವ ಜಾಗಗಳನ್ನು ಹೊರತುಪಡಿಸಿ ಇಡೀ ತಾಲ್ಲೂಕಿನ ಮೇಲೆ ತಾಲ್ಲೂಕು ಪಂಚಾಯಿತಿ ನಿಯಂತ್ರಣ ಹೊಂದಿದೆ.
6. ತಾಲ್ಲೂಕಿನ ಒಟ್ಟು ಜನಸಂಖ್ಯೆಯಲ್ಲಿ 10,000 ಕ್ಕೆ ಒಬ್ಬರಂತೆ ತಾಲ್ಲೂಕು ಪಂಚಾಯಿತಿ ಸದಸ್ಯರ ಆಯ್ಕೆ ನಡೆಯುತ್ತದೆ.
7. ಒಂದು ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ತಾಲ್ಲೂಕುಗಳಲ್ಲಿ ಕನಿಷ್ಠ 11 ಮಂದಿ ಚುನಾಯಿತ ಸದಸ್ಯರಿರಬೇಕು.
8. ಪ್ರತಿ ತಾಲ್ಲೂಕು ಪಂಚಾಯಿತಿ ಕ್ಷೇತ್ರದಲ್ಲಿ ಚುನಾವಣೆಯ ಮೂಲಕ ಸದಸ್ಯರ ಆಯ್ಕೆ ನಡೆಯುತ್ತದೆ. ಮಾತ್ರವಲ್ಲದೆ. ತಾಲ್ಲೂಕನ್ನು ಪ್ರತಿನಿಧಿಸುವ ಲೋಕಸಭಾ , ವಿಧಾನಸಭಾ , ರಾಜ್ಯಸಭಾ , ವಿಧಾನ ಪರಿಷತ್ ಸದಸ್ಯರು ಜೊತೆಗೆ ಒಂದು ವರ್ಷದ ಅವಧಿಗೆ , ಸರದಿ ಪ್ರಕಾರ ತಾಲ್ಲೂಕಿನ 1/5 ಭಾಗದ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರುಗಳು ಸದಸ್ಯರಾಗಿರುತ್ತಾರೆ.
9. ಪಟ್ಟಣ ಪಂಚಾಯಿತಿ ಅಥವಾ ಕೈಗಾರಿಕಾ ಉಪನಗರ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಇರುವ ಜಾಗಗಳನ್ನು ಹೊರತುಪಡಿಸಿ ಇಡೀ ಜಿಲ್ಲೆಯ ಮೇಲೆ ಜಿಲ್ಲಾ ಪಂಚಾಯಿತಿ ನಿಯಂತ್ರಣ ಹೊಂದಿದೆ.
10. 40,000 ಜನಸಂಖ್ಯೆಗೆ ಒಬ್ಬರಂತೆ ಜಿಲ್ಲಾ ಪಂಚಾಯಿತಿ ಸದಸ್ಯರ ಆಯ್ಕೆ ನಡೆಯುತ್ತದೆ.
11. ಉತ್ತರ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ 30,000 ಜನಸಂಖ್ಯೆಗೆ ಹಾಗೂ ಕೊಡಗು ಜಿಲ್ಲೆಗೆ 18,000 ಜನಸಂಖ್ಯೆಗೆ ಒಬ್ಬರಂತೆ ಒಬ್ಬ ಸದಸ್ಯರನ್ನು ಆಯ್ಕೆ ಮಾಡಬೇಕಿದೆ.
12. ಪ್ರತಿ ಜಿಲ್ಲಾ ಪಂಚಾಯಿತಿಗೆ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಚುನಾಯಿತ ಸದಸ್ಯರಲ್ಲದೇ ಜಿಲ್ಲೆಯನ್ನು ಪ್ರತಿನಿಧಿಸುವ ಲೋಕಸಭಾ , ವಿಧಾನಾಸಭಾ , ರಾಜ್ಯಸಭಾ , ವಿಧಾನ ಪರಿಷತ್ತಿನ ಸದಸ್ಯರು ಹಾಗೂ ಜಿಲ್ಲೆಯ ಎಲ್ಲಾ ತಾಲ್ಲೂಕು ಪಂಚಾಯಿತಿಗಳ ಅಧ್ಯಕ್ಷರುಗಳು ಸದಸ್ಯರಾಗಿರುತ್ತಾರೆ.
13. ಮೀಸಲಿಟ್ಟ ಹಾಗೂ ಮೀಸಲಿರಿಸದ ( ಸಮಾನ್ಯ ) ಒಟ್ಟು ಸ್ಥಾನಗಳಲ್ಲಿ 1/3 ಕ್ಕಿಂತ ಕಡಿಮೆಯಿಲ್ಲದ ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಬೇಕು.
14. ಚುನಾಯಿತರಾದ ಸದಸ್ಯರ ಅವಧಿಯು ಗ್ರಾಮ ಪಂಚಾಯಿತಿಯ ಪ್ರಥಮ ಸಭೆ ಅಂದರೆ ಅಧ್ಯಕ್ಷ / ಉಪಾಧ್ಯಕ್ಷರ ಆಯ್ಕೆಗಾಗಿ ಗೊತ್ತುಪಡಿಸಿದ ಸಭೆಯ ದಿನಾಂಕದಿಂದ ಮುಂದಿನ ಐದು ವರ್ಷಗಳವೆರೆಗೆ ಇರುತ್ತದೆ.
15. ಗ್ರಾಮ ಪಂಚಾಯಿತಿಯ ಅನುಮತಿ ಇಲ್ಲದೆ. ಗ್ರಾಮ ಪಂಚಾಯಿತಿಯ ಮೂರಕ್ಕಿಂತ ಹೆಚ್ಚು ಸಾಮಾನ್ಯ ಸಭೆಗಳಿಗೆ ಅನುಕ್ರಮವಾಗಿ ಗೈರುಹಾಜರಾದರೆ ಅವರು ಸದಸ್ಯತ್ವ ಕಳೆದುಕೊಳ್ಳುತ್ತಾರೆ.
16. ಗ್ರಾಮ ಪಂಚಾಯಿತಿ ಸದಸ್ಯರು ತಮ್ಮ ಸಹಿ ಸಹಿತ ಬರಹದಲ್ಲಿ ಬರೆದು ರಾಜೀನಾಮೆಯನ್ನು ಅಧ್ಯಕ್ಷರಿಗೆ ಸಲ್ಲಿಸಬಹುದು. ಹೀಗೆ ಬರೆದ ಬರಹವನ್ನು 15 ದಿನಗಳೊಳಗೆ ಬರಹದ ಮೂಲಕ ಹಿಂತೆಗೆದುಕೊಳ್ಳದಿದ್ದಲ್ಲಿ , ಅವರ ಸ್ಥಾನ ಖಾಲಿಯಾಗುತ್ತದೆ.
17. ಸದಸ್ಯರು ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ಅಸಮರ್ಥರಾದರೆ ಅಥವಾ ಅಪಕೀರ್ತಿಕರ ನಡತೆಯುಳ್ಳವರಾದರೆ , ಅವರಿಗೆ ಅಹವಾಲನ್ನು ಹೇಳಲು ಅವಕಾಶವನ್ನು ಕೊಟ್ಟ ತರುವಾಯ ವಿಚಾರಣೆಯನ್ನು ನಡೆಸಿ ನಂತರ ಸದಸ್ಯತ್ವದಿಂದ ತೆಗೆದುಹಾಕಬಹುದು.
18. ಗ್ರಾಮ ಪಂಚಾಯಿತಿಯು ಅದರ ಅಧಿಕಾರವನ್ನು ಮೀರಿದರೆ ಅಥವಾ ದುರುಪಯೋಗ ಪಡಿಸಿದರೆ ವಿಸರ್ಜನೆ ಮಾಡಬಹುದು.
19. ಗ್ರಾಮ ಪಂಚಾಯಿತಿಗೆ ವಿಧಿಸಿದ ಕರ್ತವ್ಯಗಳನ್ನು ನೆರವೇರಿಸಲು ಅಸಮರ್ಥವಾದರೆ ಅಥವಾ ಮೇಲಿಂದ ಮೇಲೆ ವಿಫಲವಾದರೆ ಅಂತಹ ಗ್ರಾಮ ಪಂಚಾಯಿತಿಯನ್ನು ವಿಸರ್ಜಿಸಬಹುದು.
20. ಪ್ರತಿ ಸಮಿತಿಯಲ್ಲಿ ಸಮಿತಿಯ ಅಧ್ಯಕ್ಷರು ಸೇರಿದಂತೆ 3 – 5 ಸದಸ್ಯರಿರುತ್ತಾರೆ. ಸಮಿತಿಯ ಅವಧಿಯು ಚುನಾವಣೆಯ ದಿನಾಂಕದಿಂದ 30 ತಿಂಗಳು
21. ಗ್ರಾಮ ಪಂಚಾಯಿತಿ ಅಧ್ಯಕ್ಷರು ಉತ್ಪಾದನಾ ಹಾಗೂ ಸೌಕರ್ಯ ಸಮಿತಿಗಳ ಅಧ್ಯಕ್ಷರಾಗಿರುತ್ತಾರೆ. ಉಪಾಧ್ಯಕ್ಷರು ಸಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷನಾಗುತ್ತಾನೆ.
22. ಸಾಮಾಜಿಕ ನ್ಯಾಯ ಸಮಿತಿಯಲ್ಲಿ ಕನಿಷ್ಟ ಪಕ್ಷ ತಲಾ ಒಬ್ಬ ಮಹಿಳಾ ಸದಸ್ಯೆ ಮತ್ತು ಪರಿಶಿಷ್ಟ ಜಾತಿ / ವರ್ಗದ ಸದಸ್ಯರಿಬೇಕು . ಪ್ರತಿ ಸಮಿತಿಯಲ್ಲಿ ಸರ್ಕಾರವು ಅಂಗೀಕರಿಸಿದ ಮಂಡಲಿಗಳು ಸದಸ್ಯರೊಬ್ಬರನ್ನು ಸೇರ್ಪಡೆ ಮಾಡಿಕೊಳ್ಳಲು ಅವಕಾಸವಿದೆ.
23. ಇದೇ ರೀತಿ ತಾಲ್ಲೂಕು ಪಂಚಾಯಿತಿ ಮೂರು ಸ್ಥಾಯಿ ಸಮಿತಿಗಳನ್ನು , ಜಿಲ್ಲಾ ಪಂಚಾಯಿತಿ ಐದು ಸ್ಥಾಯಿ ಸಮಿತಿಗಳನ್ನು ರಚಿಸಬೇಕಿದೆ.
24. ಕರ್ನಾಟಕ ಪಂಚಾಯಿತಿ ರಾಜ್ ಅಧಿನಿಯಮದ ಪ್ರಕರಣ 61 ( ಎ ) ಪ್ರಕಾರ ಗ್ರಾಮ ಪಂಚಾಯಿತಿಯು ನಿರ್ದಿಷ್ಟ ಉದ್ದೇಶಗಳಿಗೆ ಉಪ ಸಮಿತಿಗಳನ್ನು ರಚಿಸಬಹುದು.
25. ಸಾಮಾನ್ಯ ಸಭೆಯು ಕನಿಷ್ಠ ಪ್ರತಿ ತಿಂಗಳಿಗೊಮ್ಮೆ ಸಾಮಾನ್ಯ ಸಭೆಯನ್ನು ನಡೆಸಬೇಕು .
26. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು / ಕಾರ್ಯದರ್ಶಿಯು ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ ಎಲ್ಲಾ ಅಧಿಕಾರಿ / ಕ್ಷೇತ್ರ ಸಿಬ್ಬಂದಿಗಳಿಗೆ ಸಭೆಯ ನೋಟಿಸನ್ನು ನೀಡಬೇಕು .
27. ಗ್ರಾಮ ಪಂಚಾಯಿತಿಗೆ ಸಾಮಾನ್. ಸಭೆಗೆ ಏಳು ಪೂರ್ಣ ದಿನಗಳ ನೋಟೀಸನ್ನು ನೀಡಬೇಕು . ಸಭೆಯ ಸೂಚನಾ ಪತ್ರದ ಪ್ರತಿಯನ್ನು ಗ್ರಾಮ ಪಂಚಾಯಿತಿ ಕಛೇರಿಯ ಸೂಚನಾ ಫಲಕದಲ್ಲಿ ಹಚ್ಚಿರಬೇಕು.
28. ಗ್ರಾಮ ಪಂಚಾಯಿತಿಯ ಒಟ್ಟು ಸದಸ್ಯರ ಅರ್ಧ ಭಾಗ ( ಶೇ.50 ) ಸಭೆಯ ಕೋರಂ ಆಗಿರುತ್ತದೆ.
29. ಗ್ರಾಮ ಪಂಚಾಯಿತಿ ಸಭೆಗೆ ನಿಗದಿಪಡಿಸಿದ ಸಮಯದಲ್ಲಿ ಕೋರಂ ಇಲ್ಲದಿದ್ದರೆ ಸಭೆಯ ಅಧ್ಯಕ್ಷರು 30 ನಿಮಿಷಗಳವರೆಗೆ ಕಾಯಬೇಕು.
30. ಕೋರಂ ಇಲ್ಲದಿದ್ದರೆ ಸಭೆಯ ಅಧ್ಯಕ್ಷರು ಸಭೆಯನ್ನು ಮುಂದಿನ ದಿನಕ್ಕೆ ಅಥವಾ ತರುವಾಯದ ದಿನಕ್ಕೆ ಮುಂದೂಡಬಹುದು , ಹಾಗೆ ನಿಗದಿಪಡಿಸಿದ ಸಭೆಯ ನೋಟೀಸನ್ನು ಗ್ರಾಮ ಪಂಚಾಯಿತಿ ಕಛೇರಿಯ ನೋಟೀಸ್ ಬೋರ್ಡಿನಲ್ಲಿ ಅಂಟಿಸಬೇಕು.
31. ಕೋರಂ ಇಲ್ಲದೇ ಯಾವುದೇ ಸಭೆಯನ್ನು ನಡೆಸಲು ಸಾಧ್ಯವಿಲ್ಲಲ
32. ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರು ವಹಿಸಬೇಕು.
33. ಅಧ್ಯಕ್ಷರು ಗೈರುಹಾಜರಿಯಲ್ಲಿ ಉಪಾಧ್ಯಕ್ಷರು ಅಧ್ಯಕ್ಷತೆ ವಹಿಸಬೇಕು. ಇವರಿಬ್ಬರ ಗೈರುಹಾಜರಿಯಲ್ಲಿ ಸಭೆಯಲ್ಲಿ ಹಾಜರಿರುವ ಸದಸ್ಯರು ತಮ್ಮಲ್ಲೇ ಒಬ್ಬರನ್ನು ಆ ಸಭೆಗೆ ಅಧ್ಯಕ್ಷತೆ ವಹಿಸಲು ಆಯ್ಕೆ ಮಾಡಿಕೊಳ್ಳಬಹುದು.
34. ಸಭೆಯ ನಿರ್ಣಯಗಳನ್ನು ಸಭೆಯಲ್ಲಿ ಹಾಜರಿರುವ ಚಿನಾಯಿತ ಸದಸ್ಯರ ಬಹುಮತದ ಮೂಲಕ ತೀರ್ಮಾನಿಸಬೇಕು.
35. ಸಮಾನ ಮತಗಳು ಬಂದಲ್ಲಿ ಅಧ್ಯಕ್ಷರು ತಮ್ಮ ನಿರ್ಣಯಕ ಮತವನ್ನು ಹೆಚ್ಚುವರಿಯಾಗಿ ಕೊಡಲು ಅವಕಾಶವಿದೆ.
36. ಗ್ರಾಮ ಪಂಚಾಯಿತಿಯ ಯಾವುದೇ ಸದಸ್ಯರು ಹಣಕಾಸಿನ ಹಿತಾಸಕ್ತಿ ಇರುವ ವಿಷಯಕ್ಕೆ ಸಂಬಂಧಿಸಿದ ಚರ್ಚೆಯಲ್ಲಿ ಭಾಗವಹಿಸಬಾರದು ಹಾಗೂ ಮತ ನೀಡಬಾರದು . ಹಾಗೇಯೇ ಅಧ್ಯಕ್ಷತೆ ವಹಿಸುವ ವ್ಯಕ್ತಿಯೂ ಕೂಡ ಹಣಕಾಸಿನ ಹಿತಾಸಕ್ತಿ ಹೊಂದಿದ್ದರೆ. ಅಂತಹ ವಿಷಯದ ಚರ್ಚೆ ಬಂದಾಗ ಸಭೆಯ ಅಧ್ಯಕ್ಷತೆಯನ್ನು ವಹಿಸಬಾರದು.
37. ಗ್ರಾಮ ಪಂಚಾಯಿತಿ ಸಭೆಗಳು ಅಥವಾ ಸ್ಥಾಯಿ ಸಮಿತಿಗಳ ಸಭೆಗಳಿಗೆ ಹಾಜರಾಗುವ ಸದಸ್ಯರಿಗೆ ಭಾಗವಹಿಸುವಿಕೆ ಭತ್ಯೆಯನ್ನು ಸಂದಾಯ ಮಾಡಬೇಕು. ಪ್ರಸ್ತುತ ಸರ್ಕಾರದ ಆದೇಶದಂತೆ ಸದಸ್ಯರು ಹಾಜರಾದ ಪ್ರತಿ ಸಭೆಗೆ ರೂ.100/- ರಂತೆ ಸಂದಾಯ ಮಾಡಬೇಕು.
38. ಅವಶ್ಯವೆಂದು ಭಾವಿಸಿದಾಗ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ವಿಶೇಷ ಸಭೆ ಕರೆಯಬಹುದು.
39. ಗ್ರಾಮ ಪಂಚಾಯಿತಿಯ ಸದಸ್ಯರ ಮೂರನೇ ಒಂದು ಭಾಗ (1/3) ದಷ್ಟು ಸದಸ್ಯರು ಲಿಖಿತ ಕೋರಿಕೆ ಸಲ್ಲಿಸಿದರೂ ವಿಶೇಷ ಸಭೆ ಕರೆಯಲು ಅವಕಾಶವಿದೆ. ಲಿಖಿತ ಕೋರಿಕೆಯು ತಲುಪಿದ 15 ದಿವಸಗಳೊಳಗೆ ವಿಶೇಷ ಸಭೆಯನ್ನು ಕರೆಯಬೇಕು.
40. ವಿಶೇಷ ಸಭೆಯನ್ನು ಕರೆಯಲು ಅಧ್ಯಕ್ಷರು ಒಪ್ಪದಿದ್ದಲ್ಲಿ ಉಪಾಧ್ಯಕ್ಷರು ಕರೆಯಬೇಕು. ಉಪಾಧ್ಯಕ್ಷರು ಸಹ ಒಪ್ಪದಿದ್ದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು / ಕಾರ್ಯದರ್ಶಿಗಳು ಸಭೆಯ ನೋಟೀಸು ಜಾರಿ ಮಾಡುವರು.
41. ವಿಶೇಷ ಸಭೆಗೆ ಮೂರು ಪೂರ್ಣ ದಿವಸಗಳ ನೋಟೀಸನ್ನು ಕಾರ್ಯದರ್ಶಿ ನೀಡಬೇಕಾಗುತ್ತದೆ.
42. ವಿಶೇಷ ಸಭೆಗೆ ಸಾಮಾನ್ಯ ಸಭೆಯಂತೆಯೇ ಶೇ. 50 ರಷ್ಟು ಕೋರಂ ಅವಶ್ಯವಿರುತ್ತದೆ.
43. ತುರ್ತು ಸಭೆಯನ್ನು ಅಧ್ಯಕ್ಷರು 24 ಗಂಟೆಯೊಳಗಾಗಿ ಕರೆಯಬಹುದು.
44. ತುರ್ತು ಸಭೆಯನ್ನು ನೈಸರ್ಗಿಕ ವಿಪತ್ತುಗಳಾದ ಮಳೆ ಹಾನಿ , ಬೆಂಕಿ ಅನಾಹುತ ಮತ್ತಿತರ ಪ್ರಕೃತಿ ವಿಕೋಪಗಳ ತುರ್ತು ನಿರ್ವಹಣೆಗೆ ಸಂಬಂಧಿಸಿದ ತುರ್ತು ಕ್ರಮ ತೆಗೆದುಕೊಳ್ಳಲು ಇಂತಹ ತುರ್ತು ಸಭೆಗಳನ್ನು ಕರೆಯಬಹುದು.
45. ನಡವಳಿ ಪುಸ್ತಕವು ಪಂಚಾಯಿತಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ / ಕಾರ್ಯದರ್ಶಿಗಳ ಸುಪರ್ದಿಯಲ್ಲಿರಬೇಕು.
46. ಸಭಾ ನಡವಳಿಯ ಒಂದು ಪ್ರತಿಯನ್ನು ಸಭೆ ನಡೆದ 10 ದಿನಗಳೊಳಗೆ ಕಾರ್ಯ ನಿರ್ವಾಹಕ ಅಧಿಕಾರಿಗೆ ಕಳುಹಿಸಬೇಕು.
47. ಗ್ರಾಮ ಪಂಚಾಯಿತಿಯ ಎಲ್ಲಾ ಸದಸ್ಯರಿಗೂ ಸಭಾ ನಡವಳಿ ಪ್ರತಿಗಳನ್ನು ಒದಗಿಸಬೇಕು.
48. ನಡವಳಿ ಪುಸ್ತಕವು ಸದಸ್ಯರಿಗೆ ಮತ್ತು ಮತದಾರರಿಗೆ ( ಸಾರ್ವಜನಿಕರಿಗೆ ) ಪರಿಶೀಲನೆಗೆ ಮುಕ್ತವಾಗಿರಬೇಕು.
49. ಯಾವುದೇ ಸದಸ್ಯ ತನ್ನ ಅಭಿಪ್ರಾಯವನ್ನು ನಡವಳಿ ಪುಸ್ತಕದಲ್ಲಿ ನಮೂದಿಸಬೇಕೆಂದು ಒತ್ತಾಪಡಿಸಿದಲ್ಲಿ ನಮೂದಿಸಬೇಕು.
50. ಸ್ಥಲಿಯ ಸರ್ಕಾರವಾಗಿರುವ ಗ್ರಾಮ ಪಂಚಾಯಿತಿಗೆ ಅಧ್ಯಕ್ಷರು ಕಾರ್ಯ ನಿರ್ವಾಹಕ ಮುಖ್ಯಸ್ಥರಾಗಿರುತ್ತಾರೆ.
51. ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅಧಿಕಾರವಧಿ ಅವರ ಚುನಾವಣೆಯ ದಿನಾಂಕದಿಂದ 30 ತಿಂಗಳು ಆಗಿರುತ್ತದೆ. ಅಥವಾ ಸದಸ್ಯತ್ವ ಅವಧಿ ನಿಂತು ಹೋಗುವವರೆಗೆ ಯಾವುದೋ ಮೊದಲು ಆ ಅವಧಿಯಾಗಿರುತ್ತದೆ.
52. ಗ್ರಾಮ ಪಂಚಾಯಿತಿ ಸಭೆಗಳನ್ನು ಕರೆಯುದು ಮತ್ತು ಆ ಸಭೆಗಳ ಅಧ್ಯಕ್ಷತೆಯನ್ನು ವಹಿಸುವುದು ಅಧ್ಯಕ್ಷರ ಅಧಿಕಾರ .
53. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರ, ಕಾರ್ಯದರ್ಶಿ ಮತ್ತು ಇತರ ಗ್ರಾಮ ಪಂಚಾಯಿತಿ ಸಿಬ್ಬಂದಿಗಳ ಕಾರ್ಯ ನಿರ್ವಹಣೆಯ ಮೇಲ್ವಿಚಾರಣೆ ಮತ್ತು ನಿಯಂತ್ರಣ ಮಾಡುವುದು ಅಧ್ಯಕ್ಷರ ಅಧಿಕಾರಿ
54. ಗ್ರಾಮ ಪಂಚಾಯಿತಿ ಅಧಿಕಾರಿ ಅಥವಾ ನೌಕರನ ವಿರುದ್ಧ ಶಿಸ್ತು ಕ್ರಮ ಹೂಡಲು ಉದ್ದೇಶಿಸಿದ್ದರೆ ಅಥವಾ ಕ್ರಿಮಿಲನ್ ಅಪರಾಧದ ಕುರಿತು ತನಿಖೆ ನಡೆಯುತ್ತಿದ್ದರೆ ಅವರನ್ನು ಅಮಾನತ್ತಿನಲ್ಲಿಡುವ ಅಧಿಕಾರ ಅಧ್ಯಕ್ಷರಿಗಿದೆ.
55. ಅಧ್ಯಕ್ಷರು ಗ್ರಾಮ ಪಂಚಾಯಿತಿಯ ಮಂಜೂರಾತಿ ಅಗತ್ಯವಿರುವಂತಹ ಯಾವುದೇ ಕಾಮಗಾರಿಯನ್ನು ತಕ್ಷಣವೇ ಕೈಗೊಳ್ಳುವುದು ಅಗತ್ಯವೆಂದು ಅಭಿಪ್ರಾಯಪಟ್ಟರೆ 24 ಗಂಟೆಗಳ ನೋಟೀಸನ್ನು ಕೊಟ್ಟು ಸಭೆಯನ್ನು ಕರೆಯಬಹುದು.
56. ಅಧ್ಯಕ್ಷರು ರಜೆ ಹೋದಾಗ ಅಥವಾ ಕೆಲಸ ನಿರ್ವಹಿಸಲು ಅಸಮರ್ಥರಾದಾಗ ಅಥವಾ ಅಧ್ಯಕ್ಷರ ಹುದ್ದೆಯು ಖಾಲಿ ಇದ್ದಾಗ ಉಪಾಧ್ಯಕ್ಷರು ಮೇಲಿನ ಎಲ್ಲಾ ಕರ್ತವ್ಯಗಳನ್ನು ನಿರ್ವಹಿಸಬೇಕು.
57. ಗ್ರಾಮ ಪಂಚಾಯಿತಿಯ ಸದಸ್ಯರು ಗ್ರಾಮ ಪಂಚಾಯಿತಿಯ ಸದಸ್ಯರು ಗ್ರಾಮ ಪಂಚಾಯಿತಿಯ ದಾಖಲೆಗಳನ್ನು ಪರಿಶೀಲಿಸುವ ಅಧಿಕಾರ ಹೊಂದಿರುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ವಿವರಣೆಗಳನ್ನು ಪಡೆಯುವ ಹಕ್ಕು ಸದಸ್ಯರಿಗಿದೆ. . ಗ್ರಾಮ ಪಂಚಾಯಿತಿ ಅಧ್ಯಕ್ಷರು / ಉಪಾಧ್ಯಕ್ಷರು ಇದಕ್ಕೆ ಅವಕಾಶ ಮಾಡಿಕೊಡಬೇಕು.
58. ಪಂಚಾಯತ್ ರಾಜ್ ಕಾಯಿದೆಯ ಪ್ರಕಾರ ಅಧ್ಯಕ್ಷರ ಜವಾಬ್ದಾರಿ
· ಗ್ರಾಮ ಪಂಚಾಯಿತಿಯ ಎಲ್ಲಾ ಸಭೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದು.
· ವಾರ್ಡ್ ಸಮತ್ತು ಗ್ರಾಮ ಸಭೆಗಳ ಸಂಘಟನೆಯ ಜವಾಬ್ದಾರಿ ನಿರ್ವಹಿಸುವುದು.
· ತಮ್ಮ ವಾರ್ಡ್ ನ ಜನರ ಸಮಸ್ಯೆಗಳನ್ನು ಅರ್ಥೈಸಿಕೊಂಡು ಲಭ್ಯ ಅನುದಾನದ ಇತಿಮಿತಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳವುದು.
· ಸವಲತ್ತುಗಳನ್ನು, ವೈಯಕ್ತಿಕ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ಒದಗಿಸುವುದು.
· ಸಂಪನ್ಮೂಲ ಕ್ರೋಢೀಕರಣಕ್ಕೆ ಮಹತ್ವ ನೀಡುವುದು.
· ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಸಾರ್ವಜನಿಕರಿಗೆ ಉತ್ತಮವಾದ ಸೇವೆಗಳನ್ನು ನೀಡುವಂತೆ ನೋಡಿಕೊಳ್ಳುವುದು.
· ನಿಯಾಮವಳಿಗಳು ಮತ್ತು ಕಾಯಿದೆಯ ಅಂಶಗಳನ್ನು ಅರ್ಥೈಸಿಕೊಂಡು ಕರ್ತವ್ಯ ನಿರ್ವಹಿಸುವುದು.
