ಶನಿವಾರ, ಡಿಸೆಂಬರ್ 24, 2011

ಪ್ರಚಲಿತ ಘಟನೆ

1. ನಿಯಮದ ಪ್ರಕಾರ ಅರ್ಜಿದಾರರು ಎಂಎಂಆರ್‌ಡಿಎ ಮೈದಾನಕ್ಕಾಗಿ ಎಂಟು ಲಕ್ಷ ರೂಪಾಯಿಗಳನ್ನು ಠೇವಣಿಯಾಗಿ ಇಡಬೇಕು ಮತ್ತು 11 ಲಕ್ಷ ರೂಪಾಯಿಗಳನ್ನು ಬಾಡಿಗೆಯಾಗಿ ನೀಡಬೇಕು ಎಂದು ತಿಳಿಸಿದರು.
2. ಕರ್ನಾಟಕದಲ್ಲಿ ಮೇಲ್ಮನೆಗೆ ( ವಿಧಾನಪರಿಷತ್ )ನಡೆದ ಒಂದು ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ಮುಖ್ಯಮಂತ್ರಿ ಶ್ರೀ.ಡಿ.ವಿ.ಸದಾನಂದ ಗೌಡ ಇವರಿಗೆ ಭರ್ಜರಿ ಜಯ
3. ಮೇಲ್ಮನೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಶ್ರೀ.ಡಿ.ವಿ.ಸದಾನಂದ ಗೌಡ 123 ಮತಗಳನ್ನ ಗಳಿಸಿದರು.
4. ಮೇಲ್ಮನೆ ಚುನಾವಣೆಯಲ್ಲಿ ಕಾಂಗ್ರೇಸ್ ಅಭ್ಯರ್ಥಿ ಆನಂದ ಗಡ್ಡದೇವರಮಠ 69 ಮತಗಳನ್ನ ಪಡೆದರು
5. ಮೇಲ್ಮನೆ ಚುನಾವಣೆಯಲ್ಲಿ ಅಸಿಂಧುಗೊಂಡ ಮತ 6
6. ಮೇಲ್ಮನೆ ಚುನಾವಣೆಯಲ್ಲಿ ರದ್ದಾದ ಮತ 1
7. ಮೇಲ್ಮನೆ ಚುನಾವಣೆಯಲ್ಲಿ ಚಲಾವಣೆಯಾದ ಮತ ಒಟ್ಟು 198
8. ಮೇಲ್ಮನೆ ಚುನಾವಣೆಯಲ್ಲಿ ಒಟ್ಟು ಮತ 199
9. ಮೇಲ್ಮನೆ ಪ್ರವೇಶಿಸಿ ಗೆದ್ದು ಪರಿಷತ್ ಸದಸ್ಯತ್ವ ಪಡೆದ ರಾಜ್ಯದ ಮೊದಲ ಮುಖ್ಯಮಂತ್ರಿ ಶ್ರೀ.ಡಿ.ವಿ.ಸದಾನಂದ ಗೌಡ
10. ಶ್ರೀ.ಡಿ.ವಿ.ಸದಾನಂದ ಗೌಡ ಅವಧಿ 2014 ಜೂನ್ 30 ರವರೆಗೆ
11. ಅಸಿಂಧುಗೊಂಡ 6 ಮತಗಳು ಮುಖ್ಯಮಂತ್ರಿ ಪರವೇ ಬಿದ್ದಿದೆ.
12. ಮುಖ್ಯಮಂತ್ರಿಗಳಿಗೆ ತೋರಿಸಿದರು ಎಂಬ ಕಾರಣಕ್ಕೆ ಬಿಜೆಪಿಯ ಅಭ್ಯರ್ಥಿ ಕಳಕಪ್ಪ ಬಂಡಿ ಅವರ ಮತವನ್ನು ರದ್ದುಪಡಿಸಲಾಯಿತು.
13. ಕಾಂಗ್ರೇಸ್ 71 ಸದಸ್ಯ ಬಲ ಹೊಂದಿದ್ದು ಆ ಪಕ್ಷಕ್ಕೆ ಬಿದ್ದಿರುವುದು 69 ಮತ ಮಾತ್ರ
14. 26 ಸದಸ್ಯ ಸಂಖ್ಯಾಬಲವನ್ನು ಹೊಂದಿದ್ದ ಜೆಡಿಎಸ್ ಮತದಾನದಿಂದ ದೂರ ಉಳಿದಿತ್ತು.
15. ರಾಜ್ಯದ ಇತಿಹಾಸದಲ್ಲಿ ಇದುವರೆಗೂ ವಿಧಾನಸಭೆಯ ಸದಸ್ಯರೇ ಮುಖ್ಯಮಂತ್ರಿಯಾಗಿದ್ದರು ಆದರೆ ಬಿಜೆಪಿಯಲ್ಲಿ ಅನಿರಿಕ್ಷಿತ ಬೆಳವಣಿಗೆಯಿಂದ ವಿಧಾನಪರಿಷತ್ ಸದಸ್ಯರೊಬ್ಬರು ಮುಖ್ಯಮಂತ್ರಿ ಪದವಿಗೇರಿದರು.
16. ಶಂಕರಪ್ಪ ಅವರಿಂದ ತೆರವಾದ ಸ್ಥಾನಕ್ಕಾಗಿ ಶ್ರೀ.ಡಿ.ವಿ.ಸದಾನಂದ ಗೌಡ ಸ್ಪರ್ದಿಸಿದ್ದರು.
17. ಜನಾಂಗೀಯ ದ್ವೇಷಕ್ಕೆ ತುತ್ತಾಗಿ ಹತ್ಯೆಗೀಡಾಗಿದ್ದ ಭಾರತೀಯ ಯುವಕ ನಿತಿನ್ ಗರ್ಗ್ ಕೊಲೆ ಪ್ರಕರಣದ ಆರೋಪಿಗೆ ವಿಕ್ಟೋರಿಯ ರಾಜ್ಯದ ಸುಪ್ರೀಂ ಕೋರ್ಟ್ 13 ವರ್ಷ ಜೈಲು ಶಿಕ್ಷೆ ವಿಧಿಸಿತು.
18. ಈ ಕೃತ್ಯ ವು ಜನಾಂಗೀಯ ದ್ವೇಷದ ಕೊಲೆ ಎಂಬುದಕ್ಕಿಂತಲೂ ಅತ್ಯಂತ ಹೀನಾ ಅಪರಾಧವಾಗಿದೆ ಎಂದು ತೀರ್ಪು ನೀಡಿದ ನ್ಯಾಯಮೂರ್ತಿ ಪಾಲ್ ಕಾಗ್ಲ್ಯಾನ್ ಅಭಿಪ್ರಾಯಪಟ್ಟಿದ್ದಾರೆ.
19. ಭಗವದ್ಗೀತೆಯು ತೀವ್ರಗಾಮಿ ನಿಲುವುಗಳ ಪ್ರತಿಪಾದನೆಯ ಗ್ರಂಥ ಎಂದು ತಗಾದೆ ತೆಗೆದಿರುವ ಸ್ಥಳೀಯ ಕ್ರಿಶ್ಚಿಯನ್ ಆರ್ಥೋಡಾಕ್ಸ್ ಚರ್ಚ್
20. ಭಗವದ್ಗೀತೆಯು 1788 ರಲ್ಲಿ ಮೊದಲ ಬಾರಿಗೆ ರಷ್ಯಾ ಭಾಷೆಗೆ ತರ್ಜುಮೆಗೊಂಡಿದೆ.
21. ಭಗವದ್ಗೀತೆಯನ್ನು ನಿಷೇಧಿಸುವಂತೆ ಕ್ರಿಶ್ಚಿಯನ್ ಆರ್ಥೋಡಾಕ್ಸ್ ಚರ್ಚ್ ಕೋರ್ಟ್ ಮೊರೆ ಹೋಗಿದ್ದು . ತೊಮ್ಸ್ಕ್ ಜಿಲ್ಲಾ ನ್ಯಾಯಾಲಯವು ಡಿಸೆಂಬರ್ 28 ರಂದು ಈ ಕುರಿತು ತೀರ್ಪು ನೀಡಲಿದೆ.
22. ಕೇಂದ್ರ ಮಟ್ಟದಲ್ಲಿ ಲೋಕಪಾಲ ಮತ್ತು ರಾಜ್ಯಗಳಲ್ಲಿ ಲೋಕಾಯುಕ್ತ ವ್ಯವಸ್ಥೆ ಜಾರಿ. ಇವು ಸ್ವಾಯತ್ತ ಹಾಗೂ ಸ್ವತಂತ್ರ ವ್ಯವಸ್ಥೆಗಳು.
23. ಕೇಂದ್ರ ಮಟ್ಟದಲ್ಲಿ ಲೋಕಪಾಲ ಮತ್ತು ರಾಜ್ಯಗಳಲ್ಲಿ ಲೋಕಾಯುಕ್ತ ಭ್ರಷ್ಟಾಚಾರ ತಡೆ ಕಾಯಿದೆಯಡಿ ಯಾವುದೇ ಅಧಿಕಾರಿ ವಿರುದ್ಧ ದೂರು ದಾಖಲಾದ ಸಂದರ್ಭದಲ್ಲಿ, ಅಂತಹ ಅಧಿಕಾರಿ ವಿರುದ್ಧ ಪ್ರಾಥಮಿಕ ವಿಚಾರಣೆಗೆ ನಿರ್ದೇಶಿಸುವ, ತನಿಖೆಗೆ ಸೂಚಿಸುವ ಹಾಗೂ ಮೇಲ್ವಿಚಾರಣೆ ಮಾಡುವ ಅಧಿಕಾರ ಇವುಗಳಿಗೆ ಇರುತ್ತದೆ.
24. ಕಪಾಲ ವ್ಯವಸ್ಥೆಯಲ್ಲಿ ಒಬ್ಬ ಅಧ್ಯಕ್ಷರು ಹಾಗೂ ಗರಿಷ್ಠ ಎಂಟು ಸದಸ್ಯರು ಇರುತ್ತಾರೆ. ಈ ಪೈಕಿ ನಾಲ್ವರು ನ್ಯಾಯಾಂಗ ಕ್ಷೇತ್ರದಿಂದ ಬಂದವರಾಗಿರುತ್ತಾರೆ.
25. ನಾಲ್ಕು ಸದಸ್ಯ ಸ್ಥಾನಗಳು ಪರಿಶಿಷ್ಟ ಜಾತಿ/ ಪಂಗಡ, ಇತರೆ ಹಿಂದುಳಿದ ವರ್ಗಗಳು (ಒಬಿಸಿ), ಅಲ್ಪಸಂಖ್ಯಾತರು ಮತ್ತು ಮಹಿಳೆಯರಿಗೆ ಮೀಸಲು.
26. ಇದು ಪ್ರಾಥಮಿಕ ವಿಚಾರಣಾ ತಂಡ ಹಾಗೂ ಸ್ವತಂತ್ರ ನ್ಯಾಯಿಕ ವಿಚಾರಣಾ ತಂಡಗಳನ್ನು ಪ್ರತ್ಯೇಕವಾಗಿ ಹೊಂದಿರಲಿದೆ.
27. ಕಾರ್ಯದರ್ಶಿ, ವಿಚಾರಣಾ ನಿರ್ದೇಶಕ, ತನಿಖಾ ನಿರ್ದೇಶಕ ಮತ್ತಿತರ ಅಧಿಕಾರಿಗಳು ಇದರಲ್ಲಿ ಇರುತ್ತಾರೆ.
28. ಪ್ರಧಾನ ಮಂತ್ರಿ, ಲೋಕಸಭೆ ಸ್ಪೀಕರ್, ಲೋಕಸಭೆಯ ಪ್ರತಿಪಕ್ಷ ನಾಯಕ, ಭಾರತದ ಮುಖ್ಯ ನ್ಯಾಯಮೂರ್ತಿ ಅಥವಾ ಮುಖ್ಯ ನ್ಯಾಯಮೂರ್ತಿ ನೇಮಿಸಿದ ಸುಪ್ರೀಂಕೋರ್ಟಿನ ಹಾಲಿ ನ್ಯಾಯಮೂರ್ತಿಯವರನ್ನು ಒಳಗೊಂಡ ಆಯ್ಕೆ ಸಮಿತಿ ಲೋಕಪಾಲರನ್ನು ನೇಮಿಸಲಿದೆ.
29. ರಾಷ್ಟ್ರಪತಿಯವರು ನೇಮಿಸಿದ ಪರಿಣತ ಕಾನೂನು ತಜ್ಞರೊಬ್ಬರು ಆಯ್ಕೆ ಸಮಿತಿಯಲ್ಲಿ ಇರುತ್ತಾರೆ.ನೇಮಕದ ವಿಷಯದಲ್ಲಿ ಆಯ್ಕೆ ಸಮಿತಿಗೆ ಪೂರಕವಗಿ ಶೋಧನಾ ಸಮಿತಿ ಕೆಲಸ ಮಾಡುತ್ತದೆ.
30. ಶೋಧನಾ ಸಮಿತಿಯ ಶೇ 50ರಷ್ಟು ಸದಸ್ಯ ಸ್ಥಾನಗಳು ಪರಿಶಿಷ್ಟ ಜಾತಿ/ ಪಂಗಡ, ಒಬಿಸಿ, ಅಲ್ಪಸಂಖ್ಯಾತರು ಹಾಗೂ ಮಹಿಳೆಯರಿಗೆ ಮೀಸಲು.
31. ಕೆಲವು ವಿಶೇಷ ರಕ್ಷಣೆಗಳೊಂದಿಗೆ ಪ್ರಧಾನಿ ಸ್ಥಾನವನ್ನು ಲೋಕಪಾಲ ವ್ಯಾಪ್ತಿಗೆ ತರಲಾಗಿದೆ. ಪ್ರಧಾನಿ ವಿರುದ್ಧ ವಿದೇಶಾಂಗ ವ್ಯವಹಾರ, ರಾಷ್ಟ್ರಕ್ಕೆ ಸಂಬಂಧಿಸಿದ ಬಾಹ್ಯ ಹಾಗೂ ಆಂತರಿಕ ಭದ್ರತೆ, ಸಾರ್ವಜನಿಕ ಸುವ್ಯವಸ್ಥೆ, ಪರಮಾಣು ಚಟುವಟಿಕೆ ಹಾಗೂ ಬಾಹ್ಯಾಕಾಶ ವಿಷಯಗಳಿಗೆ ಸಂಬಂಧಿಸಿದಂತೆ ಯಾವುದೇ ದೂರು ಬಂದರೆ ಅದರ ಬಗ್ಗೆ ತನಿಖೆ ನಡೆಸಲು ಲೋಕಪಾಲರಿಗೆ ಅಧಿಕಾರ ಇಲ್ಲ..
32. 3/4ರಷ್ಟು ಬಹುಮತವಿರುವ ಪೂರ್ಣಪೀಠ ಮಾತ್ರ ಪ್ರಧಾನಿ ವಿರುದ್ಧ ಪ್ರಾಥಮಿಕ ವಿಚಾರಣೆಗೆ ನಿರ್ಧಾರ ಕೈಗೊಳ್ಳಬಹುದು. ಈ ಸಂಬಂಧದ ನಡಾವಳಿಗಳು ಚಿತ್ರೀಕರಣವಾಗಬೇಕು.
33. ಎ ಮತ್ತು ಬಿ ದರ್ಜೆ ಅಧಿಕಾರಿಗಳ ವಿರುದ್ಧ ದೂರು ಬಂದಾಗ ಲೋಕಪಾಲದ ಸೂಚನೆ ಅನುಸಾರ ಸಿವಿಸಿ ತನಿಖೆ ನಡೆಸುತ್ತದೆ. ನಂತರ ಸಿವಿಸಿ ಸಂಬಂಧಿಸಿದ ತನಿಖಾ ವರದಿಯನ್ನು ಮುಂದಿನ ಕ್ರಮಕ್ಕಾಗಿ ವಾಪಸು ಲೋಕಪಾಲಕ್ಕೆ ಕಳುಹಿಸುತ್ತದೆ.
34. ಸಿ ಮತ್ತು ಡಿ ದರ್ಜೆ ನೌಕರರ ವಿರುದ್ಧ ಮುಂದಿನ ಕ್ರಮ ಕೈಗೊಳ್ಳುವ ಅಧಿಕಾರ ಸಿವಿಸಿಗೇ ಇರುತ್ತದೆ. ಈ ಬಗ್ಗೆ ಸಿವಿಸಿಯಿಂದ ವರದಿ ತರಿಸಿಕೊಳ್ಳುವ ಹಾಗೂ ಪರಿಶೀಲನೆ ನಡೆಸುವ ಅಧಿಕಾರ ಲೋಕಪಾಲರಿಗೆ ಇರುತ್ತದೆ.
35. 10 ಲಕ್ಷ ರೂಪಾಯಿಗಿಂತ ಹೆಚ್ಚು ವಿದೇಶಿ ದೇಣಿಗೆ ಸ್ವೀಕರಿಸುವ ಎಲ್ಲ ಸಂಸ್ಥೆಗಳನ್ನು ವಿದೇಶಿ ದೇಣಿಗೆ ನಿಯಂತ್ರಣ ಕಾಯಿದೆಯಡಿ (ಎಫ್‌ಸಿಆರ್‌ಎ) ಲೋಕಪಾಲರು ತನಿಖೆಗೆ ಒಳಪಡಿಸಬಹುದು.
36. ಲೋಕಪಾಲರು ತನಿಖೆ ಕೈಗೆತ್ತಿಕೊಳ್ಳಬೇಕೆಂದರೆ ದೂರು ದಾಖಲಾಗುವುದು ಕಡ್ಡಾಯ. ಸ್ವಯಂ ಪ್ರೇರಿತವಾಗಿ ಯಾವುದೇ ತನಿಖೆಗೆ ಮುಂದಾಗುವಂತಿಲ್ಲ.
37. ತಾವು ತನಿಖೆ ನಡೆಸಿದ ಹಾಗೂ ತಮ್ಮ ನಿರ್ದೇಶನದ ಮೇರೆಗೆ ತನಿಖೆಗೆ ಒಳಪಟ್ಟ ಯಾವುದೇ ಪ್ರಕರಣದ ವಿಚಾರಣಾ ಪ್ರಕ್ರಿಯೆ ಆರಂಭಿಸಲು ಲೋಕಪಾಲರು ಯಾವ ಪೂರ್ವಾನುಮತಿಯನ್ನೂ ಪಡೆಯಬೇಕಿಲ್ಲ.ನೌಕರನ ವಿಚಾರಣೆ ಬಾಕಿ ಇರುವಾಗಲೇ ಭ್ರಷ್ಟಾಚಾರದಿಂದ ಸಂಪಾದಿಸಿದ ಯಾವುದೇ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು
38. ನಾಗರಿಕ ಸೇವೆಗಳಿಗೆ ಸಂಬಂಧಪಟ್ಟಂತೆ ಸಾರ್ವಜನಿಕ ಸಂಸ್ಥೆಗಳು ಕೈಗೊಳ್ಳುವ ಯಾವುದೇ ನಿರ್ಧಾರದ ಬಗ್ಗೆ ಹಾಗೂ ಭ್ರಷ್ಟಾಚಾರ ಪರಿಹಾರ ವೇದಿಕೆಯಾಗಿ ಲೋಕಪಾಲ ವ್ಯವಸ್ಥೆಯೇ ಅಂತಿಮ ಮೇಲ್ಮನವಿ ಪ್ರಾಧಿಕಾರವಾಗಿರುತ್ತದೆ.
39. ಲೋಕಪಾಲಕ್ಕೆ ಬರುವ ದೂರುಗಳ ತನಿಖೆಯ ಬಗ್ಗೆ ಸಿಬಿಐ ಸೇರಿದಂತೆ ಯಾವುದೇ ತನಿಖಾ ಸಂಸ್ಥೆಗೆ ನಿರ್ದೇಶನ ನೀಡಿ, ಮೇಲ್ವಿಚಾರಣೆ ಮಾಡುವ ಅಧಿಕಾರ ಲೋಕಪಾಲಕ್ಕೆ ಇರುತ್ತದೆ.
40. ಕಾಲಮಿತಿ ನಿಗದಿಯನ್ನೂ ಮಸೂದೆ ಒಳಗೊಂಡಿದೆ. ಪ್ರಾಥಮಿಕ ವಿಚಾರಣೆಗೆ ಮೂರು ತಿಂಗಳ ಅವಧಿ ನಿಗದಿ ಮಾಡಲಾಗಿದ್ದು, ಇದನ್ನು ಇನ್ನೂ ಮೂರು ತಿಂಗಳು ವಿಸ್ತರಿಸಬಹುದು.
41. ತನಿಖೆಗೆ ಆರು ತಿಂಗಳು ಅವಕಾಶವಿದ್ದು, ಇನ್ನೂ ಆರು ತಿಂಗಳ ವಿಸ್ತರಿಸಬಹುದು. ನಂತರ ನ್ಯಾಯಿಕ ವಿಚಾರಣಾ ಪ್ರಕ್ರಿಯೆಗೆ ಒಂದು ವರ್ಷ ನಿಗದಿಯಾಗಿದ್ದು, ಇದನ್ನು ಮತ್ತೊಂದು ವರ್ಷ ವಿಸ್ತರಿಸಲು ಅವಕಾಶವಿದೆ.
42. ನಾಗರಿಕ ಸಮಿತಿ ಕೇಳಿದ್ದು ಪ್ರಧಾನಿ ಸ್ಥಾನವನ್ನು ಬೇಷರತ್ತಾಗಿ ಲೋಕಪಾಲ ವ್ಯಾಪ್ತಿಗೆ ಒಳಪಡಿಸಬೇಕು
43. ನಾಗರಿಕ ಸಮಿತಿ ಕೇಳಿದ್ದು ಸಿಬಿಐ ಲೋಕಪಾಲ ಅಧೀನಕ್ಕೆ ತರಬೇಕು
44. ನಾಗರಿಕ ಸಮಿತಿ ಕೇಳಿದ್ದು ಕೆಳಹಂತದ ಅಧಿಕಾರಷಾಹಿಯನ್ನೂ ಲೋಕಪಾಲ ವ್ಯವಸ್ಥೆಯಡಿ ತನ್ನಿ
45. ನಾಗರಿಕ ಸಮಿತಿ ಕೇಳಿದ್ದು ನಾಗರಿಕ ಸನ್ನದು ನಿಗದಿ ಅಧಿಕಾರ ಲೋಕಪಾಲಕ್ಕೆ ಇರಬೇಕು
46. ನಾಗರಿಕ ಸಮಿತಿ ಕೇಳಿದ್ದು ಲಂಚ ಸಂಬಂಧಿ ದೂರುಗಳನ್ನು ನೇರವಾಗಿ ಲೋಕಪಾಲ ಗಮನಕ್ಕೆ ತರಬೇಕು.
47. ಲೋಕಪಾಲಕ್ಕೆ ತನಿಖೆಯ ಯಾವ ಅಧಿಕಾರವೂ ಇಲ್ಲ.
48. ದೇಶದ ಶೇ 63ರಷ್ಟು ಜನತೆಗೆ ಸಬ್ಸಿಡಿ ದರದಲ್ಲಿ ಧಾನ್ಯ ಪೂರೈಸುವ ಆಹಾರ ಭದ್ರತಾ ಕಾಯ್ದೆಗೆ ಕೇಂದ್ರ ಸಂಪುಟ ಕೊನೆಗೂ ಅಳೆದು ಸುರಿದು ಒಪ್ಪಿಗೆ ಸೂಚಿಸಿದೆ.
49. ಗ್ರಾಮಾಂತರ ಪ್ರದೇಶಗಳ ಶೇ 75ರಷ್ಟು ಮತ್ತು ನಗರ ಪ್ರದೇಶಗಳ ಶೇ 50ರಷ್ಟು ಜನರನ್ನು ಈ ರಿಯಾಯಿತಿ ದರದ ಧಾನ್ಯ ಪೂರೈಕೆಯ ವ್ಯಾಪ್ತಿಗೆ ತರಲಾಗುವುದು ಎಂಬ ಭರವಸೆ ಮೇಲುನೋಟಕ್ಕೆ ಆಕರ್ಷಕವಾಗಿದೆ.
50. ಬಡತನದ ರೇಖೆಯ ಕೆಳಗಿನ ಪ್ರತಿ ಫಲಾನುಭವಿಗೆ (ಕಡು ಬಡವರಿಗೆ) ರೂ 3ರ ದರದಂತೆ 7 ಕಿಲೋ ಅಕ್ಕಿ, ರೂ 2 ರ ದರದಂತೆ ಗೋಧಿ ಮತ್ತು ರೂ 1 ರ ದರದಂತೆ ಇನ್ನಿತರ ಧಾನ್ಯ ಪಡೆಯುವ ಹಕ್ಕನ್ನು ಈ ಕಾಯ್ದೆಯಲ್ಲಿ ನೀಡುವುದು ಸರ್ಕಾರದ ಉದ್ದೇಶ.
51. ಬಡತನ ರೇಖೆಯ ಮೇಲಿರುವ ಪ್ರತಿ ವ್ಯಕ್ತಿಗೆ ತಿಂಗಳಿಗೆ 3 ಕಿಲೋ ಆಹಾರಧಾನ್ಯವನ್ನು ಅವುಗಳ ಬೆಂಬಲ ಬೆಲೆಯ ಶೇ 50ರಷ್ಟಕ್ಕೆ ಸಿಗುವಂತೆ ಮಾಡಲಾಗುವುದೆಂಬುದು ಕಾಯ್ದೆಯಲ್ಲಿನ ಇನ್ನೊಂದು ಅಂಶ.
52. ಗರ್ಭಿಣಿಯರಿಗೆ 6 ತಿಂಗಳವರೆಗೆ ತಲಾ ರೂ 1000 ದಂತೆ ಭತ್ಯೆ, ಕುಟುಂಬದ ಮಹಿಳೆಯರ ಹೆಸರಿನಲ್ಲಿಯೇ ಪಡಿತರ ಚೀಟಿ ಸ್ತ್ರೀ ಸಬಲೀಕರಣದ ಆಶಯ.
53. ಕೇಂದ್ರ ಸರ್ಕಾರದ ಸಂಪೂರ್ಣ ನಿಯಂತ್ರಣದಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಿದ ಈ ಕಾಯ್ದೆ ಆಹಾರ ಹಕ್ಕು ಕಾರ್ಯಕರ್ತರು ಮತ್ತು ಈ ಕ್ಷೇತ್ರದಲ್ಲಿ ದುಡಿಯುತ್ತಿರುವ ಸ್ವಯಂಸೇವಾ ಸಂಸ್ಥೆಗಳ ವಿರೋಧ ಎದುರಿಸುತ್ತಿದೆ.