59. ಗ್ರಾಮ ಪಂಚಾಯಿತಿ ಚುನಾಯಿತ ಸದಸ್ಯರ ಗೌರವಧನ ಅಧ್ಯಕ್ಷರು – 500 , ಉಪಾಧ್ಯಕ್ಷರು – 300 , ಸದಸ್ಯರು – 300
60. ಗ್ರಾಮ ಪಂಚಾಯಿತಿ ಅಧ್ಯಕ್ಷರು ತಮ್ಮ ಸಹಿ ಇರುವ ರಾಜೀನಾಮೆ ಪತ್ರವನ್ನು ಉಪ ವಿಭಾಗಾಧಿಕಾರಿಗಳಿಗೆ ನೀಡಬೇಕು .
61. ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು ತಮ್ಮ ಸಹಿ ಇರುವ ರಾಜೀನಾಮೆಯನ್ನು ಅಧ್ಯಕ್ಷರಿಗೆ ನೀಡಬೇಕು.
62. ಗ್ರಾಮ ಪಂಚಾಯಿತಿ ಅಧ್ಯಕ್ಷರು / ಉಪಾಧ್ಯಕ್ಷರು 10 ದಿನಗಳೊಳಗೆ ರಾಜೀನಾಮೆ ಪತ್ರವನ್ನು ಹಿಂದೆ ಪಡೆಯದಿದ್ದರೆ , ಅದು ಸ್ವೀಕೃತವಾಗಿದೆಯೆಂದು ಪರಿಗಣಿಸಬೇಕು.
63. ಗ್ರಾಮ ಪಂಚಾಯಿತಿ ಅದ್ಯಕ್ಷರ ಹಾಗೂ ಉಪಾಧ್ಯಕ್ಷರ ಆಯ್ಕೆಯ ಒಂದು ವರ್ಷದವರೆಗೆ ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಬಾರದು.
64. ಗ್ರಾಮ ಪಂಚಾಯಿತಿಯ ಒಟ್ಟು ಸದಸ್ಯರಲ್ಲಿ 1/3 ನೇ ಸದಸ್ಯರು ಅವಿಶ್ವಾಸ ನಿರ್ಣಯಕ್ಕೆ ಸಹಿ ಹಾಕಿ ಉಪ ವಿಭಾಗಾಧಿಕಾರಿಗಳಿಗೆ ಸಲ್ಲಿಸಬೇಕು.
65. ಅವಿಶ್ವಾಸ ಗೊತ್ತುವಳಿ ಇದನ್ನು ಸ್ವೀಕರಿಸಿದ 30 ದಿನದೊಳಗೆ ಉಪ ವಿಭಾಗಾಧಿಕಾರಿಗಳು ಸಭೆಯನ್ನು ಕರೆದು ಗೊತ್ತುವಳಿಯನ್ನು ಮಂಡಿಸಬೇಕು.
66. ಉಪ ವಿಭಾಗಾಧಿಕಾರಿಗಳು ಸಭೆಯನ್ನು ಕರೆದು ಗೊತ್ತುವಳಿಯನ್ನು ಸಭೆಯ ನೋಟೀಸನ್ನು ಕನಿಷ್ಠ 10 ದಿನಗಳಿಗೆ ಮುಂಚಿತವಾಗಿ ಸದಸ್ಯರಿಗೆ ನೀಡಬೇಕು.
67. ಗ್ರಾಮ ಪಂಚಾಯಿತಿಯ ಒಟ್ಟು ಸದಸ್ಯರ 2/3 ರಷ್ಟು ಸದಸ್ಯರು ಪರವಾಗಿ ತೀರ್ಮಾನಿಸಿದ್ದಲ್ಲಿ ಅವಿಶ್ವಾಸ ಗೊತ್ತುವಳಿ ಸ್ವೀಕಾರವಾಗುತ್ತದೆ.
68. ಒಂದು ಬಾರಿ ಅವಿಶ್ವಾಸ ಗೊತ್ತುವಳಿ ವಿಫಲವಾದಲ್ಲಿ ಆ ದಿನಾಂಕದಿಂದ ಒಂದು ವರ್ಶದ ಅವಧಿಯವರೆಗೆ ಮರು ಅವಿಶ್ವಾಸ ಗೊತ್ತುವಳಿಯ ಮಂಡಿಸುವ ಹಾಗಿಲ್ಲ.
69. ಗ್ರಾಮ ಪಂಚಾಯಿತಿ ಅಧ್ಯಕ್ಷ / ಉಪಾಧ್ಯಕ್ಷ / ಸದಸ್ಯರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳು ಸಾಬೀತಾದಲ್ಲಿ ಅವರನ್ನು ಹುದ್ಧೆಯಿಂದ ತೆಗೆದು ಹೊಕಬಹುದು.
70. ಗ್ರಾಮ ಪಂಚಾಯಿತಿ ಅಧ್ಯಕ್ಷ / ಉಪಾಧ್ಯಕ್ಷ / ಸದಸ್ಯರ ದುರ್ವರ್ತನೆ , ಅದಿಕಾರ ದುರುಪಯೋಗ ಮತ್ತು ಭ್ರಷ್ಟಚಾರ ಪ್ರಕರಣಗಳು ಸಾಬೀತಾದಲ್ಲಿ ಹುದ್ದೆಯಿಂದ ತೆಗೆದು ಹಾಕಬಹುದು.
71. ಗ್ರಾಮ ಪಂಚಾಯಿತಿ ಅನುಮತಿ ಇಲ್ಲದೆ ಅಧ್ಯಕ್ಷ / ಉಪಾಧ್ಯಕ್ಷ / ಸದಸ್ಯರ ಪಂಚಾಯಿತಿ ಅನುಮತಿಯಿಲ್ಲದೆ ಮೂರಕ್ಕಿಂತ ಹೆಚ್ಚು ಸಾಮಾನ್ಯ ಸಭೆಗಳಿಗೆ ಗೈರುಹಾಜರಾದರೆ ಸದಸ್ಯತ್ವ ರದ್ದಾಗುತ್ತದೆ .
72. ಗ್ರಾಮ ಪಂಚಾಯಿತಿಯ ಸದಸ್ಯರು ಗ್ರಾಮ ಪಂಚಾಯಿತಿಯ ದಾಖಲೆಗಳನ್ನು ಪರಿಶೀಲಿಸುವ ಅಧಿಕಾರ ಹೊಂದಿರುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ವಿವರಣೆಗಳನ್ನು ಪಡೆಯುವ ಹಕ್ಕು ಸದಸ್ಯರಿಗಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷರು / ಉಪಾಧ್ಯಕ್ಷರು ಇದಕ್ಕೆ ಅವಕಾಶ ಮಾಡಿಕೊಡಬೇಕು.
73. ಗ್ರಾಮ ಪಂಚಾಯಿತಿ ಅಧ್ಯಕ್ಷ / ಉಪಾಧ್ಯಕ್ಷ / ಸದಸ್ಯರು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಪಂಚಾಯಿತಿ ಕಾಮಗಾರಿಗಳಿಗೆ ತಾವಾಗಲೀ ತಮ್ಮ ಏಜೆಂಟರ ಮೂಲಕವಾಗಿ ಕರಾರು ಮಾಡಿಕೊಳ್ಳುವುದು ಅಥವಾ ಸಾಮಾಗ್ರಿ ಸರಬರಾಜು ಮಾಡುವುದು ಸಾಬೀತಾದರೆ ಸದಸ್ಯತ್ವ ರದ್ದಾಗುತ್ತದೆ.
74. ಸದಸ್ಯರಿಂದ ಗ್ರಾಮ ಪಂಚಾಯಿತಿಗೆ ಯಾವುದಾದರೂ ಬಾಕಿ ಉಳಿಸಿಕೊಂಡಿದ್ದಲ್ಲಿ ಅಂತಹವರ ಸದಸ್ಯತ್ವ ರದ್ದಾಗುತ್ತದೆ.
75. ಕರ್ನಾಟಕ ಸರ್ಕಾರವು ದಿನಾಂಕ/31/03/2008 ರ ಆದೇಶದಲ್ಲಿ ರಾಜ್ಯದ ಪ್ರತಿ ಗ್ರಾಮ ಪಂಚಾಯಿತಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಹುದ್ದೆಯನ್ನು ಸೃಷ್ಠಿಸಿದೆ.
76. ಪಂಚಾಯಿತಿ ಅಬಿವೃದ್ಧಿ ಅಧಿಕಾರಿಗಳ ಕರ್ತವ್ಯಗಳು
· ಗ್ರಾಮ ಪಂಚಾಯಿತಿಯ ಆಡಳಿತ , ಹಣಕಾಸು ಮತ್ತು ಕರ್ತವ್ಯಗಳ ನಿರ್ವಹಣೆಯ ಸಮಗ್ರ ಜವಾಬ್ದಾರಿ
· ಗ್ರಾಮ ಪಂಚಾಯಿತಿ ನಿಧಿಯ ಡ್ರಾಯಿಂಗ್ ಮತ್ತು ಡಿಸ್ಬರ್ಸಿಂಗ್ ಅಧಿಕಾರಿ
· ರಾಜ್ಯ ಮತ್ತು ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಕಾಮಗಾರಿಗಳ ಸಮರ್ಪಕ ಮತ್ತು ಸಕಾಲಿಕ ಅನುಷ್ಟಾನದ ಜವಾಬ್ದಾರಿ.
· ಗ್ರಾಮ ಪಂಚಾಯಿತಿ ಸಭೆಯ ನಿರ್ಣಯಗಳ ಜಾರಿಯ ಜವಾಬ್ದಾರಿ .
· ಗ್ರಾಮ ಪಂಚಾಯಿತಿ ನಿರ್ವಹಿಸಬೇಕಾದ ವಹಿಗಳ ನಿರ್ವಹಣಾ ಜವಾಬ್ದಾರಿ .
· ಸರ್ಕಾರ , ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿಗಳಿಗೆ ಮಾಸಿಕ ವರದಿ ಮತ್ತು ಎಂ.ಐ.ಎಸ್. ಸಲ್ಲಿಸುವ ಜವಾಬ್ದಾರಿ.
· ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಕರ ಪರಿಷ್ಕರಣೆ ಮತ್ತು ಕರ ವಸೂಲಾತಿಯ ಸಮಗ್ರ ಜವಾಬ್ದಾರಿ.
· ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅನುಷ್ಟಾನದ ಎಂ.ಐ.ಎಸ್ ಮತ್ತು ಪಂಚತಂತ್ರ ತಂತ್ರಾಶದ ನಿರ್ವಹಣೆ .
· ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಇಲಾಖೆಯೊಂದಿಗೆ ಸಮನ್ವಯ ಸಾಧಿಸುವುದು.
· ಗ್ರಾಮ ಪಂಚಾಯಿತಿಯ ಸಿಬ್ಬಂದಿಗಳ ಮೇಲ್ವಿಚಾರಣೆ.
77. ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಕರ್ತವ್ಯಗಳು
· ಗ್ರಾಮ ಪಂಚಾಯಿತಿ ಆಡಳಿತ , ಹಣಕಾಸು ಮತ್ತು ಕರ್ತವ್ಯಗಳ ನಿರ್ವಹಣೆಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ನೆರವು ನೀಡುವುದು.
· ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ನಿಯಂತ್ರಣದಲ್ಲಿ ಕರ್ತವ್ಯ ನಿರ್ವಹಿಸುವುದು
· ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆ , ಸ್ಥಾಯಿ ಸಮಿತಿಗಳ ಸಭೆ , ಇನ್ನಿತರ ಸಭೆಗಳಿಗೆ ತಿಳುವಳಿಕೆ ಪತ್ರ ಹೊರಡಿಸುವುದು.
· ಮೇಲಿನ ಸಭೆಗಳ ಸುಗಮ ನಿರ್ವಹಣೆ ಮತ್ತು ನಿರ್ಣಯಗಳ ದಾಖಲೀಕರಣ ಮಾಡುವುದು.
· ವಾರ್ಡ್ ಮತ್ತು ಗ್ರಾಮ ಸಭೆಗಳನ್ನು ಸಕಾಲದಲ್ಲಿ ಕರೆಯಲು ತಿಳುವಳಿಕೆ ಪತ್ರ ಹೊರಡಿಸುವುದು.
· ವಾರ್ಡ್ ಮತ್ತು ಗ್ರಾಮ ಸಭೆಗಳ ಸಭಾ ನಡವಳಿಗಳನ್ನು ದಾಖಲಿಸುವುದು.
· ಗ್ರಾಮ ಪಂಚಾಯಿತಿ ಜಮಾಬಂದಿ ಕಾರ್ಯಕ್ರಮ ಸಂಪೂರ್ಣ ಜವಾಬ್ದಾರಿ.
· ಗ್ರಾಮ ಪಂಚಾಯಿತಿಗಳ ಆಡಿಟ್ ವರದಿಗಳಿಗೆ ಅನುಪಾಲನಾ ವರದಿ ಸಿದ್ಧಪಡಿಸುವುದು.
· ಬೀದಿ ದೀಪ , ಕುಡಿಯುವ ನೀರಿನ ನಿರ್ವಹಣೆ
· ಸಾರ್ವಜನಿಕ ದೂರಗಳ ಪರಿಶೀಲನೆ , ಜನಸ್ಪಂದನ ಅರ್ಜಿಗಳ ವಿಲೇವಾರಿ
· ಗ್ರಾಮ ಪಂಚಾಯಿತಿಗಳ ಬಜೆಟ್ ತಯಾರಿಸಿ ಅನುಮೋದನೆಗೆ ಮಂಡಿಸುವುದು.
· ಗ್ರಾಮ ಪಂಚಾಯಿತಿಗಳ ವಿವಿಧ ವಹಿಗಳ ನಿರ್ವಹಣೆ
· ಗ್ರಾಮ ಪಂಚಾಯಿತಿಗ ಸದಸ್ಯರ ತರಬೇತಿ ನಿರ್ವಹಣೆ
· ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸೂಚಿಸುವ ಇತರ ಜವಾಬ್ದಾರಿಗಳ ನಿರ್ವಹಣೆ
78. ಪ್ರಸಕ್ತ ಗ್ರಾಮ ಪಂಚಾಯಿತಿಗಳಲ್ಲಿ ಕರ ವಸೂಲಿಗಾರರು , ವಾಟರ್ ಮೆನ್ , ಸ್ವಚ್ಛತಾ ಕಾರ್ಮಿಕರ ಸ್ಥಳೀಯ ನೇಮಕಾತಿಗೆ ಅವಕಾಶ ಕಲ್ಪಿಸಿದೆ. ಇವರು ಗ್ರಾಮ ಪಂಚಾಯಿತಿ ನೌಕರಾಗಿರುತ್ತಾರೆಯೇ ಹೊರತು ಸರ್ಕಾರಿ ನೌಕರರಲ್ಲ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯ ಅನುಮೋದನೆಯೊಂದಿಗೆ ನೌಕರರನ್ನು ನೇಮಕ ಮಾಡಿ , ಅವರ ವೇತನವನ್ನು ಗ್ರಾಮ ಪಂಚಾಯಿತಿ ನಿಧಿಯಿಂದ ಭರಿಸಬಹುದು.
79. ಗ್ರಾಮ ಪಂಚಾಯಿತಿ ನೇಮಕ ಮಾಡಿಕೊಂಡ ಯಾವುದೇ ನೌಕರರಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ / ಕಾರ್ಯದರ್ಶಿ ದಂಡ ವಿಧಿಸಬಹುದು , ವಾರ್ಷಿಕ ಬಡ್ತಿಯನ್ನು ತಡೆಹಿಡಿಯಬಹುದು.
80. ಪ್ರತಿ ವರ್ಷ ಶೇ.10 ರಷ್ಟು ಮನೆಗಳಿಗೆ ಕಡಿಮೆ ಇಲ್ಲದಂತೆ ಶೌಚಾಲಯಗಳನ್ನು ಒದಗಿಸುವುದು ಅಲ್ಲದೇ ಪುರುಷರು ಮತ್ತು ಮಹಿಳೆಯರಿಗೆ ಸಮುದಾಯ ಶೌಚಗೃಹಗಳನ್ನು ನಿರ್ಮಿಸುವುದು.
81. ಪ್ರಸಕ್ತ ಕುಡಿಯುವ ನೀರಿನ ಯೋಜನೆಗಳ ಅನುಷ್ಟಾನವನ್ನು ರಾಜ್ಯ ಸರ್ಕಾರವು ಜಿಲ್ಲಾ ಪಂಚಾಯಿತಿಗೆ ವಹಿಸಿದೆ.ನಿರ್ವಹಣೆಯ ಜವಾಬ್ದಾರಿಯನ್ನು ಗ್ರಾಮ ಪಂಚಾಯಿತಿಗೆ ನೀಡಲಾಗಿದೆ.
82. ರಾಜ್ಯ ಪಂಚಾಯಿತಿ ಪರಿಷತ್ತಿನ ಅಧ್ಯಕ್ಷರು – ಮುಖ್ಯಮಂತ್ರಿಗಳು
83. ರಾಜ್ಯ ಪಂಚಾಯಿತಿ ಪರಿಷತ್ತಿನ ಉಪಾಧ್ಯಕ್ಷರು – ಗ್ರಾಮೀಣಾಭೀವೃದ್ಧಿ ಮತ್ತು ಪಂಚಾಯಿತಿ ರಾಜ್ ಸಚಿವರು
84. ರಾಜ್ಯ ಪಂಚಾಯಿತಿ ಪರಿಷತ್ತಿಗೆ ಸರ್ಕಾರದಿದಂ ನಾಮ ನಿರ್ದೇಶಿಸಲ್ಪಟ್ಟ ಐವರು ಸಚಿವರು ಮತ್ತು 10 ಜಿಲ್ಲಾ ಪಂಚಾಯಿತಿ ಅಧ್ಯಕ್ಷರುಗಳು ಇದರ ಸದಸ್ಯರಾಗಿದ್ದಾರೆ.
85. ರಾಜ್ಯ ಪಂಚಾಯಿತಿ ಪರಿಷತ್ತು ಸಮಿಯಿ ವರ್ಷಕ್ಕೆ ಎರಡು ಬಾರಿಯಾದರೂ ಸಭೆ ಸೇರಬೇಕು.
86. ಮುಂದಿನ ಆರ್ಥಿಕ ವರ್ಷದ , ಅಂದರೆ ಏಪ್ರಿಲ್ 1ನೇ ತಾರಿಖೀನಿಂದ ಮಾರ್ಚಿ 31ನೇ ತಾರೀಖಿನವರೆಗೆ ಅಯವ್ಯವನ್ನು ಗ್ರಾಮ ಪಂಚಾಯಿತಿ ಸಿದ್ಧಪಡಿಸಬೇಕು .ಆಯವ್ಯ ಮತ್ತು ಲೆಕ್ಕಪತ್ರ ನಿಯಮಗಳು 2006 ನಿಯಮ 11 ಮತ್ತು 12 ರನ್ವಯ ಫೇಬ್ರವರಿ 1 ರಿಂದ ಮಾರ್ಚ್ 10 ರೊಳಗೆ ನಡೆಯುವ ಗ್ರಾಮ ಪಂಚಾಯಿತಿ ಸಭೆಯಲ್ಲಿ ಅನುಮೋದನೆ ಪಡೆಯಬೇಕು.
87. 2005 ರಲ್ಲಿ ಕರ್ನಾಟಕ ಸರ್ಕಾರವು ಪಂಚಾಯಿತಿ ಜಮಾಬಂದಿ ನಿರ್ವಹಣೆ ವ್ಯವಸ್ಥೆಯನ್ನು ಜಾರಿಗೆ ತಂದಿತು.
88. ಪಂಚಾಯತ್ ಜಮಾಬಂದಿ ಎಂದರೆ – ಯೋಜನೆಗಳನ್ನು ಜಾರಿಗೊಳಿಸಬೇಕು, ಅವುಗಳಿಗೆ ಹಣಬೇಕು , ಬಳಸಿದ ಹಣವನ್ನು ಪುಸ್ತಕಗಳಲ್ಲಿ ದಾಖಲೀಕರಿಸಬೇಕು. ನಡೆಸಲಾದ ಕಾಮಗಾರಿಗಳ ಗುಣಮಟ್ಟಕ್ಕೂ ಖರ್ಚು ಮಾಡಿದ ಹಣಕ್ಕೂ ಹೊಂದಾಣಿಕೆಯಾಗಬೇಕು . ಈ ಪ್ರಕ್ರಿಯೆಗಳನ್ನು ವರ್ಷಕ್ಕೊಮ್ಮೆ ಸಾರ್ವಜನಿಕರ ಸಮ್ಮುಖದಲ್ಲಿ ತನಿಖೆ ನಡೆಸಿ ತಪ್ಪು ಒಪ್ಪುಗಳನ್ನು ತಿಳಿಯುವುದೇ ಪಂಚಾಯತ್ ಜಮಾಬಂದಿ.
89. ಗ್ರಾಮ ಪಂಚಾಯಿತಿ ಜಮಾಬಂದಿ ತಂಡವನ್ನು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ( ಇಓ ) ಮಾಡಬೇಕು.
90. ಗ್ರಾಮ ಪಂಚಾಯಿತಿ ಜಮಾಬಂದಿಯು ಪ್ರತಿ ವರ್ಷ ಆಗಸ್ಟ್ 16 ರಿಂದ ಸೆಪ್ಟೇಂಬರ್ 15 ರೊಳಗೆ ನಡೆಯಬೇಕು.
91. ಕಾರ್ಯನಿರ್ವಾಹಕ ಅಧಿಕಾರಿ ಜಮಾಬಂದಿ ನಡೆಯುವ ದಿನವನ್ನು ಗ್ರಾಮ ಪಂಚಾಯಿತಿಗಳಿಗೆ 30 ದಿನ ಮೊದಲು ತಿಳಿಸಿರಬೇಕು.
92. ಗ್ರಾಮ ಪಂಚಾಯಿತಿಯ ಎಲ್ಲಾ ಸದಸ್ಯರು ಹಾಗೂ ನೌಕರರು ಜಮಾಬಂದಿ ನಡೆಯುವಾಗ ಇರಬೇಕು . ಗ್ರಾಮ ಪಂಚಾಯಿತಿಯ ಕಿರಿಯ ಇಂಜಿನಿಯರ್ ಇರುವುದು ಕಡ್ಡಾಯ.
93. ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು ಮುಂತಾದ ಅಧಿಕಾರಿಗಳು ಜಮಾಬಂದಿ ಮಾಡಬೇಕು . ಎಲ್ಲಾ ಗ್ರಾಮಗಳಲ್ಲೂ ಅಲ್ಲ . ಕಡೆಯ ಪಕ್ಷ ತಾಲ್ಲೂಕಿನ 2 ಗ್ರಾಮಗಳಲ್ಲಿ ಮಾಡಬೇಕು.
94. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯಿದೆ ದಿನಾಂಕ/07/09/2005 ರಲ್ಲಿ ಜಾರಿಗೆ ಬಂದಿತು.
95. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಮೊದಲ ಹಂತದಲ್ಲಿ ರಾಜ್ಯದ ಬೀದರ್ , ಗುಲ್ಬರ್ಗ , ರಾಯಚೂರು ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ದಿನಾಂಕ/01/04/2006 ರಿಂದ ಜಾರಿಯಲ್ಲಿ ತರಲಾಯಿತು.
96. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಎರಡನೇ ಹಂತದಲ್ಲಿ ರಾಜ್ಯದ ಬೆಳಗಾವಿ, ಬಳ್ಳಾರಿ , ಚಿಕ್ಕಮಗಳೂರು , ಶಿವಮೊಗ್ಗ , ಹಾಸನ , ಮತ್ತು ಕೊಡಗು ಜಿಲ್ಲೆಗಳಲ್ಲಿ ದಿನಾಂಕ/01/04/2007 ರಿಂದ ವಿಸ್ತರಿಸಲಾಯಿತು.
97. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಸದ್ಯ ರಾಜ್ಯದ ಉಳಿದ ಜಿಲ್ಲೆಗಳಿಗೂ ದಿನಾಂಕ/01/04/2008 ರಿಂದ ಜಾರಿಗೊಳಿಸಲಾಯಿತು.
98. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಪ್ರತಿ ಕುಟುಂಬವು ಒಂದು ಆರ್ಥಿಕ ವರ್ಷದಲ್ಲಿ 100 ಮಾನವ ದಿನಗಳ ಕೆಲಸಕ್ಕಾಗಿ ಅರ್ಜಿ ಸಲ್ಲಿಸುವ ಅಧಿಕಾರ ಪಡೆಯುತ್ತದೆ.
99. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಅಕುಶಲ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ 15 ದಿನಗಳೊಳಗಾಗಿ ಉದ್ಯೋಗ ಒದಗಿಸದಿದ್ದಲ್ಲಿ ಅರ್ಜಿದಾರರು ಆರ್ಥಿಕ ವರ್ಷದ ಮೊದಲ 30 ಗಿನಗಳಿಗೆ ಕೂಲಿಯ ಶೇ.25 ರಷ್ಟು ಮತ್ತು ಉಳಿದ ಅವಧಿಗೆ ಶೇ.50 ರಷ್ಟು ನಿರುದ್ಯೋಗ ಭತ್ಯೆಯನ್ನು ಪಡೆಯಲು ಹಕ್ಕು ಹೊದಿರುತ್ತಾರೆ.
100. ಸಾಧ್ಯವಾದಷ್ಟು ಮಟ್ಟಿಗೆ ಕೆಲಸಗಳನ್ನು ಆ ಗ್ರಾಮದ ವ್ಯಾಪ್ತಿಯಲ್ಲಿ ಒದಗಿಸಬೇಕು. ಕೂಲಿ ಕಾರ್ಮಿಕರು ವಾಸವಿರುವ ಗ್ರಾಮದಿಂದ 5 ಕಿ.ಮೀ. ಗಿಂತ ಹೆಚ್ಚಿನ ದೂರದಲ್ಲಿ ಕೆಲಸವನ್ನು ಒದಗಿಸಿದಾಗ ನಿಗದಿತ ದರದ ಶೇ.10 ರಷ್ಟನ್ನು ಹೆಚ್ಚುವರಿಯಾಗಿ ಪಡೆಯಲು ಈ ಕೂಲಿ ಕಾರ್ಮಿಕರಿಗೆ ಹಕ್ಕಿದೆ.

ಗುರುವಾರ, ಅಕ್ಟೋಬರ್ 20, 2011

ಪಂಚಾಯತ್ ರಾಜ್ 73 ನೇ ತಿದ್ದು ಪಡಿ

1. ಪಂಚಾಯಿತಿ ರಾಜ್ಯಗಳು ಅಥವಾ ಅವುಗಳ ಪರಿಕಲ್ಪನೆಗಳು ಭಾರತಕ್ಕೆ ಹೊಸದೇನಲ್ಲ . ಸಂವಿಧಾನದ 40 ನೇ ಪರಿಚ್ಛೇದದಲ್ಲಿ ರಾಜ್ಯ ನೀತಿಯ ನಿರ್ದೇಶಕ ತತ್ವಗಳು ಭಾಗದಲ್ಲಿ ಅದರ ಬಗ್ಗೆ ಮೊದಲೇ ವಿವರಣೆಯನ್ನು ನೀಡಲಾಗಿದೆ.
2. 40 ನೇ ಪರಿಚ್ಛೇದದಲ್ಲಿ ಹೀಗೆ ಹೇಳಲಾಗಿದೆ ರಾಜ್ಯವು ಗ್ರಾಮಗಳಲ್ಲಿ ಪಂಚಾಯಿತಿ ಗಳನ್ನು ರಚಿಸುವತ್ತ ಹಾಗೂ ಅವುಗಳಿಗೆ ವಿಶೇಷ ಅಧಿಕಾರಗಳನ್ನು ನೀಡುವತ್ತ ಗಮನ ಹರಿಸಿ ಅವು ಸ್ವಾಯತ್ತ ಸಂಸ್ಥೆಗಳಾಗಿ ಕಾರ್ಯನಿರ್ವಹಿಸುವಂತೆ ನಿಯಮಗಳನ್ನು ರಚಿಸಬೇಕು .
3. 73 ನೇ ತಿದ್ದುಪಡಿ ಮೂಲಕ ಸಂವಿಧಾನಕ್ಕೆ ಭಾಗ 9 ನ್ನು ಸೇರಿಸಲಾಯಿತು. 243 ನೇ ಪರಿಚ್ಛೇದದ ಮೂಲಕ ಪಂಚಾಯಿತಿಗೆ ಸಂಬಂಧಿಸಿದ ಶಬ್ಧಗಳಾದ ಜಿಲ್ಲೆ, ಗ್ರಾಮಸಭೆ , ಮಧ್ಯಂತರ ಹಂತ , ಪಂಚಾಯಿತಿ , ಪಂಚಾಯಿತಿ ಪ್ರದೇಶ , ಜನಸಂಖ್ಯೆ ಮುಂತಾದ ಶಬ್ದಗಳ ವಿವರಣೆಯನ್ನು ನೀಡಲಾಯಿತು.
4. 243 ಎ ಇದು ಗ್ರಾಮ ಸಭೆಗಳ ಅಧಿಕಾರಗಳ ಬಗ್ಗೆ ವಿವರಿಸುತ್ತದೆ.
5. 243 ಬಿ ಇದು ಪ್ರತಿ ರಾಜ್ಯವೂ ಪಂಚಾಯಿತಿಗಳನ್ನು ಹೊಂದಿರಲೇಬೇಕು ಎಂಬುದರ ಬಗ್ಗೆ ಹೇಳುತ್ತದೆ.
6. 243 ಸಿ ಇದು ಪಂಚಾಯಿತಿ ಹೊಂದಬಹುದಾದ ಸದಸ್ಯರ ಸಂಖ್ಯೆಯ ಬಗ್ಗೆ ಹೇಳುತ್ತದೆ.
7. 243 ಡಿ ಇದು ಪ್ರತಿಯೊಂದು ಪಂಚಾಯಿತಿಗಳಲ್ಲೂ ಅದು ಹೊಂದಿರಬೇಕಾದ ಪ.ಜಾತಿ , ಪ.ಪಂಗಡಗಳ ಮೀಸಲಾತಿಯ ಬಗ್ಗೆ ಹೇಳುತ್ತದೆ. ಅಲ್ಲದೇ 1/3 ರಷ್ಟು ಸ್ಥಾನಗಳು ಮಹಿಳೆಯರಿಗೆ ಮೀಸಲಾತಿ ದೊರಯಬೇಕು ಎಂದು ಹೇಳುತ್ತದೆ.
8. 243 ಇ ಪಂಚಾಯಿತಿಗಳ ಕಾಲಾವಧಿಯನ್ನು ವಿವರಿಸುತ್ತದೆ. ಅದನ್ನು 5 ವರ್ಷಗಳಿಗೆ ನಿಗದಿ ಪಡಿಸುತ್ತದೆ.
9. 243 ಎಫ್ ಇದು ಸದಸ್ಯರುಗಳು ಅನರ್ಹಗೊಳ್ಳುವ ಬಗ್ಗೆ ವಿವರಣೆ ನೀಡುತ್ತದೆ.
10. 243 ಜಿ ಪಂಚಾಯಿತಿಗಳ ಅಧಿಕಾರ ಹಾಗೂ ಜವಾಬ್ದಾರಿಗಳು ಈ ಅಧಿಕಾರಗಳು ಪ್ರತಿಯೊಂದು ಪಂಚಾಯಿತಿಯಲ್ಲೂ ರಾಜ್ಯ ಸರ್ಕರಗಳ ಮೇಲ್ವಿಚಾರಣೆಯಲ್ಲಿ ತಮ್ಮ ಕ್ಷೇತ್ರಗಳ ಅಭಿವೃದ್ಧಿಗಾಗಿ ಕೆಲಸಗಳನ್ನ ಕೈಗೊಂಡು ಅವುಗಳನ್ನು ಪೂರ್ಣಗೊಳಿಸಲು ಬೇಕಾದ ಧಿಕಾರಗಳನ್ನು ಒಳಗೊಂಡಿರುತ್ತದೆ.
11. 243 ಹೆಚ್ ತೆರಿಗೆಗಳನ್ನು ವಿಧಿಸುವ ಅಧಿಕಾರವನ್ನು ವಿವರಿಸುತ್ತದೆ.
12. 243 ಐ ಆರ್ಥಿಕ ಸ್ಥಿತಿಗಳನ್ನು ಅವಲೋಕಿಸಲು ಹಣಕಾಸು ಆಯೋಗಗಳ ರಚನೆಯನ್ನು ವಿವರಿಸುತ್ತದೆ.
13. 243 ಜೆ ಲೆಕ್ಕ ಪ್ತರ ವೀಕ್ಷಣೆಯನ್ನು ವಿವರಿಸುತ್ತದೆ.
14. 243 ಕೆ ಇದು ಪಂಚಾಯಿತಿಯ ಚುನಾವಣೆಯ ಬಗ್ಗೆ ಹೇಳುತ್ತದೆ. ಮತದಾರ ಪಟ್ಟಿ ತಯಾರಿಕೆಯಿಂದ ಹಿಡಿದು ಶಿಸ್ತುಬದ್ಧ ಪಂಚಾಯಿತಿ ರಚನೆಯವರೆಗಿನ ಪ್ರಕ್ರಿಯೆ ಒಳಗೊಂಡಿದೆ.
15. 243 ಎಲ್ ರಾಜ್ಯ ಕ್ಷೇತ್ರಗಳಿಗೆ ಈ ಕಾಯ್ದೆಯು ಅನ್ವಯವಾಗುವ ಬಗ್ಗೆ ವಿವರಣೆ ನೀಡುತ್ತದೆ.
16. 243 ಎಂ ಇದು ಸಂವಿಧಾನದ 244 ನೇ ಪರಿಚ್ಛೇದಗಳಲ್ಲಿ ವಿವರಿಸಿರುವ ಪ್ರಾಂತ್ಯಗಳಿಗೆ 73 ನೇ ತಿದ್ದುಪಡಿ ಕಾಯ್ದೆ ಅನ್ವಯಿಸುವುದಿಲ್ಲ ಎಂಬುದನ್ನು ಹೇಳುತ್ತದೆ.
17. 243 ಎನ್ 73 ನೇ ತಿದ್ದುಪಡಿಯ ಜೊತೆಗೆ ಅದಕ್ಕೆ ಪೂರ್ವದಲ್ಲಿ ಪಂಚಾಯಿತಿಗಳಿಗೆ ಸಂಬಂಧಿಸಿದಂತೆ ಅಸ್ತಿತ್ವದಲ್ಲಿರುವ ಕಾಯ್ದೆಗಳು ಮುಂದುವರಿಯುವ ಬಗ್ಗೆ ಹೇಳುತ್ತದೆ.
18. 243 ಒ ಚುನಾವಣಾ ವಿಷಯಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯಗಳ ಮಧ್ಯಪ್ರವೇಶವನ್ನು ನಿಷೇಧಿಸುತ್ತದೆ.
19. 74 ನೇ ತಿದ್ದು ಪಡಿಯಲ್ಲಿ 9 ಎ ಎಂಬ ಭಾಗವು ಸೇರಿಸಲಾಯಿತು. 243 ನೇ ಪರಿಚ್ಛೇದಕ್ಕೆ ಅನುಚ್ಛೇದಗಳನ್ನು ಸೇರಿಸಲಾಯಿತು. 243 ಪಿ ಯಿಂದ 243 ಝಡ್ ಜಿ ಯ ವರೆಗೆ
20. 74 ನೇ ತಿದ್ದು ಪಡಿಯಲ್ಲಿ 243 ಪಿ ಇದು ಕಮಿಟಿ , ಜಿಲ್ಲೆ ಮಹಾನಗರ ಪ್ರದೇಶ ಮುನಿಸಿಪಲ್ ಪ್ರದೇಶ , ನಗರಸಭೆ , ಪಂಚಾಯತ್ , ಜನಸಂಖ್ಯೆ ಮುಂತಾದ ಶಬ್ದಗಳಿಗೆ ವಿವರಣೆ ನೀಡುತ್ತದೆ.
21. 74 ನೇ ತಿದ್ದು ಪಡಿಯಲ್ಲಿ 243 ಕ್ಯೂ ಇದು ಮುನಿಸಿಪಲಿಟಿಗಳ ರಚನೆಯ ಬಗ್ಗೆ ಹೇಳುತ್ತದೆ.
22. 74 ನೇ ತಿದ್ದು ಪಡಿಯಲ್ಲಿ 243 ಆರ್ ನಗರ ಸಭೆಗಳ ರಚನೆ ಬಗ್ಗೆ ವಿವರಿಸುತ್ತದೆ.
23. 74 ನೇ ತಿದ್ದು ಪಡಿಯಲ್ಲಿ 243 ಎಸ್ ವಾರ್ಡ್ ಕಮಿಟಿಗಳ ರಚನೆ
24. 74 ನೇ ತಿದ್ದು ಪಡಿಯಲ್ಲಿ 243 ಟಿ ಸ್ಥಾನಗಳ ಮೀಸಲಾತಿ ಅಂದರೇ ದುರ್ಬಲ ವರ್ಗ ಹಾಗೂ ಮಹಿಳೆಯರಿಗೆ ಸ್ಥಾನಗಳಲ್ಲಿ ಮೀಸಲಾತಿ ಬಗ್ಗೆ ಹೇಳುತ್ತದೆ.
25. 74 ನೇ ತಿದ್ದು ಪಡಿಯಲ್ಲಿ 243 ಯು ನಗರ ಸಭೆಗಳ ಅವಧಿಯ ಬಗ್ಗೆ ಹೇಳುತ್ತದೆ.5 ವರ್ಷಗಳ ಅವಧಿಯನ್ನು ನಿಗದಿಪಡಿಸಿದೆ.
26. 74 ನೇ ತಿದ್ದು ಪಡಿಯಲ್ಲಿ 243 ವಿ ಸದಸ್ಯರುಗಳು ಅನರ್ಹಗೊಳ್ಳುವ ಬಗ್ಗೆ ವಿವರಿಸುತ್ತದೆ. ಇದು ಪಂಚಾಯಿತಿಗಳಿಗೆ ಇದ್ದಂತೆಯೇ ಇದೆ.
27. 74 ನೇ ತಿದ್ದು ಪಡಿಯಲ್ಲಿ 243 ಡಬ್ಲ್ಯೂ ಅಧಿಕಾರ ಹಾಗೂ ಜವಾಬ್ದಾರಿಗಳಉ ಇದೂ ಕೂಡ ನಗರಸಭೆ ಹಾಗೂ ಪಾಲಿಕೆಗಳು
28. 74 ನೇ ತಿದ್ದು ಪಡಿಯಲ್ಲಿ 243 ಎಕ್ಸ್ ತೆರಿಗೆ ವಿಧಿಸುವ ಅಧಿಕಾರದ ಬಗ್ಗೆ ಹೇಳುತ್ತದೆ. ಅಲ್ಲದೆ ರಾಜ್ಯ ಸರ್ಕಾರದೊಂದಿಗೆ ತೆರಿಗೆ ಹಂಚಿಕೆಯ ಬಗ್ಗೆಯೂ ಹೇಳುತ್ತದೆ.
29. 74 ನೇ ತಿದ್ದು ಪಡಿಯಲ್ಲಿ 243 ವೈ ಇದು ಹಣಕಾಸು ಆಯೋಗದ ಬಗ್ಗೆ ಹೇಳುತ್ತದೆ.
30. 74 ನೇ ತಿದ್ದು ಪಡಿಯಲ್ಲಿ 243 ಝಡ್ ಲೆಕ್ಕ ಪತ್ರವನ್ನು ನಗರಸಭೆಗಳು ಇಡುವ ಬಗ್ಗೆ ಹೇಳುತ್ತದೆ.
31. 74 ನೇ ತಿದ್ದು ಪಡಿಯಲ್ಲಿ 243 ಝಡ್ ಎ ನಗರಸಭೆಯ ಚುನಾವಣೆಗಳ ಬಗ್ಗೆ ಹೇಳುತ್ತದೆ.
32. 74 ನೇ ತಿದ್ದು ಪಡಿಯಲ್ಲಿ 243 ಝಡ್ ಬಿ ರಾಜ್ಯ ಕ್ಷೇತ್ರಗಳಿಗೆ ಇದು ಅನ್ವಯವಾಗುವ ಬಗ್ಗೆ ವಿವರಿಸುತ್ತದೆ.
33. 74 ನೇ ತಿದ್ದು ಪಡಿಯಲ್ಲಿ 243 ಝಡ್ ಸಿ ಪಂಚಾಯಿತಿಗಳಲ್ಲಿ ವಿವರಿಸಿದಂತೆ ಕೆಲವು ಪ್ರದೇಶಗಳಿಗೆ ಇದು ಅನ್ವಯವಾಗುವುದಿಲ್ಲ .
34. 74 ನೇ ತಿದ್ದು ಪಡಿಯಲ್ಲಿ 243 ಝಡ್ ಡಿ ಜಿಲ್ಲಾ ಯೋಜನಾ ಕಮಿಟಿ ಬಗ್ಗೆ ತಿಳಿಸುತ್ತದೆ.
35. 74 ನೇ ತಿದ್ದು ಪಡಿಯಲ್ಲಿ 243 ಝಡ್ ಇ ಮಹಾನಗರ ಪಾಲಿಕೆ ಯೋಜನೆ ಕಮಿಟಿ ಬಗ್ಗೆ ತಿಳಿಸುತ್ತದೆ.
36. 74 ನೇ ತಿದ್ದು ಪಡಿಯಲ್ಲಿ 243 ಝಡ್ ಎಫ್ ನಗರಸಭೆಯ ಹಳೆಯ ಕಾಯ್ದೆಗಳ ಮುಂದುವರಿಯುವಿಕೆ ಬಗ್ಗೆ ತಿಳಿಸುತ್ತದೆ.
37. 74 ನೇ ತಿದ್ದು ಪಡಿಯಲ್ಲಿ 243 ಝಡ್ ಜಿ ನ್ಯಾಯಾಲಯಗಳನ್ನು ಚುನಾವಣೆ ವಿಷಯದಲ್ಲಿ ದೂರವಿಡುತ್ತದೆ.
38. ಗ್ರಾಮ ಪಂಚಾಯಿತಿಗೆ ಚುನಾಯಿತ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಇರುತ್ತಾನೆ.
39. ಗ್ರಾಮ ಪಂಚಾಯಿತಿ ಅಧ್ಯಕ್ಷನಿಗೆ ಅಧಿಕಾರಿಗಳ ಮತ್ತು ನೌಕರರ ಕಾರ್ಯಗಳ ಮೇಲೆ ನಿಯಂತ್ರಣಾಧಿಕಾರಿವಿದೆ.
40. ಪ್ರತಿಯೊಂದು ಗ್ರಾಮ ಪಂಚಾಯಿತಿಗೆ ಒಬ್ಬ ಪೂರ್ಣಕಾಲಿಕ ಕಾರ್ಯದರ್ಶಿ ಇದ್ದು ಅವರು ಸರ್ಕಾರಿ ಅಧಿಕಾರಿಯಾಗಿರುತ್ತಾರೆ.
41. ಕಾರ್ಯದರ್ಶಿಗಳು ಜಿಲ್ಲಾ ಪಂಚಾಯಿತಿ ನಿಧಿಯಿಂದ ತಮ್ಮ ಸಂಬಳ ಭತ್ಯೆಗಳನ್ನು ಪಡೆಯುತ್ತಾರೆ.
42. ಸರ್ಕಾರವು 5 ಸಾವಿರಕ್ಕಿಂತ ಕಡಿಮೆ ಇಲ್ಲದ 7 ಸಾವಿರಕ್ಕಿಂತ ಹೆಚ್ಚು ಇಲ್ಲದ ಜನಸಂಖ್ಯೆಯುಳ್ಳ ಗ್ರಾಮ ಅಥವಾ ಗ್ರಾಮಗಳ ಗುಂಪುಗಳನ್ನು ಒಂದು ಪಂಚಾಯಿತಿ ಎಂದು ಪರಿಗಣಿಸಬಹುದು.
43. ಕೆಲವೊಂದು ಜಿಲ್ಲೆಗಳಲ್ಲಿ 2500 ಕ್ಕಿಂತ ಕಡಿಮೆಯಿಲ್ಲದ ಪ್ರದೇಶವನ್ನು ಕೆಲವು ಜಿಲ್ಲೆಗಳಲ್ಲಿ 5 ಕಿ.ಮೀ. ವ್ಯಾಪ್ತಿಯಲ್ಲಿರುವ ಪ್ರದೇಶವನ್ನು ಗ್ರಾಮ ಪಂಚಾಯಿತಿ ಕೇಂದ್ರಗಳಾಗಿ ಸರ್ಕಾರವು ನಿರ್ಧರಿಸಬಹುದು .
44. ಸಂವಿಧಾನದ 73 ಮತ್ತು 74 ನೇ ತಿದ್ದು ಪಡಿಗಳ ಮೂಲಕ 1985 ರಲ್ಲಿ ಪಂಚಾಯಿತಿ ರಾಜ್ ಕಾಯಿದೆಯಲ್ಲಿ ಮಹಿಳೆಯರಿಗೆ ಶೇ.25 ರಷ್ಟು ಸ್ಥಾನಗಳ ಮೀಸಲಾತಿಯನ್ನು ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ನೀಡಲಾಯಿತು.
45. ಸಂವಿಧಾನದ 73 ಮತ್ತು 74 ನೇ ತಿದ್ದು ಪಡಿಗಳ ಮೂಲಕ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿನ ಒಟ್ಟು ಸ್ಥಾನಗಳಲ್ಲಿ ( ಸದಸ್ಯರ ಸ್ಥಾನಗಳಿಂದ ಅಧ್ಯಕ್ಷ , ಉಪಾಧ್ಯಕ್ಷ ಸ್ಥಾನಗಳಿಗೆ ಸೇರಿ ) ಕನಿಷ್ಠ 1/3 ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ.
46. 1913 ರಲ್ಲಿ ಮೈಸೂರು ಸಂಸ್ಥಾನವು ಗ್ರಾಮಗಳಲ್ಲಿ ಗ್ರಾಮಾಭಿವೃದ್ಧಿ ಸಂಸ್ಥೆಗಳನ್ನು ರಚಿಸುವ ವಿಷಯ ಕೈಗೆತ್ತಿಕೊಂಡಿತು.
47. 1957 ರಲ್ಲಿ ಬಲವಂತರಾಯ್ ಮೆಹತ್ ಸಮಿತಿ ವರದಿ ಪ್ರಜಾಸತ್ತಾತ್ಮಕ ವಿಕೇಂದ್ರಿಕರಣ ಸಿದ್ಧಾಂತವನ್ನು ಪ್ರತಿಪಾದಿಸಿ ಪ್ರಖ್ಯಾತವಾಯಿತು.
48. 73 ನೇ ತಿದ್ದು ಪಡಿಯಲ್ಲಿ ಮೂರು ಹಂತದ ಪಂಚಾಯಿತಿಗಳ ರಚನೆ ಬಗ್ಗೆ ಗ್ರಾಮ , ಮಧ್ಯಂತರ ಮತ್ತು ಜಿಲ್ಲಾ ಮಟ್ಟದಲ್ಲಿ .
49. 73 ನೇ ತಿದ್ದು ಪಡಿಯಲ್ಲಿ ಪಂಚಾಯಿತಿಯಲ್ಲಿ ಒಟ್ಟು ಸ್ಥಾನಗಳ 1/3 ಭಾಗಕ್ಕೆ ಕಡಿಮೆ ಇಲ್ಲದಂತೆ ಮಹಿಳೆಯರಿಗೆ ಮೀಸಲಿಡಬೇಕು.
50. 73 ನೇ ತಿದ್ದು ಪಡಿಯಲ್ಲಿ ಪ್ರತಿ ರಾಜ್ಯ ಸರ್ಕಾರವೂ ಪಂಚಾಯಿತಿಗಳ ಹಣಕಾಸು ಪರಿಸ್ಥಿತಿ ವಿಮರ್ಶೆ ಮಾಡಿ ಅವುಗಳಿಗೆ ಸರ್ಕಾರ ನೀಡಬೇಕಾದ ಹಣದ ಬಗ್ಗೆ ನಿರ್ಧರಿಸಲು ಹಣಕಾಸು ಆಯೋಗ ಒಂದನ್ನು ಪ್ರತಿ 5 ವರ್ಷಕ್ಕೊಮ್ಮೆ ರಚಿಸಬೇಕು.
51. ಮೂರು ಹಂತದ ಪಂಚಾಯಿತಿಗಳಿಗೆ ಸಕಾಲದಲ್ಲಿ ಚುನಾವಣೆ ನಡೆಸಲು ಅನುಕೂಲವಾಗುವಂತೆ ರಾಜ್ಯ ಚುನಾವಣಾ ಆಯೋಗ ರಚಿಸಲು ಕಲಂ 308 ರಲ್ಲಿ ಅವಕಾಶ ಕಲ್ಪಿಸಲಾಗಿದೆ.
52. 73 ನೇ ತಿದ್ದುಪಡಿಗೆ ಅನುಗುಣವಾಗಿ ಕರ್ನಾಟಕ ಪಂಚಾಯತ್ ರಾಜ್ 1993 ಅಧಿನಿಯವನ್ನು ಜಾರಿಗೆ ತರಲಾಯಿತು.
53. ಸರ್ಕಾರವು 5 ಸಾವಿರಕ್ಕಿಂತ ಕಡಿಮೆ ಇಲ್ಲದ 7 ಸಾವರಕ್ಕಿಂತ ಹೆಚ್ಚು ಇಲ್ಲದ ಜನಸಂಖ್ಯೆಯನ್ನುಳ್ಳ ಗ್ರಾಮ ಅಥವಾ ಗ್ರಾಮಗಳ ಗುಂಪನ್ನು ಒಂದು ಪಂಚಾಯಿತಿ ಎಂದು ಪರಿಗಣಿಸಿದೆ.
54. ಗ್ರಾಮ ಪಂಚಾಯಿತಿಗೆ ಚುನಾಯಿತ ಅಧ್ಯಕ್ಷನೂ ಮತ್ತು ಉಪಾಧ್ಯಕ್ಷನು ಇರುತ್ತಾರೆ . ಅಧ್ಯಕ್ಷನಿಗೆ ಗ್ರಾಮ ಪಂಚಾಯಿತಿಯ ಅಧಿಕಾರಿಗಳ ಮತ್ತು ನೌಕರರ ಕಾರ್ಯಗಳ ಮೇಲೆ ಮೇಲ್ವಿಚಾರಣೆ ಮತ್ತು ನಿಯಂತ್ರಣದ ಅಧಿಕಾರವಿದೆ.
55. ಪಂಚಾಯಿತಿ ಸಮಿತಿ ಆಡಳಿತವು ಚುನಾಯಿತ ಅಧ್ಯಕ್ಷ ಮತ್ತು ಸರ್ಕಾರದಿಂದ ನೇಮಿಸಲ್ಪಟ್ಟ ಕಾರ್ಯನಿರ್ವಾಹಣಾಧಿಕಾರಿಯಿಂದ ನಡೆಸಲ್ಪಡುತ್ತದೆ.
56. ಕಾರ್ಯನಿರ್ವಹಣಾಧಿಕಾರಿಯು ರಾಜ್ಯ ಸರ್ಕಾರದ ಎ ದರ್ಜೆ ಅಧಿಕಾರಿ ಅಥವಾ ಅಸಿಸ್ಟೆಂಟ್ ಕಮಿಷನರ್ ರವರಿಗೆ ಸಮನಾ ಹುದ್ದೆಯವರಾಗಿದ್ದು , ಅಧ್ಯಕ್ಷರ ಮೇಲ್ವಿಚಾರಣೆಗೆ ಒಳಪಟ್ಟು ಪಂಚಾಯಿತಿ ಸಮಿತಿಯ ಎಲ್ಲ ಅಧಿಕಾರಗಳು ಹಾಗೂ ನೌಕರರ ಮೇಲೆ ಹತೋಟಿ ಹೊಂದಿದ್ದು ಕೆಲಸಗಳನ್ನು ನಿರ್ವಹಿಸುತ್ತಾರೆ.
57. ಜಿಲ್ಲಾ ಪಂಚಾಯತ್ ಪ್ರತಿ ನಲ್ವತ್ತು ಸಾವಿರ ಜನಸಂಖ್ಯೆಗೆ ಒಬ್ಬರಂತೆ ಹಾಗೂ ಚಿಕ್ಕಮಗಳೂರು , ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರತಿ ಮೂವತ್ತು ಸಾವಿರ ಜನಸಂಖ್ಯೆಗೆ ಹಾಗೂ ಕೊಡಗು ಜಿಲ್ಲೆಯಲ್ಲಿ ಹದಿನೆಂಟು ಸಾವರ ಜನಸಂಖ್ಯೆಗೆ ಒಬ್ಬರಂತೆ ಆರಿಸಿ ಬರುವ ಚುನಾಯಿತ ಸದಸ್ಯರಿರುತ್ತಾರೆ.
58. ತಾಲ್ಲೂಕ್ ಪಂಚಾಯಿತಿ ಪ್ರತಿ ಹತ್ತು ಸಾವಿರ ಜನಸಂಖ್ಯೆಗೆ ಒಬ್ಬರಂತೆ ಸದಸ್ಯರು ಚುನಾಯಿತರಾಗಿ ಬರುವರು .
59. ಜಿಲ್ಲಾಪಂಚಾಯತ್ ನಲ್ಲಿ ಜಿಲ್ಲೆಯ ವಿಧಾನಭಾ , ಲೋಕಸಭಾ , ತಾಲ್ಲೂಕ್ ಪಂಚಾಯಿತಿಯ ಅಧ್ಯಕ್ಷರುಗಳು ರಾಜ್ಯ ಸಭಾ ಮತ್ತು ವಿಧಾನಪರಿಷತ್ತಿನ ಸದಸ್ಯರುಗಳು ಜಿಲ್ಲಾ ಪಂಚಾಯಿತಿಯ ಸದಸ್ಯರುಗಳಾಗಿರುತ್ತಾರೆ.
60. ಬಹಳ ಹಿಂದೆ “ ಪಂಚರು ” ಪಂಚಾಯಿತಿಗಳ ಮುಖ್ಯಸ್ಥರಾಗಿರುತ್ತಿದ್ದರು.
61. ಸಾಮಾಜಿಕವಾಗಿ , ಆರ್ಥಿಕವಾಗಿ ಪ್ರಬಲರಾಗಿದ್ದವರು ಮಾತ್ರ ವಂಶಪಾರಂಪರ್ಯವಾಗಿ “ ಪಂಚ” ರಾಗಿ ಅಧಿಕಾರಿ ನಡೆಸಲು ಅವಕಾಶವಿತ್ತು.
62. 1884 ರಲ್ಲಿ ಬ್ರಿಟಿಷರು ಸ್ಥಳೀಯ ಸರ್ಕಾರಕ್ಕೆ ಆಡಳಿತಾತ್ಮಕ ರೂಪ ಕೊಡುವ ಪ್ರಯತ್ನ ಮಾಡಿದರು. ಒಂದು ಜಿಲ್ಲೆಯನ್ನು ಆಡಳಿತ ಘಟಕವಾಗಿ ರೂಪಿಸಿದರು. ಈ ವ್ಯವಸ್ಥೆಗೆ “ ಲೋಕಲ್ ಫಂಡ್ ಸಮಿತಿ ” ಎಂದು ಕರೆಯಲಾಯಿತು.
63. “ ಲೋಕಲ್ ಫಂಡ್ ಸಮಿತಿ ”ಯಲ್ಲಿ ಜಿಲ್ಲಾ ಕಮಿಷನರ್ ಅಧ್ಯಕ್ಷರಾಗಿದ್ದು ಇನಾಂದಾರರು ಮತ್ತು ಭೂಮಾಲಿಕರು ಸದಸ್ಯರಾಗಿದ್ದರು.
64. ಕರ್ನಾಟಕದಲ್ಲಿ 1903 ರಲ್ಲಿ “ ದಿ ಮೈಸೂರು ಲೋಕಲ್ ಬೋರ್ಡ್ ರೆಗ್ಯುಲೇಷನ್ ” ಕಾಯಿದೆಯನ್ನು ಜಾರಿಗೆ ತರಲಾಯಿತು.
65. “ ದಿ ಮೈಸೂರು ಲೋಕಲ್ ಬೋರ್ಡ್ ರೆಗ್ಯುಲೇಷನ್ ” ಈ ಕಾಯಿದೆಯ ಪ್ರಕಾರ ಜಿಲ್ಲಾ ಮಂಡಳಿ , ತಾಲ್ಲೂಕು ಬೋರ್ಡ್ , ಪಂಚಾಯಿತಿ ಸಂಘಟನೆ ಎಂಬ ಮೂರು ಹಂತದಲ್ಲಿ ಜಾರಿಯಾಯಿತು.