ಶುಕ್ರವಾರ, ಡಿಸೆಂಬರ್ 23, 2011

ಪ್ರಟಲಿತ ಘಟನೆ

1. ರಾಜ್ಯ ಸರ್ಕಾರದ ವ್ಯಾಪ್ತಿಯ ದೂರಾದರೆ ರಾಜ್ಯ ಸಾರ್ವಜನಿಕ ಕುಂದುಕೊರತೆ ಪರಿಹಾರ ಆಯೋಗಕ್ಕೆ ಮತ್ತು ಕೇಂದ್ರ ಸರ್ಕಾರದ ವ್ಯಾಪ್ತಿಯ ದೂರಾದರೆ ಕೇಂದ್ರ ಸಾರ್ವಜನಿಕ ಕುಂದುಕೊರತೆ ಪರಿಹಾರ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಬೇಕಾಗುತ್ತದೆ.
2. ರಾಜ್ಯ ಮತ್ತು ಕೇಂದ್ರ ಆಯೋಗದಲ್ಲಿ ಮುಖ್ಯ ಆಯುಕ್ತರು ಮತ್ತು ಗರಿಷ್ಠ 10 ಮಂದಿ ಆಯುಕ್ತರು ಇರುತ್ತಾರೆ. ರಾಜ್ಯದಲ್ಲಿ ಆಯುಕ್ತರನ್ನು ರಾಜ್ಯಪಾಲರು ಮತ್ತು ಕೇಂದ್ರದ ಆಯುಕ್ತರನ್ನು ರಾಷ್ಟ್ರಪತಿ ನೇಮಕ ಮಾಡುತ್ತಾರೆ.
3. ಮಾಜಿ ಸಚಿವ ಜಿ.ಜನಾರ್ಧನರೆಡ್ಡಿ ಅವರ ಒಡೆತನದ ಓಬಾಳಪುರಂ ಗಣಿ ಸಂಸ್ಥೆಯ ಅಕ್ರಮ ಗಣಿ ವ್ಯವಹಾರದಿಂದ ಸರ್ಕಾರದ ಬೊಕ್ಕಸಕ್ಕೆ 5,100/- ಕೋಟಿ ರೂ. ನಷ್ಟವಾಗಿದೆಯೆಂದು ಸಿಬಿಐ ಸ್ಥಳೀಯ ನ್ಯಾಯಾಲಯಕ್ಕೆ ತಿಳಿಸಿದೆ.
4. ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯ ಮೂರ್ತಿ ಯಾಗಿ ನ್ಯಾ.ವಿಕ್ರಮ್ ಜಿತ್ ಸೇನ್ ದಿನಾಂಕ/24/12/2011 ರಂದು ಪ್ರಮಾಣ ವಚನ ಸ್ವೀಕಾರಿಸಲಿದ್ದಾರೆ.
5. ಜ್ಞಾನಪೀಠ ಪ್ರಶಸ್ತು ಪುರಸ್ಕೃತ ಕಂಬಾರರಿಗೆ ಕೇಂದ್ರ ನಾಟಕ ಅಕಾಡೆಮಿ ಫೆಲೋಶಿಪ್ ಸಂದಿದೆ.
6. ಆಕ್ಷೇಪಾರ್ಹ ಮಾಹಿತಿಯನ್ನು ಪ್ರಕಟಿಸಿದ್ದಕ್ಕಾಗಿ ಫೇಸ್‌ಬುಕ್, ಗೂಗಲ್, ಯಾಹೂ, ಮೈಕ್ರೋಸಾಫ್ಟ್ ಮತ್ತು ಯುಟ್ಯೂಬ್ ಸೇರಿದಂತೆ 21 ಸಾಮಾಜಿಕ ವೆಬ್ ತಾಣಗಳಿಗೆ ವಿಚಾರಣೆ ಎದುರಿಸಲು ದೆಹಲಿ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.
7. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 292 (ಅಶ್ಲೀಲ ಪುಸ್ತಕಗಳ ಮಾರಾಟ), 293 (ಅಪ್ರಾಪ್ತರಿಗೆ ಅಶ್ಲೀಲ ವಸ್ತುಗಳ ಮಾರಾಟ) ಮತ್ತು 120-ಬಿ (ಅಪರಾಧವೆಸಗಲು ಸಂಚು) ಅಡಿಗಳಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.
8. ಮೆಟ್ರೋಪಾಲಿಟನ್ ಮ್ಯಾಜಿಸ್ಟೇಟ್ ಸುದೇಶ್ ಕುಮಾರ್ ಕೇಸನ್ನು ದಾಖಲಿಸಿಕೊಂಡಿದ್ದು, ಜ.13ರೊಳಗೆ ಸೂಕ್ತ ಕ್ರಮ ತೆಗೆದುಕೊಂಡು ವರದಿ ಸಲ್ಲಿಸುವಂತೆ ಕೇಂದ್ರಕ್ಕೆ ಸೂಚಿಸಿದ್ಧಾರೆ.
9. ಕೋಮು ಸೌಹಾರ್ದತೆಯನ್ನು ಕದಡುವ ಉದ್ದೇಶದಿಂದ ಧರ್ಮ ವಿರೋಧಿ ಮತ್ತು ಸಮಾಜ ವಿರೋಧಿ ಮಾಹಿತಿಯನ್ನು ಪ್ರಕಟಿಸದಂತೆ ನಿಷೇಧ ಹೇರಿ ಈ ಎಲ್ಲ ವೆಬ್ ಸೈಟ್ ಗಳ ವಿರುದ್ಧ ಸಿವಿಲ್ ನ್ಯಾಯಾಲಯ ಆದೇಶ ಹೊರಡಿಸಿದ ಮೂರು ದಿನಗಳಲ್ಲಿ ದಂಡಾಧಿಕಾರಿಗಳು ಸಮನ್ಸ್ ಜಾರಿ ಮಾಡಿದ್ದಾರೆ.
10. ಸಾಮಾಜಿಕ ತಾಣಗಳನ್ನು ಸೆನ್ಸಾರ್ ಮಾಡಬೇಕೆಂದು ಕೇಂದ್ರ ಸಚಿವ ಕಪಿಲ್ ಸಿಬಾಲ್ ಹೇಳಿರುವ ಬೆನ್ನ ಹಿಂದೆಯೇ ನ್ಯಾಯಾಲಯ ಈ ಪ್ರಕರಣ ದಾಖಲಿಸಿಕೊಂಡಿದೆ.
11. ಸಾಮಾಜಿಕ ಜಾಲ ತಾಣ ಫೇಸ್‌ಬುಕ್ ಸಂಸ್ಥೆ ತನ್ನ ಮೌಲ್ಯವನ್ನು ಸುಮಾರು 100 ಬಿಲಿಯನ್ ಡಾಲರ್ ಮೊತ್ತಕ್ಕೆ ಏರಿಸಿಕೊಳ್ಳುವ ನಿರೀಕ್ಷೆ ಹೊಂದಿದೆ.
12. ಜೊತೆಗೆ ಫೇಸ್ ಬುಕ್ ಐಪಿಒ ಗಳನ್ನು ಕೂಡಾ 2012ರಲ್ಲಿ ಹೊರ ಬಿಡುವ ಸಾಧ್ಯತೆ ಇದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಹೇಳುತ್ತದೆ.
13. ಸುಮಾರು 800 ಮಿಲಿಯನ್ ಗೂ ಅಧಿಕ ಸದಸ್ಯರನ್ನು ಹೊಂದಿರುವ ಫೇಸ್ ಬುಕ್ ನ ಮೇಲೆ ಹಣ ಹೂಡಲು ಬ್ಯಾಂಕರ್ ಗಳು ಸಿದ್ಧರಿದ್ದಾರೆ. ಆದರೆ, ಸಿಇಒ ಮಾರ್ಕ್ ಝಕರ್ ಬರ್ಗ್ ಮಾತೇ ಅಂತಿಮ ಎನ್ನುತ್ತಾರೆ ಸಿಎಫ್ ಒ ಡೇವಿಡ್ ಎಬೆರ್ಸ್ಮನ್.
14. ಹಾರ್ವಡ್ ವಿಶ್ವವಿದ್ಯಾಲಯದ ಡಾರ್ಮೆಂಟರಿ ಕೋಣೆಯೊಂದರಲ್ಲಿ ಸುಮಾರು 2004ರ ವೇಳೆಗೆ ಆರಂಭವಾದ ಸಾಮಾಜಿಕ ಜಾಲ ತಾಣ ಇಂದು ವಿಶ್ವದಾದ್ಯಂತ ಅತಿ ಹೆಚ್ಚು ಬಳಸಲ್ಪಡುತ್ತಿರುವ ಆಪ್ತ ವೆಬ್ ತಾಣವಾಗಿದೆ.
15. ಸದ್ಯಕ್ಕೆ ಸುಮಾರು 41 ಬಿಲಿಯನ್ ಡಾಲರ್ ತೂಗುವ ಕಂಪನಿ ಈಗ ಗೂಗಲ್ ಹಾಗೂ ಅಮೆಜಾನ್ ನಂತರದ ಸ್ಥಾನದಲ್ಲಿದೆ.
16. ಭರವಸೆಯ ಅಥ್ಲೀಟ್ ಅಶ್ವಿನಿ ಅಕ್ಕುಂಜಿಗೆ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ (ನಾಡಾ) ಒಂದು ವರ್ಷದ ನಿಷೇಧ ದೃಢಪಟ್ಟಿದೆ.
17. ನ್ಯಾ. ದೀನೇಶ್ ದಯಾಳ್ ನೇತೃತ್ವದ ಶಿಸ್ತು ಸಮಿತಿ ಸಂಶದ ಲಾಭನ್ನು ಕ್ರೀಡಾಳುಗಳತ್ತ ವಾಲಿಸಿದ್ದು, ನಿಷೇಧದ ಅವಧಿ ಕೇವಲ ಒಂದು ವರ್ಷದ್ದಾಗಿರುವುದರಿಂದ ಮುಂದಿನ ಜುಲೈನಲ್ಲಿ ಲಂಡನ್ನಿನಲ್ಲಿ ನಡೆಯುವ ಒಲಂಪಿಕ್ ನಲ್ಲಿ ಭಾರತವನ್ನು ಪ್ರತಿನಿಧಿಸುವ ಆಸೆ ಜೀವಂತವಾಗಿದೆ.
18. ಲೋಕಪಾಲ ಮಸೂದೆಗೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಅದಕ್ಕೆ ಸಮಾನಾಂತರವಾಗಿ ಮಸೂದೆ ಬಗ್ಗೆ ಪ್ರಚಾರಕ್ಕೆ ಅವಕಾಶ ನೀಡುವುದು ಸಾಧ್ಯವಿಲ್ಲ ಎಂದು ಬಾಂಬೆ ಹೈಕೋರ್ಟ್ ಶುಕ್ರವಾರ ಅಣ್ಣಾ ಹಜಾರೆ ತಂಡವನ್ನು ತರಾಟೆಗೆ ತೆಗೆದುಕೊಂಡಿದೆ.
19. ಎಂಎಂಆರ್‌ಡಿಎ ಮೈದಾನಕ್ಕೆ ವಿಧಿಸಲಾಗುತ್ತಿರುವ ಶುಲ್ಕವನ್ನು ಮನ್ನಾ ಮಾಡಬೇಕು ಎಂಬ ಬೇಡಿಕೆಗೂ ಆಕ್ಷೇಪ ವ್ಯಕ್ತಪಡಿಸಿರುವ ಹೈಕೋರ್ಟ್, ಈ ವಿಚಾರದಲ್ಲಿ ಮಧ್ಯೆ ಪ್ರವೇಶಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
20. `ನಿಮ್ಮ ಕೋರಿಕೆಯನ್ನು ಮನ್ನಿಸಿ ಆದೇಶ ಹೊರಡಿಸಿದರೆ ಸಂಸತ್ತಿನ ಕಲಾಪದಲ್ಲಿ ಹಸ್ತಕ್ಷೇಪ ಮಾಡಿದಂತಾಗುತ್ತದೆ ಮತ್ತು ಲೋಕಪಾಲ ಮಸೂದೆಯ ಬಗ್ಗೆ ಸಂಸತ್ತು , ಆರಂಭಿಸಿರುವಾಗ ಆ ವಿಚಾರದಲ್ಲಿಯೇ ಸಮಾನಾಂತರವಾಗಿ ಪ್ರಚಾರಕ್ಕೆ ಅವಕಾಶ ನೀಡಿದಂತಾಗುತ್ತದೆ` ಎಂದು ನ್ಯಾಯಮೂರ್ತಿ ಪಿ. ಬಿ. ಮುಜುಂದಾರ್ ಮತ್ತು ಮೃದುಲಾ ಭಟ್ಕರ್ ಅಭಿಪ್ರಾಯಪಟ್ಟಿದ್ದಾರೆ.
21. ನಿಯಮದ ಪ್ರಕಾರ ಅರ್ಜಿದಾರರು ಎಂಎಂಆರ್‌ಡಿಎ ಮೈದಾನಕ್ಕಾಗಿ ಎಂಟು ಲಕ್ಷ ರೂಪಾಯಿಗಳನ್ನು ಠೇವಣಿಯಾಗಿ ಇಡಬೇಕು ಮತ್ತು 11 ಲಕ್ಷ ರೂಪಾಯಿಗಳನ್ನು ಬಾಡಿಗೆಯಾಗಿ ನೀಡಬೇಕು ಎಂದು ತಿಳಿಸಿದರು.