66. 1919 ರಲ್ಲಿ ಅಂದಿನ ಮೈಸೂರು ಸರ್ಕಾರ “ ದಿ ಮೈಸೂರು ಲೋಕಲ್ ಬೋರ್ಡ್ ಮತ್ತು ವಿಲೇಜ್ ಪಂಚಾಯತ್ ಕಾಯಿದೆ “ ಯನ್ನು ಜಾರಿಗೆ ತಂದಿತು.
67. 1926 ರಲ್ಲಿ “ ದಿ ಮೈಸೂರು ಲೋಕಲ್ ಬೋರ್ಡ್ ಮತ್ತು ವಿಲೇಜ್ ಪಂಚಾಯತ್ ಕಾಯಿದೆ “ ಯಲ್ಲಿ ಗ್ರಾಮ ಪಂಚಾಯಿತಿಗಳ ಚುನಾವಣೆಗೆ ಒತ್ತು ನೀಡಲಾಯಿತು. ಆದರೆ 21 ವರ್ಷ ದಾಟಿದ ಪುರಷರಿಗೆ ಮಾತ್ರ ಮತದಾನದ ಅವಕಾಶ ಕಲ್ಪಿಸಲಾಗಿತ್ತು.
68. “ ದಿ ಮೈಸೂರು ಲೋಕಲ್ ಬೋರ್ಡ್ ಮತ್ತು ವಿಲೇಜ್ ಪಂಚಾಯತ್ ಕಾಯಿದೆ “ ಯಲ್ಲಿ ಇತಿಹಾಸದಲ್ಲಿ ಮೊದಲ ಬಾರಿಗೆ ಗ್ರಾಮ ಪಂಚಾಯಿತಿಗಳ ಕಾರ್ಯದರ್ಶಿಗಳ ನೇಮಕಕ್ಕೆ ಅವಕಾಶ ಮಾಡಿಕೊಡಲಾಯಿತು. ಚುನಾಯಿತ ಸದಸ್ಯರೊಬ್ಬರನ್ನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗುತ್ತಿತ್ತು.
69. 1949 ಸೆಪ್ಟೆಂಬರ್ ತಿಂಗಳಲ್ಲಿ ಮೈಸೂರು ರಾಜ್ಯದ ಸ್ಥಳೀಯಾಡಳಿತ ವ್ಯವಸ್ಥೆಯಲ್ಲಿನ ಕೊರತೆಗಳ ಅಧ್ಯಯನ ನಡೆಸಲು ವೆಂಕಟಪ್ಪ ನೇತೃತ್ವದ ಸಮಿತಿಯನ್ನು ರಚಿಸಲಾಯಿತು.
70. ವೆಂಕಟಪ್ಪ ಸಮಿತಿಯು 1950 ಜೂನ್ ತಿಂಗಳಲ್ಲಿ ಸಮಿತಿಯು ವರದಿಯನ್ನು ಒಪ್ಪಿಸಿತು.
71. ವೆಂಕಟಪ್ಪ ಸಮಿತಿಯು ಗ್ರಾಮ ಮಟ್ಟದಲ್ಲಿ ಗ್ರೂಪ್ ಪಂಚಾಯಿತಿ , ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಮಂಡಳಿ ಇರುವ ಎರಡು ಹಂತಗಳ ಸ್ಥಳೀಯಾಡಳಿತ ವ್ಯವಸ್ಥೆ ಮಾಡಬೇಕು .
72. 1959 ರಿಂದ ಎಲ್ಲಾ ರಾಜ್ಯಗಳಲ್ಲೂ ಪಂಚಾಯಿತಿ ರಾಜ್ ಅಧಿನಿಯಮವನ್ನು ಜಾರಿಗೆ ತಂದು ಗ್ರಾಮ ಪಂಚಾಯಿತಿ. ಬ್ಲಾಕ್ ಪಂಚಾಯಿತಿ ಸಮಿತಿ ( ತಾಲ್ಲೂಕು ಬೋರ್ಡ್ ) , ಜಿಲ್ಲಾ ಪರಿಷತ್ ಎಂಬ ಮೂರು ಹಂತಗಳ ಪಂಚಾಯಿತಿ ವ್ಯವಸ್ಥೆಯನ್ನು ಜಾರಿಗೆ ತಂದಿತು.
73. ಅಶೋಕ್ ಮೆಹ್ತಾ ಸಮಿತಿಯು ಎರಡು ಹಂತದ ಪಂಚಾಯಿತಿಗಳಿಗೆ ಶಿಫಾರಸ್ಸು ಮಾಡಿತು. ( ಮಂಡಲ ಪಂಚಾಯಿತಿ , ಜಿಲ್ಲಾ ಪರಿಷತ್ ) .
74. ಪಶ್ಚಿಮ ಬಂಗಾಳ ಮತ್ತು ಕರ್ನಾಟಕ ಸರ್ಕಾರಗಳು ಅಶೋಕ್ ಮೆಹ್ತಾ ಸಮಿತಿಯ ಶಿಫಾರಸ್ಸಿನ ಆಧಾರದಲ್ಲಿ ಪಂಚಾಯಿತಿ ರಾಜ್ ವ್ಯವಸ್ಥೆಯನ್ನು ಹುಟ್ಟು ಹಾಕಿದವು.
75. ಪಂಚಾಯಿತಿ ರಾಜ್ ಸಚಿವ ಅಬ್ದುಲ್ ನಜೀರ್ ಸಾಬ್ ರವರ ಪ್ರಯತ್ನದಿಂದ 1987 – 1992 ರ ಅವಧಿಯಲ್ಲಿ 2 ಹಂತಗಳ ವ್ಯವಸ್ಥೆ ಜಾರಿಗೆ ಬಂದಿತು.
76. ಅಶೋಕ್ ಮೆಹ್ತಾ ಸಮಿತಿಯು ಮಹಿಳೆಯರಿಗೆ ಶೇ.25 ರಷ್ಟು ಪರಿಶಿಷ್ಟರಿಗೆ ಶೇ.15 ರಷ್ಟು ರಾಜಕೀಯ ಮೀಸಲಾತಿಯನ್ನು ಒದಗಿಸಿದ ಹೆಗ್ಗಳಿಕೆ ಕೂಡ ನಜೀರ್ ಸಾಬ್ ಅವರಿಗೆ ಸಲ್ಲಬೇಕು.
77. ಕರ್ನಾಟಕ ಮತ್ತು ಪಶ್ಚಿಮ ಬಂಗಾಳದಲ್ಲಿನ ವ್ಯವಸ್ಥೆಯನ್ನು ಕಂಡು ಪ್ರೇರಿತರಾದ ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರು ಡಾ.ಎಲ್.ಎಂ.ಸಿಂಘ್ವಿ ನೇತೃತ್ವದ ಸಮಿತಿಯನ್ನು ರಚಿಸಿದರು.
78. ಡಾ.ಎಲ್.ಎಂ.ಸಿಂಘ್ವಿ ನೇತೃತ್ವದ ಸಮಿತಿಯು ಇಡೀ ದೇಶಕ್ಕೆ ಏಕರೂಪದ ಪಂಚಾಯಿತಿ ರಾಜ್ ವ್ಯವಸ್ಥೆಯ ಮಾದರಿಯನ್ನು ಈ ಸಮಿತಿ ಶಿಫಾರಸ್ಸು ಮಾಡಿತು.
79. ಡಾ.ಎಲ್.ಎಂ.ಸಿಂಘ್ವಿ ನೇತೃತ್ವದ ಸಮಿತಿಯ ಫಲವಾಗಿಯೇ ಸಂವಿಧಾನದ 73 ನೇ ತಿದ್ದುಪಡಿಯನ್ನು ತರಲಾಗಿದೆ. 1993 ರ ಏಪ್ರಿಲ್ 24 ರಿಂದ ಸಂವಿಧಾನದ 73 ನೇ ತಿದ್ದುಪಡಿಯ ಆಧಾರದಲ್ಲಿ ಮೂರು ಹಂತಗಳ ಪಂಚಾಯಿತಿ ರಾಜ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.
80. 73 ನೇ ತಿದ್ದುಪಡಿಯಲ್ಲಿ ಮಹಿಳೆಯರಿಗೆ 1/3 ಭಾಗ ಮೀಸಲಾತಿ ( ಮುಂದಿನ ಚುನಾವಣೆಯಿಂದ ಮಹಳಿಯೆರಿಗೆ ಶೇ.50 ರಷ್ಟು ಮೀಸಲಾತಿ ).
81. 73 ನೇ ತಿದ್ದುಪಡಿಯಲ್ಲಿ ಪ್ರತಿ 5 ವರ್ಷಕ್ಕೊಮ್ಮೆ ಮೂರು ಹಂತದ ಪಂಚಾಯಿತಿಗಳಿಗೆ ಚುನಾವಣೆ ನಡೆಸುವುದು.
82. 73 ನೇ ತಿದ್ದುಪಡಿಯನ್ವಯ ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳಿಗೆ ವಿಶೇಷವಾಗಿ ಶೇ.33 ರಷ್ಟು ರಾಜಕೀಯ ಮೀಸಲಾತಿಯನ್ನು ಒದಗಿಸಲಾಗಿದೆ. ಇದರಲ್ಲಿ ಅತ್ಯಂತ ಹಿಂದುಳಿದ ವರ್ಗಕ್ಕೆ ಶೇ.80 ಹಾಗೂ ಹಿಂದುಳಿದ ವರ್ಗಕ್ಕೆ ಶೇ.20 ರಷ್ಟು ಮೀಸಲಾತಿಯನ್ನು ಕಲ್ಪಿಸಿದೆ.
83. ಕರ್ನಾಟಕ ಪಂಚಾಯಿತಿ ರಾಜ್ ಕಾಯಿದೆಗೆ 2002 ರಲ್ಲಿ ತಿದ್ದುಪಡಿಯನ್ನು ತರುವ ಮೂಲಕ ವಾರ್ಡ್ ಸಭೆಗಳನ್ನು ಅಸ್ತಿತ್ವಕ್ಕೆ ತರಲಾಗಿದೆ.
84. ಕರ್ನಾಟಕದಲ್ಲಿ ರಾಜ್ಯ ಮಟ್ಟದಲ್ಲಿ ಪಂಚಾಯಿತಿ ರಾಜ್ ಸಂಸ್ಥೆಗಳ ಅಭಿವೃದ್ದಿ ಕುರಿತು ಚರ್ಚಿಸಿ ಸಲಹೆ ನೀಡಲು ಪೂರಕವಾಗಿ ರಾಜ್ಯ ಪಂಚಾಯಿತಿ ಕೌನ್ಸಿಲ್ ರಚನೆಗೆ ಅವಕಾಶ ಕಲ್ಪಿಸಿದೆ.
85. ಸಂವಿಧಾನದ 73 ನೇ ತಿದ್ದುಪಡಿ ಗ್ರಾಮ ಸಭೆಗಳನ್ನು ಅಸ್ತಿತ್ವಕ್ಕೆ ತಂದಿತು. ಇದರಲ್ಲಿ ಕರ್ನಾಟಕವು ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ತಳಮಟ್ಟದಲ್ಲಿ ವಾರ್ಡ್ ಸಭೆಗಳನ್ನು ಹುಟ್ಟು ಹಾಕಿದೆ.
86. 6 ತಿಂಗಳಿಗೊಮ್ಮೆ ವಾರ್ಡ್ ಸಭೆ ನಡೆಸುವುದು
87. ವರ್ಷಕ್ಕೆ ಎರಡು ಬಾರಿ ವಾರ್ಡ್ ಸಭೆ ನಡೆಸುವುದು.
88. ವಾರ್ಡಿನ ಮತದಾರರ ಶೇ.10 ರಷ್ಟು ಅಥವಾ 20 ಸದಸ್ಯರು ಇವುಗಳಲ್ಲಿ ಯಾವುದು ಕಡಿಮೆಯೋ ಅದು ವಾರ್ಡ್ ಸಭೆಯ ಕೋರಂ .
89. ವಾರ್ಡ್ ಸಭೆಯ ಹಾಜರಾತಿಯಲ್ಲಿ ಮಹಿಳೆಯರ ಸಂಖ್ಯೆ ಶೇ.33 ಕ್ಕೆ ಕಡಿಮೆ ಇಲ್ಲದಂತೆ ನೋಡಿಕೊಳ್ಳಬೇಕು . ಪರಿಶಿಷ್ಠ ಜಾತಿ / ಪಂಗಡಗಳ ಜನರ ಹಾಜಾರಾತಿ ಪ್ರಮಾಣ ಅವರ ಒಟ್ಟು ಜನಸಂಖ್ಯೆಗೆ ಅನುಗುಣವಾಗಿರಬೇಕು .
90. ವಾರ್ಡ್ ಸಭೆಯ ಅಧ್ಯಶ್ರತೆಯನ್ನು ಆ ವಾರ್ಡಿನ ಸದಸ್ಯರೇ ವಹಿಸಬೇಕು . ಒಂದು ವಾರ್ಡಿನಲ್ಲಿ ಒಂದಕ್ಕಿಂತ ಹೆಚ್ಚು ಸದಸ್ಯರು ಇರುವ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ನಾಮ ನಿರ್ದೇಶ ಮಾಡಿದ ಅದೇ ವಾರ್ಡಿನ ಇತರ ಸದಸ್ಯ ಅಧ್ಯಕ್ಷತೆ ವಹಿಸಬೇಕು.
91. ವಾರ್ಡ್ ಸಭೆಯ ಕಾರ್ಯಸೂಚಿಯನ್ನು ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಅಂಗೀಕರಿಸಬೇಕು
92. ಕನಿಷ್ಠ ಒಂದು ವಾರಕ್ಕೆ ಮುಂಚಿತವಾಗಿ ವಾರ್ಡ್ ಸಭೆಗೆ ಸಾಕಷ್ಟು ಪ್ರಚಾರ ನೀಡಬೇಕು.
93. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ವಾರ್ಡ್ ಸಭೆಗಳನ್ನು ಮೊದಲು ನಡೆಸಬೇಕು . ನಂತರ ಒಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಂದು ಗ್ರಾಮ ಸಭೆಯನ್ನು ನಡೆಸಬೇಕು.
94. ಗ್ರಾಮ ಸಭೆಯನ್ನು ಕನಿಷ್ಠ 6 ತಿಂಗಳಿಗೊಮ್ಮೆ ನಡೆಸಬೇಕು.
95. ಗ್ರಾಮ ಸಭೆಯ ಶೇ.10 ಕ್ಕಿಂತ ಕಡಿಮೆಯಿಲ್ಲದ ಸದಸ್ಯರ ಕೋರಿಕೆಯ ಮೇರೆಗೆ ವಿಶೇಷ ಗ್ರಾಮಸಭೆಯನ್ನು ಕರೆಯಲು ಕಾಯಿದೆಯಲ್ಲಿ ಅವಕಾಶ ಕಲ್ಪಿಸಿದೆ. ಇಂತಹ ಸಂದರ್ಭಗಳಲ್ಲಿ ಗ್ರಾಮ ಸಭೆಗಳನ್ನು ಕರೆಯುವುದು ಕಡ್ಡಾಯವಾಗಿದೆ. ಆದರೆ ವಿಶೇಷ ಗ್ರಾಮ ಸಭೆಗಳ ನಡುವೆ ಕನಿಷ್ಟ ಮೂರು ತಿಂಗಳ ಅಂತರವಿರಬೇಕು.
96. ಗ್ರಾಮ ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರೇ ವಹಿಸಬೇಕು. ಅವರ ಅನುಪಸ್ಥಿತಿಯಲ್ಲಿ ಉಪಾಧ್ಯಕ್ಷರು ಅಥವಾ ಗ್ರಾಮ ಪಂಚಾಯಿತಿ ನಾಮ ನಿರ್ದೇಶನ ಮಾಡಿದ ಸದಸ್ಯರು ವಹಿಸಬೇಕು.
97. ಗ್ರಾಮ ಸಭೆ ಸದಸ್ಯರ ಒಟ್ಟು ಸಂಖ್ಯೆಯ 1/10 ಕ್ಕೆ ಕಡಿಮೆಯಿಲ್ಲದಷ್ಟು ಅಥವಾ 100 ಸದಸ್ಯರು ಇವುಗಳಲ್ಲಿ ಯಾವುದು ಕಡಿಮೇಯೋ ಅದು ಗ್ರಾಮ ಸಭೆಯ ಕೋರಂ .
98. ಗ್ರಾಮ ಸಭೆಗೆ ಪ್ರತಿ ವಾರ್ಡಿನಿಂದ ಕನಿಷ್ಟ 10 ಜನರು ಗ್ರಾಮ ಸಭೆಯಲ್ಲಿ ಪಾಲ್ಗೋಳ್ಳುವಂತೆ ನೋಡಿಕೊಳ್ಳಬೇಕು.
99. ಗ್ರಾಮ ಸಭೆಯ ಹಾಜರಾತಿಯಲ್ಲಿ ಮಹಿಳೆಯರ ಸಂಖ್ಯೆ ಶೇ.33 ಕ್ಕೆ ಕಡಿಮೆ ಇಲ್ಲದಂತೆ ನೋಡಿಕೊಳ್ಳಬೇಕು. ಪರಿಶಿಷ್ಟ ಜಾತಿ / ಪಂಗಡ ಜನರ ಹಾಜರಾತಿ ಪ್ರಮಾಣ ಅವರ ಜನಸಂಖ್ಯೆಗೆ ಅನುಗುಣವಾಗಿರಬೇಕು.
100. ಪ್ರಕರಣ 4 ರಲ್ಲಿಲ ಗ್ರಾಮ ಪಂಚಾಯಿತಿ ರಚನೆ ಕುರಿತು ಸ್ಪಷ್ಟಪಡಿಸಲಾಗಿದೆ.

ಸೋಮವಾರ, ಜೂನ್ 27, 2011

ಪಿ.ಡಿ.ಓ ಪರೀಕ್ಷಾ ಮಾಹಿತಿ

1. ದಕ್ಷಿಣ ಭಾರತದ ಖ್ಯಾತ ಚಲನಚಿತ್ರ ನಿರ್ದೇಶಕ ಕೆ.ಬಾಲಚಂದರ್ ಅವರಿಗೆ 2010 ರ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಲಭಿಸಿದೆ.
2. ಬ್ರಿಟನ್ ರಾಜಕುಮಾರ ವಿಲಿಯಂ ಮತ್ತು ಕೇಟ್ ಮಿಡ್ಲ್ ಟನ್ ಅವರ ವಿವಾಹ ಲಂಡನ್ನಿನ ಕೇಂಬ್ರಿಜ್ ನಲ್ಲಿರುವ ವೆಸ್ಟ್ ಮಿನ್ ಸ್ಟರ್ ಅಬೆ ಚರ್ಚ್ ನಲ್ಲಿ ನಡೆಯಿತು.
3. ವಿವಾಹದ ಬಳಿಕ ವಿಲಿಯಂಗೆ “ ಡ್ಯೂಕ್ ಆಫ್ ಕೇಂಬ್ರಿಜ್ ” ಮತ್ತು ಕೇಟ್ ಗೆ “ ಡಚಸ್ ಆಫ್ ಕೇಂಬ್ರಿಜ್ ” ಎಂಬ ಬಿರುದನ್ನು ಪ್ರದಾನ ಮಾಡಲಾಯಿತು.
4. ವಿಲಿಯಂ ತಾಯಿ ಡಯಾನಾ 1997 ರಲ್ಲಿ ಕಾರು ಅಪಘಾತದಲ್ಲಿ ಮೃತಪಟ್ಟ ಹಿನ್ನಲೆಯಲ್ಲಿ ರಾಜಕುಮಾರ ಚಾರ್ಲ್ಸ್ ಅವರು ಕೆಮಿಲ್ಲಾ ಪಾರ್ಕರ್ ಬೌಲ್ಸ್ ಅವರನ್ನು ವಿವಾಹವಾಗಿದ್ದಾರೆ.
5. ಮೈಸೂರು ರಾಜ್ಯಕ್ಕೆ ಮೊದಲ ಮುಖ್ಯಮಂತ್ರಿ ಬಂಗಾರಪೇಟೆ ತಾಲ್ಲೂಕಿನ ಕ್ಯಾಸಂಬಳ್ಳಿ ಗ್ರಾಮದ “ಕೆ.ಚಂಗಲರಾ ರೆಡ್ಡಿ ”.
6. ರಾಜಸ್ಥಾನವು ಭಾರತದಲ್ಲಿ ಮೊಟ್ಟ ಮೊದಲ ಬಾರಿ “ ಕ್ರೆಡಿಟ್ ಕಾರ್ಡ್ ” ನೀಡಿದ ರಾಜ್ಯವಾಗಿದೆ.
7. ವಿಶಾಲ ಹಿರಿವಿನ ಆಲದ ಮರ “ ಫೈರಸ್ ಬೆಂಗಾಲೆನ್ಸಿಸ್ ” ಗಿನ್ನಿಸ್ ದಾಖಲೆಯಾಗಿದ್ದು , ಕೋಲ್ಕತ್ತಾದ ರಾಷ್ಟ್ರೀಯ ಸಸ್ಯೋಧ್ಯಾನದಲ್ಲಿದೆ.
8. ಇಂಟರ್ ನ್ಯಾಷನಲ್ ಅಟಾಮಿಕ್ ಎನರ್ಜಿಯ ಕೇಂದ್ರ ಕಛೇರಿ “ ಆಸ್ಟ್ರೀಯಾ ( ವಿಯೆನ್ನಾ )” ದಲ್ಲಿದೆ.
9. 2011 ರ ಜೂನ್ 09 ರಂದು “ ದಕ್ಷಿಣ ಸೂಡಾನ್ ” ಪ್ರತ್ಯೇಕ ದೇಶವಾಗಿ ಉದಯವಾಯಿತು .
10. ದಕ್ಷಿಣ ಸೂಡಾನ್ ನ ಹಂಗಾಮಿ ಅಧ್ಯಕ್ಷರಾಗಿ “ ಸಾಲ್ವಾಕೀರ್ ” ಆಯ್ಕೆಯಾಗಿದ್ದಾರೆ.
11. ದಕ್ಷಿಣ ಸೂಡಾನ್ ರಾಜಾಧಾನಿ “ ಜಾಬಾ ”.
12. ವಿಶ್ವದಲ್ಲಿಯೆ ಅತ್ಯಂತ ಅಧಿಕ ಯುರೇನಿಯಂ ನಿಕ್ಷೇಪ “ ಆಸ್ಟ್ರೇಲಿಯಾ” ದಲ್ಲಿದೆ.
13. ಅಣು ಇಂಧನ ಸಮುಚ್ಚಯ “ ಹೈದರಾಬಾದ್ ” ನಲ್ಲಿದೆ.
14. ಸಮಾಜ ಸೇವಕ ಶ್ರೀ.ಸತ್ಯ ಸಾಯಿಬಾಬಾ 2011 ಏಪ್ರಿಲ್ 24 ರಂದು ಬೆಳಿಗ್ಗೆ 7 :40 ಕ್ಕೆ ನಿಧನರಾದರು.
15. ಇಂದು 186 ದೇಶಗಳಲ್ಲಿ 1200 ಕ್ಕೂ ಅಧಿಕ ಸತ್ಯ ಸಾಯಿ ಕೇಂದ್ರಗಳಿವೆ.
16. ಶ್ರೀ.ಸತ್ಯಸಾಯಿ ಬಾಬಾ ಮುಂದಿನ ಜನ್ಮದಲ್ಲಿ ಮಂಡ್ಯ ಬಳಿಯ ಕಾವೇರಿ ನದಿ ತೀರದ ಹಳ್ಳಿಯೊಂದರಲ್ಲಿ ಕ್ರಿ.ಶ.2023 ರ ವೇಳೆಗೆ ಹುಟ್ಟಿ ಬರುತ್ತೇನೆ . ಈ ಜನ್ಮದಲ್ಲಿ ಸತ್ಯಸಾಯಿ ಆಗಿರುವ ನಾನು ಮುಂದಿನ ಜನ್ಮದಲ್ಲಿ ಪ್ರೇಮಸಾಯಿಯಾಗಿ ಅವತರಿಸಲಿದ್ದೇನೆ.
17. 1926 , ನವೆಂಬರ್ 23 ರಂದು ಆಂಧ್ರಪ್ರದೇಶದ ಅನಂತಪುರ ಜಿಲ್ಲೆ ಚಿತ್ರಾವತಿ ನದಿ ತಟದ ಪುಟ್ಟಪರ್ತಿಯಲ್ಲಿ ಜನಿಸಿದ ಸತ್ಯಸಾಯಿಬಾಬ ಅವರ ಬಾಲ್ಯದ ಹೆಸರು “ ಸತ್ಯನಾರಾಯಣರಾಜು ”.
18. ಕರ್ನಾಟಕದ ಅರ್ಜುನ್ ಹಾಲಪ್ಪ ಅಜ್ಲಾನ್ ಷಾ ಹಾಕಿ ಟೂರ್ನಿಗೆ ಭಾರತದ ಹಾಕಿ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ.
19. ಭಾರತದ ಸಂವಿಧಾನವನ್ನು ತಿದ್ದುಪಡಿ ಮಾಡಲು ಸಂಸತ್ತಿಗೆ ಇರುವ ಅಧಿಕಾರದ ಬಗ್ಗೆ ಸಂವಿಧಾನದ 368 ನೇ ಅನುಚ್ಛೇದದಲ್ಲಿ ವಿವರಿಸಲಾಗಿದೆ.
20. ಲೋಕಪಾಲ ಮಸೂದೆ ಅಣ್ಣಾ ಹಜಾರೆ ನಡೆಸಿದ ಉಪವಾಸ ಸತ್ಯಾಗ್ರಹಕ್ಕೆ ಭಾರೀ ಬೆಂಬಲ ಸಿಕ್ಕಿದ್ದರಿಂದ ಏಪ್ರಿಲ್ 8 ರಂದು ಕೇಂದ್ರ ಸರ್ಕಾರ ಜಂಟಿ ಸಮಿತಿ ರಚನೆಗೆ ಸಮ್ಮತಿಸಿತು.
21. ಲೋಕಪಾಲ್ ಮಸೂದೆಯ ಅಧ್ಯಕ್ಷ “ ಪ್ರಣಬ್ ಮುಖರ್ಜಿ ”.
22. ದೇಶಾದ್ಯಂತ ಸಂಚಲನ ಉಂಟು ಮಾಡಿದ್ದ ಲೋಕಪಾಲ ಮಸೂದೆ ಲೋಕಸಭೆಯಲ್ಲಿ ಮೊದಲು ಮಂಡನೆಯಾಗಿದ್ದು 1968 ರಲ್ಲಿ . 43 ವರ್ಷಗಳಲ್ಲಿ ಎಂಟು ಬಾರಿ ಮಸೂದೆ ಮಂಡನೆಯಾಗಿದ್ದರೂ ಅಂಗೀಕಾರ ಪಡೆಯಲು ಮಾತ್ರ ಸಾಧ್ಯವಾಗಿಲ್ಲ.
23. ಸಂವಿಧಾನದ 169 ನೇ ಅನುಚ್ಛೇದವು ರಾಜ್ಯಗಳಲ್ಲಿ ವಿಧಾನಪರಿಷತ್ ರಚನೆ ಹಾಗೂ ರದ್ದತಿ ಕುರಿತು ವಿವರಿಸುತ್ತದೆ.
24. 1945 ರಲ್ಲಿ ಟಾಟಾ ಇನ್ ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ನ ಸ್ಥಾಪನೆಯೊಂದಿಗೆ ಅಣು ವಿಜ್ಞಾನದಲ್ಲಿ ಸಂಶೋಧನೆಗಳು ಪ್ರರಂಭವಾದವು.
25. 1948 ರಲ್ಲಿ ಭಾರತ ಅಣುಶಕ್ತಿ ಆಯೋಗವು ರಚನೆಯಾಯಿತು
26. 1945 ರಲ್ಲಿ ಅಣು ಶಕ್ತಿ ವಿಭಾಗವನ್ನು , ಟ್ರಾಂಬೆ ಅಣುವಿದ್ಯುತ್ ಕೇಂದ್ರವನ್ನು ಸಹ ಸ್ಥಾಪಿಸಲಾಯಿತು.
27. ಪ್ರಸ್ತುತ ದೇಶದಲ್ಲಿ 20 ಅಣು ಸ್ಥವರಗಳು ಕಾರ್ಯನಿರ್ವಹಿಸುತ್ತಿವೆ.
28. ಅಣು ಸ್ಥಾವರಗಳಿಂದ 2020 ವೇಳೆಗೆ 20 ಸಾವಿರ ಮೆಗಾವ್ಯಾಟ್ ಗಳಷ್ಟು ವಿದ್ಯುತ್ ಉತ್ಪಾದನೆಯ ಗುರಿ ಹೊಂದಲಾಗಿದೆ.
29. ಪ್ರಸ್ತುತ ಭಾರತದಲ್ಲಿ ಅಣು ವಿದ್ಯುತ್ ಶಕ್ತಿಯ ಪಾಲು ಶೇ.2.2 ರಷ್ಟಿದೆ.
30. ದೇಶದ ಎಲ್ಲಾ ಅಣು ವಿದ್ಯುತ್ ಕೇಂದ್ರಗಳ ನಿರ್ಮಾಣ , ನಿರ್ವಹಣೆ ,ವಿನ್ಯಾಸ , ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (NPCIL ) ನ ನೇತೃತ್ವದಲ್ಲಿ ನಡೆಯುತ್ತದೆ.
31. ವಿಶ್ವದಲ್ಲಿಯೇ ಅಣು ವಿದ್ಯುತ್ ನ ಮೇಲೆ ಹೆಚ್ಚಾಗಿ ಅವಲಂಬಿಸಿರುವ ದೇಶವೆಂದರೇ ಫ್ರಾನ್ಸ್ ಶೇ.75 ರಷ್ಟು .
32. ಜಪಾನ್ 54 ಅಣು ರಿಯಾಕ್ಟರ್ ಗಳಿಂದ ಶೇ.29 ರಷ್ಟು ವಿದ್ಯುತ್ ಉತ್ಪಾದಿಸುತ್ತಿದೆ.
33. ವಿಶ್ವದಾದ್ಯಂತ ಅಮೆರಿಕಾದಲ್ಲಿ ಶೇ.27 ರಷ್ಟು , ಫ್ರಾನ್ಸ್ ಶೇ.17 ರಷ್ಟು , ಜಪಾನಿನಲ್ಲಿ ಶೇ.13 ರಷ್ಟು , ರಷ್ಯಾದಲ್ಲಿ ಶೇ.6 ರಷ್ಟು ಜರ್ಮನಿಯಲ್ಲಿ ಶೇ.5 ರಷ್ಟು ಅಣು ವಿದ್ಯುತ್ ಉತ್ಪಾದನೆ ಆಗುತ್ತದೆ.
34. ಅಣು ವಿದ್ಯುತ್ ಉತ್ಪಾದನೆಯಲ್ಲಿ ಭಾರತವು 29 ನೇ ಸ್ಥಾನದಲ್ಲಿದೆ.
35. ವಿಶ್ವದಾದ್ಯಂತ 30 ದೇಶಗಳಲ್ಲಿ 343 ಅಣು ರಿಯಾಕ್ಟರ್ ಗಳು ಕೆಲಸ ಮಾಡುತ್ತಿವೆ. ಇನ್ನೂ 158 ರಿಯಾಕ್ಟರ್ ಗಳು ಶೀಘ್ರದಲ್ಲಿಯೆ ಪ್ರಾರಂಭಿಸಲಿದೆ.
36. ಭಾರತ ಸರ್ಕಾರವು ಅಣು ಶಕ್ತಿ ಕ್ಷೇತ್ರಕ್ಕಾಗಿ ವಿಶೇಷವಾಗಿ ಡಿಪಾರ್ಟ್ ಮೆಂಟ್ ಆಫ್ ಅಟಾಮಿಕ್ ಎನರ್ಜಿಯನ್ನು ಪ್ರಾರಂಭಿಸಿತು.
37. ಮಹಾರಾಷ್ಟ್ರದಲ್ಲಿ ಭಾರತದ ಮೊಟ್ಟ ಮೊದಲನೇ ಅಣು ವಿದ್ಯುತ್ ಕೇಂದ್ರವನ್ನು 1969 ರಲ್ಲಿ ಸ್ಥಾಪಿಸಲಾಯಿತು.
38. ಭಾರತದ ಮೊಟ್ಟ ಮೊದಲನೇ ಭಾರಿ ಜಲ ವಿದ್ಯುತ್ ಕಾರ್ಖಾನೆ “ ನಂಗಲ್ ” ( ಪಂಜಾಬ್ ) 1962 ರಲ್ಲಿ ಸ್ಥಾಪಿಸಲಾಯಿತು.
39. ಸಂವಿಧಾನದ 171 ನೇ ಅನುಚ್ಛೇದ ವಿಧಾನ ಪರಿಷತ್ ಸದಸ್ಯರ ಸಂಖ್ಯೆ ವಿಧಾನಸಭೆಯ 1/3 ರಷ್ಟು ಮೀರಬಾರದೆಂದು ವಿವರಿಸುತ್ತದೆ.
40. ಜಪಾನಿನ ರಾಷ್ಟ್ರೀಯ ಚಿನ್ಹೆ “ ಕ್ರಿಸಾಂತಮ್ ” ( ಚೆಂಡು ಹೂ ).
41. 2011 ಏಪ್ರಿಲ್ 2 ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಧೋನಿ ಪಡೆ ಶ್ರೀಲಂಕಾ ವಿರುದ್ಧ ಅದ್ಭುತವಾಗಿ ಆಡಿ 28 ವರ್ಷಗಳ ಟ್ರೋಪಿಯ ಭರವಾನ್ನ ನಿಗಿಸಿದರು.
42. ಪೈನಲ್ ಪಂದ್ಯದ ಪಂದ್ಯ ಪುರುಷೋತ್ತಮ ನಾಯಕ “ ಮಹೇಂದ್ರ ಸಿಂಗ್ ಧೋನಿ ”.
43. 10 ನೇ ವಿಶ್ವ ಕಪ್ ನ ಸರಣಿ ಶ್ರೇಷ್ಠ ಪ್ರಶಸ್ತಿಯನ್ನ “ ಯುವರಾಜ್ ಸಿಂಗ್ ” ಪಡೆದರು.
44. ಸಚಿನ್ ತೆಂಡೂಲ್ಕರ್ ಈ ಬಾರಿ ಆಡಿದ್ದು 451 ನೇ ಏಕದಿನ ಪಂದ್ಯ .18 ಸಾವಿರ ರನ್ ಗಡಿ ದಾಟಿ ದಾಖಲೆ ನಿರ್ಮಿಸಿದರು. ಅಂತರರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ 94 ನೇ ಅರ್ಧ ಶತಕದ ದಾಖಲೆ ಮಾಡಿದರು.
45. ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ಪಾಕಿಸ್ತಾದ ವಿರುದ್ಧ ಸತತ 5 ನೇ ಬಾರಿ ಗೆಲುವ ದಾಖಲಿಸಿತು.
46. ವಿರೇಂದ್ರ ಸೆಹ್ವಾಗ್ ಮತ್ತು ಎಂ.ಎಸ್.ಧೋನಿ ಪಾಕಿಸ್ತಾನದ ವಿರುದ್ಧ ಏಕದಿನ ಕ್ರಿಕೆಟ್ ನಲ್ಲಿ 1000 ರನ್ ಗಡಿ ದಾಟಿದ ಸಾಧನೆ ಮಾಡಿದರು.
47. ಆಸ್ಟೇಲಿಯಾದ ಕ್ರಿಕೆಟ್ ತಂಡದ ನಾಯಕ ರಿಕಿ ಪಾಂಟಿಂಗ್ ಅವರು ವಿಶ್ವಕಪ್ ನಲ್ಲಿ 1000 ರನ್ ಪೂರೈಸಿದ ಮೊದಲ ನಾಯಕ ಎನಿಸಿದರು .
48. ವಿಶ್ವದಲ್ಲಿಯೇ ಅತ್ಯಧಿಕವಾಗ ಜಪಾನಿನಲ್ಲಿ 24 ಸಲ ಸುನಾಮಿ ಸಂಭವಿಸಿದೆ.
49. ಭಾರತದ ಜೊತೆ ಅತ್ಯಂತ ಉದ್ಧವಾದ ಸರಹದ್ದನ್ನು ಹೊಂದಿರುವ ದೇಶ “ ಬಾಂಗ್ಲಾದೇಶ”.
50. 2015 ರ ವಿಶ್ವಕಪ್ ಅಸ್ಟ್ರೇಲಿಯಾ – ನ್ಯೂಜಿಲೆಂಡ್ ನಲ್ಲಿ , 2019 ರ ವಿಶ್ವಕಪ್ ಇಂಗ್ಲೇಂಡ್ ನಲ್ಲಿ ನಡೆಯಲಿದೆ. ಪಾಲ್ಗೋಳ್ಳುವ ತಂಡಗಳ ಸಂಖ್ಯೆ ಕೇವಲ 10 ಇರುತ್ತದೆ.
51. ಸುನಾಮಿ ಎಂದರೇ “ ಅಲೆಗಳ ಬೀಭತ್ಸ್ಯ” ಎಂದು ಅರ್ಥ.
52. 1975 ರಲ್ಲಿ ಇಂಗ್ಲೇಂಡ್ ನಲ್ಲಿ ಆರಂಭವಾದ ಮೊದಲ ವಿಶ್ವಕಪ್ ಕ್ರಿಕೆಟ್ ವಿಜೇತ ತಂಡ ವೆಸ್ಟ್ ಇಂಡೀಸ್ , ನಾಯಕ ಕ್ಲೈವ್ ಲಾಯ್ಡ್ , ಆಸ್ಟ್ರೇಲಿಯಾ ರನ್ನರ್ ಆಪ್
53. ಭಾರತದ ಕಂಟ್ರೋಲರ್ ಅಂಡ್ ಆಡಿಟ್ ಜನರಲ್ ರನ್ನು ರಾಷ್ಟ್ರರಪತಿಗಳು ನೇಮಕ ಮಾಡುತ್ತಾರೆ.
54. ಭಾರತದ ಸಂವಿಧಾನದ ಪ್ರಕಾರ , ರಾಜ್ಯಗಳ ಕಾರ್ಯನಿರ್ವಹಣಾಧಿಕಾರಿಯೆಂದರೆ “ ರಾಜ್ಯಪಾಲರು ” ( ಗವರ್ನರ್ ).
55. ಹೆಡ್ ಹಂಟರ್ಸ್ ,ಡಯಾಕನ್ ಎಂಬ ಗಿರಿಜನರು ಬೋರ್ನಿಯಾ ( ಇಂಡೋನೇಷಿಯಾ ) ದ ಪ್ರಾಂತ್ಯಾದಲ್ಲಿ ವಾಸಿಸುತ್ತಾರೆ.
56. ಸಮಾನ ಭೂಕಂಪ ತೀವ್ರತೆಯುಳ್ಳ ಪ್ರದೇಶವನ್ನು ಒಂದುಗೂಡಿಸುವ ರೇಖೆಯನ್ನು “ ಐಸೋಸೀರ್ಸಲ್ ” ಎಂದು ಕರೆಯುತ್ತಾರೆ.
57. ವಿಶ್ವದಲ್ಲಿಯೇ ಅತಿ ದೊಡ್ಡ ಅರಣ್ಯ ಸಮೂಹವು “ ಟೈಗಾರ್ ಮಂಡಲ ” ಪ್ರಾಂತ್ಯದಲ್ಲಿದೆ.
58. ಸೂರ್ಯನ ನಂತರ ನಮಗೆ ಅತ್ಯಂತ ಹತ್ತಿರವಿರುವ ನಕ್ಷತ್ರವೆಂದರೆ “ ಫಾಕ್ಸಿಮಾ ಸೆಂಟಾರಿ ”.
59. ಏಷ್ಯಾದಲ್ಲೇ ದೊಡ್ಡದಾದ “ ದರೋಜಿ ಕರಡಿಧಾಮ ” ಬಳ್ಳಾರಿ ಜಿಲ್ಲೆಯಲ್ಲಿದೆ.
60. 24 ನೇ ಜನವರಿ 2011 ಅನ್ನು ರಾಷ್ಟ್ರೀಯ ಹೆಣ್ಣು ಮಗುವಿನ ದಿನವನ್ನಾಗಿ ಆಚರಿಸಲಾಯಿತು.
61. ಭೂಕಂಪದ ತೀವ್ರತೆಯನ್ನು ಅಳೆಯುವ ರಿಕ್ಟರ್ ಮಾಪಕವನ್ನು ಚಾರ್ಲ್ಸ್ ರಿಕ್ಟರ್ 1935 ರಲ್ಲಿ ಕಂಡುಹಿಡಿದರು.
62. ಶ್ವಾಸನಾಳದ ಮುಂದೆ ಹಾಗೂ ಗಂಟಲಿನ ಕೆಳಗೆ ಇರುವ ಥೈರಾಯಿಡ್ ಗ್ರಂಥಿಯು ಈ ಹಾರ್ಮೋನ್ ಸ್ರವಿಸುತ್ತದೆ. “ ಥೈರಾಕ್ಸಿನ್ ”.
63. “ ಪೇರಂಕೈಮ ” ಈ ಅಂಗಾಂಶ ನೀರು ಮತ್ತು ಆಹಾರ ಸಂಗ್ರಹಿಸುವ ಕಾರ್ಯವನ್ನು ನಿರ್ವಹಿಸುತ್ತದೆ.
64. ದೇಹದ ಕ್ರಮಬದ್ಧವಾದ ಬೆಳವಣಿಗೆ ಮತ್ತು ಸಂವರ್ಥನೆಗಳಿಗೆ ಹಾಗೂ ದೇಹಕ್ಕೆ ಅತ್ಯಂತ ಕನಿಷ್ಠ ಪ್ರಮಾಣದಲ್ಲಿ ಬೇಕಾಗಿರುವ ಕಾರ್ಬಾನಿಕ್ ಸಂಯುಕ್ತಗಳು “ ಜೀವ ಸತ್ವಗಳು ”.
65. ಶಿಶುಗಳ ಆಹಾರದಲ್ಲಿ ಪ್ರೋಟಿನ್ ಮತ್ತು ಕಾರ್ಬೋಹೈಡ್ರೇಟ್ ಕಡಿಮೆ ಇದ್ದಲ್ಲಿ “ ಪೋಷಣಾ ಮರಸ್ಮಸ್ ” ಕಾಯಿಲೆ ಉಂಟಾಗುತ್ತದೆ.
66. ಒಂದೇ ರೀತಿಯ ಹವಾಮಾನ ಪರಿಸ್ಥಿತಿಯನ್ನು ಹೊಂದಿರುವ ವಿಶಾಲವಾದ ಭೌಗೋಳಿಕ ಪ್ರದೇಶದಲ್ಲಿರುವ ಪರಿಸರ ವ್ಯವಸ್ಥೆಗಳಿಗೆ “ ಬಯೋಮ್ ” ಎಂದು ಕರೆಯುತ್ತಾರೆ.
67. ತಂತಿಯ ಮೂಲಕ ವಿದ್ಯುತ್ ಹರಿಯುವಾಗ ಸ್ವಲ್ಪ ವಿದ್ಯುಚ್ಛಕ್ತಿ ಉಷ್ಣಶಕ್ತಿಯಾಗಿ ರಿವರ್ತನೆಯಾಗುವುದಕ್ಕೆ “ ವಿದ್ಯುತ್ಪ್ರವಾಹದ ಉಷ್ಣೋತ್ಪಾದನೆ ಪರಿಣಾಮ ” ಎಂದು ಕರೆಯುತ್ತಾರೆ.
68. ಹೆಚ್ಚು ಸಾಂದ್ರ ಮಾಧ್ಯಮದಿಂದ ಕಡಿಮೆ ಸಾಂದ್ರ ಮಾಧ್ಯಮಕ್ಕೆ ಬೆಳಕು ಪ್ರಸಾರವಾಗುವಾಗ ಮಾಧ್ಯಮಗಳನ್ನು ಪ್ರತ್ಯೇಕಿಸುವಾಗ ಮೈಯಲ್ಲಿ ಉಂಟಾಗುವ ಪತನಕೋನ ಕ್ರಾಂತಿಕೋನಕ್ಕಿಂತ ದೊಡ್ಡದಾಗಿರುವುದಕ್ಕೆ “ ಸಂಪೂರ್ಣ ಆಂತರಿಕ ಪ್ರತಿಫಲನ ” ಎಂದು ಕರೆಯುವರು .
69. ಎರಡೂ ಕಾಯಗಳು ಒಂದರ ಮೇಲೊಂದು ಉಂಟು ಮಾಡುವ ಪರಸ್ಪರ ಕ್ರಿಯೆಗಳು ಯಾವಾಗಲೂ ಸಮವಾಗಿರುತ್ತವೆ ಇದು ನ್ಯೂಟನ್ ನ “ ಮೂಕನೇ ನಿಯಮ ” ವಾಗಿದೆ.
70. ವಸ್ತುವಿಗೆ ಉಷ್ಣ ನೀಡಿದಾಗ ವಸ್ತುವಿನ ಅಣುಗಳ ನಡುವೆ “ ಚಲನ ಶಕ್ತಿ ” ಹೆಚ್ಚಾಗುತ್ತದೆ.
71. ಒಂದು ಕಿಲೋಗ್ರಾಂ ರಾಶಿಯುಳ್ಳ ವ್ಸತುವಿನ ತಾಪವನ್ನು ಒಂದು ಡಿಗ್ರಿ ಸೆಲ್ಸಿಯಸ್ ನಷ್ಟು ಹೆಚ್ಚಿಸಲು ನೀಡಬೇಕಾದ ಉಷ್ಣಕ್ಕೆ ಆ ವಸ್ತುವಿನ “ ವಿಶಿಷ್ಟೋಷ್ಣ ” ಎಂದು ಕರೆಯುವರು.
72. ಭಾರವಾಗಿರುವ ಪರಮಾಣು ಬೀಜಗಳು ನಿರ್ದಿಷ್ಟ ವಿಕಿರಣಗಳನ್ನು ಉತ್ಸರ್ಜಿಸುತ್ತ ತಮ್ಮಷ್ಟಕ್ಕೆ ತಾವೇ ಕ್ಷಯಿಸಿ ಹೋಗುವುದಕ್ಕೆ “ ವಿಕಿರಣ ಪಟುತ್ವ ” ಎಂದು ಕರೆಯುವರು.
73. ವಿಕರಣಪಟುತ್ವವನ್ನು ಹೆನ್ರಿ ಬೆಕೆರಲ್ ಎಂಬ ಫ್ರಾನ್ಸ್ ದೇಶದ ವಿಜ್ಞಾನಿ 1896 ರಲ್ಲಿ ಆವಿಷ್ಕರಿಸಿದ.
74. ಮೇರಿ ಕ್ಯೂರಿ ಮತ್ತು ಪಿಯರಿ ಕ್ಯೂರಿ ಈ ದಂಪತಿಗಳು 1898 ರಲ್ಲಿ ಪೊಲೊನಿಯಮ್ ಮತ್ತು ಇದರ ನಂತರ ರೇಡಿಯಮ್ ಎಂಬ ಧಾತುವನ್ನು ಆವಿಷ್ಕರಿಸಿದರು.
75. 1903 ರ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಪಡೆದುಕೊಂಡರು.
76. ಕಾರ್ಬನ್ ಮತ್ತು ಹೈಡ್ರೋಜನ್ ಗಳನ್ನು ಹೊಂದಿರುವ ಸಾವಯವ ಸಂಯುಕ್ತಗಳು “ ಹೈಡ್ರೋಕಾರ್ಬನ್ ”.
77. ಅತ್ಯಂತ ಸರಳ ಹೈಡ್ರೋಕಾರ್ಬನ್ “ ಮಿಥೇನ್ ”. ಇದರ ಅಣುಸೂತ್ರ CH4.
78. ಜೇಡಿಮಣ್ಣು ಮತ್ತು ಅಲ್ಯೂಮಿನಿಯಂ ಸಿಲಿಕೇಟ್ ನ ಸಂಯುಕ್ತಗಳ ಮಿಶ್ರಣದಿಂದ “ ಪಿಂಗಾಣಿ ” ವಸ್ತು ತಯಾರಿಸುತ್ತಾರೆ.
79. ಚೀನಾ ಪಾತ್ರೆ, ಪಿಂಗಾಣಿ, ಇಟ್ಟಿಗೆಯಂತಹ ಜೇಡಿಮಣ್ಣಿನ ವಸ್ತುಗಳನ್ನು “ ಸೆರಾಮಿಕ್ಸ್ ”ಗಳೆಂದು ಕರೆಯುತ್ತಾರೆ.
80. ಜೇಡಿ ಮಣ್ಣು ಮತ್ತು ಅಲ್ಯೂಮಿನಿಯಂ ಸಿಲಿಕೇಟ್ ನೊಂದಿಗೆ ಇತರ ಸಂಯುಕ್ತಗಳ ಮಿಶ್ರಣ .ಇದು ಗಾಳಿ ನೀರು ಮತ್ತು ಕಾರ್ಬನ್ ಡೈ ಆಕ್ಸೈಡ್ ನ ವರ್ತನೆಯಿಂದಾಗಿ ಸಿಲಿಕೇಟ್ ಬಂಡೆಗಳ ಸವೇತದಿಂದ ಉಂಟಾಗುತ್ತದೆ.
81. ಸಾಬೂನೀಕರಣ ಪ್ರಕ್ರಿಯೆಯಲ್ಲಿ ಮೇದಾಮ್ಲವನ್ನು ಪ್ರಬಲ ಸೋಡಿಯಂ ಹೈಡ್ರಾಕ್ಸೈಡ್ ನೊಂದಿಗೆ ಬೆರೆಸಿ ಕಬ್ಬಿಣದ ಹಂಡೆಯಲ್ಲಿ ಕಾಯಿಸಿದಾಗ ಉಂಟಾಗುವ ಪದಾರ್ಥ “ ಗ್ಲಿಸರಾಲ್ ”.
82. ಸ್ವೀಡನ್ ದೇಶದ “ ಕಾರ್ಲ್ ವಿಲ್ ಹೆಲ್ಮ್ ಷೀಲೆ ” ಎಂಬ ರಾಸಾಯನಿಕ ವಿಜ್ಞಾನಿ ಸಾಬೂನು ತಯಾರಿಸುವ ಪ್ರಕ್ರಿಯೆಯನ್ನು ಆಕಸ್ಮಿಕವಾಗಿ 1783 ರಲ್ಲಿ ಪತ್ತೆ ಹಚ್ಚಿದರು .
83. ಪ್ರಕೃತಿಯಲ್ಲಿ ದೊರೆಯುವ ಅತ್ಯಂತ ಕಥಿಣ ವಸ್ತು “ ವಜ್ರ ”.
84. 27 ನೇ ಮಾರ್ಚ್ 2011 ರಂದು ವಿಶ್ವ ರಂಗಭೂಮಿ ದಿನ .
85. ಐ.ಪಿ.ಎಲ್ ಕ್ರಿಕೆಟ್ ಮ್ಯಾಚ್ 4 ನೇ ಆವೃತ್ತಿ ಏಪ್ರಿಲ್ 8 ರಿಂದ ಮೇ 28 ರ ವರೆಗೆ ನಡೆಯಿತು.
86. ಸಮಭಾಜಕ ವೃತ್ತದ ಎರಡೂ ಕಡೆಯ ಉಷ್ಣವಲಯ ಮತ್ತು ಉಪ ಉಷ್ಣ ವಲಯದಲ್ಲಿ “ ಪರಿಸರಣ ಮಳೆ ” ಉಂಟಾಗುತ್ತದೆ.
87. ಸಾಗರದ ನೀರು ನಿಯತಕಾಲಿಕವಾಗಿ ಏರಿ – ಇಳಿಯುವುದನ್ನೂ “ ಸಾಗರದ ಉಬ್ಬರವಿಳಿತ ” ಎಂದು ಕರೆಯುವರು .
88. ಸಾಗರದ ಉಬ್ಬರವಿಳಿತ ಪ್ರತಿ 12 ಗಂಟೆ 26 ನಿಮಿಷಕ್ಕೊಮ್ಮೆ ಸಂಭವಿಸುತ್ತದೆ.
89. ಟೈಗಾ ಪ್ರದೇಶ ಅಥವಾ ಮೊನಚಾದ ಅರಣ್ಯ ಪ್ರದೇಶಗಳು 50 ಯಿಂದ 70 ಡಿಗ್ರಿ ಉತ್ತರ ಮತ್ತು ದಕ್ಷಿಣ ಅಕ್ಷಾಂಶಗಳ ನಡುವೆ ಕಂಡುಬರುತ್ತದೆ.
90. ವಿಶ್ವದ 2 ನೇ ದೊಡ್ಡ ಸಿಹಿನೀರಿನ ಸರೋವರ ಆಫ್ರಿಕಾ ಖಂಡದ ಲೇಕ್ ತ್ಯಾಂನ್ ಯಿಕಾ ( ಆಫ್ರಿಕನ್ ಗ್ರೇಟ್ ಲೇಕ್ )
91. ಟೈಗಾ ಪ್ರದೇಶ ಅಥವಾ ಮೊನಚಾದ ಅರಣ್ಯ ಪ್ರದೇಶಗಳಲ್ಲಿ ಪೈನ್ , ಸಿಡಾರ್ , ಫರ್ , ಸ್ಟ್ರೂಸ್ , ಲಾರ್ಚ್ , ಹೆಮ್ಲಾಕ್ ಮುಂತಾದ ಮರಘಲು
92. ಉತ್ತರ ಭಾರತದ ಮಹಾ ಮೈದಾನದ ನೈರುತ್ಯಕ್ಕೆ ಇರುವ ಮರುಭಾಮಿ “ ಥಾರ್ ಮರುಭೂಮಿ ”.
93. ಉತ್ತರ ಕರ್ನಾಟಕದಿಂದ ದಕ್ಷಿಣದ ಕನ್ಯಾಕುಮಾರಿಯವರೆಗೆ ಸುಮಾರು 550 .ಕಿ.ಮೀ. ಉದ್ದವಾಗಿರುವ ಕರಾವಳಿ ಮೈದಾನ “ ಮಲಬಾರ್ ”.
94. “ವೆಂಬನಾಡ ” ಸರೋವರವು ಮಲಬಾರ್ ತೀರದ ಅತಿದೊಡ್ಡ ಹಿನ್ನೀರಿನ ಸರೋವರವಾಗಿದೆ.
95. ವಿಶ್ವದ ಅತಿ ದೊಡ್ಡ ಒಳಾಂಗಣ ಥೀಮ್ ಪಾರ್ಕ್ ಅಬುದಾಭಿಯ “ ಪೆರಾರಿ ಥಿಮ್ ಪಾರ್ಕ್ ” ಇದು ಗಿನ್ನಿಸ್ ಪುಸ್ತಕದಲ್ಲಿ ದಾಖಲಾಗಿದೆ.
96. ಕಪ್ಪೆ ಅರಭಟ್ಟನ ಶೌರ್ಯ ಪರಾಕ್ರಮಗಳ ಬಗ್ಗೆ ಉಲ್ಲೇಖವಿರುವ ಶಾಸನ “ ಬಾದಾಮಿ ಶಾಸನ ”.
97. ಬಾದಾಮಿ ಶಾಸನ ಬಿಜಾಪುರ ಜಿಲ್ಲೆಯ ಬಾದಾಮಿಯಲ್ಲಿರುವ ಕನ್ನಡದ ಪ್ರಮುಖ ಶಾಸನ ಇದರ ಕಾಲ ಸುಮಾರು ಕ್ರಿ.ಶ.7 ನೇ ಶತಮಾನ.
98. ಜಲಾಲುದ್ದೀನ್ ತೀರ ಪ್ರದೇಶದಲ್ಲಿ ಅತಿಯಾಗಿ ಮಂಗೋಲರ ದಾಳಿಯನ್ನು ಯಶಸ್ವಿಯಾಗಿ ಹತ್ತಿಕ್ಕಿ ಸುಲ್ತಾನನಿಂದ “ ಷಯಿಸ್ತಾಖಾನ್ ” ಎಂಬ ಬಿರುದು ಪಡೆದನು.
99. ಕ್ರಿ.ಶ.1301 ರ ರಣಥಂಬೋರ್ ಆಕ್ರಮಣವು “ ಅಲ್ಲಾವುದ್ದೀನ್ ಖಿಲ್ಜಿ ಮತ್ತು ರಾಣಾ ಹಮ್ಮೀರ್ ದೇವ ” ಮಧ್ಯೆ ನಡೆಯಿತು.