ಗುರುವಾರ, ಡಿಸೆಂಬರ್ 22, 2011

ನಾಗರಿಕ ಸನ್ನದು ಮಸೂದೆ: ಏನು, ಹೇಗೆ?

1. ಕೇಂದ್ರ ಸರ್ಕಾರ ಮಂಗಳವಾರ ಲೋಕಸಭೆಯಲ್ಲಿ `ನಿಗದಿತ ಕಾಲ ಮಿತಿಯಲ್ಲಿ ಸೇವೆಗಳನ್ನು ಪಡೆಯುವ ನಾಗರಿಕ ಹಕ್ಕು ಮತ್ತು ಕುಂದುಕೊರತೆ ನಿವಾರಣೆ 2001` ಮಸೂದೆ ಮಂಡಿಸಿದೆ.
2. ಕೇಂದ್ರ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಖಾತೆ ಸಚಿವ ವಿ. ನಾರಾಯಣ ಸ್ವಾಮಿ ಲೋಕಸಭೆಯಲ್ಲಿ ಈ ಮಸೂದೆ ಮಂಡಿಸಿದರು.
3. ನಿಗದಿತ ಅವಧಿಯಲ್ಲಿ ನಾಗರಿಕರಿಗೆ ನಿರ್ದಿಷ್ಟ ಕೆಲಸಗಳು ಪೂರ್ತಿಗೊಳ್ಳುವುದಕ್ಕೆ ಅಗತ್ಯ ವ್ಯವಸ್ಥೆ ಮಾಡುವ ಬಗ್ಗೆ ಮಸೂದೆಯಲ್ಲಿ ಅವಕಾಶ ನೀಡಲಾಗಿದೆ.
4. ಕಾಯ್ದೆ ಜಾರಿಯಾದ ಆರು ತಿಂಗಳ ಒಳಗಾಗಿ ಎಲ್ಲಾ ಸರ್ಕಾರಿ ಇಲಾಖೆಗಳು, ಸಂಸ್ಥೆಗಳು, ಸಂವಿಧಾನ ಬದ್ಧವಾಗಿ ರಚನೆಗೊಂಡ ಸಂಸ್ಥೆಗಳು, ಸಂಸತ್ತಿನ ಕಾಯ್ದೆಯ ಮೂಲಕ ಸ್ಥಾಪಿಸಲಾಗಿರುವ ನಿಗಮ, ಮಂಡಲಿ ಅಥವಾ ಕಂಪೆನಿಗಳು, ಸ್ಥಳೀಯಾಡಳಿತ ಸಂಸ್ಥೆಗಳು, ಸರ್ಕಾರದ ಅನುದಾನ ಪಡೆಯುತ್ತಿರುವ ಸಂಸ್ಥೆಗಳು ನಾಗರಿಕ ಸನ್ನದನ್ನು ಜಾಹೀರು ಪಡಿಸುವುದು ಕಡ್ಡಾಯ.
5. ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳು ಒದಗಿಸುವ ಸೇವೆ ಅಥವಾ ನೀಡುವ ಉತ್ಪಾದನೆಗಳ ಸಂಪೂರ್ಣ ವಿವರಗಳು ಹಾಗೂ ಅವುಗಳನ್ನು ನಾಗರಿಕರಿಗೆ ಒದಗಿಸಲು ಗರಿಷ್ಠ ಎಷ್ಟು ಸಮಯ ಹಿಡಿಯುತ್ತದೆ ಎಂಬುದನ್ನು ಸನ್ನದು ಒಳಗೊಂಡಿರಬೇಕು.
6. ನಿಗದಿತ ಕಾಲಾವಧಿಯಲ್ಲಿ ಒಮ್ಮೆ ಸೇವೆ ಒದಗಿಸಲಾಗದಿದ್ದರೆ ಯಾರಿಗೆ ಮೇಲ್ಮನವಿ ಸಲ್ಲಿಸಿ ಕುಂದುಕೊರತೆ ನಿವಾರಿಸಿಕೊಳ್ಳಬೇಕು ಎಂಬುದನ್ನು ಸ್ಪಷ್ಟವಾಗಿ ನಮೂದಿಸುವುದನ್ನು ಮಸೂದೆಯಲ್ಲಿ ಕಡ್ಡಾಯಗೊಳಿಸಲಾಗಿದೆ.
7. ಕಾನೂನು ಜಾರಿಗೆ ಬಂದ ಆರು ತಿಂಗಳ ಒಳಗಾಗಿ ಪಂಚಾಯಿತಿ ಮಟ್ಟದಿಂದ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು ಮತ್ತು ಸಂಸ್ಥೆಗಳಲ್ಲಿ ಕುಂದುಕೊರತೆ ನಿವಾರಣಾ ಘಟಕ ಸ್ಥಾಪಿಸುವುದು ಹಾಗೂ ದೂರು ಬಂದ ಎರಡು ದಿನಗಳಲ್ಲಿ ಸ್ವೀಕೃತಿ ಪ್ರತಿ ಒದಗಿಸುವುದು ಕಡ್ಡಾಯ.
8. ದೂರು ಬಂದ 30 ದಿನಗಳ ಒಳಗೆ ಕುಂದುಕೊರತೆ ನಿವಾರಿಸಿ ತಪ್ಪಿತಸ್ಥ ಅಧಿಕಾರಿ ಯಾರು ಎಂದು ಪತ್ತೆ ಹಚ್ಚುವುದು ಕಡ್ಡಾಯ.
9. ಯಾವುದೇ ಸಿಬ್ಬಂದಿ ಅಥವಾ ಅಧಿಕಾರಿಯಿಂದ ಲೋಪ ಅಥವಾ ನಿರ್ಲಕ್ಷ್ಯ ಉಂಟಾಗಿದ್ದರೆ ಅಂಥವರ ವಿರುದ್ಧ ಇಲಾಖೆ ಕ್ರಮ ಜರುಗಿಸುವಂತೆ ನೋಡಿಕೊಳ್ಳುವುದು ಕುಂದುಕೊರತೆ ನಿವಾರಣಾ ಅಧಿಕಾರಿಯ ಜವಾಬ್ದಾರಿಯಾಗಿರುತ್ತದೆ.
10. ಯಾವುದೇ ಸರ್ಕಾರಿ ನೌಕರ ಉದ್ದೇಶಪೂರ್ವಕವಾಗಿ ತಪ್ಪೆಸಗಿದರೆ ಆ ನೌಕರನ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಪ್ರಕಾರ ಕ್ರಮ ತೆಗೆದುಕೊಳ್ಳುವಂತೆ ಕುಂದುಕೊರತೆ ನಿವಾರಣಾ ಅಧಿಕಾರಿ ಸಂಬಂಧಪಟ್ಟ ಉನ್ನತ ಅಧಿಕಾರಿಗೆ ಶಿಫಾರಸು ಮಾಡಬೇಕು ಎಂದು ಮಸೂದೆಯಲ್ಲಿ ತಿಳಿಸಲಾಗಿದೆ.
11. ತಪ್ಪಿತಸ್ಥ ಅಧಿಕಾರಿ, ಸಿಬ್ಬಂದಿ ವಿರುದ್ಧ ತೆಗೆದುಕೊಂಡಿರುವ ಕ್ರಮಗಳ ವಿವರಗಳನ್ನು ದೂರುದಾರರಿಗೆ ತಿಳಿಸುವುದು ಕುಂದು ಕೊರತೆ ನಿವಾರಣೆ ಅಧಿಕಾರಿಯ ಕರ್ತವ್ಯ.
12. 30 ದಿನಗಳಲ್ಲಿ ದೂರುದಾರರ ಸಮಸ್ಯೆ ಇತ್ಯರ್ಥ ಮಾಡಲಾಗದಿದ್ದರೆ ಅಂತಹ ದೂರುಗಳನ್ನು ಮೇಲ್ಮನವಿ ಪ್ರಾಧಿಕಾರಕ್ಕೆ ಕಳುಹಿಸಬೇಕು ಎಂದು ಮಸೂದೆಯಲ್ಲಿ ಸ್ಪಷ್ಟಪಡಿಸಲಾಗಿದೆ.
13. ಒಮ್ಮೆ ಕುಂದುಕೊರತೆ ನಿವಾರಣಾ ಅಧಿಕಾರಿ ಸಮಸ್ಯೆ ಬಗೆಹರಿಸಲು ತೆಗೆದುಕೊಂಡ ಕ್ರಮ ತೃಪ್ತಿಕರವಾಗಿರದಿದ್ದರೆ ದೂರುದಾರರು ಮೇಲ್ಮನವಿ ಸಲ್ಲಿಸಬಹುದಾಗಿದ್ದು, ಮೇಲ್ಮನವಿ ಪ್ರಾಧಿಕಾರವು 30 ದಿನಗಳ ಒಳಗಾಗಿ ತೀರ್ಮಾನ ಪ್ರಕಟಿಸಬೇಕಾಗುತ್ತದೆ.
14. ರಾಜ್ಯ ಸರ್ಕಾರದ ವ್ಯಾಪ್ತಿಯ ದೂರಾದರೆ ರಾಜ್ಯ ಸಾರ್ವಜನಿಕ ಕುಂದುಕೊರತೆ ಪರಿಹಾರ ಆಯೋಗಕ್ಕೆ ಮತ್ತು ಕೇಂದ್ರ ಸರ್ಕಾರದ ವ್ಯಾಪ್ತಿಯ ದೂರಾದರೆ ಕೇಂದ್ರ ಸಾರ್ವಜನಿಕ ಕುಂದುಕೊರತೆ ಪರಿಹಾರ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಬೇಕಾಗುತ್ತದೆ.
15. ರಾಜ್ಯ ಮತ್ತು ಕೇಂದ್ರ ಆಯೋಗದಲ್ಲಿ ಮುಖ್ಯ ಆಯುಕ್ತರು ಮತ್ತು ಗರಿಷ್ಠ 10 ಮಂದಿ ಆಯುಕ್ತರು ಇರುತ್ತಾರೆ. ರಾಜ್ಯದಲ್ಲಿ ಆಯುಕ್ತರನ್ನು ರಾಜ್ಯಪಾಲರು ಮತ್ತು ಕೇಂದ್ರದ ಆಯುಕ್ತರನ್ನು ರಾಷ್ಟ್ರಪತಿ ನೇಮಕ ಮಾಡುತ್ತಾರೆ.

2 ಜಿ ಹಗರಣ

1. ದೂರಸಂಪರ್ಕ ಖಾತೆಯ ಮಾಜಿ ಸಚಿವ ಸುಖ್‌ರಾಮ್ ಮತ್ತು ಇತರ ಇಬ್ಬರಿಗೆ 1996 ಟೆಲಿಕಾಂ ಹಗರಣಕ್ಕೆ ಸಂಬಂಧಿಸಿದಂತೆ ವಿಧಿಸಲಾಗಿರುವ ಜೈಲು ಶಿಕ್ಷೆಯನ್ನು ದೆಹಲಿ ಹೈಕೋರ್ಟ್ ಬುಧವಾರ ಎತ್ತಿಹಿಡಿದಿದೆ.
2. ವಿಚಾರಣಾ ನ್ಯಾಯಾಲಯವು ವಿಧಿಸಿರುವ ಶಿಕ್ಷೆಯ ವಿರುದ್ಧ ಸುಖ್‌ರಾಮ್ ಮತ್ತಿತರರು ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾ ಮಾಡಿದ ನ್ಯಾಯಮೂರ್ತಿ ಎಸ್. ರವೀಂದ್ರ ಭಟ್ ಮತ್ತು ಜಿ. ಪಿ. ಮಿತ್ತಲ್ ಅವರನ್ನು ಒಳಗೊಂಡ ನ್ಯಾಯಪೀಠವು ಸುಖ್‌ರಾಮ್, ದೂರಸಂಪರ್ಕ ಖಾತೆಯ ಮಾಜಿ ಉಪ ಮಹಾನಿರ್ದೇಶಕ ರುನು ಘೋಷ್ ಮತ್ತು ಹೈದರಾಬಾದ್‌ನ ಅಡ್ವಾನ್ಸ್‌ಡ್ ರೇಡಿಯೊ ಮಾಸ್ಟ್‌ನ ವ್ಯವಸ್ಥಾಪಕ ನಿರ್ದೇಶಕ ಪಿ. ರಾಮರಾವ್ ಅವರಿಗೆ ವಿಧಿಸಿರುವ ಶಿಕ್ಷೆಯನ್ನು ಎತ್ತಿಹಿಡಿದಿದೆ.
3. ಮೂವರೂ ಜನವರಿ ಐದರಂದು 2011 ವಿಚಾರಣಾ ನ್ಯಾಯಾಲಯದಲ್ಲಿ ಶರಣಾಗಿ ಶಿಕ್ಷೆ ಅನುಭವಿಸಬೇಕು ಎಂದು ನ್ಯಾಯಪೀಠ ಆದೇಶಿಸಿದೆ.
4. 1996ರಲ್ಲಿ ಹೈದರಾಬಾದ್‌ನ ಅಡ್ವಾನ್ಸ್‌ಡ್ ರೇಡಿಯೊ ಮಾಸ್ಟ್ ಕಂಪೆನಿಯು ದೂರಸಂಪರ್ಕ ಇಲಾಖೆಗೆ ಅತಿ ಹೆಚ್ಚಿನ ದರದಲ್ಲಿ ಸಲಕರಣೆಗಳನ್ನು ಸರಬರಾಜು ಮಾಡಿರುವ ಹಗರಣ ಇದಾಗಿದ್ದು , ಘೋಷ್ ಮತ್ತು ರಾವ್ ಅವರಿಗೆ ಕ್ರಮವಾಗಿ ಎರಡು ಮತ್ತು ಮೂರು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ.
5. ಸುಖ್‌ರಾಮ್ ವಿರುದ್ಧ ಸಂಚಿನಲ್ಲಿ ಭಾಗಿಯಾಗಿದ್ದ ಆಪಾದನೆಯನ್ನು ರದ್ದುಪಡಿಸಿರುವ ಹೈಕೋರ್ಟ್, ಲಾಭಕ್ಕಾಗಿ ಅಧಿಕಾರ ದುರ್ಬಳಕೆ ಮತ್ತು ಕ್ರಿಮಿನಲ್ ದುರ್ನಡತೆಗಾಗಿ ವಿಧಿಸಲಾಗಿರುವ ಶಿಕ್ಷೆಯನ್ನು ಎತ್ತಿಹಿಡಿದಿದೆ.
6. 1990ರ ದಶಕದ ಮಧ್ಯಭಾಗದಲ್ಲಿ ನಡೆದ ಇನ್ನೊಂದು ಟೆಲಿಕಾಂ ಹಗರಣದಲ್ಲಿ ಸುಖರಾಮ್ ತಪ್ಪಿತಸ್ಥ ಎಂದು ಘೋಷಿಸಿರುವ ವಿಚಾರಣಾ ನ್ಯಾಯಾಲಯವು ಐದು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.
7. 1993ರಿಂದ 1996ರ ವರೆಗೆ ದೂರಸಮಪರ್ಕ ಸಚಿವರಾಗಿದ್ದ ಸುಖ್‌ರಾಮ್ ಅವರು ರುನು ಘೋಷ್ ಜತೆ ಸೇರಿಕೊಂಡು ಹೈದರಾಬಾದ್ ಮೂಲದ ಕಂಪೆನಿಯಿಂದ ಅತಿ ಹೆಚ್ಚಿನ ದರದಲ್ಲಿ ಸಲಕರಣೆಗಳನ್ನು ಖರೀದಿಸಿ ಇಲಾಖೆಗೆ ನಷ್ಟ ಉಂಟು ಮಾಡಿದ್ದರು ಎಂದು ಆಪಾದಿಸಿ ಸಿಬಿಐ ಆರೋಪ ಪಟ್ಟಿ ಸಲ್ಲಿಸಿ ಗರಿಷ್ಠ ಶಿಕ್ಷೆ ವಿಧಿಸುವಂತೆ ಮನವಿ ಮಾಡಿತ್ತು.
8. 1996ರಲ್ಲಿ ಸಿಬಿಐ ಅಧಿಕಾರಿಗಳು ಸುಖ್‌ರಾಮ್ ನಿವಾಸದ ಮೇಲೆ ದಾಳಿ ಮಾಡಿ 3.6 ಕೋಟಿ ರೂಪಾಯಿ ವಶಪಡಿಸಿಕೊಂಡಿತ್ತು.

ಕೇಂದ್ರ ಸಾಹಿತ್ಯ ಅಕಾಡೆಮಿ 2011

1. ಕನ್ನಡದ ಕಥೆಗಾರ-ಕಾದಂಬರಿಕಾರ ಗೋಪಾಲಕೃಷ್ಣ ಪೈ ಮತ್ತು ಅವರ `ಸ್ವಪ್ನ ಸಾರಸ್ವತ` ಕಾದಂಬರಿ ಕೇಂದ್ರ ಸಾಹಿತ್ಯ ಅಕಾಡೆಮಿಯ 2011ನೇ ಸಾಲಿನ ಪ್ರಶಸ್ತಿಗೆ ಪಾತ್ರವಾಗಿದೆ.
2. ಪ್ರಶಸ್ತಿ 1 ಲಕ್ಷ ರೂಪಾಯಿ ನಗದು ಹಾಗೂ ಸ್ಮರಣಿಕೆ ಒಳಗೊಂಡಿದ್ದು, ಫೆ.14ರಂದು ದೆಹಲಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
3. ಸಾವಿನ ನೆರಳಿನಲ್ಲೂ ತಮ್ಮ ಸ್ವಂತಿಕೆ ಉಳಿಸಿಕೊಳ್ಳಲು ಯತ್ನಿಸಿದ ಸಾರಸ್ವತ ಸಮುದಾಯದ ಕಥನವನ್ನು `ಸ್ವಪ್ನ ಸಾರಸ್ವತ` ಬೃಹತ್ ಕಾದಂಬರಿ ಒಳಗೊಂಡಿದೆ.
4. ಚರಿತ್ರೆ ಹಾಗೂ ಕಲ್ಪನೆ ಹದ ಪ್ರಮಾಣದಲ್ಲಿ ಮಿಳಿತವಾದ ಈ ಕೃತಿ ಗೋಪಾಲಕೃಷ್ಣ ಪೈ ಅವರ ಚೊಚ್ಚಿಲ ಕಾದಂಬರಿ. ಮೂರು ಕಥಾ ಸಂಕಲನ, ಒಂದು ಕಿರು ಕಾದಂಬರಿ ಪ್ರಕಟಿಸಿರುವ ಅವರು ಕೆಲವು ಚೀನೀ ಕಥೆಗಳನ್ನು ಕನ್ನಡಕ್ಕೆ ತಂದಿದ್ದಾರೆ.
5. ಚಿತ್ರಕಥಾ ಲೇಖಕರಾಗಿಯೂ ಕೆಲಸ ಮಾಡಿರುವ ಪೈ, `ಕನಸೆಂಬೋ ಕುದುರೆಯನೇರಿ` ಚಿತ್ರದ ಚಿತ್ರಕಥೆ ರಚನೆಗಾಗಿ ಗಿರೀಶ ಕಾಸರವಳ್ಳಿ ಅವರೊಂದಿಗೆ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾರೆ.
6. 2009ರಲ್ಲಿ ಪ್ರಕಟಗೊಂಡ `ಸಪ್ನ ಸಾರಸ್ವತ` ಕಾದಂಬರಿ ಬೆಂಗಳೂರಿನ `ಭಾಗ್ಯಲಕ್ಷ್ಮಿ ಪ್ರಕಾಶನ`ದ ಪ್ರಕಟಣೆ.
7. ಭಾರತದ 23 ಭಾಷೆಗಳಲ್ಲಿ ರಚಿತವಾಗುವ ಶ್ರೇಷ್ಠ ಕೃತಿಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಲಾಗುತ್ತದೆ.
8. ಈ ಬಾರಿ ಪ್ರಶಸ್ತಿ ಪೈಪೋಟಿಯಲ್ಲಿ ಕನ್ನಡದ ಇತರ ಲೇಖಕರಾದ ಕೆ.ವಿ. ನಾರಾಯಣ, ಬರಗೂರು ರಾಮಚಂದ್ರಪ್ಪ, ಎಚ್.ಎಸ್. ಶಿವಪ್ರಕಾಶ್, ಹನೂರು ಕೃಷ್ಣಮೂರ್ತಿ ಮುಂತಾದವರ ಕೃತಿಗಳೂ ಇದ್ದುವೆಂದು ತಿಳಿದುಬಂದಿದೆ.
9. ಕನ್ನಡ ಕೃತಿಗಳಿಗೆ ಸಂಬಂಧಿಸಿದಂತೆ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಸಾಹಿತಿಗಳಾದ ವೀಣಾ ಶಾಂತೇಶ್ವರ, ಡಿ.ಎಸ್.ನಾಗಭೂಷಣ, ಬಂಜಗೆರೆ ಜಯಪ್ರಕಾಶ್ ಇದ್ದರು.
10. `ಪ್ರಜಾವಾಣಿ`ಯ ಅಂಕಣಕಾರ ರಾಮಚಂದ್ರ ಗುಹ ಸೇರಿದಂತೆ 22 ಲೇಖಕರು ಪ್ರಸಕ್ತ ಸಾಲಿನ ಹೆಮ್ಮೆಯ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.
11. ತಮ್ಮ ಕಥನ ಇತಿಹಾಸ `ಇಂಡಿಯಾ ಆಫ್ಟರ್ ಗಾಂಧಿ` ಕೃತಿಗಾಗಿ ಗುಹ ಅವರಿಗೆ ಈ ಪ್ರಶಸ್ತಿ ಸಂದಿದೆ.

ಬುಧವಾರ, ಡಿಸೆಂಬರ್ 21, 2011

KAS Exam , ಕೆ.ಎ.ಎಸ್ ಪರೀಕ್ಷಾ ಪ್ರಶ್ನೋತ್ತರಗಳು

1. 940ಕ್ಕೆ ಬಂದಿದೆ. ಅಂದರೆ ವ್ಯತ್ಯಾಸವು ಸಾವಿರಕ್ಕೆ 60.
2. ಉತ್ತರ ಪ್ರದೇಶ ಅತ್ಯಂತ ಹೆಚ್ಚು ಜನಸಾಂದ್ರತೆಯುಳ್ಳ ರಾಜ್ಯವಾಗಿದ್ದು, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದ ಜನಸಂಖ್ಯೆಗಳನ್ನು ಸೇರಿಸಿದರೆ (31 ಕೋಟಿ),
3. ಜನಗಣತಿಯಲ್ಲಿ ಹೊರಬಿದ್ದ ಅಂಕಿ ಅಂಶಗಳಿಗೆ ಹೋಲಿಸಿದರೆ, 2001ರಲ್ಲಿ ಶೇ. 21.15ರಷ್ಟಿದ್ದ ಜನಸಂಖ್ಯಾ ವೃದ್ಧಿ ದರವು 2011ರ ಜನಗಣತಿ ಪ್ರಕಾರ ಶೇ.17.64ಕ್ಕೆ ಕುಸಿದಿದೆ.
4. ಭಾರತದ ಜನಸಂಖ್ಯೆ 121.02 ಕೋಟಿ. ಪುರುಷರು 62.37 ಕೋಟಿ ಹಾಗೂ ಮಹಿಳೆಯರು 58.65 ಕೋಟಿ.
5. ಒಟ್ಟಾರೆಯಾಗಿ, ಪುರುಷರ ಜನಸಂಖ್ಯೆಯಲ್ಲಿ ಶೇ.17 ಹಾಗೂ ಮಹಿಳೆಯರ ಜನಸಂಖ್ಯೆಯಲ್ಲಿ ಶೇ.18ರಷ್ಟು ವೃದ್ಧಿಯಾಗಿದೆ.
6. 10 ವರ್ಷಗಳಲ್ಲಿ ಭಾರತದಲ್ಲಿ ಹೆಚ್ಚಳವಾದ ಜನಸಂಖ್ಯೆ 18 ಕೋಟಿ. ಅಂದರೆ ಇದು ಬ್ರೆಜಿಲ್‌ನ ಜನಸಂಖ್ಯೆಗೆ ಸಮ.
7. ಜನಸಾಂದ್ರತೆಯು ಕೂಡ ಹೆಚ್ಚಾಗಿದೆ. ಅತೀ ಹೆಚ್ಚು ಜನಸಾಂದ್ರತೆಯಿರುವುದು ದೆಹಲಿಯ ಈಶಾನ್ಯ ಜಿಲ್ಲೆಯಲ್ಲಿ (ಚದರ ಕಿಲೋಮೀಟರಿಗೆ 37,346 ಮಂದಿ), ಅತಿ ಕನಿಷ್ಠ ಜನಸಾಂದ್ರತೆ ಇರುವುದು ಅರುಣಾಚಲ ಪ್ರದೇಶದ ದಿಬಾಂಗ್ ಕಣಿವೆ ಜಿಲ್ಲೆಯಲ್ಲಿ - ಚದರ ಕಿಲೋಮೀಟರಿಗೆ 1 ಮಾತ್ರ!.
8. ಭಾರತದ ಜನಗಣತಿ 2011ನ್ನು 2 ಹಂತ ಗಳಲ್ಲಿ ಕೈಗೊಳ್ಳಲಾಗುವುದು. ಮೊದಲನೆ ಹಂತದಲ್ಲಿ ಮನೆಗಳ ಪಟ್ಟಿ ಮಾಡುವುದು ಮತ್ತು ಮನೆಗಣತಿ. ಎರಡನೆ ಹಂತ ಜನಗಣತಿ.
9. ಕರ್ನಾಟಕ ರಾಜ್ಯದಲ್ಲಿ ಮೊದಲ ಹಂತದ ಜನಗಣತಿ ಕಾರ್ಯವನ್ನು 2010 ಎಪ್ರಿಲ್ 15ರಿಂದ ಜೂನ್ 1ರವರೆಗೆ ನಡೆಸಲಾಗುತ್ತದೆ. 2ನೆ ಹಂತದ ಜನಗಣತಿ ಕೆಲಸ 2011 ಫೆಬ್ರವರಿ ಮಾರ್ಚ್ ತಿಂಗಳಲ್ಲಿ ಜರಗಲಿದೆ.
10. ಕರ್ನಾಟಕ ರಾಜ್ಯದಲ್ಲಿ, ಜನಗಣತಿ ನಿರ್ದೇಶನಾಲಯ ಬೆಂಗಳೂರು ಇವರ ಮಾರ್ಗದರ್ಶನದಲ್ಲಿ ಜನಗಣತಿ ಕಾರ್ಯ ನಡೆಯಲಿದೆ.
11. ಆಯಾಯ ಜಿಲ್ಲೆಯ ಜಿಲ್ಲಾಧಿಕಾರಿಯವರು ಪ್ರಿನ್ಸಿಪಲ್ ಸೆನ್ಸಸ್ ಆಫೀಸರ್ಸ್‌ ಆಗಿ ಕರ್ತವ್ಯ ನಿರ್ವಹಿಸುತ್ತಾರೆ. ಅಲ್ಲದೆ ರಾಜ್ಯದ ಮಹಾನಗರ ಪಾಲಿಕೆ ವ್ಯಾಪ್ತಿಗಳಲ್ಲಿ ಆಯಾಯ ನಗರ ಪಾಲಿಕೆಯ ಕಮೀಶನರ್‌ಗಳು ಪ್ರಿನ್ಸಿಪಲ್ ಸೆನ್ಸಸ್ ಆಫೀಸರ್ ಆಗಿ ಕರ್ತವ್ಯ ನಿರ್ವಹಿಸುತ್ತಾರೆ.
12. ಮನೆ ಮನೆ ಭೇಟಿ ನೀಡಿ ಮನೆ ಪಟ್ಟಿ ತಯಾರಿಸಲು ಸುಮಾರು 600 ರಿಂದ 700 ಜನಸಂಖ್ಯೆ ವ್ಯಾಪ್ತಿಗೆ ಒಬ್ಬರು ಗಣತಿದಾರರಂತೆ, 6 ಗಣತಿದಾರರಿಗೆ ಒಬ್ಬರು ಮೇಲ್ವಿಚಾರಕರಂತೆ ನೇಮಕ ಮಾಡಲಾಗಿದೆ.
13. ಪ್ರಸಕ್ತ ಭಾರಿಯ ಹಂಪಿ ಕನ್ನಡ ವಿವಿಯ ಪ್ರತಿಷ್ಠಿತ ನಾಡೋಜ ಗೌರವ ಪದವಿ ಎಸ್.ಎಲ್.ಬೈರಪ್ಪ ಸೇರಿದಂತೆ ಒಟ್ಟು ಆರು ಜನರಿಗೆ ದೊರಿತಿದೆ.
14. ತುಂಗಭದ್ರಾ ಜಲಾಶಯ ನಿರ್ಮಿಸಲು ಆಗಿನ ಹೈದರಾಬಾದ್ ಸರ್ಕಾರ 1950 ರಲ್ಲಿ ಭೂಸ್ವಾಧೀನ ನಡೆಸಿತು.
15. ತುಂಗಭದ್ರಾ ಜಲಾಶಯ ನಿರ್ಮಿಸಲು ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಸುಮಾರು 17 ಗ್ರಾಮಗಳು ಮುಳುಗಡೆಯಾದವು.
16. ಈ ಪೈಕಿ ರಾಂಪುರ ತಾಲ್ಲೂಕಿನ ಒಂದು ಗ್ರಾಮದ 17 ಕುಟುಂಗಳನ್ನು ಅಗಳಕೇರಾ ಗ್ರಾಮಕ್ಕೆ ಸ್ಥಳಾಂತರಿಸಲಾಗಿತ್ತು. ಪುನರ್ವಸತಿಗಾಗಿ ಹುಲಿಗಿಯ ಕುಬೇರಗೌಡರಿಂದ 48 ಎಕರೆ ಭೂಸ್ವಾಧೀನಪಡಿಸಿಕೊಂಡು 6,969 ರೂ ಪರಿಹಾರ ವಿತರಿಸಲಾಗಿತ್ತು.
17. ಈ ಸಂದರ್ಭದಲ್ಲಿ 5 ಎಕರೆಗಿಂತ ಹೆಚ್ಚು ಜಮೀನು ಪಡೆದ ಕುಟುಂಬದಿಂದ ಹೆಚ್ಚುವರಿಯಾಗಿ ಎಕರೆಗೆ 50 ರೂನಂತೆ ಸರ್ಕಾರ ವಸೂಲಿ ಮಾಡಿತ್ತು. 5 ಎಕರೆಗಿಂತ ಕಡಿಮೆ ಜಮೀನು ಪಡೆದ ಸಂತ್ರಸ್ತರಿಗೆ ಉಚಿತವಾಗಿ ವಿತರಿಸಲಾಗಿತ್ತು.
18. ಸಂತ್ರಸ್ತರಿಗೆ ಸರ್ಕಾರ ನೀಡಿದ ಜಮೀನಿನ ಮಾಲಿಕತ್ವ ಎತ್ತಿಹಿಡಿದಿರುವ ಇಲ್ಲಿನ ಒಂದನೇ ತ್ವವರಿತ ನ್ಯಾಯಾಲಯ , ಕೆಳ ನ್ಯಾಯಾಲಯ ನೀಡಿದ ಆದೇಶ ತಳ್ಳಿ ಹಾಕುವ ಮೂಲಕ 61 ವರ್ಷಗಳ ಸಂತ್ರಸ್ತರ ಹೋರಾಟಕ್ಕೆ ನ್ಯಾಯ ಒದಗಿಸಿದೆ.
19. ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ವರ ನಿವಾಸದ ಮತ್ತು ಕಛೇರಿಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ 2.6 ಕೆ.ಜಿ. ಚಿನ್ನ , 17 ಲಕ್ಷ ರೂ. ನಗದು ವಶವಡಿಸಿಕೊಂಡಿದ್ದಾರೆ.
20. ರಷ್ಯಾದ ಸೈಬೀರಿಯಾದ ನ್ಯಾಯಾಲಯವೊಂದು ಹಿಂದೂಗಳ ಪವಿತ್ರ ಗ್ರಂಥ ಭಗವದ್ಗೀತೆಯನ್ನು ನಿಷೇಧಿಸಲು ಹೊರಟಿದೆ.
21. ಮಾಸ್ಕೊ – ಇಸ್ಕಾನ್ ಭಗವದ್ಗೀತೆ ನಿಷೇಧ ಕುರಿತ ತೀರ್ಪನ್ನು ಅಮಾನತಿಲ್ಲಿ ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ಡಿಸೆಂಬರ್ 28 ಮುಂದೂಡಿದೆ.
22. ನರ್ಸ್ ಭಂವರಿ ದೇವಿ ಪಹರಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಮಹಿಪಾಲ್ ಮದೆರ್ನಾ ಅವರ ಪತ್ನಿ ಲೀಲಾ , ಶಾಸಕ ಮಲ್ಕನ್ ಸಿಂಗ್ ವರ ಇಬ್ಬರು ಪುತ್ರರನ್ನು ಸಿಬಿಐ ಸೋಮವಾರ ವಿಚಾರಣೆಗೊಳಪಡಿಸಿದೆ.
23. ಉತ್ತ ಕೋರಿಯಾ ಪರಮೊಚ್ಚ ನಾಯಕ ಎರಡನೇ ಕಿಮ್ ಜಾಂಗ್ ಇಲ್ ದಿನಾಂಕ/17/12/2011 ರಂದು ಹೃದಯಾಘಾತದಿಂದ ನಿಧನರಾದರು.
24. ಸ್ವಾತಂತ್ರ್ಯ ನಂತರವೂ ಗೋವಾ ಪ್ರದೇಶವು ಪೋರ್ಚುಗೀಸರ ಅಧೀನದಲ್ಲಿತ್ತು ಇದನ್ನು ವಶಪಡಿಸಲು ಭಾರತ ಸರ್ಕಾರ ಆಪರೇಷನ್ ವಿಜಯ್ ಹೆಸರಿನಲ್ಲಿ ಯುದ್ಧ ಸಾರಿತು. 1961 ಡಿಸೆಂಬರ್ 19 ರಂದು ಗೋವ ಭಾರತದ ವಶವಾಯಿತು.
25. ಪೋರ್ಚುಗೀಸರು ಭಾರತದ ಪಶ್ಚಿಮ ಕರಾವಳಿಗೆ ಕಾಲಿಟ್ಟಿದ್ದು 1510 ರಲ್ಲಿ .
26. ಸುಧಾರಣಾವಾಧಿ ಲೂಯಿಸ್ ದಿ ಮನೇಜಸ್ ಬ್ರಾಗಾಂಕಾ ಅವರು ಹೊರತರುತ್ತಿದ್ದ ಒ ಹೆರಾಲ್ಡೋ ಪತ್ರಿಕೆ ಪೋರ್ಚುಗೀಸರ ದುರಾಡಳಿತ ವಿರುದ್ಧದ ಹೋರಾಟಕ್ಕೆ ಬೆನ್ನೆಲುಬಾಗಿತ್ತು.
27. ಇದನ್ನು ಹತ್ತಿಕ್ಕಲು ಪೋರ್ಚುಗೀಸ್ ಸರ್ಕಾರವು ಗೋವಾದಲ್ಲಿ ಪ್ರೆಸ್ ಸೆನ್ಸಾರ್ ಶಿಪ್ ಜಾರಿಗೊಳಿಸಿತು.
28. ಗೋವಾ ವಿಮೋಚನಾ ಚಳವಳಿಗೆ ರಾಜಕೀಯ ಬಲ ನೀಡಲು ಟ್ರಿಸ್ಟಾವೋ ಡಿಬ್ರೆಗಾಂಜಾ ಕುನ್ಹಾ ವರು 1928 ರಲ್ಲಿ ಗೋವಾ ನ್ಯಾ,ನಲ್ ಕಾಂಗ್ರೇಸ್ ಸ್ಥಾಪಿಸಿದರು.
29. 1930 ರ ವೇಳೆಗೆ ಪೋರ್ಚುಗೀಸ್ ಸರ್ಕಾರವು ಆಕ್ಟೋ ಕಲೋನಿಯಲ್ ಕಾಯಿದೆ ಜಾರಿಗೊಳಿಸಿ ರಾಜಕೀಯ ಪಕ್ಷಗಳ ರ್ಯಾಲಿ ಹಾಗೂ ಸಭೆಗಳಿಗೆ ನಿಷೇಧ ಹೇರಿತು.
30. ಗೋವಾ ವಿಮೋಚನಾ ಚಳವಳಿಯ ಪಿತಾ ಎಂದು ಟ್ರಿಸ್ಟಾವೋ ಡಿಬ್ರೆಗಾಂಜಾ ಕುನ್ಹಾ ರನ್ನ ಕರೆದರು.
31. 1961 ಡಿಸೆಂಬರ್ 18 ಮತ್ತು 19 ರಂದು ಸತತ 33 ಗಂಟೆಗಳ ಸೇನೆ ದಾಳಿ ನಡೆಸುವ ಮೂಲಕ ಗೋವಾ ಮತ್ತು ಸುತ್ತಮುತ್ತಲಿನ ದ್ವೀಪಗಳು ವಿಮೋಚನೆಗೊಳಿಸಲಾಯಿತು.
32. ಪೋರ್ಚುಗೀಸರು ಭಾರತಕ್ಕೆ ಅಧಿಕೃತವಾಗಿ ಭಾರತಕ್ಕೆ ಶರಣಾಗಿದ್ದು 1974 ರಲ್ಲಿ ಗೋವಾ ವಿಮೋಚನೆಯನ್ನು ಒಪ್ಪಿಕೊಂಡಿತು.
33. ಗೋವಾ 1987 ರಲ್ಲಿ ಪ್ರತ್ಯೇಕ ರಾಜ್ಯವಾಗಿ ಗೋವಾ ಅಸ್ತಿತ್ವಕ್ಕೆ ಬಂತು.
34. ಪ್ರಸ್ತುತ ದಮನ್ ಮತ್ತು ದಿಯೂ , ದಾದ್ರಾ ಮತ್ತು ನಗರ್ ಹವೇಲಿ ದ್ವೀಪಗಳು ಕೇಂದ್ರಾಡಳಿತ ಪ್ರದೇಶವಾಗಿದೆ.
35. ಭಾರತದಲ್ಲಿ information technology ಕ್ಷೇತ್ರದಲ್ಲಿ 2012ನೇ ಸಾಲಿನಲ್ಲಿ ಸುಮಾರು 2.5 ಲಕ್ಷ ಮಂದಿಗೆ ಉದ್ಯೋಗ ಕಲ್ಪಿಸಲಾಗುವುದು ಎಂದು ಐಟಿ ದಿಗ್ಗಜ ಇನ್ಫೋಸಿಸ್ ಕಂಪನಿಯ ಸಹ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್.
36. 34 ವರ್ಷಗಳ ಬಳಿಕ ರಣಜಿ ಪಂದ್ಯದ ಆತಿಥ್ಯ ವಹಿಸಲು ಶಿವಮೊಗ್ಗ ಸಜ್ಜಾಗಿದೆ.
37. 1995 ರಲ್ಲಿ ಕರ್ನಾಟಕ ಮತ್ತು ತಮಿಳುನಾಡು ನಡುವೆ ಪಂದ್ಯ ನಡೆದಿತ್ತು.