100. ಆಗ್ರಾ ನಗರದ ಸ್ಥಾಪನೆಯ ಕೀರ್ತಿ ಲೂದಿ ಸಂತತಿಯ ಈ ಅರಸನಿಗೆ ಸಲ್ಲುತ್ತದೆ. “ ಸಿಕಂದರ್ ಲೂದಿ ”.
101. ಸಣ್ಣ ಕಥೆಗಳ ಜನಕ ಎಂದು “ ಮಾಸ್ತಿ ವೆಂಕಟೇಶ ಅಯ್ಯಂಗಾರ್ ” ರವರನ್ನ ಕರೆಯುತ್ತಾರೆ.
102. ಕ್ರಿಯೆಯ ಅರ್ಥವನ್ನು ಕೊಡುವ ಮತ್ತು ಪ್ರತ್ಯಯವನ್ನು ಹೊಂದದೇ ಇರುವ ಕ್ರಿಯಾಪ್ರಕೃತಿ “ ಧಾತು ”.
103. ಹರ್ಷವರ್ಧನನ ಆಸ್ಥಾನದಲ್ಲಿದ್ದ ಬಾಣ ಕವಿಯು ತನ್ನ ಅಶ್ರಯದಾತನನ್ನು ಕುರಿತು ರಚಿಸಿದ ಕೃತಿ “ ಹರ್ಷ ಚರಿತೆ ”.
104. ಬಾಣನ “ ಕಾದಂಬರಿ ” ಕೃತಿಯ ಆಧಾರದಿಂದ ಕನ್ನಡದ ಒಂದನೇ ನಾಗವರ್ಮನು ಚಂಪೂ ಶಾಲಿಯಲ್ಲಿ “ ಕರ್ನಾಟಕ ಕಾದಂಬರಿ ”ಯನ್ನು ರಚಿಸಿದರು.
105. “ ರಾಮಾಯಣ” ವನ್ನು ರಚಿಸಿದ ಮಹರ್ಷಿ ಎಂದು “ ವಾಲ್ಮಿಕಿ ” ಕವಿಯನ್ನ ಕರೆಯುತ್ತಾರೆ.
106. ನಾಮಪದ ಕ್ರಿಯಾಪದಗಳಂತೆ ಲಿಂಗ ವಚನ ವಿಭಕ್ತಿಗಳಿಂದ ರೂಪಭೇದವನ್ನು ಹೊಂದದೇ ಏಕರೂಪವಾಗಿರುವ ಶಬ್ದಗಳಿಗೆ “ ಅವ್ಯಯಗಳು ” ಎಂದು ಕರೆಯುವರು.
107. 70 ಜಿಲ್ಲೆಗಳನ್ನು ಹೋದಿರುವ ಉತ್ತರ ಪ್ರದೇಶ ಭಾರತದ ಅತ್ಯಧಿಕ ಜಿಲ್ಲೆಗಳನ್ನು ಹೊಂದಿರುವ ರಾಜ್ಯ .
108. ಚೀನಾ ,ಅಮೆರಿಕ, ಇಂಡೋನೇಷ್ಯಾ , ಬ್ರೆಜಿಲ್ ದೇಶಗಳು ಮಾತ್ರ ಉತ್ತರ ಪ್ರದೇಶಕ್ಕಿಂತ ಹೆಚ್ಚಿನ ಜನಸಂಖ್ಯೆ ಹೊಂದಿದೆ.
109. ಹಣಕಾಸಿನ ತುರ್ತುಪರಿಸ್ಥಿತಿಗೆ ಸಂಬಂಧಿಸಿದ ಉಪಬಂಧಗಳನ್ನು ಸಂವಿಧಾನದ “ 360 ನೇ ಅನುಚ್ಛೇದ ” ತಿಳಿಸುತ್ತದೆ.
110. ಸಂವಿಧಾನವನ್ನು ತಿದ್ದುಪಡಿ ಮಾಡಲು ಸಂಸತ್ತಿನ ಧಿಕಾರ ಮತ್ತು ಅದಕ್ಕಾಗಿ ಪ್ರಕ್ರಿಯೆಗಳನ್ನು ಸಂವಿಧಾನದ “ 368 ” ಅನುಚ್ಛೇದದಲ್ಲಿ ತಿಳಿಸಲಾಗಿದೆ.
111. ಲೋಕಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹಾಗೂ ರಾಜ್ಯಸಭೆಯ ಸಭಾಪತಿ ಮತ್ತು ಉಪಸಭಾಪತಿ ಮತ್ತು ವಿಧಾನಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹಾಗೂ ವಿಧಾನಪರಿಷತ್ತಿನ ಸಭಾಪತಿ ಮತ್ತು ಉಪಸಭಾಪತಿ ಇವರುಗಳಿಗೆ ಸಂಬಂಧಿಸಿದ ಉಪಬಂಧಗಳು ಸಂವಿಧಾನದ “ 2ನೇ ” ಅನುಸೂಚಿಯಲ್ಲಿ .
112. ಸಂವಿಧಾನದ ಯಾವ ಅನುಚ್ಛೇದವು ಹಿಂದುಳಿದ ವರ್ಗಗಳ ಸ್ಥಿತಿಗತಿಗಳ ಅನ್ವೇಷಣೆ ಮಾಡುವುದಕ್ಕಾಗಿ ಆಯೋಗದ ನೇಮಕಾತಿಯನ್ನು ರಚಿಸುವ ಅವಕಾಶ ಕಲ್ಪಿಸಿಕೊಟ್ಟಿದೆ. “ 340 ನೇ ಅನುಚ್ಛೇದ ”.
113. ಕರ್ನಾಟಕ ರಾಜ್ಯ ಪೊಲೀಸ್ ಧ್ವಜ ದಿನಾಚರಣೆ “ ಏಪ್ರಿಲ್ 2 ”.
114. ಭಾರತದಲ್ಲಿ ಪ್ರಸ್ತುತ ಕೇಂದ್ರ ಸರ್ಕಾರಕ್ಕೆ ಅತ್ಯಧಿಕವಾಗಿ ಕಾರ್ಪೊರೇಟ್ ತೆರಿಗೆಯಿಂದ ಆದಾಯ ಬರುತ್ತಿದೆ.
115. ಮೇ – 1 ಕಾರ್ಮಿಕ ದಿನಚರಣೆ , ಮತ್ತು ವಿಶ್ವ ನ್ಯಾಯ ದಿನಾಚರಣೆಯನ್ನ ಆಚರಿಸುವರು.
116. ಮೇ – 03 ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನಾಚರಣೆ ಮತ್ತು ವಿಶ್ವ ಸೌರ ದಿನಚರಣೆ ಆಚರಿಸುವರು.
117. ಮೇ – 05 ಅಂತರರಾಷ್ಟ್ರೀಯ ಸೂಲಗಿತ್ತಿಯರ ದಿನಾಚರಣೆ ಮತ್ತು ಯೂರೋಪ್ ಡೇ ಆಚರಿಸುವರು.
118. ಮೇ – 08 ರೆಡ್ ಕ್ರಾಸ್ ದಿನಾಚರಣೆ ಮತ್ತು ಮದರ್ಸ್ ಡೇಯನ್ನ ಆಚರಿಸುವರು.
119. ಮೇ - 10 ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ದಿನಾಚರಣೆ, ರಾಷ್ಟ್ರೀಯ ತಂತ್ರಜ್ಞಾನ ದಿನೋತ್ಸವ ಆಚರಿಸುವರು.
120. ಮೇ – 15 ಅಂತರರಾಷ್ಟ್ರೀಯ ಕುಟುಂಬ ದಿನಾಚರಣೆ , ಸರ್ ಅರ್ಥರ್ ಕಾನನ್ ಜಯಂತಿ ಆಚರಿಸುವರು.
121. ಮೇ – 17 ಟೆಲಿಕಮ್ಯೂನಿಕೇಷನ್ ( ದೂರಸಂಪರ್ಕ ) ದಿನಾಚರಣೆ .
122. ಮೇ – 21 ಭಯೋತ್ಪಾದನಾ ವಿರೋಧಿ ದಿನ , ಅಂತರರಾಷ್ಟ್ರೀಯ ನರ್ಸ್ ಗಳ ದಿನಾಚರಣೆ ಆಚರಿಸುವರು.
123. ಮೇ – 22 ಜೀವವೈವಿಧ್ಯ ದಿನಾಚರಣೆ ಆಚರಿಸುವರು .
124. ಮೇ – 24 ಕಾಮನ್ ವೆಲ್ತ್ ದಿನಾಚರಣೆ ಆಚರಿಸುವರು.
125. ಮೇ – 29 ಅಂತರರಾಷ್ಟ್ರೀಯ ಶಾಂತಿ ಸಂರಕ್ಷಣೆಗಾರರ ದಿನಾಚರಣೆ ಆಚರಿಸುವರು .
126. ಮೇ – 31 ವಿಶ್ವ ತಂಬಾಕು ವಿರೋಧಿ ( ಧೂಮಪಾನ ) ದಿನವಾಗಿ ಆಚರಿಸುವರು.
127. ಸೂರ್ಯ ಉದಯಿಸುವ ನಾಡು ಎಂದು “ ಜಪಾನ್”.
128. ಮ್ಯಾನ್ಮಾರ್ ನ ಸೇನೆ ಮಾ.30 ರಂದು ನಾಗರಿಕ ಸರ್ಕಾರಕ್ಕೆ ಅಧಿಕಾರ ಹಸ್ತಾಂತರಿಸಿದ್ದು , ನೂತನ ಅಧ್ಯಕ್ಷರಾಗಿ “ ಥೆಯಿನ್ ಸಿಯೆನ್ ” ಅಧಿಕಾರ ಸ್ವೀಕರಿಸಿದರು.
129. 2010 ರಲ್ಲಿ ಅಮೆರಿಕಾದ ಶಾಶ್ವತ ಪೌರತ್ವದ ಗ್ರೀನ್ ಕಾರ್ಡ್ ಪಡೆದವರಲ್ಲಿ ಭಾರತೀಯರು 3ನೇ ಸ್ಥಾನ ಪಡೆದಿದ್ದಾರೆ , ಮೆಕ್ಸಿಕೋ ಮತ್ತು ಚೀನಾ ಕ್ರಮವಾಗಿ ಮೊದಲೆರಡು ಸ್ಥಾನಗಳನ್ನ ಆಕ್ರಮಿಸಿಕೊಂಡಿದೆ.
130. ಮೆಸೇಜ್ ಟಾಕ್ಸ್ , ಹಾಟ್ ಪೊಟೋಟೋ ರೋಟಿಂಗ್ ಅನ್ವೆಷಣೆಗಳ ಮೂಲಕ 1960 ರ ದಶಕದಲ್ಲಿ ಕಂಪ್ಯೂಟರ್ ನಲ್ಲಿ ದೊಡ್ಡ ಕ್ರಾಂತಿಯನ್ನುಂಟು ಮಾಡಿದ್ದ ಇಂಟರ್ ನೆಟ್ ದಿಗ್ಗಜ “ ಪಾಲ್ ಬಾರನ್ ” ( 84 ) ಮಾ.29 ರಂದು ನಿಧನರಾದರು.
131. ಗೂಢಚಾರಿಕೆ ನಡೆಸುತ್ತಿದ್ದ ಆರೋಪದಲ್ಲಿ ಪಾಕಿಸ್ತಾನದಲ್ಲಿ ಬಂಧಿತನಾಗಿ 27 ವರ್ಷಗಳಿಂದ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಭಾರತೀಯ “ ಗೋಪಾಲ್ ದಾಸ್ ” ಅವರನ್ನು ಬಿಡುಗಡೆ ಮಾಡಲಾಯಿತು. ( 1984 ರಲ್ಲಿ ಬಂಧಿಸಿಲಾಗಿತ್ತು , ಬಳಿಕ 1987 ರಲ್ಲಿ ಜೀವಾವಧಿ ಶಿಕ್ಷೆ ವಿಧಿಸಿತು.).
132. ವಿಶ್ವ ವೃತ್ತ ಪತ್ರಿಕೆಗಳ ಸಂಘ ಮತ್ತು ಸುದ್ಧಿ ಪ್ರಕಾಶಕರ ಸಂಘ ( ವ್ಯಾನ್ ಇಫ್ರಾ ) ದ ಅಧ್ಯಕ್ಷರಾಗಿ ಮಲಯಾಳಂ ಮನೋರಮಾ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಮತ್ತು ಪ್ರಕಾಶಕ “ ಜೇಕಬ್ ಮ್ಯಾಥ್ಯೂ ” ಆಯ್ಕೆಯಾದರು.
133. ವಿದೇಶಿ ವಲಸಿಗಿಗೆ “ ಕೆನಡಾ ” ಅತ್ಯಂತ ಸ್ನೇಹಿ ರಾಷ್ಟ್ರವೆಂದು ಗರಿಷ್ಠ ಅಂಕ ಪಡೆದರೆ “ ಮೆದರ್ ಲ್ಯಾಂಡ್ ಮತ್ತು ಭಾರತ ” ಅತಿ ಕಡಿಮೆ ಅಂಕ ಪಡೆದಿವೆ .
134. ಬಾರತೀಯ ಮೂಲದ ಅಮೆರಿಕ ಪ್ರಜೆ , ಕ್ಯಾನ್ಸರ್ ರೋಗ ತಜ್ಞ , ಸಿದ್ದಾರ್ಥ ಮುಖರ್ಜಿ ಅವರು ಬರೆದಿರುವ “ ದಿ ಎಂಪರರ್ ಆಫ್ ಆಲ್ ಮೆಲೋಡಿಸ್ ” ಪುಸ್ತಕಕ್ಕೆ ಪುಲಿಟ್ಜರ್ ಪ್ರಶಸ್ತಿ ಸಂದಿದೆ.
135. ಪುಲಿಟ್ಜರ್ ಪ್ರಶಸ್ತಿ ಗೆದ್ದ ನಾಲ್ಕನೇ ಭಾರತೀಯ ಇವರಾಗಿದ್ದಾರೆ. ಈ ಪ್ರಶಸ್ತಿ ಗೆದ್ದ ಮೊದಲ ಭಾರತೀಯ 1937 ರಲ್ಲಿ “ ಗೋವಿಂದ ಬಿಹಾರಿಲಾಲ್ ”.
136. ಜಪಾನ್ ದೇಶದ ಆಡಳಿತ ಗ್ರಂಥದ ಹೆಸರು “ಗ್ರೇಬುಕ್ಸ್ ’.
137. ದೇಶದಲ್ಲಿ ಹುಲಿಗಳ ಸಂಖ್ಯೆಯಲ್ಲಿ ಶೇ.12 ರಷ್ಟು ಹೆಚ್ಚಳವಾಗಿದೆ.
138. 19 ರಾಜ್ಯಗಳ 6.25 ಸಾವಿರ ಕಿ.ಮೀ.ಅರಣ್ಯ ಪ್ರದೇಶದಲ್ಲಿ ಸುಮಾರು 9 ಕೋಟಿ ರೂ. ವೆಚ್ಚ ಮಾಡಿ ನಡೆಸಿದ 2010 ರ ಹುಲಿ ಗಣತಿ ವರದಿಯನ್ನು ಮಾ.28 ರಂದು ಬಿಡುಗಡೆ ಮಾಡಲಾಯಿತು.
139. ಕರ್ನಾಟಕದಲ್ಲಿ ಸುಮಾರು 300 – 320 ರಷ್ಟು ಹುಲಿಗಳಿದ್ದು ದೇಶದಲ್ಲಿಯೆ ಹೆಚ್ಚು ಸಂಖ್ಯೆಯ ಹುಲಿಗಳನ್ನು ಹೊಂದಿರುವ ರಾಜ್ಯವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ದೇಶದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುಮಾರು 534 ಹುಲಿಗಳಿವೆ.
140. ದೇಶದಲ್ಲಿರುವ 39 ಹುಲಿ ರಕ್ಷಿತಾರಣ್ಯ ಗಳಿಗಿಂತ ಹೊರಗಿನ ಅರಣ್ಯ ಪ್ರದೇಶಗಳಲ್ಲಿ ಶೇ.30 ರಷ್ಟು ಹುಲಿಗಳಿವೆ.
141. ಜಪಾನಿನ ಕರೆನ್ಸಿ “ ಯೆನ್ ”.
142. ರಾಜ್ಯಯೋಜನಾ ಮಂಡಳಿಯನ್ನು ಪುನರ್ ರಚಿಸಲಾಯಿತು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ .ಯೋಜನಾ ಮಂಡಳಿಯ ಅಧ್ಯಕ್ಷ ಹಾಗೂ ಮಾಜಿ ಸಚಿವ ರಾಮಚಂದ್ರಗೌಡ ಉಪಾಧ್ಯಕ್ಷರಾಗಿದ್ದಾರೆ.
143. 83 ನೇ ಆಸ್ಕರ್ ಪ್ರಶಸ್ತಿಗಳ್ಲಿ ಉತ್ತಮ ಚಿತ್ರವಾಗಿ “ ದ ಕಿಂಗ್ಸ್ ಸ್ಪೀಚ್ ’ ಆಯ್ಕೆಯಾಗಿದೆ.
144. ಬಿ.ರಾಮದಾಸ್ ನಾಯ್ಡು ನಿರ್ದೇಶನದ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ “ ಬಸಂತಕುಮಾರ್ ಪಾಟೀಲ್ ” ನಿರ್ಮಿಸಿದ ಹೆಜ್ಜೆಗಳು ಚಲನಚಿತ್ರಕ್ಕೆ ಲಖನೌ ನಲ್ಲಿ 3 ನೇ ಅಂತರರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವದಲ್ಲಿ ದ್ವಿತೀಯ ಪ್ರಶಸ್ತಿ ಲಭಿಸಿತು.
145. ಹಿಂದಿ ಚಲನಚಿತ್ರ “ ಐ ಯಾಮ್ ಕಲಾಂ ”ಗೆ ಮೊದಲ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿ ಮೊತ್ತ 3 ಲಕ್ಷ.
146. ಬರ್ಲಿನ್ ಟ್ಯಾಗೋರ್ ಕೇಂದ್ರದ ನಿರ್ದೇಶಕರಾಗಿ ಕನ್ನಡ ಸಾಹಿತಿ ಎಚ್.ಎಸ್.ಶಿವಪ್ರಕಾಶ್ ನೇಮಕಗೊಂಡಿದ್ದಾರೆ.
147. ಗೋದ್ರಾ ರೈಲು ದುರಂತದ ತನಿಖೆಗಾಗಿ ಕೇಂದ್ರ ಸರ್ಕಾರವು “ ಜಸ್ಟೀಸ್ ನಾನಾವತಿ ಕಮೀಷನ್ ”ನ್ನು ರಚಿಸಿತು.
148. ಕರ್ನಾಟಕದ 121 ಗ್ರಾಮ ಪಂಚಾಯಿತಿಗಳು ಕೇಂದ್ರ ಸರ್ಕಾರದಿಂದ ನಿರ್ಮಲ ಗ್ರಾಮ ಪುರಸ್ಕಾರ ಪಡೆದುಕೊಂಡಿವೆ ,
149. ಬೆಳಗಾವಿ ಜಿಲ್ಲೆಯ ಶಿರಗುಪ್ಪ ಗ್ರಾಮ ಪಂಚಾಯಿತಿಯನ್ನ ಮಾದರಿ ಗ್ರಾಮ ಪಂಚಾಯಿತಿ ಎಂದು ಕೇಂದ್ರ ಸರ್ಕಾರ ಪುರಸ್ಕರಿಸಿದೆ.

ಗುರುವಾರ, ಮಾರ್ಚ್ 10, 2011

ಪ್ರಚಲಿತ ಘಟನೆಗಳು

1. ಇದನ್ನು ದೇಶದ 117 ಕೋಟಿ ಜನಸಂಖ್ಯೆಗೆ ವಿಭಜಿಸಿದರೆ ಅದನ್ನೇ ತಲಾದಾಯ ಎಂದು ಪರಿಗಣಿಸಲಾಗುತ್ತದೆ. 33,731 ಕೋಟಿ ತಲುಪಿತ್ತು. ಹಿಂದಿನ ವರ್ಷಕ್ಕೆ ಹೋಲಿಸಿದರೆ 2009-10ನೇ ಸಾಲಿನಲ್ಲಿ ಮಾರುಕಟ್ಟೆ ದರಗಳು ರೂ 52,82,086 ಕೋಟಿಯಿಂದ ಶೇ 16ರಷ್ಟು ಏರಿಕೆ ಕಂಡಿದ್ದು, ರೂ 61,33,230 ಕೋಟಿ ತಲುಪಿದೆ. ದೇಶದ ಜನಸಂಖ್ಯೆ ಕೂಡ ಇದೇ ಅವಧಿಯಲ್ಲಿ 11.4 ಕೋಟಿಯಿಂದ 117ಕೋಟಿಗೆ ಏರಿದೆ.
2. ಇಂಡಿಯನ್ ಪ್ರೀಮಿಯರ್ ಲೀಗ್‌ನ ನಾಲ್ಕನೇ ಆವತರಣಿಕೆಯ ಟೂರ್ನಿಯಲ್ಲಿ ಆಡಲು ಪಾಕಿಸ್ತಾನ ಕ್ರಿಕೆಟ್ ತಂಡದ ಯಾವುದೇ ಆಟಗಾರರಿಗೆ ಅವಕಾಶ ಲಭಿಸಿಲ್ಲ. ಆದರೆ ಅಂಪೈರ್ ಆಗಿ ಕಾರ್ಯನಿರ್ವಹಿಸಲು ಪಾಕಿಸ್ತಾನದ ಅಲೀಮ್ ದಾರ್ ಹಾಗೂ ಅಸಾದ್ ರೌಫ್ ಅವಕಾಶ ಪಡೆದುಕೊಂಡಿದ್ದಾರೆ.
3. ಶ್ರೀಶಾಂತ್ ಭಾನುವಾರ ರಾತ್ರಿ ತಮ್ಮ ‘ಎಸ್- 36’ ಬ್ಯಾಂಡ್ ಆಯೋಜಿಸಿದ್ದ ಸಮಾರಂಭದಲ್ಲಿ ತಾವೇ ರಚಿಸಿದ ಗೀತೆಯನ್ನು ಹಾಡಿದರಲ್ಲದೆ, ಅದನ್ನು ಭಾರತ ತಂಡಕ್ಕೆ ಸಮರ್ಪಿಸಿದರು.
4. ಸಿಎಜಿ ವರದಿಯೊಂದನ್ನೇ ಆಧರಿಸಿ 2ಜಿ ತರಾಂಗತರ ಹಂಚಿಕೆಯ ಪರವಾನಗಿಯನ್ನು ರದ್ದುಪಡಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.
5. ಕಾಮನ್‌ವೆಲ್ತ್ ಕ್ರೀಡಾಕೂಟ ಹಗರಣದ ಬಗ್ಗೆ ಮೊದಲ ಮಧ್ಯಂತರ ತನಿಖಾ ವರದಿ ಸಲ್ಲಿಸಿರುವ ಶುಂಗ್ಲು ಸಮಿತಿಯು, 135 ಕೋಟಿ ರೂಪಾಯಿ ಮೌಲ್ಯದ ಪ್ರಸಾರದ ಹಕ್ಕು ನೀಡಿಕೆ ವ್ಯವಹಾರದಲ್ಲಿನ ಅಕ್ರಮಗಳಲ್ಲಿ ಪ್ರಸಾರ ಭಾರತಿಯಿಂದ ಅಮಾನತುಗೊಂಡಿರುವ ಸಿಇಒ ಬಿ.ಎಸ್.ಲಲ್ಲಿ ಹಾಗೂ ದೂರದರ್ಶನದ ಮಹಾ ನಿರ್ದೇಶಕ ಅರುಣ ಶರ್ಮ ಅವರನ್ನು ಪ್ರಧಾನವಾಗಿ ಹೆಸರಿಸಿದೆ.
6. ‘ಕ್ರೀಡಾಕೂಟದ ವ್ಯವಹಾರ ಸುಮಾರು 28,000 ಕೋಟಿಯಷ್ಟು ಭಾರಿ ಮೊತ್ತದ್ದಾಗಿರುವುದರಿಂದ ಎಲ್ಲವನ್ನೂ ಪರಿಶೀಲಿಸಿ ವರದಿ ಸಲ್ಲಿಸಲು ಸಾಕಷ್ಟು ಕಾಲಾವಕಾಶ ಬೇಕು. ಅದಕ್ಕಾಗಿ ಅವಧಿ ವಿಸ್ತರಿಸಬೇಕು’ ಎಂದು ಶುಂಗ್ಲು ಮಂಗಳವಾರ ಹೇಳಿದ್ದಾರೆ.
7. ವಿಶ್ವದಲ್ಲೇ ಅತ್ಯಂತ ಹಿರಿಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಅಮೆರಿಕದ ಯೂನೈಸ್ ಸ್ಯಾನ್‌ಬಾರ್ನ್ (115) ಟೆಕ್ಸಾಸ್‌ನಲ್ಲಿ ಸೋಮವಾರ ಬೆಳಿಗ್ಗೆ ನಿಧನರಾದರು.
8. ಸ್ಯಾನ್‌ಬಾರ್ನ್ ನಿಧನದಿಂದ ಹಿರಿಯಜ್ಜಿಯ ಪಟ್ಟ ಜಾರ್ಜಿಯಾದ 114ರ ಹರೆಯದ ಬೆಸ್ಸೆ ಕೂಪರ್ ಪಾಲಾಗಿದೆ.
9. 77ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಜಿ.ವೆಂಕಟಸುಬ್ಬಯ್ಯ ಹೇಳಿದರು.
10. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಹಣಕಾಸು ವರ್ಷದ ಅಕ್ಟೋಬರ್ -ಡಿಸೆಂಬರ್ ಅವಧಿಯಲ್ಲಿ ರಫ್ತು ಪ್ರಮಾಣ ಶೇಕಡ 36ರಷ್ಟು ಏರಿಕೆ ಕಂಡಿದೆ.
11. ಇಲಾಖೆಯ ಮಾಜಿ ಕಾರ್ಯದರ್ಶಿ ಸಿದ್ಧಾರ್ಥ ಬೇಹೂರ (ಉತ್ತರ ಪ್ರದೇಶ ಕೇಡರ್‌ನ 1973ರ ತಂಡದ ಐಎಎಸ್ ಅಧಿಕಾರಿ) ರಾಜಾ ಅವರ ಅವರ ಆಪ್ತ ಕಾರ್ಯದರ್ಶಿಯಾಗಿದ್ದ ಆರ್.ಕೆ.ಚಂದೋಲಿಯ (1984ನೇ ತಂಡದ ಭಾರತೀಯ ಆರ್ಥಿಕ ಸೇವೆ ಅಧಿಕಾರಿ) ಬಂಧಿತರು.
12. ಕೇಂದ್ರ ಜಾಗೃತ ಆಯೋಗದ ತನಿಖೆಯನ್ನು ಆಧರಿಸಿ,2 ಜಿ ಸ್ಪೆಕ್ಟ್ರಂ ಹಂಚಿಕೆಗೆ ಸಂಬಂಧಿಸಿದಂತೆ ರೂ 22,000 ಕೋಟಿ ನಷ್ಟವಾಗಿದೆ ಎಂದು ಸಿಬಿಐ ತನ್ನ ಎಫ್‌ಐಆರ್‌ಯಲ್ಲಿ ದಾಖಲಿಸಿದೆ.
13. ‘ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆ’ (ನೈಸ್)
14. ಜಗತ್ತಿನಲ್ಲಿ ಅಂತರ್ಜಾಲ ಬಳಕೆ ದಟ್ಟಣೆ ಎಷ್ಟರಮಟ್ಟಿಗೆ ಏರುತ್ತಿದೆಯೆಂದರೆ ಅದಕ್ಕೆ ನಿಗದಿ ಮಾಡಿದ್ದ ಐಪಿ ವಿಳಾಸಗಳೆಲ್ಲಾ (ಇಂಟರ್‌ನೆಟ್ ಪ್ರೊಟೊಕಾಲ್) ಶುಕ್ರವಾರ (ಫೆ.4ರಂದು) ಸಂಪೂರ್ಣ ಬರಿದಾಗಲಿವೆ!
15. 1980ರಲ್ಲಿ ಐಪಿವಿ 4 ಆವೃತ್ತಿ ಜಾರಿಗೊಳಿಸಿದಾಗ 410 ಕೋಟಿ ಐಪಿ ವಿಳಾಸ ನೀಡುವ ಸಾಮರ್ಥ್ಯ ಅದಕ್ಕಿತ್ತು. ಅಷ್ಟೊಂದು ಅಗಾಧ ಸಾಮರ್ಥ್ಯವಿದ್ದ ಹಿನ್ನೆಲೆಯಲ್ಲಿ ಐಪಿ ವಿಳಾಸ ಯಾವತ್ತಿಗೂ ಬರಿದಾಗದು ಎಂದೇ ಆಗ ತಜ್ಞರು ಭಾವಿಸಿದ್ದರು.