38. ಆಸ್ಟ್ರೇಲಿಯ ಪ್ರವಾಸಕ್ಕೆ ತೆರಳಿದ ಭಾರತ ತಂಡದಲ್ಲಿ ಕುಮಟಾ ಮೂಲಕ 27 ವರ್ಷದ ಯುವಕನೂ ಸೇರಿದ್ದಾನೆ.
39. ಸಚಿನ್ ತೆಂಡೂಲ್ಕರ್ ಹಾಗೂ ರಾಹುಲ್ ದ್ರಾವಿಡ್ ಅವರ ಅಚ್ಚುಮೆಚ್ಚಿನ ಈ ಯುವಕನ ಹೆಸರು ರಾಘವೇಂದ್ರ. ವಿಶೇಷವೆಂದರೆ ಈ ವರೆಗೆ ಪ್ರಥಮ ದರ್ಜೆ ಪಂದ್ಯವನ್ನು ಆಡದ ರಾಘವೇಂದ್ರ ಈ ಇಬ್ಬರು ಮಹಾನ್ ಆಟಗಾರರಿಗೆ ನೆಟ್ ಪ್ರಾಕ್ಟೀಸ್ ನಲ್ಲಿ ನೆರವು ನೀಡುತ್ತಿದ್ದಾನೆ.
40. ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡಮಿಯ ಉದ್ಯೋಗಿಯಾಗಿರುವ ರಾಘವೇಂದ್ರ ಮೆಷಿನ್ ಗಿಂತಲೂ ಹೆಚ್ಚು ಪರಿಣಾಮಕಾರಿಯಾಗಿ ಸ್ವಿಂಗ್ ಮಾಡಿ ಬಾಲ್ ಎಸೆಯುವ ಕಲೆ ಹೊಂದಿದ್ದಾನೆ.
41. ಆಸೀಸ್ ವೇಗಿ ಪಾಟಿಸನ್ ಸ್ವಿಂಗ್ ಎದುರಿಸಲು ಸಜ್ಜಾಗುತ್ತಿರುವ ಸಚಿನ್ ಹಾಗೂ ದ್ರಾವಿಡ್ ಗೆ ಸದ್ಯಕ್ಕೆ ರಾಘವೇಂದ್ರನೇ ಉತ್ತಮ ಸಹಾಯಕರು .
42. ದೇಶದ ಅತ್ಯುನ್ನತ ನಾಗರೀಕ ಸನ್ಮಾನ ಇದ್ದ ಅಡ್ಡಿಯನ್ನು ಕೇಂದ್ರ ಸರ್ಕಾರ ಸರಿಪಡಿಸಿದೆ. ಪ್ರಶಸ್ತಿಯಲ್ಲಿ ಕ್ರೀಡಾ ವಿಭಾಗವನ್ನು ಸೇರ್ಪಡೆಗೊಳಿಸುವುದಕ್ಕೆ ಕೇಂದ್ರದ ಗೃಹಸಚಿವ ಪಿ.ಚಿದಂಬರಂ ಸಮ್ಮತಿ ಸೂಚಿಸಿ ಕಳಿಸಿದ ಪತ್ರಕ್ಕೆ ಪ್ರಧಾನಿ ಮನಮೋಹನ್ ಸಿಂಗ್ ಕೂಡಾ ಅಂಕಿತ ಹಾಕಿದ್ದಾರೆ.
43. ಹೀಗಾಗಿ ಮುಂದಿನ ದಿನಗಳಲ್ಲಿ ಹೀಗಾಗಿ ಕಲೆ, ವಿಜ್ಞಾನ, ಸಾಹಿತ್ಯ ಮತ್ತು ಸಾರ್ವಜನಿಕ ಸೇವೆಯಲ್ಲಿ ಅತ್ಯುನ್ನತ ಸಾಧನೆ ಮೆರೆದವರ ಸರಿ ಸಮನಾಗಿ ಕ್ರೀಡಾಪಟುಗಳು ನಿಲ್ಲಬಹುದಾಗಿದೆ. ಸಚಿನ್ ತೆಂಡೂಲ್ಕರ್ ಹಾಗೂ ಶ್ರೇಷ್ಠ ಹಾಕಿಪಟು ಧ್ಯಾನ್ ಚಂದ್ ಇಬ್ಬರೂ ಭಾರತ ರತ್ನ ಪಡೆಯಬಹುದಾಗಿದೆ.
44. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಜೀವನ ಚರಿತ್ರೆಯ ಮೊದಲ ಕಾಪಿ ದಾಖಲೆ ಮೊತ್ತಕ್ಕೆ ಹರಾಜಾಗಿರು ಸುದ್ದಿ ಬಂದಿದೆ.ಸುಮಾರು 37 ಕೆಜಿ ತೂಕದ, 852 ಪುಟಗಳ ಈ ಬೃಹತ್ ಪುಸ್ತಕಕ್ಕೆ ಸುಮಾರು 1.72 ಕೋಟಿ ರು ಮೊತ್ತದ ಬೆಲೆ ಹರಾಜಿನಲ್ಲಿ ಕೂಗಲಾಗಿದೆ.
45. ಸಚಿನ್ ಅವರ ರಕ್ತದ ಸಹಿಯುಳ್ಳ ವಿಶೇಷ ಕಾಪಿಗಳು ಕೂಡಾ ಲಭ್ಯವಿದ್ದು ಪ್ರತಿ ಪುಸ್ತಕಕ್ಕೆ 75,000 ಡಾಲರ್ ದುಡ್ಡು ತೆರಬೇಕಾಗುತ್ತದೆ.
46. ಜೀವನ ಚರಿತ್ರೆ ಪುಸ್ತಕದಲ್ಲಿ ಸಚಿನ್ ಅವರ ಅಪರೂಪದ 1,500 ಚಿತ್ರಗಳು ಇದ್ದು ಪುಸ್ತಕದ ಅಂಚಿಗೆ ಚಿನ್ನದ ಲೇಪನ ಇರುತ್ತದೆ ಎಂದು ಪ್ರಕಾಶಕರು ಹೇಳಿದ್ದಾರೆ.
47. ಅತ್ಯಂತ ಸಜ್ಜನ, ಸಂಭಾವಿತ ನ್ಯಾಯಮೂರ್ತಿ ಎಂದೇ ಹೆಸರಾಗಿದ್ದ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾ. ವಿ.ಜಿ. ಸಭಾಹಿತ್ (56) ಅವರು ಕರ್ತವ್ಯ ನಿರ್ವಹಿಸುತ್ತಿರುವಾಗಲೇ ತೀವ್ರ ಹೃದಯಾಘಾತಕ್ಕೊಳಗಾಗಿ ಆಸ್ಪತ್ರೆಗೆ ಸಾಗಿಸುವ ಹಾದಿಯಲ್ಲಿ ನಿಧನರಾದರು.
48. ಕೋರ್ಟ್ ಕೋಣೆ 3ರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನ್ಯಾ. ಸಭಾಹಿತ್ ಅವರು ಕಚೇರಿಯಲ್ಲಿ ಹೃದಯ ಸ್ತಂಭನಕ್ಕೊಳಗಾಗಿದ್ದಾರೆ.
49. ಅವರನ್ನು ಫಾರ್ಟಿಸ್ ಆಸ್ಪತ್ರೆಗೆ ಸಾಗಿಸುತ್ತಿರುವಾಗ ಅಸುನೀಗಿದರು.
50. ನವೆಂಬರ್ 26ರಂದು 56ನೇ ವರ್ಷಕ್ಕೆ ಕಾಲಿಟ್ಟಿದ್ದ ನ್ಯಾ. ಸಭಾಹಿತ್ ಅವರು 1979ರಲ್ಲಿ ವಕೀಲ ವೃತ್ತಿ ಸೇರಿ ಕರ್ನಾಟಕ ಹೈಕೋರ್ಟಿನಲ್ಲಿಯೇ ಪ್ರಾಕ್ಟೀಸ್ ಮಾಡಿದ್ದರು.
51. ಅವರ ತಂದೆ ನ್ಯಾ. ಜಿ.ಎಸ್ ಸಭಾಹಿತ್ ಕೂಡ ಕರ್ನಾಟಕ ಹೈಕೋರ್ಟಿನಲ್ಲಿ ನ್ಯಾಯಮೂರ್ತಿಗಳಾಗಿದ್ದರು.
52. 1988ರಲ್ಲಿ ನ್ಯಾಯಾಂಗ ಸೇವೆಯನ್ನು ಸೇರಿದ ಅವರನ್ನು, 2000ರಲ್ಲಿ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ನೇಮಕ ಮಾಡಲಾಗಿತ್ತು. 2001 ಜುಲೈನಲ್ಲಿ ಖಾಯಂ ನ್ಯಾಯಾಮೂರ್ತಿಗಳಾಗಿ ನೇಮಕಗೊಂಡ ಅವರು 2017ರಲ್ಲಿ ನಿವೃತ್ತರಾಗುವವರಿದ್ದರು.
53. ಕಳೆದ ವರ್ಷ 11 ಭಿನ್ನಮತೀಯ ಶಾಸಕರು ದಂಗೆಯೆದ್ದಿದ್ದಾಗ ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠ ವಿಭಿನ್ನ ತೀರ್ಪನ್ನು ನೀಡಿತ್ತು. ಆಗ ಆ ಪ್ರಕರಣವನ್ನು ನ್ಯಾ. ವಿ.ಜಿ. ಸಭಾಹಿತ್ ಅವರಿಗೆ ವರ್ಗಾಯಿಸಲಾಗಿತ್ತು. ಅ.29ರಂದು ನೀಡಿದ ತೀರ್ಪಿನಲ್ಲಿ ಶಾಸಕರನ್ನು ಅನರ್ಹಗೊಳಿಸಿ ಸ್ಪೀಕರ್ ಹೊರಡಿಸಿದ್ದ ಆದೇಶವನ್ನು ನ್ಯಾ.ಸಭಾಹಿತ್ ಎತ್ತಿಹಿಡಿದಿದ್ದರು.
54. ನ್ಯಾಯಮೂರ್ತಿ ವಿಜಿ ಸಭಾಹಿತ್ ಅವರು ಬಿಜೆಪಿ ಸ್ಪೀಕರ್ ಬೋಪಯ್ಯ ಅವರು 11 ಮಂದಿ ಶಾಸಕರನ್ನು ಅನರ್ಹಗೊಳಿಸಿದ ಕ್ರಮ ಸರಿ ಎಂದು ತೀರ್ಪು ನೀಡಿದ್ದಾರೆ.
55. ಕನ್ನಡಪ್ರಭ ದಿನಪತ್ರಿಕೆ ಮತ್ತು ಸುವರ್ಣ ನ್ಯೂಸ್ ಚಾನಲ್ ಸಂಪಾದಕ ವಿಶ್ವೇಶ್ವರ ಭಟ್ ಅವರ ಖಾಸಗಿ ಅಂತರ್ ಜಾಲ ತಾಣ http://vbhat.in/ ಮತ್ತೆ ಶುರುವಾಗಿದೆ.
56. ಅಧ್ಯಕ್ಷರು ಅಥವಾ ಮುಖ್ಯಸ್ಥರೂ ಸೇರಿದಂತೆ ಲೋಕಪಾಲದಲ್ಲಿ ಒಂಬತ್ತು ಸದಸ್ಯರಿರುತ್ತಾರೆ.
57. ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಅಥವಾ ಹಾಲಿ ನ್ಯಾಯಮೂರ್ತಿ ಸಂಸ್ಥೆ ಮುಖ್ಯಸ್ಥರಾಗಿರುತ್ತಾರೆ.
58. ಲೋಕಸಭೆ ಸ್ಪೀಕರ್, ಪ್ರಧಾನಿ, ಲೋಕಸಭೆ ವಿರೋಧ ಪಕ್ಷದ ನಾಯಕರು ಹಾಗೂ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರನ್ನೊಳಗೊಂಡ ನಾಲ್ವರ ಸಮಿತಿ ಅಧ್ಯಕ್ಷರನ್ನು ನೇಮಕ ಮಾಡಲಿದೆ.
59. ಅಧ್ಯಕ್ಷರು ಮತ್ತು ಸದಸ್ಯರ ಅವಧಿ ಐದು ವರ್ಷ. `ವಾಗ್ದಂಡನೆ ನಿರ್ಣಯ` (ಇಂಪೀಚ್‌ಮೆಂಟ್) ಮೂಲಕ ಲೋಕಪಾಲರನ್ನು ಅಧಿಕಾರದಿಂದ ಪದಚ್ಯುತಿಗೊಳಿಸಬಹುದಾಗಿದೆ.
60. `ವಾಗ್ದಂಡನೆ ನಿರ್ಣಯ` ಕ್ಕೆ ಇದಕ್ಕೆ 100 ಸಂಸದರ ಸಹಿ ಒಳಗೊಂಡ ದೂರು ಅಗತ್ಯ.
61. ಲೋಕಪಾಲದಲ್ಲಿ ಹಾಗೂ ಶೋಧನಾ ಸಮಿತಿಯಲ್ಲಿ ಶೇ. 50ರಷ್ಟು ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗ, ಅಲ್ಪ ಸಂಖ್ಯಾತರು ಮತ್ತು ಮಹಿಳೆಯರಿಗೆ ಅವಕಾಶ ಕಲ್ಪಿಸಲಾಗುತ್ತಿದೆ.
62. ಲೋಕಪಾಲ ಪೀಠದಲ್ಲಿ ಅರ್ಧದಷ್ಟು ಕಾನೂನು ಅಥವಾ ನ್ಯಾಯಾಂಗ ಹಿನ್ನೆಲೆಯಿಂದ ಬಂದವರು ಸದಸ್ಯರಾಗಿರುತ್ತಾರೆ.
63. ಲೋಕಪಾಲಕ್ಕೆ ಸ್ವಯಂ ಪ್ರೇರಿತವಾಗಿ ತೀರ್ಮಾನ ಕೈಗೊಳ್ಳುವ ಅಧಿಕಾರ ಇರುವುದಿಲ್ಲ. ದೂರುಗಳ ಆಧಾರದ ಮೇಲೆ ನಿರ್ಧಾರ ಮಾಡಬೇಕು.
64. ಲೋಕಪಾಲದ ವಿಚಾರಣಾ ವಿಭಾಗವು ನಿರ್ದೇಶಕರು ಪ್ರಾಥಮಿಕ ವಿಚಾರಣೆ ಅವರನ್ನೊ ಗೊಂಡಿರುತ್ತದೆ.
65. ಲೋಕಪಾಲರು ದೂರು ಕುರಿತು ಪ್ರಾಥಮಿಕ ತನಿಖೆ ನಡೆಸುವಂತೆ ಸಿಬಿಐಗೂ ಕೇಳಬಹುದು. ಪ್ರಾಥಮಿಕ ತನಿಖೆ ಮೂರು ತಿಂಗಳಲ್ಲಿ ಪೂರ್ಣಗೊಳ್ಳಬೇಕು.
66. ಕಾಲಾವಕಾಶ ಅಗತ್ಯವಾದರೆ ಲಿಖಿತ ಮನವಿ ಸಲ್ಲಿಸಬೇಕು. ಆರು ತಿಂಗಳವರೆಗೆ ಸಮಯ ವಿಸ್ತರಿಸಲು ಕಾಯ್ದೆಯಲ್ಲಿ ಅವಕಾಶವಿದೆ.
67. ದೇಶದ ಅತ್ಯುನ್ನತ ತನಿಖಾ ಸಂಸ್ಥೆ `ಸಿಬಿಐ` ಅನ್ನು ಲೋಕಪಾಲ ವ್ಯಾಪ್ತಿಯಿಂದ ಹೊರಗಿಡಲಾಗಿದೆ.
68. ಸಿಬಿಐ ಆಡಳಿತಾತ್ಮಕ ಅಧಿಕಾರವನ್ನು ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ) ಯಲ್ಲೇ ಉಳಿಸಲಾಗಿದೆ.
69. ಲೋಕಪಾಲ ಶಿಫಾರಸು ಮಾಡಿದ ಭ್ರಷ್ಟಾಚಾರ ಪ್ರಕರಣಗಳ ತನಿಖೆ ಮಾತ್ರ ಈ ಸಂಸ್ಥೆ ಅಧೀನದಲ್ಲೇ ನಡೆಸಲು ಮಸೂದೆ ಅವಕಾಶ ಕಲ್ಪಿಸಿದೆ.
70. ಸಿಬಿಐ ನಿರ್ದೇಶಕರನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ, ಪ್ರಧಾನಿ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕರನ್ನು ಒಳಗೊಂಡ ಸಮಿತಿ ನೇಮಕ ಮಾಡಲಿದೆ.
71. ಎಸ್‌ಪಿ ಹಾಗೂ ಅವರ ಮೇಲಿನ ಅಧಿಕಾರಿಗಳನ್ನು ಸಿವಿಸಿ, ಗೃಹ ಕಾರ್ಯದರ್ಶಿ, ಆಡಳಿತ ಮತ್ತು ಸಿಬ್ಬಂದಿ ಇಲಾಖೆ ಕಾರ್ಯದರ್ಶಿ ಒಳಗೊಂಡ ಸಮಿತಿ ನೇಮಿಸಲಿದೆ.