16. 2ಜಿ ತಂರಂಗಾಂತರ ಹಂಚಿಕೆ ಹಗರಣ ಸೃಷ್ಟಿಸಿದ ಕೋಲಾಹಲದಿಂದ ಚೇತರಿಸಿಕೊಳ್ಳಲು ಕೇಂದ್ರ ಸರ್ಕಾರ ಪ್ರಯಾಸ ಪಡುತ್ತಿರುವ ಬೆನ್ನಲ್ಲೇ ‘ಇಸ್ರೊ ಎಸ್-ಬ್ಯಾಂಡ್’ಬಹುಕೋಟಿ ಹಗರಣದ ಭೂತ ಅದರ ಹೆಗಲೇರಿದೆ.
17. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಮತ್ತು ಖಾಸಗಿ ಕಂಪೆನಿ ನಡುವೆ ನಡೆದ ಎಸ್-ಬ್ಯಾಂಡ್ ತರಂಗಾಂತರ ಹಂಚಿಕೆ ಒಪ್ಪಂದವೊಂದು ದೇಶದ ಬೊಕ್ಕಸಕ್ಕೆ ರೂ 2 ಲಕ್ಷ ಕೋಟಿ ಮೊತ್ತದ ಹಾನಿ ಉಂಟು ಮಾಡಿದೆ ಎನ್ನಲಾಗಿದೆ.
18. ಎಸ್-ಬ್ಯಾಂಡ್ ತರಂಗಾಂತರ ಹಂಚಿಕೆ: ಇಸ್ರೊದ ವಾಣಿಜ್ಯ ವ್ಯವಹಾರದ ಅಂಗ ಸಂಸ್ಥೆ ‘ಆ್ಯಂಟ್ರಿಕ್ಸ್ ಕಾರ್ಪೊರೇಷನ್’ ಹಾಗೂ ಖಾಸಗಿ ಕಂಪೆನಿಯಾದ ದೇವಾಸ್ ಮಲ್ಟಿಮೀಡಿಯ ಸರ್ವಿಸ್ ನಡುವೆ ನಡೆದ ಒಪ್ಪಂದ ಈಗ ವಿವಾದವನ್ನು ಎಬ್ಬಿಸಿದ್ದು ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
19. ದೇವಾಸ್ ಮತ್ತು ಆ್ಯಂಟ್ರಿಕ್ಸ್ ನಡುವಿನ ಪ್ರಸ್ತುತ ಒಪ್ಪಂದ 2005ರ ಜನವರಿ 28ರಂದು ನಡೆದಿತ್ತು. 70 ಮೆಗಾ ಹರ್ಟ್ಸ್ ಎಸ್-ಬ್ಯಾಂಡ್ ಅತಿ ದುಬಾರಿ ತರಂಗಾಂತರವನ್ನು ಸುಮಾರು ಎರಡು ಲಕ್ಷ ಕೋಟಿ ಮೊತ್ತಕ್ಕೆ 20 ವರ್ಷಗಳ ಅವಧಿಗೆ ಹಂಚಿಕೆ ಮಾಡಲಾಗಿತ್ತು.
20. 12ನೇ ಪಂಚವಾರ್ಷಿಕ ಯೋಜನೆಯಲ್ಲಿ (2012-17) ಶೇಕಡ 4ರಷ್ಟು ಕೃಷಿ ವೃದ್ಧಿ ದರ ನಿಗದಿಪಡಿಸಲಾಗಿದೆ ಎಂದು ಕೇಂದ್ರ ಯೋಜನಾ ಆಯೋಗ ಉಪಾಧ್ಯಕ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ತಿಳಿಸಿದ್ದಾರೆ.
21. ಏಕದಿನ ಕ್ರಿಕೆಟ್ ಹುಟ್ಟು ಪಡೆದಿದ್ದು 7ನೇ ಜೂನ್ 1971ರಲ್ಲಿ.
22. ಮೊಟ್ಟ ಮೊದಲ ಏಕದಿನ ವಿಶ್ವಕಪ್ ನಡೆದಿದ್ದು 1975ರಲ್ಲಿ.
23. ವಿಶ್ವಕಪ್‌ನಲ್ಲಿ ಮೊದಲ ಪಂದ್ಯ ಆಡಿದ್ದು ಭಾರತ ಹಾಗೂ ಇಂಗ್ಲೆಂಡ್ (ಲಾರ್ಡ್ಸ್, 7ನೇ ಜೂನ್). ವಿಶೇಷವೆಂದರೆ ಇದಕ್ಕೂ ಮುನ್ನ 18 ಏಕದಿನ ಅಂತರರಾಷ್ಟ್ರೀಯ ಪಂದ್ಯಗಳು ನಡೆದಿದ್ದವು. ಆಗ ಟೆಸ್ಟ್ ಕ್ರಿಕೆಟ್ ನಡೆಯುತ್ತಿದ್ದ ಅಂಗಳಗಳಲ್ಲಿಯೇ ಏಕದಿನ ಪಂದ್ಯಗಳು ನಡೆದಿದ್ದು.
24. ಮೊದಲ ವಿಶ್ವಕಪ್‌ನಲ್ಲಿ ಟೆಸ್ಟ್ ಮಾನ್ಯತೆ ಹೊಂದಿದ್ದ ಆರು ರಾಷ್ಟ್ರಗಳು ಹಾಗೂ ಆಗ ಐಸಿಸಿ ಸಹ ಸದಸ್ಯ ರಾಷ್ಟ್ರಗಳಾಗಿದ್ದ ಪೂರ್ವ ಆಫ್ರಿಕಾ ಹಾಗೂ ಶ್ರೀಲಂಕಾ ತಂಡಗಳು ಪಾಲ್ಗೊಂಡಿದ್ದವು. ಶ್ರೀಲಂಕಾ ಆಗ ಟೆಸ್ಟ್ ಆಡುವ ರಾಷ್ಟ್ರದ ಮಾನ್ಯತೆ ಹೊಂದಿರಲಿಲ್ಲ ಎನ್ನುವುದು ಗಮನ ಸೆಳೆಯುವ ಅಂಶ.
25. ವಿಶ್ವಕಪ್‌ನಲ್ಲಿ ಮೊದಲ ಬೌಲ್ ಎಸೆದಿದ್ದು ಭಾರತದ ಮದನ್‌ಲಾಲ್ ಹಾಗೂ ಅದನ್ನು ಎದುರಿಸಿದ್ದು ಇಂಗ್ಲೆಂಡ್‌ನ ಜಾನ್ ಜೇಮ್ಸನ್.
26. ಮೊದಲ ಕ್ಯಾಚ್ ಪಡೆದಿದ್ದು ಭಾರತ ತಂಡದ ನಾಯಕರಾಗಿದ್ದ ಶ್ರೀನಿವಾಸ್ ವೆಂಕಟರಾಘವನ್.
27. ಇಂಗ್ಲೆಂಡ್ ವಿರುದ್ಧವೇ ಚೊಚ್ಚಲ ಪಂದ್ಯ ಆಡಿದ್ದ ಮೋಹಿಂದರ್ ಅಮರ್ನಾಥ್ ಎಸೆತದಲ್ಲಿ. ಅಮರ್ನಾಥ್ ಅವರು ಜೇಮ್ಸನ್ ರೂಪದಲ್ಲಿ ವಿಶ್ವಕಪ್‌ನ ಪ್ರಥಮ ವಿಕೆಟ್ ಪಡೆದ ಶ್ರೇಯ ಹೊಂದಿದ್ದಾರೆ.
28. ಇಂಗ್ಲೆಂಡ್‌ನ ಡಿ.ಎಲ್.ಅಮೀಸ್ ಅವರು ಭಾರತದ ವಿರುದ್ಧವೇ ವಿಶ್ವಕಪ್‌ನ ಮೊದಲ ಶತಕ ಗಳಿಸಿದ್ದು. ಅವರು 137 ರನ್ ಗಳಿಸಿದ್ದರು.
29. ವಿಚಿತ್ರವೆಂದರೆ ಭಾರತ ಅದೇ ಪಂದ್ಯದಲ್ಲಿ ಗಳಿಸಿದ್ದ ಒಟ್ಟು ಮೊತ್ತ 60 ಓವರುಗಳಲ್ಲಿ 3 ವಿಕೆಟ್ ನಷ್ಟಕ್ಕೆ 132 ರನ್. ಸುನಿಲ್ ಗಾವಸ್ಕರ್ ಔಟಾಗದೆ ಉಳಿದಿದ್ದರು. ಆದರೆ ಅವರು 174 ಎಸೆತಗಳಲ್ಲಿ ಗಳಿಸಿದ್ದು ಕೇವಲ 36 ರನ್.
30. ಇಂಗ್ಲೆಂಡ್‌ನವರು ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ಮುನ್ನೂರಕ್ಕೂ ಅಧಿಕ ರನ್ ಗಳಿಸಿದ್ದು. ಇಂಗ್ಲೆಂಡ್ 60 ಓವರುಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 334 ರನ್ ಗಳಿಸಿತ್ತು. ವಿಶೇಷವೆಂದರೆ ಏಕದಿನ ಕ್ರಿಕೆಟ್‌ನಲ್ಲಿ ತಂಡವೊಂದು ಮುನ್ನೂರಕ್ಕೂ ಹೆಚ್ಚು ರನ್ ಗಳಿಸಿದ್ದು ಕೂಡ ಅದೇ ಮೊದಲು.
31. ಭಾರತ ವಿರುದ್ಧದ ಪಂದ್ಯದಲ್ಲಿಯೇ ಇಂಗ್ಲೆಂಡ್ 202 ರನ್‌ಗಳಿಂದ ಜಯ ಪಡೆದಿದ್ದು, ದೊಡ್ಡ ಮೊತ್ತದ ಅಂತರದಲ್ಲಿ ತಂಡವೊಂದು ವಿಜಯ ಸಾಧಿಸಿದ ಮೊದಲ ಘಟನೆ.
32. ಕೀಥ್ ಫ್ಲೆಚರ್ ಹಾಗೂ ಅಮೀಸ್ ವಿಶ್ವಕಪ್‌ನಲ್ಲಿ ಮೂರಂಕಿಯ ಜೊತೆಯಾಟವಾಡಿದ ಮೊದಲ ಜೋಡಿ. ಎರಡನೇ ವಿಕೆಟ್‌ನಲ್ಲಿ ಇವರಿಬ್ಬರೂ 176 ರನ್ ಕಲೆಹಾಕಿದ್ದರು.ಅಮೀಸ್ ಅವರು 18 ಬೌಂಡರಿ ಗಳಿಸುವ ಮೂಲಕವೂ ಗಮನ ಸೆಳೆದಿದ್ದರು.
33. ಅಮೀಸ್ ಅವರು 18 ಬೌಂಡರಿ ಗಳಿಸುವ ಮೂಲಕವೂ ಗಮನ ಸೆಳೆದಿದ್ದರು. ಹದಿನೈದಕ್ಕೂ ಹೆಚ್ಚು ಬೌಂಡರಿಗಳನ್ನು ಏಕದಿನ ಕ್ರಿಕೆಟ್‌ನ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಇವರಾಗಿದ್ದಾರೆ.
34. ವಿಕಿಪೀಡಿಯ ತಿಂಗಳ ಪುಟ ವೀಕ್ಷಣೆ ಸಂಖ್ಯೆ 8.5 ಶತಕೋಟಿಗೆ ಏರಿದ್ದು, ಅತಿ ಹೆಚ್ಚು ಜನ ಭೇಟಿ ನೀಡುವ ಪ್ರಪಂಚದ ಐದನೆಯ ವೆಬ್ ತಾಣ ವಿಕಿಪೀಡಿಯ.
35. ಪರಮಾಣು ದಾಸ್ತಾನು ಕಡಿತಗೊಳಿಸುವ ಉದ್ದೇಶದಿಂದ ಅಮೆರಿಕ ಹಾಗೂ ರಷ್ಯ “ ಸ್ಟಾರ್ಟ್ ” ಒಪ್ಪಂದ ಅಮೆರಿಕಾ ಸೆನೆಟ್ ನಲ್ಲಿ ಅಂಗೀಕಾರವಾಯಿತು .
36. “ ಸ್ಟಾರ್ಟ್ ” ಒಪ್ಪಂದಕ್ಕೆ ಅಮೆರಿಕಾದ ಅಧ್ಯಕ್ಷ ಬಾರಕ್ ಒಬಾಮ ಮತ್ತು ರಷ್ಯದ ಅಧ್ಯಕ್ಷ ಡಿಮಿಟ್ರಿ ಮೆಡ್ವೆಡೇವ್ 2010 ರಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಿದರು .
37. “ ಸ್ಟಾರ್ಟ್ ” ಒಪ್ಪಂದದ ನಂತರ ಜಾರಿಗೊಂಡ ನಂತರ 2200 ರಿಂದ 1500 ಕ್ಕೆ ಇಳಿಯಲಿದೆ.
38. “ ಸ್ಟಾರ್ಟ್ ” ಒಪ್ಪಂದದ ನಂತರ ಅಮೆರಿಕಾದ 17 ಹಾಗೂ ರಷ್ಯಾದ 35 ಅಣ್ವಸ್ತ್ರ ತಾಣಗಳು ಪರಸ್ಪರ ಪರಿಶೀಲನೆಗೆ ಮುಕ್ತವಾಗಲಿದೆ.
39. ಬ್ರೆಜಿಲ್ ನ ಎಡಪಂಥೀಯ ಚಿಂತಕಿ ಅರ್ಥಶಾಸ್ತ್ರಜ್ಞೆ “ ದಿಲ್ಮಾ ರೌಸೆಫ್ ” ನೂತನ ಅಧ್ಯಕ್ಷರಾಗಿ 2011 , ಜನವರಿ 1 ರಂದು ಅಧಿಕಾರ ಸ್ವೀಕರಿಸಿದರು .
40. ಟ್ಯುನೀಷಿಯಾ ಅಧ್ಯಕ್ಷ “ ಜಿನೆ ಅಲ್ ಅಬಿದಿನ್ ಬೆನ್ ಅಲಿ ” ಪದಚ್ಯುತಗೊಂಡರು ಇದರೊಂದಿಗೆ 23 ವರ್ಷಗಳ ನಿರಂಕುಶ ಅಧ್ಯಕ್ಷೀಯ ಆಡಳಿತ ಮುಕ್ತಾಯಗೊಂಡಿತು .
41. ದೇಶದ ಮಹತ್ವಕಾಂಕ್ಷೆಯ ಸ್ವದೇಶಿ ನಿರ್ಮಿತ ಅತ್ಯಾಧುನಿಕ ಸಂಪರ್ಕ ಉಪಗ್ರಹ “ ಜಿ ಸ್ಯಾಟ್ -5 ಪಿ ” ಅನ್ನು ಹೊತ್ತು ಸಾಗಿಸುತ್ತಿದ್ದ ಜಿ.ಎಸ್.ಎಲ್.ವಿ – ಎಫ್ 06 ರಾಕೆಟ್ 2010 ಡಿ.25 ರಂದು ಉಡಾವಣಿಗೊಂಡ ನಿಮಿಷದೊಳಗೆ ಸ್ಪೋಟಗೊಂಡು , ಯೋಜನೆ ಸಂಪೂರ್ಣ ವಿಫಲವಾಯಿತು. ಇದಕ್ಕಾದ ವೆಚ್ಚ 125 ಕೋಟಿ ರೂ .
42. “ ಜಿ ಸ್ಯಾಟ್ -5 ಪಿ ” ನಲ್ಲಿ “ ಸಿ – ಬ್ಯಾಂಡ್ ” ಪ್ರೇಷಕಗಳು , 12 ವಿಸ್ತರಿತ ಸಿ ಬ್ಯಾಂಡ್ ಪ್ರೇಷಕರಗಳನ್ನು ಅಳವಡಿಸಲಾಗಿತ್ತು .
43. “ ಜಿ ಸ್ಯಾಟ್ -5 ಪಿ ” ಇದು ದೇಶದ ದೂರಸಂಪರ್ಕ ,ಟಿವಿ ಮತ್ತಿತರ ಸಂವಹನ ರಂಗದ ಮಹತ್ತರ ಅಭಿವೃದ್ಧಯನ್ನು ನಿರೀಕ್ಷಿಸಲಾಗಿತ್ತು ಹಾಗೂ ಇನ್ ಸ್ಯಾಟ್ – 3ಇ ಉಪಗ್ರಹಕ್ಕೆ ಪರ್ಯಾಯವಾಗಿ ಇದನ್ನು ಸಿದ್ಧಪಡಿಸಲಾಗಿತ್ತು .
44. ಪ್ರಜಾಪ್ರಭುತ್ವದ ವಿರುದ್ಧ ಹೋರಾಡಲು ನಕ್ಸಲೀಯರ ಜೊತೆ ಸೇರಿ ಸಂಚು ರೂಪಿಸಿ ರಾಷ್ಟ್ರ ದ್ರೋಹ ಎಸಗಿದ ಆರೋಪಕ್ಕಾಗಿ ಮಾನವಹಕ್ಕು ಕಾರ್ಯಕರ್ತ “ ವಿನಾಯಕ ಸೇನ್ ” ನಕ್ಸಲ್ ಸಿದ್ಧಾಂತವಾದಿ ನಾರಾಯಣ್ ಸನ್ಯಾಲ್ ಮತ್ತು ಕೋಲ್ಕತ್ತಾದ ಉದ್ಯಮಿ ಪಿಯೂಷ್ ಗುಹಾ ಅವರಿಗೆ ಛತ್ತೀಸ್ ಗಢ್ ದ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತು.
45. ಮಂಗಳೂರು ಮೂಲದ ದಕ್ಷಿಣ ಕ್ಷೇತ್ರದ ಶಾಸಕ ಎನ್.ಯೋಗೀಶ್ ಭಟ್ ವಿಧಾನ ಸಭೆಯ ಉಪಸಭಾಧ್ಯಕ್ಷ ಅಥವಾ Deputy Speaker .
46. ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ರ್ಯಾಂಕಿಂಗ್ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ದ.ಆಫ್ರೀಕಾದ ಜಾಕ್ ಕಾಲೀಸ್ ಪ್ರಥಮ ಸ್ಥಾನ ಹಂಚಿಕೊಂಡಿದ್ದಾರೆ. ಸಚಿನ್ 10 ನೇ ಬಾರಿಗೆ ಟೆಸ್ಟ್ ರ್ಯಾಂಕಿಂಗ್ ನಂ.1 ಪಟ್ಟಿ ಪಡೆದುಕೊಂಡಿದ್ದಾರೆ.
47. ಟೆಸ್ಟ್ ರ್ಯಾಂಕಿಂಗ್ ನಲ್ಲಿ ಭಾರತ ಮೊದಲ ಸ್ಥಾನದಲ್ಲಿದ್ದರೆ ನಂತರ ಸ್ಥಾನ ಕ್ರಮವಾಗಿ ದ.ಆಫ್ರೀಕಾ ಹಾಗೂ ಇಂಗ್ಲೇಂಡ್ ಪಾಲಾಗಿದೆ.
48. ಅರ್ಜೇಂಟೀನಾದ ಪುಟ್ಬಾಲ್ ಆಟಗಾರ “ ಲಯೋನೆಲ್ ಮೆಸ್ಸಿ ” ಸತತ ಎರಡನೇ ಬಾರಿಗೆ FIFA ನೀಡುವ ವರ್ಷದ ಶ್ರೇಷ್ಠ ಫುಟ್ಬಾಲ್ ಆಟಗಾರ ಗೌರವಕ್ಕೆ ಪಾತ್ರರಾಗಿದ್ದಾರೆ,
49. ಫೀಫಾ ರ್ಯಾಂಕಿಂಗ್ ಪಟ್ಟಯಲ್ಲಿ ಸ್ಪೇನ್ ಮೊದಲ ಸ್ಥಾನ ಹಾಲೆಂಡ್ ಜರ್ಮನಿ ಕ್ರಮವಾಗಿ ಹಾಗೂ ಭಾರತದ 144 ನೇ ಸ್ಥಾನ ಪಡೆದಿದೆ.
50. ವಿಶ್ವದ ಅತಿ ಉದ್ದವಾದ ಸೇತುವೆ ಚೀನಾದಲ್ಲಿದೆ ಅದರ ಉದ್ದ 42.5 ಕಿ.ಮೀ. ಇದರ ಹೆಸರು “ ಖಂ – ಗ್ ಡೋ ಹೈವಾನ್ ” ಆರು ಪಥಗಳ ಎಕ್ಸ್ ಪ್ರೆಸ್ ವೇ ಇದಾಗಿದ್ದು 8.0 ತೀವ್ರತೆಯ ಭೂ ಕಂಪನವನ್ನ ಎದುರಿಸುವ ಸಾಮರ್ಥ್ಯ ಹೊಂದಿದೆ . ಇದರ ಬಾಳಿಕೆ ಅವಧಿ ಸುಮಾರು 120 ವರ್ಷ ಪ್ರಯಾಣದ ಅವಧಿ 30 ನಿಮಿಷ ಹಾಗೂ ಇದರ ಯೋಜನೆಯ ವೆಚ್ಚ 500 ಶತ ಕೋಟಿ
51. ಮಾನವ ಪ್ರಥಮ ಭಾರಿಗೆ 1.70 ಲಕ್ಷ ವರ್ಷಗಳ ಹಿಂದೆ ಬಟ್ಟೆ ಧರಿಸಿದನಂತೆ ಇದರಿಂದ ಆಫ್ರೀಕಾದಿಂದ ಬೇರೆಡೆಗೆ ವಲಸೆ ಹೋಗಲು ಆತನಿಗೆ ಸಾಧ್ಯವಾಯಿತು.
52. ಭಾರತದ ಗುಪ್ತಚರ ಸಂಸ್ಥೆಯಾದ ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ ( ರಾ ) ನೂತನ ಮುಖ್ಯಸ್ಥರಾಗಿ “ ಎಸ್.ಕೆ.ತ್ರಿಪಾಠಿ ” ಅವರನ್ನು ನೇಮಿಸಲಾಯಿತು ಇವರು ಈ ಮೊದಲು ರಾ ಏರ್ ವಿಂಗ್ ಘಟಕದ ವಿಮಾನಯಾನ ಸಂಶೋಧನಾ ಕೇಂದ್ರದ ( ಎ.ಆರ್.ಸಿ ) ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು .
53. ಯುದ್ಧ ವಿಮಾನಗಳ ಅನುಭವಿ ಫೈಲಟ್ ಹಾಗೂ ರ್ ಮಾರ್ಷಲ್ ಎನ್.ಎ.ಕೆ.ಬ್ರೌನೆ ಅವರು ಭಾರತೀಯ ವಾಯುಪಡೆಯ ನೂತನ ಉಪಮುಖ್ಯಸ್ಥರಾಗಿ ನೇಮಕಗೊಂಡರು .
54. ಯುಎಎಸ್ ಪರವಾನಗಿ ಮತ್ತು ರೇಡಿಯೊ ತರಂಗಾಂತರ ಪಡೆಯುವ ನಿಟ್ಟಿನಲ್ಲಿ ಬಲ್ವಾ ಅವರಿಗೆ ಮಾಜಿ ಟೆಲಿಕಾಂ ಸಚಿವ ಎ.ರಾಜಾ ನೆರವಾಗಿದ್ದರು ಎನ್ನಲಾಗಿದೆ. ಬಲ್ವಾ ಅವರ ಡಿ.ಬಿ.ರಿಯಾಲ್ಟಿ ಗುಂಪು ಕಲೈಞ್ಞರ್ ಟಿವಿಗೆ 214 ಕೋಟಿ ರೂಪಾಯಿಗಳ ಸಾಲ ಒದಗಿಸಿತ್ತು. ಇದರಿಂದಾಗಿ ಹಗರಣದಲ್ಲಿ ಕಲೈಞ್ಞರ್ ಟಿವಿ ಶಾಮೀಲಾದ ಸಂಶಯ ಎದುರಾಗಿದೆ.
55. ಕಲೈಞ್ಞರ್ ಟಿವಿಯಲ್ಲಿ ಕರುಣಾನಿಧಿ ಅವರ ಪತ್ನಿ ದಯಾಳು ಅವರಿಗೆ ಶೇ 60ರಷ್ಟು ಒಡೆತನ ಇದ್ದರೆ, ಅವರ ಪುತ್ರಿ ಹಾಗೂ ಸಂಸದೆ ಕನಿಮೋಳಿ ಅವರಿಗೆ ಶೇ 20ರಷ್ಟು ಒಡೆತನ ಇದೆ.
56. ಅಮೆರಿಕದ ಇತಿಹಾಸದಲ್ಲೇ ಅತ್ಯಂತ ದೊಡ್ಡದು ಎನ್ನಲಾದ ವೈದ್ಯಕೀಯ ವಿಮಾ ಹಗರಣವೊಂದು ಬೆಳಕಿಗೆ ಬಂದಿದ್ದು, ಈ ಸಂಬಂಧ ಬಂಧಿಸಿರುವ 111 ಮಂದಿಯಲ್ಲಿ ಭಾರತೀಯ ಮೂಲದ ಕನಿಷ್ಠ 6 ಜನ ಸೇರಿದ್ದಾರೆ.
57. ವೈದ್ಯಕೀಯ ವಿಮಾ ಹಗರಣವೊಂದು ವೈದ್ಯರು, ನರ್ಸ್‌ಗಳು, ಆರೋಗ್ಯ ಸುರಕ್ಷಾ ಕಂಪೆನಿಗಳು ಜಂಟಿಯಾಗಿ ನಕಲಿ ಬಿಲ್‌ಗಳನ್ನು ಸೃಷ್ಟಿಸಿ 225 ದಶಲಕ್ಷ ಡಾಲರ್‌ಗೂ ಹೆಚ್ಚು ವಂಚಿಸಿರುವುದಾಗಿ ಹೇಳಲಾಗಿದೆ.ದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ 9.54 ಲಕ್ಷ ವೈದ್ಯರಲ್ಲಿ ಭಾರತೀಯ ಮೂಲದ 60 ಸಾವಿರ ಮಂದಿ ಇದ್ದಾರೆ.
58. ಅಡ್ವೊಕೇಟ್ ಜನರಲ್ ಅಶೋಕ ಹಾರ್ನಹಳ್ಳಿ
59. ನಗರ ಸೌಂದರ್ಯ ವರ್ಧನೆ ಕಲ್ಪನೆಯಡಿ ನಿರ್ಮಿಸಲಾದ ವಿಪ್ರೊ ಬೀದಿ ದೀಪ ‘ಒರಿಯೊ’ಕ್ಕೆ ಪ್ರಸಕ್ತ ಸಾಲಿನ ‘ಏಷ್ಯಾ-ಶ್ರೇಷ್ಠತೆ ಮನ್ನಣೆ ಪ್ರಶಸ್ತಿ’ ಲಭಿಸಿದೆ. ದೇಶದ ಪ್ರಮುಖ 120 ಪರಿಸರ ಸ್ನೇಹಿ ಕಟ್ಟಡಗಳಲ್ಲಿ 70 ಕಟ್ಟಡಗಳಿಗೆ ಈಗಾಗಲೇ ಹಸಿರು ತಂತ್ರಜ್ಞಾನದ ‘ಎಲ್‌ಇಡಿ’ ದೀಪಗಳನ್ನು ಕಂಪೆನಿ ಅಳವಡಿಸಿದೆ.
60. ಈಜಿಪ್ಟ್ ಮತ್ತಿತರ ಅರಬ್ ರಾಷ್ಟ್ರಗಳಲ್ಲಿನ ಜನಾಂದೋಲನದಿಂದ ಪ್ರಭಾವಿತರಾದ ಚೀನಾ ನಾಗರಿಕರು ಭಾನುವಾರ ‘ಮಲ್ಲಿಗೆ ಕ್ರಾಂತಿ’ ಹೆಸರಿನಲ್ಲಿ ಇಂಟರ್‌ನೆಟ್‌ನಲ್ಲಿ ನೀಡಿದ ಕರೆ ಮೇರೆಗೆ ಬೀಜಿಂಗ್ ಮತ್ತು ಶಾಂಘೈ ನಗರಗಳಲ್ಲಿ ಬೀದಿಗಿಳಿದಿದ್ದರು.