72. ಅಂತರರಾಷ್ಟ್ರೀಯ ವ್ಯವಹಾರ, ಪರಮಾಣು ಶಕ್ತಿ, ಬಾಹ್ಯಾಕಾಶ, ಆಂತರಿಕ ಮತ್ತು ಬಾಹ್ಯ ಭದ್ರತೆ ಮೊದಲಾದ ಮಹತ್ವದ ವಿಷಯಗಳನ್ನು ಮಸೂದೆ ವ್ಯಾಪ್ತಿಯಿಂದ ಹೊರಗಿಡಲಾಗಿದೆ.
73. ಪ್ರಧಾನಿ ವಿರುದ್ಧದ ದೂರುಗಳ ತನಿಖೆ ಕುರಿತು ಲೋಕಪಾಲ ಪೂರ್ಣಪೀಠ ತೀರ್ಮಾನಿಸಬೇಕು. ಇದಕ್ಕೆ ಕನಿಷ್ಠ 2/3 ರಷ್ಟು ಸದಸ್ಯರ ಒಪ್ಪಿಗೆ ಇರಬೇಕು.
74. ಪ್ರಧಾನಿ ವಿಚಾರಣೆ ಸಾರ್ವಜನಿಕವಾಗಿ ನಡೆಯಬಾರದು. ಕೋಣೆಯೊಂದರಲ್ಲಿ ಗೌಪ್ಯವಾಗಿ ನಡೆಯಬೇಕು. ದೂರು ತಿರಸ್ಕೃತವಾದರೆ ದಾಖಲೆ ಬಹಿರಂಗ ಮಾಡಬಾರದು ಎಂದು ಮಸೂದೆ ವ್ಯಾಖ್ಯಾನಿಸಿದೆ.
75. ಲೋಕಪಾಲದಿಂದ ಶಿಫಾರಸು ಮಾಡಲಾದ ಪ್ರಕರಣಗಳ ತನಿಖಾ ವರದಿಯನ್ನು ಈ ಸಂಸ್ಥೆಗೇ ಸಲ್ಲಿಸಬೇಕು.
76. ಕನಿಷ್ಠ ಮೂವರು ಸದಸ್ಯರು ವರದಿಯನ್ನು ಪರಿಶೀಲಿಸಿ ದೋಷಾರೋಪ ಪಟ್ಟಿ ಸಲ್ಲಿಸಬೇಕೇ? ಪ್ರಕರಣ ಕೈಬಿಡಬೇಕೇ ಅಥವಾ ಇಲಾಖೆ ವಿಚಾರಣೆಗೆ ಆದೇಶಿಸಬೇಕೇ ಎಂಬ ತೀರ್ಮಾನ ಮಾಡಬಹುದು.
77. ಮೊಕದ್ದಮೆ ದಾಖಲಿಸಲು ಸರ್ಕಾರದ ಮುಖ್ಯಸ್ಥರ ಅಥವಾ ಇಲಾಖಾ ಮುಖ್ಯಸ್ಥರ ಮಂಜೂರಾತಿ ಅಗತ್ಯವಿಲ್ಲ.
78. ದೋಷಾರೋಪ ಪಟ್ಟಿ ಸಲ್ಲಿಕೆಯಾದರೆ ಲೋಕಪಾಲದ `ಪ್ರಾಸಿಕ್ಯೂಷನ್` ವಿಭಾಗ ವಿಶೇಷ ನ್ಯಾಯಾಲಯದಲ್ಲಿ ವಿಚಾರಣಾ ಪ್ರಕ್ರಿಯೆ ಆರಂಭಿಸಬಹುದು.
79. ಕರ್ನಾಟಕ, ಜಾರ್ಖಂಡ್ ಹಾಗೂ ಒಡಿಶಾ ಸೇರಿದಂತೆ ದೇಶದಾದ್ಯಂತ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಲು ಕಬ್ಬಿಣ ಹಾಗೂ ಮ್ಯಾಂಗನೀಸ್ ಅದಿರು ರಫ್ತು ನಿಷೇಧಿಸುವಂತೆ ನ್ಯಾಯಮೂರ್ತಿ ಷಾ ಸಮಿತಿ ನೀಡಿದ ಸಲಹೆಯನ್ನು ಗಣಿ ಸಚಿವಾಲಯ ಮಂಗಳವಾರ ತಿರಸ್ಕರಿಸಿದೆ.
80. ಅಕ್ರಮ ಗಣಿಗಾರಿಕೆಗೆ ಲಗಾಮು ಹಾಕುವ ಉದ್ದೇಶದಿಂದ ನ್ಯಾ.ಎಂ.ಬಿ.ಷಾ ತನಿಖಾ ಸಮಿತಿಯು ಕೋಟ್ಯಂತರ ರೂಪಾಯಿ ವಹಿವಾಟಿನ ಕಬ್ಬಿಣ ಹಾಗೂ ಮ್ಯಾಂಗನೀಸ್ ಅದಿರು ರಫ್ತನ್ನು ನಿಷೇಧಿಸಬೇಕೆಂದು ಪ್ರತಿಪಾದಿಸಿತ್ತು.
81. ಸುಖೋಯ್ ಯುದ್ಧ ನೌಕೆಯಲ್ಲಿ ಸಂಚರಿಸಿ ಮತ್ತು ನೌಕಾ ವಿಹಾರ ನಡೆಸುವ ಮೂಲಕ ಇತಿಹಾಸ ನಿರ್ಮಿಸಿದರು. ಈ ವಿಮಾನದಲ್ಲಿ ಸಂಚರಿಸಿದ ಮೊದಲ ಮಹಿಳಾ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
82. 77 ವರ್ಷದ ಪ್ರತಿಭಾ, 81 ನೌಕಾಪಡೆ ಹಡಗುಗಳು ಮತ್ತು 44 ವಾಯು ನೌಕೆಗಳಿಂದ ಗೌರವ ವಂದನೆ ಸ್ವೀಕರಿಸಿದರು.
83. ರಾಷ್ಟ್ರಪತಿಗಳ ವೈಯಕ್ತಿಕ ಸಮುದ್ರ ವಾಯುವಿಹಾರ ನೌಕೆ ಐಎನ್‌ಎಸ್ ಸುಭದ್ರಾದಲ್ಲಿ ನೌಕಾಪಡೆಯ ಪರಿವೀಕ್ಷಣೆ ಮಾಡಿದ ಮೊದಲ ರಾಷ್ಟ್ರಪತಿ.
84. ನೌಕಾಪಡೆಗೆ ವಿಕ್ರಮಾದಿತ್ಯ ವಾಯುನೌಕೆ ಸೇರ್ಪಡೆಯಿಂದ ಹೊಸ ಮೈಲಿಗಲ್ಲು ಸ್ಥಾಪಿಸಿದಂತಾಗಿದೆ.
85. ಪ್ರಸ್ತುತ ಭಾರತದ ಸೇನೆ 65,758 ಬಂದೂಕಗಳನ್ನು ಹೊಂದಿದೆ.
86. ಭಾರತದ ಸೇನೆಗೆ ಹೊಸದಾಗಿ 20 ಲಕ್ಷ ಬಂದೂಕಗಳ ಗತ್ಯವಿದೆ.
87. ಪ್ರಸ್ತುತ ಇನ್ಸಾನ್ ಬಂದೂಕಗಳ ಬದಲಾಗಿ 10 ಕೆ.ಜಿ. ಹೆಚ್ಚಿನ ತೂಕ ಹೊಂದಿರುವ ಹೊಸ ರೈಫಲ್ ಗಳನ್ನು ಪೂರೈಸಲು ಸೇನಾಧಿಕಾರಿಗಳು ಚಿಂತನೆ ನಡೆಸಿದ್ದಾರೆ.
88. ದಿಲ್ಲಿಯಲ್ಲಿ ದರ್ಬಾರು ನಡೆಸುತ್ತಿದ್ದ ಗೋರಾಗಳು ( ಬಿಳಿಯರು ) ತೊಲಗಿದರು , ಕಾಲಾಗಳು ( ಕರಿಯರು ) ಬಂದರು . ಆದರೆ ಸ್ವಾತಂತ್ರ್ಯ ಬಂದು 6 ದಶಕ ಸಂದರೂ ಭ್ರಷ್ಟಚಾರ ನಿಂತಿಲ್ಲ ಎಂದು ವಿಷಾಧಿಸಿದ್ದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ.
89. ನೊಬೆಲ್ ಪ್ರಶಸ್ತು ಪುರಸ್ಕೃತ ಸಾಹಿತಿ ರವೀಂದ್ರನಾಥ ಟ್ಯಾಗೋರ್ ಬರೆದದ್ದು 1911 ರಲ್ಲಿ
90. ಜನ ಗಣ ಮನ ಕವಿತೆಯುವ ಮೊದಲು ಪ್ರಕಟಗೊಂಡಿದ್ದು ಟ್ಯಾಗೋರ್ ಅವರು ಸಂಪಾದಕರಾಗಿದ್ದ ಬ್ರಹ್ಮ ಸಮಾಜ ಪತ್ರಿಕೆ , ತತ್ವ ಭೋಧ ಪತ್ರಿಕೆ .
91. ಜನ ಗಣ ಮನವನ್ನು ರಾಗಬದ್ದವಾಗಿ ಮೊದಲು ಹಾಡಿದ್ದು 1911 ರ ಡಿಸೆಂಬರ್ 27 ರಂದು ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ನ ಕೋಲ್ಕೋತಾ ಧಿವೇಶನದಲ್ಲಿ.
92. ಟ್ಯಾಗೋರ್ ರವರು ಜನ ಗಣ ಮನ ಗೀತೆಯನ್ನು ಬರೆದದ್ದು ಸಂಸ್ಕೃತ ಮಿಶ್ರಿತ ಬೆಂಗಾಲಿ ಬಾಷೆಯಲ್ಲಿ .
93. ಜನ ಗಣ ಮನವು ಭಾರತದ ವೈವಿಧ್ಯತೆಯನ್ನು ವರ್ಣಿಸುವ ಗೀತೆಯು ಸುದೀರ್ಘವಾದ 5 ನುಡಿಗಳನ್ನು ಹೊಂದಿತ್ತು. ನಂತರದ ದಿನಗಳಲ್ಲಿ ಚುಟುಕುಗೊಳಿಸುವ ಉದ್ದೇಶದಿಂದ ಕೆಲವು ನುಡಿಗಳನ್ನು ಕೈ ಬಿಡಲಾಯಿತು.
94. ಇಂದು ನಾವು ಹಾಡುತ್ತಿರುವುದು 52 ಸೆಕೆಂಡುಗಳ ರಾಷ್ಟ್ರಗೀತೆಯು ಚುಟುಕು ರೂಪದ್ದಾಗಿದೆ.
95. ಟ್ಯಾಗೋರ್ ರು 1919 ರಲ್ಲಿ ಐರಿಷ್ ಕವಿ ಜೇಮ್ಸ್ ಎಚ್. ಕ್ಯೂಸಿನ್ಸ್ ಅವರ ಆಹ್ವಾನದ ಮೇರೆಗೆ ಆಂದ್ರ ಪ್ರದೇಶದ ಮದನಪಲ್ಲಿಯಲ್ಲಿರುವ ಬೆಸೆಂಟ್ ಥಿಯೋಸಾಫಿಕಲ್ ಕಾಲೇಜಿನಲ್ಲಿ ಜನ ಗಣ ಮನ ಗೀತೆಯನ್ನು ರಾಗಬದ್ಧವಾಗಿ ಹಾಡಿದರು.
96. ನಂತರದ ದಿನಗಳಲ್ಲಿ ಮದನಪಲ್ಲಿಯ ಪರಿಸರದಲ್ಲಿಲ ಈ ಗೀತೆಯನ್ನು ಇಂಗ್ಲೀಷ್ ಗೆ ಅನುವಾದಿಸಿದರು . ಅದಕ್ಕೆ ದಿ ಮಾರ್ನಿಂಗ್ ಸಾಂಗ್ ಆಫ್ ಇಂಡಿಯಾ ಎಂದು ಶಿರ್ಷಿಕೆ ನೀಡಿದರು.
97. ಸ್ವಾತಂತ್ರ್ಯ ನಂತರ ದೇಶದ ರಾಷ್ಟ್ರಗೀತೆಯನ್ನಾಗಿ ಬಂಕಿಮ್ ಚಂದ್ರ ಚಟರ್ಜಿ ಅವರ ವಂದೇ ಮಾತರಂ ಗೀತೆಯನ್ನು ಆಯ್ಕೆ ಮಾಡಬೇಕೆ ಅಥವಾ ಜನ ಗಣ ಮನ ಗೀತೆಯನ್ನೇ ಎಂಬ ಬಗ್ಗೆ ನಾಯಕರು ಹಲವು ಸುತ್ತಿನ ಚರ್ಚೆ ನಡೆಸಿದರು.
98. 1950 ರ ಜನವರಿ 24 ರಂದು ನಡೆದ ಶಾಸನ ಸಭೆಯಲ್ಲಿ ಜನ ಗಣ ಮನ ಗೀತೆಯನ್ನು ರಾಷ್ಟ್ರಗೀತೆಯಾಗಿ ಅಧಿಕೃತವಾಗಿ ಘೋಷಿಸಲಾಯಿತು.
99. ಪ್ರಸಕ್ತ ಫುಟ್ಬಾಲ್ ವರ್ಷದಲ್ಲಿ ಉತ್ತಮ ಸಾಧನೆ ತೋರಿದ ಭಾರತ ಫುಟ್ಬಾಲ್ ತಂಡದ ಸ್ಟ್ರೈಕರ್ ಸುನೀಲ್ ಛೆಟ್ರಿ ಅವರಿಗೆ ಅಖಿಲ ಭಾರತ ಫುಟ್ಬಾಲ್ ಫೇಡರೇಷನ್ ( ಎಐಎಫ್.ಎಫ್ ) ವಾರ್ಷಿಕ ಪ್ರಶಸ್ತಿ ಪ್ರಕಟಿಸಿದೆ.
100. ಸುನೀಲ್ ಛೆಟ್ರಿ 17 ಅಂತರರಾಷ್ಟ್ರೀಯ ಪಂದ್ಯಗಳಿಂದ 13 ಗೋಲುಗಳನ್ನು ಗಳಿಸಿದ್ದಾರೆ.
101. 2011 ರ ವರ್ಷದಲ್ಲಿ ಭಾರತದ ಫುಟ್ಬಾಲ್ ಆಟಗಾರನೊಬ್ಬ ದಾಖಲಿಸಿದ ಗರಿಷ್ಠ ಗೋಲು ದಾಗಿದೆ.
102. 2011 ರಲ್ಲಿ 20 ಕ್ಲಬ್ ಪಂದ್ಯಗಳನ್ನಾಡಿದ ಛೆಟ್ರಿ 11 ಗೋಲುಗಳನ್ನು ಗಳಿಸಿದ್ದಾರೆ.
103. 2011 ರ ಅರ್ಜುನ್ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿರುವ ಛೆಟ್ರಿ ಇತ್ತಿಚೆಗೆ ಮುಕ್ತಾಯಗೊಂಡ ಸ್ಯಾಫ್ ಫುಟ್ಬಾಲ್ ಚಾಂಪಿಯನ್ ಷಿಪ್ ನಲ್ಲೂ ಶ್ರೇಷ್ಠ ಆಟಗಾರನೆಂಬ ಪ್ರಶಸ್ತಿ ಪಡೆದಿದ್ದಾರೆ.
104. ಇನ್ಪೋಸಿಸ್ ಬಿಪಿಒ , ಆಸ್ಟ್ರೇಲಿಯಾ ಮೂಲದ ಫೋರ್ಟ್ ಲ್ಯಾಂಡ್ ಗ್ರೂಪ್ ಕಂಪನಿ ಯನ್ನು ಖರೀದಿಸಿದೆ.
105. 1999 ರಲ್ಲಿ ಪೋರ್ಟ್ ಲ್ಯಾಂಡ್ ಗ್ರೂಪ್ ಸ್ಥಾಪನೆಯಾಗಿತ್ತು. ಇದರ ಮುಖ್ಯ ಕಛೇರಿ ಸಿಡ್ನಿಯಲ್ಲಿದೆ. ಮೆಲ್ಲೋರ್ನ್ , ಬ್ರಿಸ್ಬೇನ್ ಪರ್ತ್ ನಲ್ಲಿ ಕಛೇರಿಯನ್ನು ಹೊಂದಿದೆ.
106. ಫೋರ್ಡ್ ಇಂಡಿಯಾ ತನ್ನ ಎಸ್ ಯುವಿ ವಾಹನವನ್ನು ಜನಪ್ರಿಯಗೊಳಿಸಲು ದಿ ಗ್ರೇಟ್ ಫೋರ್ಡ್ ಎಂಡೋವೇರ್ ಡ್ರೈವ್ ಅಭಿಯಾನವನ್ನು ಬೆಂಗಳೂರಿನಲ್ಲಿ ಕೈಗೊಂಡಿದೆ.
107. ಐಎನ್.ಜಿ ವೈಶ್ಯ ಬ್ಯಾಂಕ್ ಇಂಧನ ದಕ್ಷತೆಗಾಗಿ ರಾಜ್ಯ ಸರ್ಕಾರದ ಪ್ರಶಸ್ತಿಗಳಿಸಿದೆ.
108. ಮುಲ್ಲಪೆರಿಯಾರ್ ಅಣೆಕಟ್ಟು ಕುರಿತು ಚಿತ್ರಿಸಲಾಗಿರುವ ಡ್ಯಾಮ್ 999 ಚಿತ್ರದ ಮೂರು ಹಾಡುಗಳು ಅತ್ಯುತ್ತಮ ಸೃಜನಶೀಲ ಗೀತೆಗಳ ವರ್ಗದಡಿ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗೆ ಸ್ಪರ್ದಿಸಿದೆ.
109. 1911 ರ್ಲಲಿ ಸೆಂಟ್ರಲ್ ಬ್ಯಾಂಕ್ ಆಪ್ ಇಂಡಿಯಾ ಸ್ಥಾಪನೆ .
110. ಏಯೇಜ್ ಟು ಇಂಡಿಯಾ ಕೃತಿಯ ಕರ್ತೃ – ನಿಕೇಟಿನ್
111. ಅಂತರರಾಷ್ಟ್ರೀಯ ವ್ಯಾಪರವನ್ನು ನೋಡಿಕೊಳ್ಳುವ ನಾಯಿ ಎಂದು WTO ಸಂಸ್ಥೆಗೆ ಕರೆಯುತ್ತಾರೆ

ಶುಕ್ರವಾರ, ಡಿಸೆಂಬರ್ 16, 2011

ಪಿ.ಡಿ.ಓ. ಕೆ.ಎ.ಸ್ ಪರೀಕ್ಷೆಗೆ 2011 ರ ಪ್ರಚಲಿತ ಘಟನೆಗಳು

1. 11 ನೇ ಹಣಕಾಸು ಆಯೋಗ 2000 – 01 ರಿಂದ 2004 – 05 ರವರೆಗೆ
2. 11 ನೇ ಹಣಕಾಸು ಆಯೋಗವು ಗ್ರಾಮ ಪಂಚಾಯಿತಿ , ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಗಳಿಗೆ ತಲಾ ಶೇ.70:20:10 ರ ಅನುಪಾತದಲ್ಲಿ ಅನುದಾನವನ್ನು ಬಿಡುಗಡೆ ಮಾಡಲಾಗಿತ್ತು.
3. 11 ನೇ ಹಣಕಾಸು ಆಯೋಗವು ರಾಷ್ಟ್ರೀಯ ಅಂಕಿ ಶಗಳ ಪ್ರಕಾರ ಪಂಚಾಯಿತಿ ರಾಜ್ ಸಂಸ್ಥೆಗಳಿಗೆ ನಿಗದಿಪಡಿಸಿದ ಒಟ್ಟು ಮೊತ್ತ ರೂ.8000 ಕೋಟಿ .
4. 11 ನೇ ಹಣಕಾಸು ಆಯೋಗವು ಬಿಡುಗಡೆ ಮಾಡಿದ ಅನುದಾದಲ್ಲಿ ಪಂಚಾಯಿತಿ ರಾಜ್ ಸಂಸ್ಥೆಗಳು ಬಳಸಿಕೊಂಡಿರುವ ಮೊತ್ತ ರೂ.6601.85 ಕೋಟಿ
5. 12 ನೇ ಹಣಕಾಸು ಆಯೋಗದ ಅವಧಿ 2005 ರಿಂದ 2009 ರವರೆಗೆ
6. 12 ನೇ ಹಣಕಾಸು ಆಯೋಗದ ಅವಧಿಯಲ್ಲಿ ಕರ್ನಾಟಕ ಪಂಚಾಯಿತಿ ರಾಜ್ ಸಂಸ್ಥೆಗಳಿಗೆ 71040 ಲಕ್ಷ ರೂ.ಗಳನ್ನು ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ ಬಿಡುಗಡೆ ಮಾಡಲಾಗಿದೆ.
7. 13 ನೇ ಹಣಕಾಸು ಆಯೋಗದ ಅವಧಿ 2010 – 11 ರಿಂದ 2014 – 15 ರವರೆಗೆ
8. 13 ನೇ ಹಣಕಾಸು ಆಯೋಗವು 5 ವರ್ಷಗಳ ಅವಧಿಗೆ ಸ್ಥಳೀಯ ಸಂಸ್ಥೆಗಳಿಗೆ ಒಟ್ಟು 87519/- ಕೋಟಿ ರೂಗಳ ಅನುದಾನವನ್ನು ಶಿಫಾರಸ್ಸು ಮಾಡಿದೆ.
9. ಪಾಕಿಸ್ತಾನ ಕ್ರಿಕೆಟ್ ಮತ್ತೊಮ್ಮೆ ತಲೆತಗ್ಗಿಸಬೇಕಾಗಿದೆ. ಸ್ಪಾಟ್ ಫಿಕ್ಸಿಂಗ್ ಆಪಾದನೆ ಹೊತ್ತಿದ್ದ ಟೆಸ್ಟ್ ತಂಡದ ಮಾಜಿ ನಾಯಕ ಸಲ್ಮಾನ್ ಭಟ್ ಹಾಗೂ ಮಧ್ಯಮ ವೇಗದ ಬೌಲರ್ ಮೊಹಮದ್ ಆಸಿಫ್ ತಪ್ಪಿತಸ್ಥರು ಎಂಬುದು ಸಾಬೀತಾಗಿದೆ.
10. ಕರ್ನಾಟಕ ಹೈಕೋರ್ಟ್ ನ ಹಿರಿಯ ನ್ಯಾಯಮೂರ್ತಿ ಮಂಜುಳಾ ಚೆಲ್ಲೂರ್ ಕೇರಳ ಹೈಕೋರ್ಟ್ ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಗೊಂಡಿದ್ದಾರೆ. ( 01/11/2011 )
11. ಪ್ರಪಂಚದ ಜನಸಂಖ್ಯೆ 1804 ರಲ್ಲಿ 1 ಶತಕೋಟಿ ಇತ್ತು
12. ಪ್ರಪಂಚದ ಜನಸಂಖ್ಯೆ 1927 ರಲ್ಲಿ 2 ಶತಕೋಟಿ .
13. ಪ್ರಪಂಚದ ಜನಸಂಖ್ಯೆ 1959 ರಲ್ಲಿ 3 ಶತಕೋಟಿ
14. ಪ್ರಪಂಚದ ಜನಸಂಖ್ಯೆ 1974 ರಲ್ಲಿ 4 ಶತಕೋಟಿ
15. ಪ್ರಪಂಚದ ಜನಸಂಖ್ಯೆ 1987 ರಲ್ಲಿ 5 ಶತಕೋಟಿ
16. ಪ್ರಪಂಚದ ಜನಸಂಖ್ಯೆ 1999 ರಲ್ಲಿ 6 ಶತಕೋಟಿ
17. ಪ್ರಪಂಚದ ಜನಸಂಖ್ಯೆ 2011 ರಲ್ಲಿ 7 ಶತಕೋಟಿ ( ದಿನಾಂಕ/01/11/2011)
18. ಜಗತ್ತಿನ 700 ನೇ ಕೋಟು ಮಗುವಾಗಿ ಹೆಣ್ಣು ಮಗು ಜನಿಸಿದೆ.
19. ಜಗತ್ತಿನ 500 ನೇ ಕೋಟಿಯ ಮಗು ಕ್ರೋಷಿಯಾದ ಮಾಟೆಜ್ ಗಾಸ್ಟರ್
20. ಜಗತ್ತಿನ 600 ನೇ ಕೋಟಿಯ ಮಗು ಅದ್ನಾನ್ ನೆವಿಕ್ .
21. ಪ್ರಪಂಚದಲ್ಲಿ ಪ್ರತಿ ಸೆಕೆಂಡ್ ಗೆ 2 ಮಗುವಿನ ಜನನವಾಗುತ್ತದೆ.
22. ಪ್ರತಿ ನಿಮಿಷಕ್ಕೆ 51 ಶಿಶುಗಳು ಜನಿಸುತ್ತದೆ. ಅದರಲ್ಲಿ 11 ಶಿಶುಗಳು ಉತ್ತರ ಪ್ರದೇಶ ಒಂದರಲ್ಲೆ ಹುಟ್ಟುತ್ತಿವೆ.
23. ಭಾರತದಲ್ಲಿ ಸಾವಿರ ಬಾಲಕರಿಗೆ 893 ಮಂದಿ ಬಾಲಕಿಯರಿದ್ದಾರೆ.
24. 2025 ರ ವೇಳೆಗೆ ಭಾರತದ ಜನಸಂಖ್ಯೆ ಸುಮಾರು 150 ಕೋಟಿ ತಲುಪಲಿದ್ದು , ಚೀನಾವನ್ನು ಹಿಂದಿಕ್ಕುವ ನಿರೀಕ್ಷೆಯಿದೆ.
25. ಜಾಗತಿಕವಾಗಿ 15 ಲಕ್ಷ ಮಕ್ಕಳು ಪಾಲಕರಿಲ್ಲದೆ ಜೀವನ ಕಳೆಯುತ್ತಿದ್ದಾರೆ.
26. ಜಗತ್ತಿನಾದ್ಯಂತ 9.25 ಲಕ್ಷ ಜನರು ಹಸಿವೆಯಿಂದ ಒದ್ದಾಡುತ್ತಿದ್ದಾರೆ.
27. ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಸಲ್ಮಾನ್ ಭಟ್ ಗೆ 30 ತಿಂಗಳು , ಬುಕ್ಕಿ ಮಜೀದ್ ಗೆ 32 ತಿಂಗಳು, ಆಸಿಫ್ ಗೆ 12 ತಿಂಗಳು ಹಾಗೂ ಅಮೀರ್ ಗೆ 6 ತಿಂಗಳು ಶಿಕ್ಷೆಯನ್ನ ಲಂಡನ್ ನ ಸ್ಥಳಿಯ ನ್ಯಾಯಾಲಯ ಶಿಕ್ಷೆ ವಿಧಿಸಿತು.
28. ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಸಲ್ಮಾನ್ ಭಟ್ ಗೆ 30.937 , ಆಸಿಫ್ ಗೆ 8120 ಹಾಗೂ ಅಮೀರ್ ಗೆ 9,389 ಫೌಂಡ್ ಹಣವನ್ನ ನ್ಯಾಯಾಲಯದ ವೆಚ್ಚ ಭರಿಸಬೇಕೆಂದು ಆದೇಶಿಸಿದೆ.
29. ಸ್ಪಾಟ್ ಫಿಕ್ಸಿಂಗ್ ಹಗರಣದ ಕುಟುಕು ಕಾರ್ಯಾಚರಣೆ ಮಾಡಿದ ನ್ಯೂಸ್ ಆಫ್ ವರ್ಲ್ಡ್ ನೀಡಿದ್ದ 77,500 ಫೌಂಡ್ ಹಣದಲ್ಲಿ ಅಮೀರ್ ಗೆ 2,500 , ಸಲ್ಮಾನ್ ಭಟ್ ಗೆ 10,000 ಹಾಗೂ ಆಸಿಫ್ ಗೆ 65,000 ಫೌಂಡ್ ನೀಡಿದ್ದಾಗಿ ಮಜೀದ್ ಒಪ್ಪಿಕೊಂಡಿದ್ದಾನೆ,
30. ಭಾರತದ ನಕಾಶೆಯಲ್ಲಿ ಆಗಿರುವ ಬೃಹತ್ ಪ್ರಮಾದವನ್ನು ಗಮನಕ್ಕೆ ತಂದ ಪತ್ರಕರ್ತರೊಬ್ಬರನ್ನು ಷಟ್ ಅಪ್ ಎಂದು ಚೀನಾದ ರಾಯಭಾರಿ ಜಂಗ್ ಯಾನ್ ಗದರಿಸಿದವರು.
31. ಸಚಿನ್ ತೆಂಡೂಲ್ಕರ್ 182 ಪಂದ್ಯಗಳಿಂದ 15048 ರನ್ ನ್ನ 56.19 ಸರಾಸರಿಯಲ್ಲಿ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೆ ಯಾರು ಮಾಡ ದಾಖಲೆಯನ್ನ ನಿರ್ಮಿಸಿದ್ದಾರೆ.
32. ಸಚಿನ್ ತೆಂಡೂಲ್ಕರ್ ನಂತರದ ಸ್ಥಾನವನ್ನ ಭಾರತದವರೇ ಆದ ರಾಹುಲ್ ದ್ರಾವಿಡ್ 158 ಪಂದ್ಯಗಳಿಂದ 12,859 ರನ್ ಗಳಿಸಿದ್ದಾರೆ.
33. 2009 ಜೂನ್ 25 ರಂದು ಅನಿರೀಕ್ಷಿತವಾಗಿ ಮೃತಪಟ್ಟ ಸುಪ್ರಸಿದ್ಧ ಪಾಪ್ ಗಾಯಕ ಮೈಕಲ್ ಜಾಕ್ಸನ್ ಅವರನ್ನು ಅವರ ಖಾಸಗಿ ವೈದ್ಯ ಕಾನ್ರಾಡ್ ಮುರ್ರೇ ಅವರೇ ಹತ್ಯೆ ಮಾಡಿರುವುದಾಗಿ ಸ್ಥಳೀಯ ನ್ಯಾಯಾಲಯ ತೀರ್ಪು ನೀಡಿದೆ.
34. ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್ ಅವರು ವಿವಾದಾತ್ಮಕ ರಿಯಾಲಿಟಿ ಶೋ ಬಿಗ್ ಬಾಸ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
35. ಮಾಲ್ಡಿವ್ಸ್ ನ ಅಡ್ಡು ದ್ವೀಪದಲ್ಲಿ 17 ನೇ ಸಾರ್ಕ್ ಶೃಂಗ ಸಭೆ ನಡೆಯಲಿದೆ.
36. ಖ್ಯಾತ ಕ್ರೀಡಾ ಬರಹಗಾರ , ಇಂಗ್ಲೆಂಡ್ ನ ಕೌಂಟಿ ತಂಡದ ಸಾಮರ್ಸೆಟ್ ನ ಮಾಜಿ ನಾಯಕ ಪೀಟರ್ ರೋಬಕ್ ನ್ಯೂಲೆಂಡ್ಸ್ ಹೋಟೇಲ್ ನ ಆರನೇ ಅಂತಸ್ತಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
37. ಗುಜರಾತ್‌ನ ವಿವಾದಿತ ಇಶ್ರತ್ ಜಹಾನ್ ಪೊಲೀಸ್ ಎನ್‌ಕೌಂಟರ್ ಪ್ರಕರಣವನ್ನು `ನಕಲಿ~ ಎಂದು ಹೇಳಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ತನ್ನ ವರದಿಯಲ್ಲಿ ತಿಳಿಸಿದೆ.
38. ಪ್ರಕರಣದ ತನಿಖೆಗೆ ಹೈಕೋರ್ಟ್ ನೇಮಕ ಮಾಡಿದ್ದ ಆರ್.ಆರ್.ವರ್ಮ ನೇತೃತ್ವದ ಮೂವರು ಸದಸ್ಯರ ವಿಶೇಷ ತನಿಖಾ ತಂಡ ಇದೇ 18ರಂದು ಹೈಕೋರ್ಟ್‌ಗೆ ಅಂತಿಮ ವರದಿ ಸಲ್ಲಿಸಿದೆ. ಪೊಲೀಸ್ ದಾಖಲೆಗಳ ಪ್ರಕಾರ ಎನ್‌ಕೌಂಟರ್ ನಡೆದಿದೆ ಎನ್ನಲಾದ 2004, ಜೂನ್ 15ಕ್ಕಿಂತ ಮೊದಲೇ ಈ ನಾಲ್ವರನ್ನೂ ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಅದು ಸ್ಪಷ್ಟಪಡಿಸಿದೆ.
39. ಆದಾಯ ಮೂಲಕ್ಕಿಂತ ಸುಮಾರು 66ಕೋಟಿ ಮೌಲ್ಯದ ಅಕ್ರಮ ಆಸ್ತಿ ಸಂಪಾದನೆ ಆರೋಪ ಎದುರಿಸುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಎದುರಿಸುತ್ತಿದ್ದಾರೆ.
40. 20 ಕೋಟಿ ಜನಸಂಖ್ಯೆ ಹೊಂದಿರುವ ಉತ್ತರಪ್ರದೇಶ ಭಾರತದ ಅತಿ ಹೆಚ್ಚು ಜನಸಂಖ್ಯೆಯುಳ್ಳ ಹಾಗೂ 75 ಜಿಲ್ಲೆಗಳನ್ನು ಹೊಂದಿರುವ ದೊಡ್ಡ ರಾಜ್ಯ.
41. ಉತ್ತರ ಪ್ರದೇಶದಲ್ಲಿ 75 ಜಿಲ್ಲೆ 300 ತಾಲ್ಲೂಕುಗಳು ಇದೆ. 80 ಸಂಸದರು ಹಗೂ 403 ರಾಜ್ಯ ಶಾಸನ ಸಭೆ ಹೊಂದಿದೆ.
42. ಎನ್.ಸಿ.ಎಪ್ – 2005 ಕಲಿಕೆಯ ಮಟ್ಟದಲ್ಲಿ ರಾಜ್ಯದಿಂದ ರಾಜ್ಯಕ್ಕೆ ಹೆಚ್ಚಿನ ವ್ಯತ್ಯಾಸ ಇರಬಾರದು ಎಂಬ ಉದ್ದೇಶದಿಂದ ಕೇಂದ್ರದ ಅಧೀನದ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಸಂಸ್ಥೆ ರಾಷ್ಟ್ರೀಯ ಪಠ್ಯ ಕ್ರಮ ಮಾರ್ಗಸೂಚಿ ಪ್ರಕಟಿಸಿದೆ.
43. ರಾಷ್ಟ್ರೀಯ ಪಠ್ಯಕ್ರಮ ಮಾರ್ಗಸೂಚಿ ಅನ್ವಯ ಮುಂದಿನ ಶೈಕ್ಷಣಿಕ ವರ್ಷದಲ್ಲಿ ( 2011 – 13 ) 5 ಹಾಗೂ 8 ನೇ ತರಗತಿಯ ಪಠ್ಯಪುಸ್ತಕ ಬದಲಾವಣೆ ಮಾಡಲು ರಾಜ್ಯ ಸರ್ಕಾರದ ಸಿದ್ಧತೆ ಮಾಡಿಕೊಂಡಿದೆ.
44. ಗೋಕಾಕ್ ಜಲಪಾತದಲ್ಲಿ ಜಲವಿದ್ಯುತ್ 1887 ರ ಅಕ್ಟೋಬರ್ 5 ರಂದು ಇದು ಏಷ್ಯಾ ಖಂಡದಲ್ಲಿಯೇ ಪ್ರಥಮ ಜಲವಿದ್ಯುತ್ ತಯಾರಿಕಾ ಸ್ಥಾವರ .
45. ಮೆಮೊಗೇಟ್` ವಿವಾದಕ್ಕೆ ಕಾರಣವಾದ ಪತ್ರ ಬಯಲಾಗಲು ಮನ್ಸೂರ್ ಇಜಾಜ್ ಕಾರಣ ಎನ್ನಲಾಗಿದೆ.
46. ಅಮೆರಿಕದಲ್ಲಿ ರಾಯಭಾರಿ ಆಗಿದ್ದ ಹುಸೇನ್ ಹಖಾನಿ ಮತ್ತು ಪಾಕ್ ಮೂಲದ ಅಮೆರಿಕ ಉದ್ಯಮಿ ಮನ್ಸೂರ್ ಇಜಾಜ್ ಅವರನ್ನೂ ಪ್ರತಿವಾದಿಗಳನ್ನಾಗಿ ಹೆಸರಿಸಲಾಗಿದೆ
47. ಪಾಕಿಸ್ತಾನದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿದಿ`ಮೆಮೊಗೇಟ್`ವಿವಾದ ಅಮೆರಿಕದ ರಾಯಭಾರಿಯಾಗಿದ್ದ ಹುಸೇನ್ ಹಖಾನಿ ಅವರ ಸ್ಥಾನಕ್ಕೆ ಕುತ್ತು ತಂದದ್ದು, ಮಾಜಿ ಸಚಿವೆ ಶೆರ್ರಿ ರೆಹಮಾನ್ ಅವರನ್ನು ಆ ಸ್ಥಾನಕ್ಕೆ ನೇಮಿಸಲಾಗಿದೆ.
48. ಅಲ್ ಖೈದಾ ಪಾತಕಿ ಒಸಾಮ ಬಿನ್ ಲಾಡೆನ್ ಮೇ 2ರಂದು ಹತನಾದ ನಂತರ ರಾಷ್ಟ್ರದಲ್ಲಿ ಸಂಭಾವ್ಯ ಕ್ಷಿಪ್ರ ಸೇನಾ ಕ್ರಾಂತಿ ತಡೆಯಲು ಪಾಕಿಸ್ತಾನವು ಅಮೆರಿಕದ ನೆರವು ಕೋರಿ ಬರೆದ ಪತ್ರ ಈ ವಿವಾದ ಎಬ್ಬಿಸಿತ್ತು.ಪಾಕಿಸ್ತಾನದ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಪರವಾಗಿ ಹುಸೇನ್ ಹಖಾನಿ ಈ ಪತ್ರವನ್ನು ಬರೆದಿದ್ದರು ಎಂದು ಆರೋಪಿಸಲಾಗಿತ್ತು.
49. ಶ್ವೇತ ಭವನ ಹಖಾನಿ ಅವರನ್ನು `ವಿಶೇಷ ಆಪ್ತ ಜೊತೆಗಾರ` ಎಂದು ಬಣ್ಣಿಸಿದ್ದು, ಹಖಾನಿ ಅವರ ರಾಜೀನಾಮೆಯನ್ನು `ಪಾಕ್‌ನ ಆಂತರಿಕ ವಿಚಾರ` ಎಂದು ಹೇಳಿದೆ.
50. 2ಜಿ ತರಂಗಾಂತರ ಹಂಚಿಕೆ ಹಗರಣದ ಆಪಾದಿತರಾದ ಐವರು ಕಾರ್ಪೊರೇಟ್ ಪ್ರಮುಖರಿಗೆ ಸುಪ್ರೀಂಕೋರ್ಟ್ ಬುಧವಾರ ಜಾಮೀನು ನೀಡಿದೆ.
51. ಯುನಿಟೆಕ್‌ನ ಸಂಜಯ್ ಚಂದ್ರ, ಸ್ವಾನ್ ಟೆಲಿಕಾಂನ ನಿರ್ದೇಶಕ ವಿನೋದ್ ಗೋಯಂಕಾ, ರಿಲಯನ್ಸ್ ಅನಿಲ್ ಧೀರೂಭಾಯಿ ಅಂಬಾನಿ ಸಮೂಹದ ಕಾರ್ಯನಿರ್ವಾಹಕರಾದ ಹರಿ ನಾಯರ್, ಗೌತಮ್ ದೋಶಿ ಮತ್ತು ಸುರೇಂದ್ರ ಪಿಪಾರಾ ಅವರ ಬಿಡುಗಡೆಗೆ ನ್ಯಾಯಮೂರ್ತಿ ಜಿ.ಎಸ್.ಸಿಂಘ್ವಿ ಮತ್ತು ಎಚ್.ಎಲ್.ದತ್ತು ಅವರನ್ನು ಒಳಗೊಂಡ ನ್ಯಾಯಪೀಠ ಆದೇಶಿಸಿದೆ.