61. ನಂಬಿದರೆ ನಂಬಿ ಬಿಟ್ಟರೆ ಬಿಡಿ, ಆದರೆ ಇದಂತೂ ನಿಜ. ಮಿಜೊರಾಂನ ವ್ಯಕ್ತಿಯೊಬ್ಬರಿಗೆ 39 ಹೆಂಡತಿಯರು, 94 ಮಕ್ಕಳು ಮತ್ತು 33 ಜನ ಮೊಮ್ಮಕ್ಕಳಿದ್ದಾರೆ. ಇದಕ್ಕಿಂತಲೂ ಮುಖ್ಯವಾದ ಸಂಗತಿ ಎಂದರೆ ಇವರೆಲ್ಲಾ ಒಂದೇ ಸೂರಿನಡಿ ವಾಸಿಸುತ್ತಿದ್ದಾರೆ!
62. ಬಹುಪತ್ನಿತ್ವಕ್ಕೆ ಅವಕಾಶ ಇರುವ ’ಚನಾ’ ಪಂಗಡದ ಮುಖ್ಯಸ್ಥರಾಗಿರುವ 66 ವರ್ಷದ ಜಿಯೋನಾ ಚನಾ ‘ಚ್ಚುವಾನ್ ಥಾಟ್ ರನ್’ (ಹೊಸ ತಲೆಮಾರಿನ ಮನೆ) ಎಂಬ 100 ಕೋಣೆಗಳನ್ನು ಒಳಗೊಂಡ ನಾಲ್ಕು ಅಂತಸ್ತಿನ ಮನೆಯಲ್ಲಿ ಕುಟುಂಬ ಸದಸ್ಯರೊಂದಿಗೆ ಬದುಕು ನಡೆಸುತ್ತಿದ್ದಾರೆ.
63. ಆಸ್ಟ್ರೇಲಿಯಾ ತಂಡದ ನಾಯಕ ರಿಕಿ ಪಾಂಟಿಂಗ್ ಅವರು ಸೋಮವಾರದ ಪಂದ್ಯದ ಮೂಲಕ ಹೊಸ ದಾಖಲೆಯನ್ನು ತಮ್ಮ ಹೆಸರಿಗೆ ಬರೆಯಿಸಿಕೊಳ್ಳಲಿದ್ದಾರೆ. ವಿಶ್ವಕಪ್‌ನಲ್ಲಿ ಅತಿಹೆಚ್ಚು ಪಂದ್ಯಗಳಲ್ಲಿ ಆಡಿದ ಆಟಗಾರ ಎಂಬ ಗೌರವ ಪಾಂಟಿಂಗ್‌ಗೆ ಒಲಿಯಲಿದೆ.
64. ಪಾಂಟಿಂಗ್ ಮತ್ತು ಆಸ್ಟ್ರೇಲಿಯಾದ ಮಾಜಿ ಆಟಗಾರ ಗ್ಲೆನ್ ಮೆಕ್‌ಗ್ರಾ ವಿಶ್ವಕಪ್‌ನಲ್ಲಿ 39 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸೋಮವಾರದ ಪಂದ್ಯ ಆಸೀಸ್ ನಾಯಕನಿಗೆ 40ನೇ ಪಂದ್ಯ ಎನಿಸಲಿದೆ. ಆ ಮೂಲಕ ಮೆಕ್‌ಗ್ರಾ ಅವರನ್ನು ಹಿಂದಿಕ್ಕುವರು.
65. ಸನತ್ ಜಯಸೂರ್ಯ (38), ವಾಸೀಮ್ ಅಕ್ರಮ್ (38) ಮತ್ತು ಸಚಿನ್ ತೆಂಡೂಲ್ಕರ್ (37) ಅವರು ಅತಿಹೆಚ್ಚು ಪಂದ್ಯಗಳಲ್ಲಿ ಕಾಣಿಸಿಕೊಂಡವರ ಪಟ್ಟಿಯಲ್ಲಿ ಬಳಿಕದ ಸ್ಥಾನದಲ್ಲಿದ್ದಾರೆ.
66. ದೇಶದಲ್ಲಿ ತೆರಿಗೆ ವ್ಯವಸ್ಥೆ ಜಾರಿಗೆ ಬಂದ 150 ವರ್ಷಗಳ ಸ್ಮರಣಾರ್ಥ ಈ ವಿಶೇಷ ನಾಣ್ಯಗಳನ್ನು ಮುದ್ರಿಸಲಾಗುತ್ತಿದೆ.ದೇಶದ ನಾಣ್ಯಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರವು ರೂ 150 ಬೆಲೆಯ ವಿಶೇಷ ನಾಣ್ಯಗಳನ್ನು ಮುದ್ರಿಸಲು ನಿರ್ಧರಿಸಿದೆ.
67. ಆದಾಯ ತೆರಿಗೆ ಇಲಾಖೆಗೆ (1860-2010) 150 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ರೂ 5 ಬೆಲೆಯ ನಾಣ್ಯಗಳನ್ನೂ ಹೊರತರಲಾಗುವುದು. 150 ನಾಣ್ಯಗಳನ್ನು ಕೇಂದ್ರ ಸರ್ಕಾರವು ಮುದ್ರಿಸುತ್ತಿರುವುದು ಇದೇ ಮೊದಲು. ಈ ನಾಣ್ಯವನ್ನು ಬೆಳ್ಳಿ, ತಾಮ್ರ, ನಿಕಲ್ ಮತ್ತು ಸತುವಿನಿಂದ ಕೂಡಿದ ಮಿಶ್ರ ಲೋಹದಿಂದ ತಯಾರಿಸಲಾಗುವುದು. ‘ಸತ್ಯಮೇವ ಜಯತೆ’ ಮತ್ತು ಭಾರತ ಮುದ್ರಿಸಲಾಗುವುದು. ಇನ್ನೊಂದು ಬದಿ ಚಾಣಕ್ಯ, ಕಮಲದ ಹೂ ಜತೆ ಜೇನುಹುಳ ಮುದ್ರಿಸಲಾಗಿರುತ್ತದೆ.
68. ಜಿಲ್ಲಾಧಿಕಾರಿ ಆರ್.ವಿ.ಕೃಷ್ಣ ಮತ್ತು ಎಂಜಿನಿಯರ್ ಪವಿತ್ರಾ ಮಝಿ ಅವರನ್ನು ಇನ್ನು 48 ಗಂಟೆಗಳಲ್ಲಿ ಬಿಡುಗಡೆ ಮಾಡಲು ನಕ್ಸಲೀಯರು ಒಪ್ಪಿಕೊಂಡಿದ್ದಾರೆ ಎಂದು ಸಂಧಾನಕಾರ ಪ್ರೊ.ಹರಗೋಪಾಲ್ ಈ ಮೊದಲು ತಿಳಿಸಿದ್ದರು.
69. ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ ಕೃಷಿಗಾಗಿ ಪ್ರತ್ಯೇಕ ಬಜೆಟ್ ಮಂಡಿಸುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ.
70. ಸಂಧ್ಯಾ ಸುರಕ್ಷಾ, ರಾಷ್ಟ್ರೀಯ ವೃದ್ಧಾಪ್ಯ ಪಿಂಚಣಿೆ, ನಿಶ್ಯಕ್ತ ವಿಧವಾ ಪಿಂಚಣಿ ಹಾಗೂ ಅಶಕ್ತ ಪಿಂಚಣಿ ಯೋಜನೆಗಳಿಗಾಗಿ ಸರ್ಕಾರವು 2011-12ನೇ ಸಾಲಿನಲ್ಲಿ ರೂ 1,742 ಕೋಟಿ ಹಣ ಒದಗಿಸಿದೆ.
71. ಸುಮಾರು 10,450 ಗ್ರಾಮ ಸಹಾಯಕರ ಗೌರವಧನವನ್ನು ರೂ 3,000ಗಳಿಂದ ರೂ 3,500ಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಇದು ಏಪ್ರಿಲ್ 1ರಿಂದ ಜಾರಿಯಾಗಲಿದೆ.
72. ಸಚಿನ್ ಅವರ ಭಾನುವಾರದ ಶತಕ ಒಂದು ದಿನದ ಕ್ರಿಕೆಟ್‌ನಲ್ಲಿ 47ನೇಯದು. ಟೆಸ್ಟ್‌ಗಳಲ್ಲಿ ಅವರು 50 ಶತಕ ಹೊಡೆದಿದ್ದಾರೆ. ಅಂದರೆ ಟೆಸ್ಟ್ ಮತ್ತು ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಶತಕ ತಲುಪಲು ಕೇವಲ ಮೂರು ಶತಕಗಳು ಬೇಕು.
73. ಒಟ್ಟು 17,777 ರನ್ ಗಳಿಸಿದ್ದಾರೆ. ಅವರು ಒಂದು ದಿನದ ಪಂದ್ಯಗಳಲ್ಲಿ ಮೊಟ್ಟಮೊದಲ ದ್ವಿಶತಕ ಗಳಿಸಿದ (ನ್ಯೂಜಿಲೆಂಡ್ ವಿರುದ್ಧ) ಮೊದಲ ಆಟಗಾರನೂ ಹೌದು.
74. ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರು ಸೋಮವಾರ ಸಂಸತ್ತಿನಲ್ಲಿ ಮಾಡಲಿರುವ ಬಜೆಟ್ ಭಾಷಣವು ಸ್ವತಂತ್ರ ಭಾರತದ 80ನೇ ಬಜೆಟ್ ಭಾಷಣವಾಗಲಿದೆ.
75. 1947ರ ನವೆಂಬರ್ 26ರಂದು ದೇಶದ ಪ್ರಥಮ ಹಣಕಾಸು ಸಚಿವ ಆರ್. ಕೆ. ಷಣ್ಮುಖಂ ಚೆಟ್ಟಿ ಅವರು ಮೊಟ್ಟ ಮೊದಲ ಬಜೆಟ್ ಭಾಷಣ ಮಾಡಿದರು.
76. ಅತಿ ಹೆಚ್ಚು ಅಂದರೆ 10 ಬಾರಿ ಬಜೆಟ್ ಭಾಷಣ ಮಾಡಿದ ಕೀರ್ತಿ ಮೂರಾರ್ಜಿ ದೇಸಾಯಿ ಅವರಿಗೆ ಸಲ್ಲುತ್ತದೆ. ಪಿ. ಚಿದಂಬರಂ, ಯಶವಂತ್ ಸಿನ್ಹಾ, ವೈ. ಬಿ. ಚವಾಣ್ ಮತ್ತು ಸಿ. ಡಿ. ದೇಶಮುಖ್ ಅವರು ತಲಾ 7 ಬಾರಿ ಬಜೆಟ್ ಮಂಡಿಸಿದ್ದಾರೆ.
77. ದೇಶದ ನಾಲ್ಕನೇ ಹಣಕಾಸು ಸಚಿವ ಟಿ.ಟಿ. ಕೃಷ್ಣಮಾಚಾರಿ ಮತ್ತು ಪ್ರಧಾನಿ ಮನಮೋಹನ್ ಸಿಂಗ್ ಆರು ಬಾರಿ ಬಜೆಟ್ ಮಂಡಿಸಿದ್ದಾರೆ.
78. ಮುಖರ್ಜಿ ಅವರು ಸೋಮವಾರದ್ದು ಸೇರಿ ನಾಲ್ಕು ವಾರ್ಷಿಕ ಬಜೆಟ್ ಮತ್ತು 2009-10ರ ಮಧ್ಯಂತರ ಬಜೆಟ್ ಸೇರಿದಂತೆ ಐದು ಬಜೆಟ್ ಮಂಡಿಸಿದ ಕಿರ್ತಿಗೆ ಪಾತ್ರರಾಗಲಿದ್ದಾರೆ.
79. ಅಮೆರಿಕದ ಅಲಸ್ಕಾ ನಗರದ ಮಾಜಿ ಗವರ್ನರ್ ಮತ್ತು ರಿಪಬ್ಲಿಕನ್ ಪಕ್ಷದ ನಾಯಕಿ ಸಾರಾ ಪಾಲಿನ್ ಅವರು ಮುಂದಿನ ತಿಂಗಳು ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ.
80. ಭಾರತದ ದಿಗ್ಗಜ ಬ್ಯಾಟ್ಸ್ ಮನ್ ಸಚಿನ್ ತೆಂಡೂಲ್ಕರ್ 2010 ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗ್ವಾಲಿಯರ್ ನಲ್ಲಿ ಬಾರಿಸಿದ ಏಕದಿನ ದ್ವಿಶತಕ
81. ಕರ್ನಾಟಕದ ಎಡಗೈ ಸ್ಪಿನ್ನರ್ ಸುನೀಲ್ ಜೋಶಿ ರಣಜಿ ಪಂದ್ಯಾವಳಿಯಲ್ಲಿ 600 ವಿಕೆಟ್ ಸಾಧನೆಗೈದಿದ್ದಾರೆ.
82. ಭಾರತದ ರೋಹನ್ ಬೋಪಣ್ಣ ಮತ್ತು ಇಸಾಮ್ ಉಲ್ ಹಕ್ ಖುರೇಷಿ 2010 ಗ್ಯಾನ್ ಪ್ರಿ ಪೀಸ್ ಅಂಡ್ ಸ್ಪೋರ್ಟ್ಸ್ ಪ್ರಶಸ್ತಿ ಪಡೆದಿದ್ದಾರೆ.
83. ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ 2010ನೆಯ ಸಾಲಿನ ಹಾಂಕಾಂಗ್ ಸೂಪರ್ ಸೀರಿಸ್ ಟೂರ್ನಿಯಲ್ಲಿ ಸಿಂಗಲ್ಸ್ ಜಯಿಸಿದರು .
84. ಬೆಂಗಳೂರು ಮಿಡ್ ನೈಟ್ ಮ್ಯಾರಾಥಾನ್ ಡಿಸೆಂಬರ್ 11 ರಂದು ನಡೆಯಿತು. ಪುರುಷರು ವಿಭಾಗದಲ್ಲಿ ಇಥಿಯೋಪಿಯಾ ದೇಶದ ಸೆಗಾಜ್ ಹಿಲುಫ್ ಮೊದಲ ಸ್ಥಾನ ಪಡೆದರು.
85. ಜರ್ಮನಿಯ ಫಾರ್ಮುಲಾ – 1 ಮೋಟಾರ್ ಕಾರ್ ರೇಸ್ ಪಟು ಸೆಬಾಸ್ಟಿಯನ್ ವೆಟ್ಟೆಲ್ 2010 ನೆಯ ಸಾಲಿನ ಇಂಟರ್ ನ್ಯಾಷನಲ್ ಆಟೋಮೊಬೈಲ್ ಫೆಡರೇಷನ್ ಪುರಸ್ಕಾರನ್ನು ತಮ್ಮದಾಗಿಸಿಕೊಂಡಿದ್ದಾರೆ.
86. ಭಾರತದ ಪ್ರತಿಭಾವಂತ ಶೂಟಿಂಗ್ ಪಟು ಗಗನ್ ನಾರಂಗ್ ಇತ್ತೀಚಿನ ರ್ಯಾಂಕಿಂಗ್ ನಂತೆ ಏಷ್ಯಾದ ನಂಬರ್ ಒನ್ ಪಟು ಎನಿಸಿದ್ದಾರೆ. 2845 ಅಂಕಗಳೊಂದಿಗೆ ಮೊದಲ ಶ್ರೇಯಾಂಕದಲ್ಲಿ ಇದ್ದರು .
87. ಅರ್ಜೇಂಟೀನಾದ ಫಾರ್ವರ್ಡ್ ಫುಟ್ಬಾಲ್ ರ್ ಲಿಯೋನೆಲ್ ಮೆಸ್ಸಿ ಕ್ಯಾಸ್ಟ್ರೋಲ್ ರ್ಯಾಂಕಿಂಗ್ ನಲ್ಲಿ ವಿಶ್ವದ ಅಗ್ರಮಾನ್ಯ ಕ್ಲಬ್ ಪಟು ಎನಿಸಿದ್ದಾರೆ. 1268 ಅಂಕಗಳೊಂದಿಗೆ
88. ವಿಯಟ್ನಾಂನ ಹೊ ಚಿ ಮಿನ್ ನಗರದಲ್ಲಿ ನಡೆದ ಸ್ಪರ್ದೇಯಲ್ಲಿ ಬೆಂಗಳೂರಿನ 20 ವರ್ಷದ ಸುಂದರಿ “ ನೆಕೋಲ್ ಫರಿಯಾ ಮಿಸ್ ಅರ್ಥ್ – 2010 ಕಿರೀಟ ಧರಿಸಿದ್ದಾರೆ. ” ಅಂತಿಮ ಸುತ್ತಿನಲ್ಲಿ “ ಬೆಲ್ಲಿ ನೃತ್ಯ ”ಪ್ರದರ್ಶಿಸಿ 17 ಸ್ಪರ್ದಿಗಳನ್ನು ಹಿಂದಿಕ್ಕಿದರು
89. ಮಿಸ್ ಅರ್ಥ್ ಸ್ಪರ್ದೇಯನ್ನು 2001 ರಿಂದ ಆಯೋಜಿಸಲಾಯಿತು.
90. ಜಾಗತಿಕ ತಾಪಮಾನ ಏರಿಕೆ ತಡೆಗಟ್ಟುವ ನಿಟ್ಟಿನಲ್ಲಿ ಶೃಂಗಸಭೆ ಮೆಕ್ಸಿಕೋದ ಕ್ಯಾನ್ ಕಾನ್ ನಲ್ಲಿ ಡಿಸೆಂಬರ್ 11 ರಂದು ನಡೆಯಿತು.
91. ಜಾಗತಿಕ ತಾಪಮಾನ ಏರಿಕೆ ತಡೆಗಟ್ಟುವ ನಿಟ್ಟಿನಲ್ಲಿ ಶೃಂಗಸಭೆ ಮುಂದಿನ ಸಭೆ 2011 ಡರ್ಬನ್ ನಲ್ಲಿ ನಡೆಯಲಿದೆ.
92. ಜಾಗತಿಕ ತಾಪಮಾನ ಏರಿಕೆ ತಡೆಗಟ್ಟುವ ನಿಟ್ಟಿನಲ್ಲಿ ಶೃಂಗಸಭೆ 2020 ರ ವೇಳೆಗೆ ಹಸಿರು ನಿಧಿಗೆ 100 ಶತಕೋಟಿ ಡಾಲರ್ ಕ್ರೂಡೀಕರಿಸುವ ಗುರಿ .
93. ಜಾಗತಿಕ ತಾಪಮಾನ ಏರಿಕೆ ತಡೆಗಟ್ಟುವ ನಿಟ್ಟಿನಲ್ಲಿ ಶೃಂಗಸಭೆಯಲ್ಲಿ ಬೊಲಿವಿಯಾ ಮಾತ್ರ ವಿರೋಧಿಸಿದೆ.
94. ಮಹಿಳೆಯರಿಗೆ ಸಮಾನ ಉತ್ತೇಜನ ನೀಡುವ ಸಲುವಾಗಿ ವಿಶ್ವಸಂಸ್ಥೆ ಹೊಸದಾಗಿ ಸ್ಥಾಪಿಸಿರುವ ಮಂಡಳಿಗೆ ಭಾರತ ಆಯ್ಕೆಯಾಗಿದೆ. ( ಯು.ಎನ್.ವುಮೆನ್ ).
95. ಅಮೆರಿಕಾದ ಅತ್ಯಂತ ಪ್ರಮುಖ ನಾಗರಿಕ ಪ್ರಶಸ್ತಿಯಾದ ಸ್ವಾತಂತ್ರ್ಯ ಪ್ರಶಸ್ತಿಗೆ ಈ ಭಾರಿ ಜರ್ಮನ್ ಚಾನ್ಸ್ ಲರ್ ಏಂಜೆಲ್ ಮರ್ಕೆಲ್ ಹಾಗೂ ಅಮಿಕಾದ ಮಾಜಿ ಅಧ್ಯಕ್ಷ ಜಾರ್ಜ್ ಡಬ್ಲ್ಯೂ ಬುಶ್ ಸೇರಿದಂತೆ 15 ಮಂದಿಯನ್ನು ಆಯ್ಕೆ ಮಾಡಿದೆ.
96. ಫೆ.19 ರಿಂದ 21 ರ ವರೆಗೆ ಗದಗದಲ್ಲಿ 76 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ
97. 77 ನೇ ಸಾಹಿತ ಸಮ್ಮೇಳನದ ಅಧ್ಯಕ್ಷರಾಗಿ ಪ್ರೋ. ಜಿ.ವೆಂಕಟಸುಬ್ಬಯ್ಯ ಆಯ್ಕೆ .
98. ಕಲ್ಯಾಣ ಸಿಂಗ್ ರಿಂದ “ ಜನಕ್ರಾಂತಿ ” ಪಕ್ಷ ಎಂಬ ಹೊಸ ರಾಜಕೀಯ ಪಕ್ಷ ಸ್ಥಾಪನೆ .
99. ಗೋವಾ – ಕರ್ನಾಟಕ ಷಟ್ಪಥ ಯೋಜನೆಗೆ ಕೇಂದ್ರ ಸರ್ಕಾರದ ಅನುಮತಿ
100. 2010 ರ 61 ನೇ ಗಣರಾಜ್ಯೋತ್ಸವಕ್ಕೆ ದ.ಕೊರಿಯಾದ ಅಧ್ಯಕ್ಷ ಲೀ ಮಯಂಗ್ ಬಾಕ್ ಮುಖ್ಯ ಅತಿಥಿ
101. ಗಂಗಾನದಿಯಲ್ಲಿ ಹಡಗಿನೊಂದರ ಮೇಲೆ ಬಿಹಾರ ಸಚಿವ ಸಂಪುಟ ಸಭೆ
102. ರಂಗ ಕಲಾವಿದೆ ಬಿ.ಜಯಶ್ರೀ ರಾಜ್ಯಸಭೆಗೆ ನಾಮಕರಣ
103. ದೇಶದ ಅತಿ ಐಷಾರಾಮಿ ರೈಲು “ ಮಹಾರಾಜ” ಕ್ಕೆ ಮಮತಾ ಬ್ಯಾನರ್ಜಿ ಚಾಲನೆ
104. ಬ್ರಿಟಿಷ್ ಮ್ಯಾಗಜಿನ್ ಯೂರೋ ಮನಿಯ 2010 ಸಾಲಿನ ಅತ್ಯುತಮ ರಾಷ್ಟ್ರೀಯ ಬ್ಯಾಂಕ್ ಗವರ್ನರ್ ಪ್ರಶಸ್ತಿಯನ್ನು ಬ್ಯಾಂಕ್ ಆಫ್ ಇಸ್ರೇಲ್ ನ ಗವರ್ನರ್ ಸ್ಟ್ಯಾನ್ಲಿ ಫಿಶ್ಚರ್ ರಿಗೆ ನೀಡಲಾಗಿದೆ.
105. ಬಾರತದಲ್ಲಿ ಶೇ.4 ಮುಸ್ಲಿಂ ಮೀಸಲಿಗೆ ಸುಪ್ರೀಂಕೋರ್ಟ್ ಒಪ್ಪಿಗೆ .
106. 2010 ಪರಿಸರ ಪ್ರಗತಿ ಸೂಚ್ಯಂಕ ( ಇಪಿಐ) ದಲ್ಲಿ 123 ನೇ ಸ್ಥಾನ ಪಡೆದ ಭಾರತ
107. ಭಾರತದ ಪ್ರಧಾನಿ ಸಿಂಗ್ , ರಷ್ಯಾ ಪ್ರಧಾನಿ ಪುಟಿನ್ 12 ಅಣುಸ್ಥಾವರ ಸ್ಥಾಪನೆಗೆ ಸಹಿ
108. ಜಿನಿವಾದಲ್ಲಿ ಬಿಗ್ ಬ್ಯಾಂಗ್ ಯಶಸ್ವಿ
109. ಭೂತಾನ್ ನ ಥಿಂಪುವಿನಲ್ಲಿ 16 ನೇ ಸಾರ್ಕ್ ಶೃಂಗಸಭೆ
110. ಕೆನಾಡ ಮ್ಯೂಸಿಯಂನಲ್ಲಿ ಮಹಾತ್ಮಾ ಗಾಂಧಿ ಪ್ರತಿಮೆ ಅನಾವರಣ
111. ಮದರ್ ಥೆರೆಸಾ ಅಂಚೆ ಚೀಟಿ ಬಿಡುಗಡೆ ಮಾಡಿದ ಅಮೆರಿಕ
112. ರಾಜಭಾಷಾ ( ವಿದಾಯ) ಆಯೋಗದ ಅಧ್ಯಕ್ಷರಾಗಿ ಬೇಲೂರು ಜವರಯ್ಯ ನೇಮಕ
113. ಸಾರ್ವಜನಿಕ ಲೆಕ್ಕಪತ್ರ ಸಮಿತಿ ( ಪಿಎಸಿ) ಅಧ್ಯಕ್ಷರಾಗಿ ಗೋಪಿನಾಥ ಮುಂಡೆ ನೇಮಕ
114. ವಿಧಾನ ಪರಿಷತ್ ಪ್ರತಿಪಕ್ಷದ ನಾಯಕಿಯಾಗಿ ಮಾಜಿ ಸಚಿವೆ ಮೋಟಮ್ಮ ನೇಮಕ
115. ಐಯುಸಿಎ ಮುಖ್ಯಸ್ಥರಾಗಿ ಪ್ರೋ.ಬಿ.ಹನುಮಯ್ಯ ನೇಮಕ
116. ತೆರಿಗೆ ವಂಚನೆ ಆರೋಪದ ಮೇಲೆ ಬಂಧಿತನಾಗಿರುವ ಪುಣೆಯ ಉದ್ಯಮಿ ಹಸನ್ ಅಲಿ ಖಾನ್ ದೇಶದಿಂದ ದೋಚಿದ ದುಡ್ಡು 36 ಸಾವಿರ ಕೋಟಿ (8 ಶತಕೋಟಿ ಡಾಲರ್) ಎಂದು ಅಂದಾಜಿಸಲಾಗಿದ್ದು, ಅವನ ವಿರುದ್ಧ ಭಯೋತ್ಪಾದನೆ ನಿಗ್ರಹ ಕಾನೂನಿನಂತಹ ಕಠಿಣ ಕಾನೂನಿನ ಅಡಿಯಲ್ಲಿ ಆರೋಪ ಹೊರಿಸಲು ಸುಪ್ರೀಂ ಕೋರ್ಟ್ ಸಲಹೆ ನೀಡಿದೆ.
117. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮುಖ್ಯಸ್ಥೆ ನವಿ ಪಿಳ್ಳೈ
118. ವಾಷಿಂಗ್ಟನ್ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಶಿಕ್ಷೆಗೆ ಗುರಿಯಾಗಿರುವ ಹಿಂದೂ ಗುರು ಪ್ರಕಾಶಾನಂದ ಸರಸ್ವತಿ ನಿಗದಿತ ಸಮಯಕ್ಕೆ ನ್ಯಾಯಾಲಯದ ಮುಂದೆ ಹಾಜರಾಗದ ಕಾರಣ ಆತನ ಬಂಧನಕ್ಕೆ ಕೋರ್ಟ್ ವಾರೆಂಟ್.
119. ಇನ್ಫೋಸಿಸ್ ಮುಖ್ಯಸ್ಥ ನಾರಾಯಣಮೂರ್ತಿ ಅವರು ಐತಿಹಾಸಿಕ ವಿಶ್ವ ಕನ್ನಡ ಸಮ್ಮೇಳನ ಉದ್ಘಾಟಿಸಲಿದ್ದು, ಆ ಸಂದರ್ಭದಲ್ಲಿ ಕನ್ನಡ ಭಾಷಾಭಿವೃದ್ಧಿಗೆ ವಿಶೇಷ ಕೊಡುಗೆಯಾಗಿ ಅದನ್ನು ಪ್ರಕಟಿಸುವ ಸಾಧ್ಯತೆ ಹೆಚ್ಚಾಗಿದೆ
120. ದೇಶದ ಆರ್ಥಿಕತೆ 2022-25ರ ವೇಳೆಗೆ 5 ಸಾವಿರ ಕೋಟಿಯನ್ನು ತಲುಪಲಿದೆ ಎಂದು ರಿಯಲನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮುಖೇಶ್ ಅಂಬಾನಿ ಹೇಳಿದ್ದಾರೆ. ಐಸಿಐಸಿಐ ಬ್ಯಾಂಕಿನ ಅಧ್ಯಕ್ಷ ಕೆ.ವಿ ಕಾಮತ್ ಇದನ್ನು ಅನುಮೋದಿಸಿದ್ದಾರೆ.