52. ವಿಶ್ವಸಂಸ್ಥೆಯ ಜಂಟಿ ಮೇಲುಸ್ತುವಾರಿ ಘಟಕದ (ಜೆಐಯು) ಏಷ್ಯಾ-ಪೆಸಿಫಿಕ್ ವಲಯದ ಸದಸ್ಯತ್ವಕ್ಕೆ ನಡೆದ ನೇರ ಚುನಾವಣೆಯಲ್ಲಿ ಭಾರತವು ಚೀನಾ ವಿರುದ್ಧ ಮಹತ್ವದ ಜಯ ಸಾಧಿಸಿದೆ.
53. ಟೆಸ್ಟ್ ನಲ್ಲಿನ ಉತ್ತಮ ಪ್ರದರ್ಶನಕ್ಕಾಗಿ (1ನೇ ಅಕ್ಟೋಬರ್ 2010ರಿಂದ 30ನೇ ಸೆಪ್ಟೆಂಬರ್ 2011ರ ಅವಧಿ) ರಾಹುಲ್ ದ್ರಾವಿಡ್ ಅವರನ್ನು ಪಾಲಿ ಉಮ್ರಿಗರ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
54. ಜಿನೀವಾದಲ್ಲಿರುವ ವಿಶ್ವಸಂಸ್ಥೆ ಕಚೇರಿಗಳಿಗೆ ಭಾರತದ ಕಾಯಂ ಪ್ರತಿನಿಧಿಯಾಗಿರುವ ಎ.ಗೋಪಿನಾಥನ್, ನವದೆಹಲಿಯಲ್ಲಿ ಚೀನಾದ ರಾಯಭಾರಿಯಾಗಿರುವ ಝಾಂಗ್ ಯಾನ್ ಅವರನ್ನು ಸೋಲಿಸಿ ಈ ಪ್ರತಿಷ್ಠಿತ ಘಟಕಕ್ಕೆ ಆಯ್ಕೆಯಾಗಿದ್ದಾರೆ.
55. 35 ವರ್ಷಗಳ ಬಳಿಕ ವಿಶ್ವಸಂಸ್ಥೆಯ ಪ್ರಬಲ ಬಾಹ್ಯ ಸಂಸ್ಥೆಯೊಂದರಲ್ಲಿ ಭಾರತ ಸ್ಥಾನ ಪಡೆದಿದೆ. ಒಟ್ಟು 183 ಮತಗಳಲ್ಲಿ ಗೋಪಿನಾಥ್ ಪರ 106 ಮತಗಳು ಚಲಾವಣೆಗೊಂಡರೆ ಯಾನ್ ಪರ 77 ಮತಗಳು ಬಿದ್ದವು.
56. ಈ ಮುನ್ನ 1968ರಿಂದ 77ರ ವರೆಗೆ ಭಾರತವು ಈ ಘಟಕದಲ್ಲಿ ಕಾರ್ಯನಿರ್ವಹಿಸಿತ್ತು.
57. ಜೆಐಯು ಆಡಳಿತ ಅವಧಿಯು ಐದು ವರ್ಷಗಳಾಗಿದ್ದು, 2013ರ ಜನವರಿ 1ರಿಂದ ಜಾರಿಗೆ ಬರುತ್ತದೆ.
58. ಜೆಐಯು ವಿಶ್ವಸಂಸ್ಥೆಯ ಸ್ವಾಯತ್ತ ಬಾಹ್ಯ ಮೇಲ್ವಿಚಾರಣಾ ಸಂಸ್ಥೆಯಾಗಿದ್ದು, ವಿವಿಧ ಯೋಜನೆಗಳ ಮೌಲ್ಯಮಾಪನ, ಪರಿಶೀಲನೆ ಮತ್ತು ತನಿಖೆ ನಡೆಸುವ ಅಧಿಕಾರ ಹೊಂದಿದೆ. 11 ಪರೀಕ್ಷಕರು ಈ ಘಟಕದಲ್ಲಿ ಇರುತ್ತಾರೆ.
59. ವಿಶ್ವಸಂಸ್ಥೆಯಲ್ಲಿ ಚೀನಾದೊಂದಿಗೆ ನಡೆದ ನೇರ ಚುನಾವಣೆಯಲ್ಲಿ ಭಾರತ ಗೆಲುವು ಪಡೆದದ್ದು ಇದೇ ಮೊದಲಾಗಿರುವುದು ಮತ್ತೊಂದು ವಿಶೇಷ.
60. ಜೆಐಯುಗೆ ಆಯ್ಕೆಯಾದ ದೇಶಗಳ ಅಧಿಕಾರ ಅವಧಿ ಐದು ವರ್ಷಗಳಾದರೂ, ಸಾಮಾನ್ಯವಾಗಿ ಮತ್ತೆ ಐದು ವರ್ಷಗಳ ಕಾಲಕ್ಕೆ ಅದನ್ನು ಮುಂದುವರಿಸುವ ಸಂಪ್ರದಾಯವಿದೆ. ಚೀನಾವು 2002ರಿಂದ ಅಧಿಕಾರದಲ್ಲಿದ್ದು ಅದರ ಅವಧಿ 2012 ಡಿಸೆಂಬರ್‌ಗೆ ಕೊನೆಗೊಳ್ಳುತ್ತದೆ.
61. ಇತ್ತೀಚೆಗಷ್ಟೆ ಯಾನ್ ವಿವಾದದಲ್ಲಿ ಸಿಲುಕಿಕೊಂಡಿದ್ದರು. ಚೀನಾ ಸರ್ಕಾರಿ ಸ್ವಾಮ್ಯದ ಸಂಸ್ಥೆಯೊಂದು ಹಂಚಿರುವ ಭೂಪಟದಲ್ಲಿ ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಅರುಣಾಚಲ ಪ್ರದೇಶವನ್ನು ಭಾರತದ ಭೌಗೋಳಿಕಾ ವ್ಯಾಪ್ತಿಯಲ್ಲಿ ತೋರಿಸದೇ ಇರುವುದರ ಬಗ್ಗೆ ಕೇಳಿದ ಪ್ರಶ್ನೆಗೆ, ಝಾಂಗ್ ಯಾನ್ ಪತ್ರಕರ್ತರೊಬ್ಬರಿಗೆ `ಬಾಯ್ಮುಚ್ಚು` ಎಂದು ಬೆದರಿಸಿದ್ದರು.
62. ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಗೋಪಿನಾಥನ್, 2002ರ ಜನವರಿಯಿಂದ 2005ರ ಸೆಪ್ಟೆಂಬರ್‌ವರೆಗೆ ನ್ಯೂಯಾರ್ಕ್‌ನಲ್ಲಿ ಭಾರತದ ಸಹಾಯಕ ಕಾಯಂ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಿದ್ದರು. ಆಗಸ್ಟ್ 1997- ಡಿಸೆಂಬರ್ 2001ರ ಅವಧಿಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿಯಾಗಿಯೂ ಅವರು ಕಾರ್ಯ ನಿರ್ವಹಿಸ್ದ್ದಿದರು.
63. ರತನ್ ಟಾಟಾ ಉತ್ತರಾಧಿಕಾರಿ ಯಾರು ಎನ್ನುವ ಪ್ರಶ್ನೆಗೆ ಕೊನೆಗೂ ಉತ್ತರ ದೊರಕಿದೆ. 80 ಶತಕೋಟಿ ಡಾಲರ್ ಮೌಲ್ಯದ ಟಾಟಾ ಸಮೂಹಕ್ಕೆ ನೂತನ ಉಪಾಧ್ಯಕ್ಷರಾಗಿ 43 ವರ್ಷದ ಸೈರಸ್ ಪಿ. ಮಿಸ್ತ್ರಿ ಅವರನ್ನು ಟಾಟಾ ನಿರ್ದೇಶಕ ಮಂಡಳಿ ಸರ್ವಾನುಮತದಿಂದ ನೇಮಕ ಮಾಡಿದೆ.
64. ಶಪೂರ್ಜಿ ಪಲ್ಲೊಂಜಿ ಸಮೂಹದ ವ್ಯವಸ್ಥಾಪಕ ನಿರ್ದೇಶಕರಾಗಿರುವ ಸೈರಸ್ ಅವರನ್ನು ಟಾಟಾ ಸನ್ಸ್ ನಿರ್ದೇಶಕ ಮಂಡಳಿಯ ನೂತನ ಉತ್ತರಾಧಿಕಾರಿ ಎಂದು ಬುಧವಾರ ಅಧಿಕೃತವಾಗಿ ಘೋಷಿಸಿದೆ. ಶಪೂರ್ಜಿ ಪಲ್ಲೊಂಜಿ ಸಂಸ್ಥೆ ಟಾಟಾ ಸನ್ಸ್‌ನಲ್ಲಿ ಶೇ 18ರಷ್ಟು ಪಾಲು ಹೊಂದಿದೆ.
65. ಸೈರಸ್, ರತನ್ ಟಾಟಾ ಅವರೊಂದಿಗೆ ಮುಂದಿನ ಒಂದು ವರ್ಷಗಳ ಕಾಲ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ. 2012ರ ಡಿಸೆಂಬರ್ ತಿಂಗಳಲ್ಲಿ ಟಾಟಾ ನಿವೃತ್ತರಾಗುತ್ತಿದ್ದಂತೆ, ಇವರು ಉತ್ತರಾಧಿಕಾರಿ ಹುದ್ದೆ ಅಲಂಕರಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
66. ತನ್ನ ವಶದಲ್ಲಿರುವ ಪ್ಯಾಲೆಸ್ಟೈನ್ ಪ್ರದೇಶದಲ್ಲಿ ಸಂಗ್ರಹಿಸಿರುವ ತೆರಿಗೆ ಹಣವನ್ನು ಪ್ಯಾಲೆಸ್ಟೈನ್ ಆಡಳಿತಕ್ಕೆ ಒಪ್ಪಿಸುವಂತೆ ಇಸ್ರೇಲ್‌ಗೆ ಸಲಹೆ ನೀಡಿರುವ ವಿಶ್ವಸಂಸ್ಥೆ, ಆಕ್ರಮಿತ ಪ್ಯಾಲೆಸ್ಟೈನ್‌ನಲ್ಲಿ ವಸಾಹತೀಕರಣ ಚಟುವಟಿಕೆ ನಿಲ್ಲಿಸುವಂತೆಯೂ ಸೂಚಿಸಿದೆ.
67. ಪ್ಯಾಲೆಸ್ಟೈನ್ ಆಡಳಿತದ ಪರ ಇಸ್ರೇಲ್ ತೆರಿಗೆ ಸಂಗ್ರಹಿಸುತ್ತಿದ್ದು, ಇದು ನ್ಯಾಯಬದ್ಧವಾಗಿ ಪ್ಯಾಲೆಸ್ಟೈನ್ ಆಡಳಿತಕ್ಕೆ ಸಲ್ಲಬೇಕಿದೆ ಎಂದು ವಿಶ್ವಸಂಸ್ಥೆ ಮಹಾಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಹು ಅವರನ್ನು ಕೋರಿದ್ದಾರೆ.
68. ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಅವರ ಕೆನ್ನೆಗೆ ಬಾರಿಸಿದ ಘಟನೆ ಭ್ರಷ್ಟಾಚಾರ ಮತ್ತು ದಿನೇ ದಿನೇ ಏರುತ್ತಿರುವ ಬೆಲೆ ಏರಿಕೆಯಿಂದ ಕೋಪಗೊಂಡು ತಾನು ಈ ಕೃತ್ಯ ಎಸಗಿದ್ದಾಗಿ ಹಲ್ಲೆ ನಡೆಸಿದ ಹರ್ವಿಂದರ್ ಸಿಂಗ್ ಹೇಳಿದ್ದಾನೆ.
69. `ಕರ್ನಾಟಕದ ಗಡಿ ಭಾಗದಲ್ಲಿರುವ ಮರಾಠಿಗರು ಹುಟ್ಟಿದ್ದೇ ವ್ಯವಸ್ಥೆಯನ್ನು ಹಾಳು ಮಾಡಲು ಮತ್ತು ಅವರಿಗೆ ಮರಾಠಿ ಮಾಧ್ಯಮದಲ್ಲಿ ಶಿಕ್ಷಣ ಬೇಕಾದರೆ ಮಹಾರಾಷ್ಟ್ರಕ್ಕೆ ಹೋಗಲಿ` ಎಂಬ ಕಂಬಾರರ ಹೇಳಿಕೆ.
70. ಅಪರಿಚಿತ ಭಕ್ತರೊಬ್ಬರು ತಿರುಪತಿ ತಿಮ್ಮಪ್ಪನ ಹುಂಡಿಗೆ 168 ವಜ್ರದ ಹರಳುಗಳನ್ನು ಅರ್ಪಿಸಿದ್ದಾರೆ ಎಂದು ತಿರುಮಲ ತಿರುಪತಿ ದೇವಸ್ಥಾನ ಸಮಿತಿಯ (ಟಿಟಿಡಿ) ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
71. ವಜ್ರಗಳ ಬೆಲೆಯ ಮೌಲ್ಯಮಾಪನಕ್ಕಾಗಿ ಅವುಗಳನ್ನು ತಿರುಪತಿಯಲ್ಲಿರುವ ಟಿಟಿಡಿ ಖಜಾನೆಯ ಆಭರಣ ವಿಭಾಗಕ್ಕೆ ಕಳುಹಿಸಲಾಗಿದೆ. ಅವುಗಳ ಬೆಲೆ ಸುಮಾರು 1.5 ಕೋಟಿ ರೂಪಾಯಿ ಇರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
72. ರಾಹುಲ್ ಈ ಹಂತವನ್ನು ಮುಟ್ಟುವ ಹಾದಿಯಲ್ಲಿ 36 ಶತಕ ಹಾಗೂ 62 ಅರ್ಧ ಶತಕ ಗಳಿಸಿದ್ದಾರೆ. ಅವರ ಬ್ಯಾಟ್‌ನಿಂದ ಇಲ್ಲಿಯವರೆಗೆ 53.31ರ ಸರಾಸರಿಯಲ್ಲಿ 13,061 ರನ್‌ಗಳು ಹರಿದು ಬಂದಿವೆ.
73. ಆಸ್ಟ್ರೇಲಿಯಾ ವಿರುದ್ಧವೇ ಹೆಚ್ಚು ರನ್ (1972) ಗಳಿಸಿದ್ದು. ವಿಂಡೀಸ್ ಎದುರು ಟೆಸ್ಟ್‌ನಲ್ಲಿ ಗಳಿಸಿದ ಒಟ್ಟು ರನ್ 1945.
74. ವರ್ಷದುದ್ದಕ್ಕೂ `ವಾಲ್` ಆಗಿ ನಿಂತು ಭಾರತ ತಂಡವನ್ನು ಕಾಪಾಡಿದ ದ್ರಾವಿಡ್‌ಗೆ 2011ರಲ್ಲಿ ಟೆಸ್ಟ್ ಕ್ರಿಕೆಟ್‌ನ ಸಾವಿರ ರನ್‌ಗಳ ಶ್ರೇಯ.
75. ಈ ವರ್ಷ ಆಡಿದ 11ಟೆಸ್ಟ್‌ಗಳ 20 ಇನಿಂಗ್ಸ್‌ಗಳಲ್ಲಿ ಒಟ್ಟು 1034 ರನ್ ಗಳಿಸಿದ್ದಾರೆ.( ದ್ರಾವಿಡ್ ).
76. ಈಜಿಪ್ತ್ ಕಮಲ್ ಗಂಜೌರಿ ನೂತನ ಪ್ರಧಾನಿಯನ್ನಾಗಿ ಆಯ್ಕೆ ಮಾಡಲಾಗಿದೆ.
77. ಬಾಲಿವುಡ್ ತಾರೆ ಕರೀನಾ ಕಪೂರ್ ಅವರು ಏಷ್ಯಾದ ಅತಿ ಸೆಕ್ಸಿ ಚೆಲುವೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
78. ಪದಚ್ಯುತ ಕೋಲ್ಕೋತಾ ಹೈಕೋರ್ಟ್ ನ್ಯಾ.ಸೌಮಿತ್ರ ಸೇನ್ ವಿರುದ್ಧದ ಮಹಾಭಿಯೋಗ ಪ್ರಕ್ರಿಯೆಯನ್ನು ಅಸಂವಿಧಾನಿಕ ಎಂದು ಘೋಷಿ,ಲು ಸುಪ್ರೀಂಕೋರ್ಟ್ ನಿರಾಕರಿಸಿದೆ.
79. 2011ರಲ್ಲಿ ಈ ಅನುಪಾತವು 1000: 940ಕ್ಕೆ ಬಂದಿದೆ. ಅಂದರೆ ವ್ಯತ್ಯಾಸವು ಸಾವಿರಕ್ಕೆ 60.
80. ಉತ್ತರ ಪ್ರದೇಶ ಅತ್ಯಂತ ಹೆಚ್ಚು ಜನಸಾಂದ್ರತೆಯುಳ್ಳ ರಾಜ್ಯವಾಗಿದ್ದು, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದ ಜನಸಂಖ್ಯೆಗಳನ್ನು ಸೇರಿಸಿದರೆ (31 ಕೋಟಿ),
81. ಜನಗಣತಿಯಲ್ಲಿ ಹೊರಬಿದ್ದ ಅಂಕಿ ಅಂಶಗಳಿಗೆ ಹೋಲಿಸಿದರೆ, 2001ರಲ್ಲಿ ಶೇ. 21.15ರಷ್ಟಿದ್ದ ಜನಸಂಖ್ಯಾ ವೃದ್ಧಿ ದರವು 2011ರ ಜನಗಣತಿ ಪ್ರಕಾರ ಶೇ.17.64ಕ್ಕೆ ಕುಸಿದಿದೆ.
82. ಭಾರತದ ಜನಸಂಖ್ಯೆ 121.02 ಕೋಟಿ. ಪುರುಷರು 62.37 ಕೋಟಿ ಹಾಗೂ ಮಹಿಳೆಯರು 58.65 ಕೋಟಿ.
83. ಒಟ್ಟಾರೆಯಾಗಿ, ಪುರುಷರ ಜನಸಂಖ್ಯೆಯಲ್ಲಿ ಶೇ.17 ಹಾಗೂ ಮಹಿಳೆಯರ ಜನಸಂಖ್ಯೆಯಲ್ಲಿ ಶೇ.18ರಷ್ಟು ವೃದ್ಧಿಯಾಗಿದೆ.
84. 10 ವರ್ಷಗಳಲ್ಲಿ ಭಾರತದಲ್ಲಿ ಹೆಚ್ಚಳವಾದ ಜನಸಂಖ್ಯೆ 18 ಕೋಟಿ. ಅಂದರೆ ಇದು ಬ್ರೆಜಿಲ್‌ನ ಜನಸಂಖ್ಯೆಗೆ ಸಮ.
85. ಜನಸಾಂದ್ರತೆಯು ಕೂಡ ಹೆಚ್ಚಾಗಿದೆ. ಅತೀ ಹೆಚ್ಚು ಜನಸಾಂದ್ರತೆಯಿರುವುದು ದೆಹಲಿಯ ಈಶಾನ್ಯ ಜಿಲ್ಲೆಯಲ್ಲಿ (ಚದರ ಕಿಲೋಮೀಟರಿಗೆ 37,346 ಮಂದಿ), ಅತಿ ಕನಿಷ್ಠ ಜನಸಾಂದ್ರತೆ ಇರುವುದು ಅರುಣಾಚಲ ಪ್ರದೇಶದ ದಿಬಾಂಗ್ ಕಣಿವೆ ಜಿಲ್ಲೆಯಲ್ಲಿ - ಚದರ ಕಿಲೋಮೀಟರಿಗೆ 1 ಮಾತ್ರ!.
86. ಭಾರತದ ಜನಗಣತಿ 2011ನ್ನು 2 ಹಂತ ಗಳಲ್ಲಿ ಕೈಗೊಳ್ಳಲಾಗುವುದು. ಮೊದಲನೆ ಹಂತದಲ್ಲಿ ಮನೆಗಳ ಪಟ್ಟಿ ಮಾಡುವುದು ಮತ್ತು ಮನೆಗಣತಿ. ಎರಡನೆ ಹಂತ ಜನಗಣತಿ.
87. ಕರ್ನಾಟಕ ರಾಜ್ಯದಲ್ಲಿ ಮೊದಲ ಹಂತದ ಜನಗಣತಿ ಕಾರ್ಯವನ್ನು 2010 ಎಪ್ರಿಲ್ 15ರಿಂದ ಜೂನ್ 1ರವರೆಗೆ ನಡೆಸಲಾಗುತ್ತದೆ. 2ನೆ ಹಂತದ ಜನಗಣತಿ ಕೆಲಸ 2011 ಫೆಬ್ರವರಿ ಮಾರ್ಚ್ ತಿಂಗಳಲ್ಲಿ ಜರಗಲಿದೆ.
88. ಕರ್ನಾಟಕ ರಾಜ್ಯದಲ್ಲಿ, ಜನಗಣತಿ ನಿರ್ದೇಶನಾಲಯ ಬೆಂಗಳೂರು ಇವರ ಮಾರ್ಗದರ್ಶನದಲ್ಲಿ ಜನಗಣತಿ ಕಾರ್ಯ ನಡೆಯಲಿದೆ.
89. ಆಯಾಯ ಜಿಲ್ಲೆಯ ಜಿಲ್ಲಾಧಿಕಾರಿಯವರು ಪ್ರಿನ್ಸಿಪಲ್ ಸೆನ್ಸಸ್ ಆಫೀಸರ್ಸ್‌ ಆಗಿ ಕರ್ತವ್ಯ ನಿರ್ವಹಿಸುತ್ತಾರೆ. ಅಲ್ಲದೆ ರಾಜ್ಯದ ಮಹಾನಗರ ಪಾಲಿಕೆ ವ್ಯಾಪ್ತಿಗಳಲ್ಲಿ ಆಯಾಯ ನಗರ ಪಾಲಿಕೆಯ ಕಮೀಶನರ್‌ಗಳು ಪ್ರಿನ್ಸಿಪಲ್ ಸೆನ್ಸಸ್ ಆಫೀಸರ್ ಆಗಿ ಕರ್ತವ್ಯ ನಿರ್ವಹಿಸುತ್ತಾರೆ.
90. ಮನೆ ಮನೆ ಭೇಟಿ ನೀಡಿ ಮನೆ ಪಟ್ಟಿ ತಯಾರಿಸಲು ಸುಮಾರು 600 ರಿಂದ 700 ಜನಸಂಖ್ಯೆ ವ್ಯಾಪ್ತಿಗೆ ಒಬ್ಬರು ಗಣತಿದಾರರಂತೆ, 6 ಗಣತಿದಾರರಿಗೆ ಒಬ್ಬರು ಮೇಲ್ವಿಚಾರಕರಂತೆ ನೇಮಕ ಮಾಡಲಾಗಿದೆ.
91. ಲಿಬಿಯಾದ ಮಧ್ಯಂತರ ಸರಕಾರದ ಸೇನೆ ಅಕ್ಟೋಬರ್‌ 20ರಂದು ಮುಅಮ್ಮರ್‌ ಗಡಾಫಿ, ಮೋಟಾಸಿಂ ಗಡಾಫಿ ಅವರನ್ನು ಜೀವಂತವಾಗಿ ಸೆರೆ ಹಿಡಿದು ಹತ್ಯೆ ಮಾಡಿತ್ತು.